ಮಂಗಳವಾರ, ಜೂನ್ 17, 2025
HomehoroscopeHoroscope : ದಿನಭವಿಷ್ಯ- ಈ ರಾಶಿಯವರಿಂದು ತಪ್ಪಿಯೂ ಸಾಲ ನೀಡಬೇಡಿ

Horoscope : ದಿನಭವಿಷ್ಯ- ಈ ರಾಶಿಯವರಿಂದು ತಪ್ಪಿಯೂ ಸಾಲ ನೀಡಬೇಡಿ

- Advertisement -

ಮೇಷರಾಶಿ
ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ, ಅಪರಿಚಿತ ವ್ಯಕ್ತಿಯಿಂದ ಉಪಯುಕ್ತ ಸಲಹೆ, ಮನೆಯಲ್ಲಿದ್ದ ಹಬ್ಬದ ವಾತಾವರಣ, ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ, ಪ್ರೀತಿ ಪಾತ್ರರಿಂದ ಸಂತಸ, ಮಾಡುವ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಸಂಗಾತಿಯಿಂದ ಸಹಕಾರ ದೊರೆಯಲಿದೆ, ಧಾರ್ಮಿಕ ಕಾರ್ಯಗಳ ಕುರಿತು ಚಿಂತನೆ.

ವೃಷಭರಾಶಿ
ಆಹಾರ ಸೇವನೆಯ ವೇಳೆಯಲ್ಲಿ ಎಚ್ಚರವಿರಲಿ, ಅಜಾಗರೂಕತೆ ಅನಾರೋಗ್ಯಕ್ಕೆ ಕಾರಣವಾಗಬಹುದು, ಗೌಪ್ಯ ಮಾಹಿತಿಯನ್ನು ಸಂಗಾತಿಯೊಂದಿಗೆ ಹಂಚಿಕೊಳ್ಳುವ ಎಚ್ಚರ, ವೈವಾಹಿಕ ಜೀವನದಲ್ಲಿ ಕಿರಿಕಿರಿ, ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಿ, ವೈಯಕ್ತಿಕ ಜೀವನ ವ್ಯವಹಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಮಿಥುನರಾಶಿ
ಇತರರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಿ, ಕೌಟುಂಬಿಕವಾಗಿ ನೆಮ್ಮದಿ, ನಿಮ್ಮ ಸಂಕಷ್ಟಕ್ಕೆ ಸ್ನೇಹಿತರ ಸಹಕಾರ ದೊರೆಯಲಿದೆ, ಸ್ನೇಹಿತರ ಭೇಟಿ, ಆಧ್ಯಾತ್ಮದ ಒಲವು ಹೆಚ್ಚಲಿದೆ, ಸಂಗಾತಿಯೊಂದಿಗೆ ಕೋಪವನ್ನು ಕಡಿಮೆ ಮಾಡಿಕೊಳ್ಳಿ, ಸಹೋದ್ಯೊಗಿಗಳ ಜೊತೆ ಹೊಂದಾಣಿಕೆ ಅಗತ್ಯ, ಪುಣ್ಯಕ್ಷೇತ್ರಗಳ ಭೇಟಿಯಿಂದ ನೆಮ್ಮದಿ.

ಕರ್ಕಾಟಕರಾಶಿ
ಆರೋಗ್ಯದ ಬಗ್ಗೆ ಕಾಳಜಿ ಇರಲಿ, ಹೊಸ ಹೂಡಿಕೆಯನ್ನು ಸದ್ಯಕ್ಕೆ ಮುಂದೂಡಿಕೆ ಮಾಡುವುದು ಉತ್ತಮ, ವೃತ್ತಿರಂಗದಲ್ಲಿ ಹೆಚ್ಚು ಆಸಕ್ತಿಯಿಂದ ತೊಡಗಿಸಿಕೊಳ್ಳಿ, ವೃತ್ತಿರಂಗದಲ್ಲಿ ಹೊಸ ಅವಕಾಶಗಳು ದೊರೆಯಲಿದೆ, ಕೆಲಸ ಕಾರ್ಯಗಳಲ್ಲಿ ಸಕ್ರೀಯರಾಗಿ ತೊಡಗಿಸಿಕೊಳ್ಳಿ, ವೈವಾಹಿಕ ಜೀವನದ ಕಡೆಗೆ ಗಮನಹರಿಸಿ.

ಇದನ್ನೂ ಓದಿ : ದೇವಾಲಯಗಳಲ್ಲಿ ಡ್ರೆಸ್‌ ಕೋಡ್‌ ಜಾರಿ ಮಾಡಿ : ರಾಜ್ಯ ಸರಕಾರಕ್ಕೆ ಹಿಂದೂ ಮಹಾಸಭಾ ಎಚ್ಚರಿಕೆ

ಸಿಂಹರಾಶಿ
ವೃತ್ತಿ ಭವಿಷ್ಯಕ್ಕಾಗಿ ಕೈಗೊಂಡ ಪ್ರಯಾಣ ಸಾಕಾರವಾಗಲಿದೆ, ಖರ್ಚಿನ ಮೇಲೆ ಹಿಡಿತವಿರಲಿ, ಸಮಸ್ಯೆಗಳಿಗೆ ಪರಿಹಾರವಾಗಲಿದೆ, ಕೌಟುಂಬಿಕವಾಗಿ ನೆಮ್ಮದಿ, ಪತ್ನಿಯಿಂದ ಭಾವನಾತ್ಮಕ ಬಂಬಲ ದೊರೆಯಲಿದೆ, ಮಕ್ಕಳಿಂದ ಸಂತಸ, ಹೊಸ ಹೂಡಿಕೆ ಲಾಭವನ್ನು ತರಲಿದೆ, ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳಿ.

ಕನ್ಯಾರಾಶಿ
ಕೆಲಸದ ಒತ್ತಡವನ್ನು ಕೆರಳಿಸುವಂತೆ ಮಾಡುತ್ತದೆ. ಸಂಗಾತಿಯೊಂದಿಗೆ ಕಿರಿಕಿರಿಗೆ ಕಾರಣವಾಗದಂತೆ ಎಚ್ಚರವಹಿಸಿ, ಆಧ್ಯಾತ್ಮಕ ಪುಸ್ತಕಗಳ ಓದಿನಲ್ಲಿ ತೊಡಗಿಕೊಳ್ಳುವಿರಿ, ಕೌಟುಂಬಿಕ ಸಮಸ್ಯೆಗಳ ಕುರಿತು ಗಮನ ಹರಿಸಿ, ಹಣಕಾಸಿನ ಸ್ಥಿತಿ ಉತ್ತಮವಾಗಲಿದೆ, ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ.

ತುಲಾರಾಶಿ
ಸಾಮಾಜಿಕವಾಗಿ ನಿಮ್ಮ ವ್ಯಕ್ತಿತ್ವ ವೃದ್ದಿಸಲಿದೆ, ಇಂದು ನೀವು ಹಣಕಾಸಿನ ಪ್ರಯೋಜನಗಳನ್ನು ಪಡೆಯುವ ಸಾಧ್ಯತೆಯಿದೆ, ದಾನ ಮಾಡುವುದರಿಂದ ಮಾನಸಿಕ ಶಾಂತಿ ದೊರೆಯಲಿದೆ, ಕೆಲಸದ ಸ್ಥಳದಲ್ಲಿ ಸಾಕಷ್ಟು ಖುಷಿಯಾಗಿರುವಿರಿ, ಮೇಲಾಧಿಕಾರಿಗಳ ಪ್ರಶಂಸೆ ದೊರೆಯಲಿದೆ, ಉದ್ಯಮಿಗಳಿಗೆ ವ್ಯವಹಾರದಲ್ಲಿ ಅಧಿಕ ಲಾಭ.

ಇದನ್ನೂ ಓದಿ : ಇನ್ನೂ 2 ವರ್ಷದಲ್ಲಿ ಜಲಪ್ರಳಯಕ್ಕೆ ತತ್ತರಿಸಲಿದ್ದಾರೆ ಜನರು : ಕೋಡಿಮಠ ಸ್ವಾಮೀಜಿ ಭವಿಷ್ಯ

ವೃಶ್ಚಿಕರಾಶಿ
ಮಾನಸಿಕ ಶಾಂತಿ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿರಿ, ಹಣಕಾಸಿನ ವಿಚಾರದಲ್ಲಿ ವಿಶೇಷವಾದ ಲಾಭವನ್ನು ಪಡೆಯುವಿರಿ, ನಿಮ್ಮ ಸಾಮರ್ಥ್ಯದಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ, ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆಯನ್ನು ಅನುಭವಿಸುವಿರಿ, ವಾಹನ ಚಾಲನೆಯಲ್ಲಿ ಎಚ್ಚರಿಕೆಯಿಂದಿರಿ, ವೈವಾಹಿಕ ಜೀವನದಲ್ಲಿ ನೆಮ್ಮದಿ.

ಧನಸುರಾಶಿ
ಇತರರು ಹಣಕಾಸಿನ ಸಹಕಾರವನ್ನು ಕೇಳಲಿದ್ದಾರೆ, ಕೊಟ್ಟ ಹಣ ಮರಳಿ ಬಾರದು, ಕೆಲಸದ ಸ್ಥಳದಲ್ಲಿ ಹಿರಿಯರ ಸಲಹೆಯನ್ನು ಆಲಿಸಿ, ಸಹೋದ್ಯೋಗಿಗಳು ನಿಮಗೆ ಮಾನಸಿಕ ಸ್ಥೈರ್ಯವನ್ನು ತುಂಬಲಿದ್ದಾರೆ, ಓದಿನಿಂದ ಮನಸಿಕ ನೆಮ್ಮದಿ ದೊರೆಯಲಿದೆ, ತಪ್ಪು ತಿಳುವಳಿಕೆಯಿಂದ ಸಂಗಾತಿಯೊಂದಿಗೆ ಬೇಸರ.

ಮಕರರಾಶಿ
ಹೂಡಿಕೆ ನಿಮಗೆ ಸಂಕಷ್ಟವನ್ನು ತಂದೊಡ್ಡುವ ಸಾಧ್ಯತೆ, ಸಮಯವನ್ನು ವ್ಯರ್ಥ ಮಾಡಬೇಡಿ, ವೈಯಕ್ತಿಕ ಜೀವನವು ಉತ್ತಮವಾಗಿರಲಿ, ಪ್ರೀತಿ ಪಾತ್ರರಿಂದ ಸಂತಸದ ಕ್ಷಣ, ಮಾನಸಿಕ ಶಾಂತಿ ದೊರೆಯಲಿದೆ, ಭೂ ವ್ಯವಹಾರ ಲಾಭದಾಯಕ, ಕೆಲಸದಲ್ಲಿ ಮೇಲಾಧಿಕಾರಿಗಳು ಪ್ರಶಂಸೆ ನೀಡಲಿದ್ದಾರೆ.

ಕುಂಭರಾಶಿ
ಸ್ನೇಹಿತರ ಜೊತೆ ಸಮಯವನ್ನು ಕಳೆಯುವಿರಿ, ವ್ಯಾಪಾರ ವ್ಯವಹಾರಗಳು ದೀರ್ಘ ಕಾಲದ ಲಾಭವನ್ನು ತಂದುಕೊಡಲಿದೆ, ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯತ್ನ ಬಲದ ಅಗತ್ಯವಿದೆ, ಸಂಗಾತಿಯ ಜೊತೆಗೆ ಸುಂದರ ಕ್ಷಣಗಳನ್ನು ಕಳೆಯುವಿರಿ, ಸಹೋದ್ಯೋಗಿಗಳ ಜೊತೆಗೆ ಹೊಂದಾಣಿಕೆ ಅಗತ್ಯ, ಖರ್ಚು ವೆಚ್ಚಗಳ ಮೇಲೆ ಹಿಡಿತವಿರಲಿ.

ಮೀನರಾಶಿ
ಇಂದು ನೀವು ಹೆಚ್ಚು ವಿಶ್ರಾಂತಿಯನ್ನು ಪಡೆಯುವ ಅಗತ್ಯವಿದೆ, ಸ್ನೇಹಿತೆ ನಿಮಗೆ ಹಣಕಾಸಿನ ಸಹಾಯವನ್ನು ಮಾಡಲಿದ್ದಾರೆ, ಖರ್ಚು ವೆಚ್ಚಗಳ ಮೇಲೆ ಹಿಡಿತವಿರಲಿ, ಹೊಸ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ, ಮುಖ್ಯವಲ್ಲದ ವಿಷಯಗಳ ಕುರಿತು ಅನಗತ್ಯ ಚಿಂತೆ ಬೇಡ, ಹೊಂದಾಣಿಕೆಯಿಂದ ಕಾರ್ಯ ಸಾಧನೆಯಾಗಲಿದೆ.

ಇದನ್ನೂ ಓದಿ : ಈ ಟಿಫ್ಸ್‌ ಫಾಲೋ ಮಾಡಿದ್ರೆ, ಜೀರ್ಣಕ್ರೀಯೆ ಸಮಸ್ಯೆ ಹೆತ್ತಿರಕ್ಕೂ ಸುಳಿಯೋದಿಲ್ಲ

(Horoscope today astrological prediction for September 2nd)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular