ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ : 16-06-2020

ನಿತ್ಯಭವಿಷ್ಯ : 16-06-2020

- Advertisement -

ಮೇಷರಾಶಿ
ಸಾರ್ವಜನಿಕ ಕ್ಷೇತ್ರದಲ್ಲಿ ನಿಮ್ಮ ಶ್ರಮಕ್ಕೆ ಯಶಸ್ಸು ದೊರಕಲಿದೆ. ಸಾಲ ಮರುಪಾವತಿ, ಕೆಲಸ ಕಾರ್ಯಗಳಲ್ಲಿ ವಿಳಂಬ, ಮಾನಸಿಕ ವ್ಯಥೆ, ಆತ್ಮೀಯರೊಂದಿಗೆ ಮಾತುಕತೆ, ಆರೋಗ್ಯದಲ್ಲಿ ಸಮಸ್ಯೆ. ಸ್ತಿರಾಸ್ಥಿ ವಿಚಾರದಲ್ಲಿ ಅಡಚಣೆಗಳು ಉಂಟಾಗುತ್ತವೆ. ವಿದ್ಯಾರ್ಥಿಗಳಿಗೆ ಉತ್ತಮ ಫ‌ಲಿತಾಂಶ ದೊರಕಲಿದೆ. ದುಷ್ಟರ ಸಂಗದಿಂದ ದೂರವಿರಿ.

ವೃಷಭರಾಶಿ
ಕೃಷಿಕರಿಗೆ ಕಾರ್ಯಕ್ಷೇತ್ರದಲ್ಲಿ ಉತ್ತಮ ಉತ್ತೇಜನ ಕಂಡು ಬಂದೀತು. ಆರ್ಥಿಕವಾಗಿ ಧನಪ್ರಾಪ್ತಿ ಇದ್ದೀತು. ಕೌಟುಂಬ ವಿಷಯಗಳು ಇತ್ಯರ್ಥ, ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಭಾಗಿ, ಪ್ರೀತಿ ಪಾತ್ರರೊಂದಿಗೆ ಬಾಂಧವ್ಯ, ನೆಮ್ಮದಿಯ ವಾತಾವರಣ ನಿರ್ಮಾಣ ಸಾಧ್ಯತೆ. ಮನೆ ಹಾಗೂ ವೃತ್ತಿಯಲ್ಲಿ ಉತ್ತಮ ಅಭಿವೃದ್ಧಿ ಕಂಡು ಬರುವುದು. ಉದ್ಯೋಗಿಗಳಿಗೆ ಬದಲಾವಣೆ ಇದೆ.

ಮಿಥುನರಾಶಿ
ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಅನಿರೀಕ್ಷಿತ ಖರ್ಚು, ಶತ್ರುಗಳ ಬಾಧೆ, ಉದ್ಯಮಿಗಳಿಗೆ ಅಲ್ಪ ಲಾಭ, ಕೆಲಸ ಕಾರ್ಯಗಳಲ್ಲಿ ವಿಳಂಬ. ಅನಿರೀಕ್ಷಿತವಾಗಿ ಅಗ್ನಿಭಯ ತಂದೀತು.ನೌಕರರಿಂದ ಅಡೆತಡೆಗಳು ತೋರಿ ಬಂದು ಕಾರ್ಯಸಾಧನೆಗೆ ಅಡ್ಡಿಯಾದೀತು.ಅಧಿಕಾರಿಗಳಿಗೆ ಅಭಿವೃದ್ಧಿ ಇದೆ.

ಕಟಕರಾಶಿ
ಆರ್ಥಿಕವಾಗಿ ಹೆಚ್ಚಿನ ಜಾಗ್ರತೆ ವಹಿಸಬೇಕಾಗುತ್ತದೆ.ದಾಂಪತ್ಯಕ್ಕೆ ಅನಾವಶ್ಯಕವಾಗಿ ಕಲಹಗಳು ಕಂಡು ಬರುತ್ತವೆ. ಒಳ್ಳೆತನ ದುರುಪಯೋಗವಾದಂತೆ ನೋಡಿಕೊಳ್ಳಿ, ಆರೋಗ್ಯದಲ್ಲಿ ವ್ಯತ್ಯಾಸ, ದುರ್ಘಟನೆ, ವಾಗ್ವಾದ, ಮನಸ್ಸಿನಲ್ಲಿ ಆತಂಕ. ವಿದ್ಯಾರ್ಥಿಗಳಿಗೆ ಅತೀ ಹೆಚ್ಚಿನ ಪ್ರಯತ್ನಬಲದ ಅಗತ್ಯವು ಕಂಡು ಬರುವುದು.

ಸಿಂಹರಾಶಿ
ಸಾಂಸಾರಿಕವಾಗಿ ನೆಮ್ಮದಿಯ ದಿನಗಳಿವು. ತಂದೆ-ತಾಯಿಯೊಂದಿಗೆ ಪ್ರೀತಿ ವಾತ್ಸಲ್ಯ, ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ, ಕುಲದೇವರ ಪೂಜೆಯಿಂದ ಅನುಕೂಲ, ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ. ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು ಒದಗಿ ಬರಲಿವೆ. ಇದರ ಸದುಪಯೋಗ ಮಾಡಿಕೊಳ್ಳಿರಿ. ಭಿನ್ನಾಭಿಪ್ರಾಯದಿಂದ ಮಾನಸಿಕ ದೃಢತೆ ಕುಂಠಿತಗೊಳ್ಳಲಿದೆ.

ಕನ್ಯಾರಾಶಿ
ವೃತ್ತಿರಂಗದಲ್ಲಿ ಭಿನ್ನಾಭಿಪ್ರಾಯ ಕಂಡು ಬರಲಿದೆ. ಸ್ತ್ರೀಯರಿಗೆ ಅನುಕೂಲ, ದಾಂಪತ್ಯದಲ್ಲಿ ಪ್ರೀತಿ ಸಂತಸ, ದುಷ್ಟ ಜನರಿಂದ ತೊಂದರೆ, ನೀವಾಡುವ ಮಾತಿನಲ್ಲಿ ಹಿಡಿತ ಅಗತ್ಯ, ತಾಳ್ಮೆಯಿಂದ ಕಾರ್ಯ ಸಿದ್ಧಿ. ಸಾಂಸಾರಿಕವಾಗಿ ಸಂಬಂಧ ಕೆಡುಕು ಕಂಡು ಬರಲಿದೆ. ದೈಹಿಕ ಆರೋಗ್ಯದ ಬಗ್ಗೆ ಗಮನ ಹರಿಸಿರಿ. ಜನರಿಂದ ದೂರವಿರಿ.

ತುಲಾರಾಶಿ
ದುಂದು ವೆಚ್ಚಗಳಿಗೆ ಕಡಿವಾಣ, ಶತ್ರುಗಳ ಬಾಧೆ ನಿವಾರಣೆ, ಮಾನಸಿಕ ನೆಮ್ಮದಿ, ವಿದ್ಯಾರ್ಥಿಗಳಲ್ಲಿ ಗೊಂದಲ, ಅಕಾಲ ಭೋಜನ. ಕಾರ್ಯಕ್ಷೇತ್ರದ ಒತ್ತಡದಿಂದ ದೇಹಾರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಕೌಟುಂಬಿಕವಾಗಿ ಅಸಮಾಧಾನ ವಾತಾವರಣದಿಂದ ಕಿರಿಕಿರಿಯೆನಿಸಲಿದೆ.ವೃಥಾ ಮನೋಪಹಾನಿಗಳಿಗೆ ಕಾರಣರಾಗದಿರಿ.

ವೃಶ್ಚಿಕರಾಶಿ
ನಿರೀಕ್ಷೆಗೆ ತಕ್ಕ ಆದಾಯ, ಸಣ್ಣ ಪುಟ್ಟ ತೊಂದರೆಗಳಿಂದ ಅಸಮಾಧಾನ, ಮಾನಸಿಕ ವ್ಯಥೆ, ಯತ್ನ ಕಾರ್ಯದಲ್ಲಿ ವಿಳಂಬ, ಅಧಿಕವಾದ ಚಿಂತೆ-ನೋವು. ಕಾರ್ಯಸಾಧನೆಯಲ್ಲಿ ಸಾವಧಾನವಾಗಿ ಮುಂದುವರಿಯಲಿದ್ದೀರಿ. ವಿಶೇಷ ಸಂಚಾರದಿಂದ ಸುಖ ಹಾಗೂ ಶುಭ ತರಲಿದೆ. ಸಕಾಲಿಕ ಚಿಂತನೆಗಳು ಕಾರ್ಯರೂಪಕ್ಕೆ ಬರಲು ಅಪ್ತರ ಸಹಕಾರವು ದೊರಕಲಿವೆ.

ಧನುರಾಶಿ
ಆರ್ಥಿಕವಾಗಿ ಅತೀ ಹೆಚ್ಚಿನ ಜಾಗ್ರತೆ ಮಾಡುವುದು. ಸ್ವಯಂ ಸಾಮಥ್ರ್ಯದಿಂದ ಅವಕಾಶ ಲಭಿಸುವುದು, ಅಧಿಕವಾದ ಖರ್ಚು, ವ್ಯವಹಾರದಲ್ಲಿ ಬುದ್ಧಿವಂತಿಕೆ ಅಗತ್ಯ, ಜಾಣ್ಮೆಯಿಂದ ಕಾರ್ಯ ಯಶಸ್ಸು. ಹೆಚ್ಚಿನ ಹೂಡಿಕೆಗಳು ಈಗಿನ ಪರಿಸ್ಥಿತಿಯಲ್ಲಿ ಸಮಸ್ಯೆಯನ್ನು ತಂದುಕೊಟ್ಟಾವು. ಸಾಮಾಜಿಕವಾಗಿ ಜನರೊಳಗಿನ ನಡುವಳಿಕೆಯಲ್ಲಿ ಎಚ್ಚರ ವಹಿಸಿರಿ.

ಮಕರರಾಶಿ
ವ್ಯಾಪಾರ, ವ್ಯವಹಾರಗಳು ನಿರೀಕ್ಷಿತ ರೀತಿಯಲ್ಲಿ ಅಭಿವೃದ್ದಿದಾಯಕವಾಗಲಿವೆ. ಸರ್ಕಾರಿ ಕೆಲಸ ನಿಮಿತ್ತ ಓಡಾಟ, ತಾತ್ಕಾಲಿಕ ಸಮಸ್ಯೆಗಳು ನಿವಾರಣೆ, ಉದ್ಯೋಗದಲ್ಲಿ ಬಡ್ತಿ, ಹಣಕಾಸು ಲಾಭ, ಶುಭ ಫಲ ಯೋಗ. ಯಾವ ವಿಷಯದಲ್ಲಿ ಯೋಚಿಸಿ,ಆಲೋಚಿಸಿ ಮುಂದುವರಿದ್ದಲ್ಲಿ ಯಶಸ್ಸು ದೊರಕಲಿದೆ.ಮನೋಕಾಮನೆಗಳು ನೆರವೇರಲಿವೆ.

ಕುಂಭರಾಶಿ
ಅನೇಕ ಪ್ರಯತ್ನಬಲಕ್ಕೆ ಅಲ್ಪ ಪರಿಣಾಮ ವಾಗದಂತೆ ಕಾಳಜಿ ವಹಿಸಬೇಕಾದೀತು. ಚಂಚಲ ಸ್ವಭಾವ, ಆರೋಗ್ಯದಲ್ಲಿ ವ್ಯತ್ಯಾಸ, ಆಲಸ್ಯ ಮನೋಭಾವ, ಬಂಧು ಮಿತ್ರರಲ್ಲಿ ವೈಮನಸ್ಸು, ಮಾನಸಿಕ ವ್ಯಥೆ, ದಾಂಪತ್ಯದಲ್ಲಿ ಪ್ರೀತಿ. ಕೌಟುಂಬಿಕವಾಗಿ ಆಗಾಗ ನೆರೆಹೊರೆಯವರ ಕಿರಿಕಿರಿ,ಚಾಡಿ ಮಾತುಗಳಿಂದ ತಲೆಕೆಟ್ಟು ಹೋದೀತು.ಸಾಂಸಾರಿಕವಾಗಿ ತುಸು ನೆಮ್ಮದಿ.

ಮೀನರಾಶಿ
ದೈವಾನುಗ್ರಹ ಪಡೆದ ನೀವು ಭಾಗ್ಯಶಾಲಿಗಳಾದಾರು. ಮಾಡಿದ ಕಾರ್ಯಕ್ಕೆ ಪಶ್ಚಾತ್ತಾಪಗೊಳ್ಳುವಿರಿ, ಅತಿಯಾದ ನಿದ್ರೆ, ನಂಬಿಕಸ್ಥರಿಂದ ದ್ರೋಹ, ಅಪರಿಚಿತರಿಂದ ದೂರವಿರಿ. ಅಹಂಭಾವ ಬಿಟ್ಟುಬಿಡಿರಿ.ಆತ್ಮ ವಿಶ್ವಾಸದಿಂದ ಮುಂದುವರಿದ್ದಲ್ಲಿ ಯಶಸ್ಸು ನಿಮಗೆ ದೊರಕಲಿದೆ. ನಿರುದ್ಯೋಗಿಗಳಿಗೆ ಉದ್ಯೋಗಲಾಭವು ದೊರಕೀತು.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular