ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ : 13-07-2020

ನಿತ್ಯಭವಿಷ್ಯ : 13-07-2020

- Advertisement -

ಮೇಷರಾಶಿ
ಕುಟುಂಬ ಸೌಖ್ಯ, ಹಣಕಾಸು ವಿಚಾರದಲ್ಲಿ ಎಚ್ಚರ, ಕಣ್ಣಿನ ಸಮಸ್ಯೆ, ಸಾಂಸಾರಿಕವಾಗಿ ಖರ್ಚುವೆಚ್ಚಗಳು ಅಧಿಕವಾದಾವು. ಸ್ವಪ್ರಯತ್ನಕ್ಕೆ ನಿಶ್ಚಿತರೂಪದಲ್ಲಿ ಫ‌ಲವಿರುವುದು. ವಿದ್ಯಾರ್ಥಿಗಳು ತಮ್ಮ ಪ್ರಯತ್ನಬಲದ ಉತ್ತಮ ಫ‌ಲವನ್ನು ಪಡೆಯಲಿದ್ದಾರೆ. ದಿನಾಂತ್ಯದಲ್ಲಿ ಶುಭವಾರ್ತೆ ಇದೆ. ಬರಹಗಾರರಿಗೆ ಅನುಕೂಲ, ಆಲಸ್ಯ ಮನೋಭಾವ.

ವೃಷಭರಾಶಿ
ಆರೋಗ್ಯದಲ್ಲಿ ಆಗಾಗ ಏರುಪೇರು ಕಾಣಿಸಲಿದೆ. ದೂರ ಸಂಚಾರದ ಕೆಲಸಗಳು ಸ್ಥಗಿತಗೊಂಡಾವು. ದಾಯಾದಿಗಳ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕಾಗುತ್ತದೆ. ಸಾಮಾಜಿಕ ರಂಗದಲ್ಲಿ ನಿಮ್ಮ ಕೆಲಸ ಕಾರ್ಯವು ಮೆಚ್ಚುಗೆ ಗಳಿಸೀತು. ಅನಗತ್ಯ ವೈಮನಸ್ಸು, ಧನ ನಷ್ಟ, ಕೋರ್ಟ್ ವಿಚಾರದಲ್ಲಿ ಮನಃಸ್ತಾಪ, ಅನಗತ್ಯ ಖರ್ಚು, ಶತ್ರು ಬಾಧೆ, ಕೆಲಸದಲ್ಲಿ ತೊಂದರೆ.

ಮಿಥುನರಾಶಿ
ಬಂಧುಗಳ ಭೇಟಿ, ವೃಥಾ ಅಲೆದಾಟ, ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಜಾಗ್ರತೆ ವಹಿಸುವುದು ಅಗತ್ಯವಿದೆ. ವೃತ್ತಿರಂಗದಲ್ಲಿ ಕೆಲಸ ಕಾರ್ಯಗಳು ಅಡೆತಡೆಗಳಿಂದಲೇ ನಡೆಯಲಿದೆ. ನಿರುದ್ಯೋಗಿಗಳು ಉದ್ಯೋಗದ ಅವಕಾಶವನ್ನು ಹೊಂದಲಿದ್ದಾರೆ. ಮುನ್ನಡೆಯಬೇಕು. ಆರೋಗ್ಯದಲ್ಲಿ ಎಚ್ಚರಿಕೆ, ವಿವಾದಗಳಿಂದ ದೂರವಿರಿ, ತಾಳ್ಮೆ ಅತ್ಯಗತ್ಯ.

ಕಟಕರಾಶಿ
ಯೋಗ್ಯ ವಯಸ್ಕರು ಕಂಕಣಬಲದ ಯೋಗವನ್ನು ಪಡೆಯಲಿದ್ದಾರೆ. ವಿದ್ಯಾರ್ಥಿಗಳಿಗೆ ವಿದ್ಯೆಯಲ್ಲಿ ಹಿನ್ನಡೆ ತೋರಿಬರುತ್ತದೆ. ಹಿರಿಯರಿಗೆ ಅಧ್ಯಾತ್ಮ ಚಿಂತನೆಗೆ ಸರಿಯಾದ ಕಾಲವಿದು. ಇದರ ಸದುಪಯೋಗ ಪಡೆದುಕೊಂಡರೆ ಉತ್ತಮ. ಸ್ತ್ರೀಯರಿಗೆ ಶುಭ ಸಮಯ, ಗಣ್ಯ ವ್ಯಕ್ತಿಗಳ ಭೇಟಿ, ಸ್ಥಳ ಬದಲಾವಣೆ, ಮಿತ್ರರಲ್ಲಿ ದ್ವೇಷ, ದುಷ್ಟರಿಂದ ದೂರವಿರಿ.

ಸಿಂಹರಾಶಿ
ಸಾಲ ಬಾಧೆ, ವಿದ್ಯಾಭ್ಯಾಸದಲ್ಲಿ ತೊಂದರೆ, ವೃತ್ತಿರಂಗದಲ್ಲಿ ಸ್ಥಾನ ಬದಲಾವಣೆಯ ಸಾಧ್ಯತೆ ಇದೆ. ನಿರುದ್ಯೋಗಿಗಳಿಗೆ ಬಂದ ಅವಕಾಶವನ್ನು ಉಪಯೋಗಿಸಿರಿ. ಕೋರ್ಟುಕಚೇರಿ ಕಾರ್ಯಭಾಗದಲ್ಲಿ ಯಶಸ್ಸು ನಿಮ್ಮದಾಗಲಿದೆ. ಸರಕಾರೀ ಕೆಲಸಕಾರ್ಯಗಳು ಸರಾಗವಾಗಿ ನಡೆದು ಹೋಗಲಿವೆ. ಮಾತಿನ ಚಕಮಕಿ, ಸೇವಕರಿಂದ ತೊಂದರೆ, ಇಷ್ಟಾರ್ಥ ಸಿದ್ಧಿ.

ಕನ್ಯಾರಾಶಿ
ರೋಗಬಾಧೆ, ಕಾರ್ಯಕ್ಷೇತ್ರದಲ್ಲಿ ಯಾವುದೇ ರೀತಿಯ ಮನಸ್ತಾಪಕ್ಕೆ ಗುರಿಯಾಗದಂತೆ ಹೆಚ್ಚಿನ ಜಾಗ್ರತೆ ವಹಿಸಿರಿ. ವೃತ್ತಿರಂಗದಲ್ಲಿ ನಿಮ್ಮ ಕರ್ತವ್ಯದ ಕಡೆಗೆ ಗಮನಹರಿಸುವುದು ಉತ್ತಮ. ನಿಮ್ಮ ಬಗ್ಗೆ ನಾನಾ ರೀತಿಯ ಅಪವಾದಗಳು ಒದಗೀತು. ಅಕಾಲ ಭೋಜನ, ಮಾತಿನ ಮೇಲೆ ಹಿಡಿತ ಅಗತ್ಯ, ಹಿರಿಯರಿಂದ ಬುದ್ಧಿಮಾತು, ಕೃಷಿಯಲ್ಲಿ ಲಾಭ.

ತುಲಾರಾಶಿ
ವ್ಯಾಪಾರದಲ್ಲಿ ಪ್ರಗತಿ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಅವಿವಾಹಿತರಿಗೆ ವೈವಾಹಿಕ ಭಾಗ್ಯದ ಯೋಗವಿದ್ದರೂ ಅಡಚಣೆಗಳಿರುತ್ತದೆ. ಮನೆಯಲ್ಲಿ ಶುಭಮಂಗಲ ಕಾರ್ಯಗಳು ಸ್ಥಗಿತಗೊಂಡಾವು. ಸ್ವತಂತ್ರ ವ್ಯವಹಾರಗಳು ಉತ್ತಮವಾಗಿ ನಡೆಯಲಿವೆ. ವಿದ್ಯಾರ್ಥಿಗಳು ಅಭ್ಯಾಸದ ಬಗ್ಗೆ ಜಾಗ್ರತೆ ಮಾಡಿರಿ. ದೂರ ಪ್ರಯಾಣ, ಬಂಧು-ಮಿತ್ರರ ಸಮಾಗಮ, ಮಕ್ಕಳ ಪ್ರತಿಭೆಗೆ ತಕ್ಕ ಅವಕಾಶ.

ವೃಶ್ಚಿಕರಾಶಿ
ವೃತ್ತಿರಂಗದಲ್ಲಿ ಅಭಿಪ್ರಾಯಭೇದ ಕಲಹಕ್ಕೆ ಕಾರಣವಾದೀತು. ಕುಟುಂಬದ ವಿಚಾರಗಳಿಗೆ ಆದ್ಯತೆಯನ್ನು ನೀಡಿರಿ. ಇತರರ ಇಷ್ಟಕ್ಕೆ ವಿರೋಧವಾಗಿ ನಡೆಯುವ ಪ್ರಸಂಗ ಬಂದೀತು. ಆರ್ಥಿಕವಾಗಿ ಅಭಿವೃದ್ಧಿ ಕಂಡುಬರುವುದು. ಶುಭವಿದೆ. ಕೆಲಸ ಕಾರ್ಯಗಳಲ್ಲಿ ವಿಘ್ನ, ಕೃಷಿಯಲ್ಲಿ ನಷ್ಟ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಚಂಚಲ ಮನಸ್ಸು.

ಧನಸ್ಸುರಾಶಿ
ವೃತ್ತಿರಂಗದಲ್ಲಿ ಹೆಚ್ಚಿನ ಆಸಕ್ತಿ ವಹಿಸಬೇಕಾಗುತ್ತದೆ. ಅದನ್ನು ನಿಭಾಯಿಸಲು ನಿಮಗೆ ಸಾಧ್ಯವಿದೆ. ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಗಮನಹರಿಸಬೇಕು. ಕುಟುಂಬದ ಸದಸ್ಯರು ನಿಮಗೆ ಸಹಕಾರವನ್ನು ನೀಡಲಿದ್ದಾರೆ. ಅಲ್ಪ ಲಾಭ, ಅಧಿಕ ಖರ್ಚು, ಮನೆಯಲ್ಲಿ ಶುಭ ಕಾರ್ಯ, ಉದ್ಯೋಗದಲ್ಲಿ ಅಭಿವೃದ್ಧಿ, ತೀರ್ಥಯಾತ್ರೆ ದರ್ಶನ.

ಮಕರರಾಶಿ
ಧಾರ್ಮಿಕ ವಿಚಾರಗಳತ್ತ ಮನಸ್ಸುವಾಲುವುದು. ಲೌಕಿಕ ವಿಚಾರಗಳು ನಿರಾಸಕ್ತಿ ತಂದೀತು. ಆರ್ಥಿಕವಾಗಿ ಹೂಡಿಕೆಗಳು ಲಾಭಕರವಾಗಲಿವೆ. ವೈಯಕ್ತಿಕ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸುವುದು ಅಗತ್ಯ. ಆರೋಗ್ಯದಲ್ಲಿ ವ್ಯತ್ಯಾಸ, ಸ್ತ್ರೀಯರಿಗೆ ತೊಂದರೆ, ಸುಖ ಭೋಜನ ಪ್ರಾಪ್ತಿ, ಹಿತ ಶತ್ರುಗಳಿಂದ ತೊಂದರೆ, ವಾಹನ ಖರೀದಿ, ಮನಃಸ್ತಾಪ ಹೆಚ್ಚು.

ಕುಂಭರಾಶಿ
ಅನಗತ್ಯ ನಿಂದನೆ, ಮಾನಸಿಕ ನೆಮ್ಮದಿಗೆ ಧಕ್ಕೆ, ಯಾವುದೇ ವಿಚಾರದಲ್ಲಿ ಸಹನೆಯನ್ನು ಕಾಯ್ದುಕೊಳ್ಳಿರಿ. ಕುಟುಂಬ ಸದಸ್ಯರ ಜೊತೆ ವಾಗ್ವಾದಕ್ಕೆ ಇಳಿಯದಿರಿ. ಸಡಿಲ ಮಾತು ನಿಮ್ಮ ವರ್ಚಸ್ಸಿಗೆ ಹಾನಿ ತರುವುದು. ವೃತ್ತಿರಂಗದಲ್ಲಿ ನಿರಾಸಕ್ತಿ ತೋರಿಬರಲಿದೆ. ಕೋಪ ಹೆಚ್ಚು, ಧಾರ್ಮಿಕ ಕಾರ್ಯಗಳಿಂದ ನೆಮ್ಮದಿ.

ಮೀನರಾಶಿ
ವೃತ್ತಿ ಕ್ಷೇತ್ರದಲ್ಲಿ ನಿಮಗೆ ಪ್ರತಿಕೂಲ ಬೆಳವಣಿಗೆ ಅತೃಪ್ತಿಗೆ ಕಾರಣವಾದೀತು. ಕೌಟುಂಬಿಕವಾಗಿ ಸಣ್ಣಪುಟ್ಟ ಸಮಸ್ಯೆಗಳು ತೋರಿಬಂದರೂ ಹೊಂದಾಣಿಕೆಯಿಂದ ಬಗೆಹರಿಸಬಹುದು. ಆರ್ಥಿಕ ಪರಿಸ್ಥಿತಿ ಉತ್ತಮ. ಶ್ರಮಕ್ಕೆ ತಕ್ಕಫಲ, ದೂರ ಪ್ರಯಾಣ, ಆರೋಗ್ಯದಲ್ಲಿ ಏರುಪೇರು, ವಾಹನ ಅಪಘಾತ ಸಾಧ್ಯತೆ, ಈ ದಿನ ಎಚ್ಚರಿಕೆ ಅಗತ್ಯ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular