ಭಾನುವಾರ, ಏಪ್ರಿಲ್ 27, 2025
Homehoroscopeನಿತ್ಯಭವಿಷ್ಯ : 30-03-2020

ನಿತ್ಯಭವಿಷ್ಯ : 30-03-2020

- Advertisement -

ಮೇಷರಾಶಿ
ಪ್ರತಿಯೊಂದು ಕೆಲಸ ಕಾರ್ಯಗಳನ್ನು ಪ್ರಯತ್ನ ಬಲದಿಂದಲೇ ಮುಂದುವರಿಸಿ. ನಿರುದ್ಯೋಗಿಗಳಿಗೆ ಬಂದ ಅವಕಾಶಗಳು ತಪ್ಪಿಹೋದಾವು. ಸಾಂಸಾರಿಕವಾಗಿ ಬದಲಾವಣೆ ಸ್ವೀಕರಿಸಿರಿ. ವಿಪರೀತ ಖರ್ಚು, ದೂರದ ಆಲೋಚನೆ, ಮಾತಿನಲ್ಲಿ ಹಿಡಿತ ಅಗತ್ಯ, ಕುಟುಂಬಸ್ಥರಿಂದ ಹಿತನುಡಿ.

ವೃಷಭರಾಶಿ
ನಾನಾ ವಿಚಾರಗಳ ಬಗ್ಗೆ ಚರ್ಚೆ, ಸಾಂಸಾರಿಕವಾಗಿ ಪತ್ನಿಯಿಂದ ಸ್ಫೂರ್ತಿದಾಯಕ ವಾತಾವರಣವು ಮುನ್ನಡೆಗೆ ಪೂರಕವಾಗುತ್ತದೆ. ಆರ್ಥಿಕ ದೃಢತೆ ಇದ್ದರೂ ಖರ್ಚುವೆಚ್ಚಗಳು ತಪ್ಪಲಾರದು. ಶುಭ ಕಾರ್ಯಗಳಿಗೆ, ಮಂಗಲ ಕಾರ್ಯಗಳಿಗೆ ಅಡೆತಡೆ ಇರುವುದು. ಹಣಕಾಸು ನಷ್ಟ, ಆಲಸ್ಯ ಮನೋಭಾವ, ಮಾನಸಿಕ ವೇದನೆ, ಗೊಂದಲಮಯ ವಾತಾರಣ.

ಮಿಥುನರಾಶಿ
ಅನ್ಯ ಜನರಲ್ಲಿ ಪ್ರೀತಿ, ಆರ್ಥಿಕವಾಗಿ ಅಡೆತಡೆಗಳು ಕಂಡು ಬಂದಾವು. ಕೆಲವೊಂದು ಪ್ರತಿಕೂಲ ಫ‌ಲಗಳಿಂದ ನೆಮ್ಮದಿ ಸಿಗಲಾರದು. ಅನಾವಶ್ಯಕ ತಪ್ಪು ಅಭಿಪ್ರಾಯಗಳು ಮನಸ್ಸನ್ನು ನೋಯಿಸಲಿದೆ. ಗಮನ ಇರಲಿ. ನಂಬಿಕಸ್ಥರಿಂದ ದ್ರೋಹ, ವಾಹನ ರಿಪೇರಿ, ಮನಸ್ಸಿನಲ್ಲಿ ಭಯ ಭೀತಿ.

ಕಟಕರಾಶಿ
ಸಾಂಸಾರಿಕವಾಗಿ ಮನಸ್ಸಿಗೆ ತುಸು ಸಮಾಧಾನವಾಗಲಿದೆ. ನಿರುದ್ಯೋಗಿಗಳ ಪ್ರಯತ್ನಬಲ ಸಾರ್ಥಕವಾಗಬಹುದು. ಕೈಗೊಂಡ ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಫ‌ಲಿತಾಂಶವು ದೊರಕಲಾರದು. ಶುಭವಿದೆ. ಮಿತ್ರರಲ್ಲಿ ಸ್ನೇಹವೃದ್ಧಿ, ಅಲ್ಪ ಕಾರ್ಯ ಸಿದ್ಧಿ, ಶೀತ ಸಂಬಂಧಿತ ರೋಗ, ತಾಳ್ಮೆಯಿಂದ ವರ್ತಿಸಿ, ಕೃಷಿಕರಿಗೆ ಅಲ್ಪ ಲಾಭ.

ಸಿಂಹರಾಶಿ
ಕಷ್ಟದಲ್ಲಿರುವವರಿಗೆ ಸಹಾಯ ಮಾಡುವಿರಿ, ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಿದೆ. ಯಾವುದೇ ಕಷ್ಟನಷ್ಟಗಳನ್ನು ಎದುರಿಸಲು ಆತ್ಮಸ್ಥೈರ್ಯ ಒದಗಿಬಂದೀತು. ಶುಭ ಕಾರ್ಯಗಳು ಮುಂದೂಡಲ್ಪಡುವುದು. ದೇಹಾರೋಗ್ಯದಲ್ಲಿ ಕಿರಿಕಿರಿ ಇರುವುದು. ಮಾನಸಿಕ ನೆಮ್ಮದಿ, ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ, ಕೆಲಸ ಕಾರ್ಯಗಳಲ್ಲಿ ವಿಘ್ನ, ವ್ಯವಹಾರದಲ್ಲಿ ಅಲ್ಪ ಲಾಭ.

ಕನ್ಯಾರಾಶಿ
ವ್ಯರ್ಥವಾದ ಅಲೆದಾಟಗಳು ಧನವ್ಯಯಕ್ಕೆ ಕಾರಣವಾದೀತು. ನೂತನ ಕೆಲಸಕಾರ್ಯಗಳಿಗೆ ಇದು ಸಕಾಲವಲ್ಲ. ವೃತ್ತಿರಂಗದಲ್ಲಿ ಅಪವಾದದ ಭೀತಿ ತಂದೀತು. ಆರ್ಥಿಕವಾಗಿ ಜಾಗೃತೆ ವಹಿಸುವುದು. ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಮಾತೃವಿನಿಂದ ಪ್ರಶಂಸೆ, ಆತ್ಮೀಯರೊಂದಿಗೆ ಪ್ರೀತಿ ವಿಶ್ವಾಸ, ಈ ದಿನ ಮಿಶ್ರ ಫಲ ಯೋಗ.

ತುಲಾರಾಶಿ
ವ್ಯಾಪಾರ ವ್ಯವಹಾರಗಳಲ್ಲಿ ಗಳಿಕೆ ಆಗಾಗ ಇಳಿಮುಖವಾಗಲಿದೆ. ಉದ್ಯೋಗರಂಗದಲ್ಲಿ ಅಧಿಕಾರಿ ವರ್ಗದವರ ವರ್ತನೆ ಅಸಮಾಧಾನಕ್ಕೆ ಕಾರಣವಾಗುತ್ತದೆ. ದೂರದ ಸಂಬಂಧಿಕರಿಂದ ಬೇಸರದ ವಾರ್ತೆಇದೆ.ಕೆಲಸ ಕಾರ್ಯಗಳಲ್ಲಿ ವಿಳಂಬ, ಆಸ್ತಿ ವಿಚಾರದಲ್ಲಿ ಕಲಹ, ಹಿತ ಶತ್ರುಗಳ ಬಾಧೆ, ಪರರಿಂದ ಮೋಸ, ಎಚ್ಚರಿಕೆಯಲ್ಲಿರುವುದು ಉತ್ತಮ.

ವೃಶ್ಚಿಕರಾಶಿ
ಹೊಸ ಸಮಸ್ಯೆಗಳು ಉದ್ಭವ, ಸ್ತ್ರೀ ಹೇತುವಾದ ಖರ್ಚುವೆಚ್ಚಗಳಿರುತ್ತದೆ. ಶುಭ ಕಾರ್ಯ ಪ್ರವೃತ್ತಿಗೆ ಉತ್ತಮ ಅಭಿವೃದ್ಧಿ ಕಂಡು ಬಂದರೂ ಸಮಾಧಾನವು ದೊರಕದು. ಕಿರು ಸಂಚಾರವಿದೆ. ಮೌನವಾಗಿರುವುದು ಉತ್ತಮ, ಶತ್ರುಗಳ ಕುತಂತ್ರಕ್ಕೆ ಸಿಲುಕುವಿರಿ, ವ್ಯವಹಾರಗಲ್ಲಿ ಎಚ್ಚರಿಕೆ.

ಧನಸ್ಸುರಾಶಿ
ಕೆಲವೊಂದು ಮೂಲಗಳಿಂದ ಧನಾಗಮವು ಒದಗಿಬಂದು ಕಾರ್ಯಾನುಕೂಲಕ್ಕೆ ಅನುಕೂಲವಾಗಲಿದೆ. ಸಾಂಸಾರಿಕವಾಗಿ ಮನಸ್ಸಿಗೆ ಸಂತೋಷಕರವಾದ ಘಟನೆಗಳು ನಡೆಯಲಿದೆ. ಆರೋಗ್ಯದಲ್ಲಿ ಜಾಗ್ರತೆ ಇರಲಿ. ಪರರಿಂದ ಧನ ಸಹಾಯ, ಕೆಲಸ ಕಾರ್ಯಗಳಲ್ಲಿ ವಿಳಂಬ, ಖರ್ಚಿನ ಬಗ್ಗೆ ನಿಯಂತ್ರಣ ಅಗತ್ಯ, ಹಣಕಾಸು ವಿಚಾರದಲ್ಲಿ ಎಚ್ಚರ.

ಮಕರರಾಶಿ
ಕುಟುಂಬದೊಂದಿಗೆ ಕಾಲ ಕಳೆಯುವಿರಿ, ವ್ಯರ್ಥವಾದ ಅಲೆದಾಟ ಸಾಮಾನ್ಯವೆನ್ನಬಹುದು. ಯಾವುದೇ ಕಷ್ಟನಷ್ಟಗಳನ್ನು ದೃಢನಿರ್ಧಾರದಿಂದ ಎದುರಿಸಿರಿ. ಉದ್ಯೋಗರಂಗದಲ್ಲಿ ತೀವ್ರ ಸ್ಪರ್ಧೆ ಎದುರಿಸ ಬೇಕಾಗುತ್ತದೆ. ಆರ್ಥಿಕವಾಗಿ ಜಾಗ್ರತೆ ವಹಿಸಿರಿ. ಅಪರಿಚಿತರಿಂದ ದೂರವಿರಿ, ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ, ಸಮಾಧಾನಕಾರ ದಿನ, ನೆಮ್ಮದಿ ಪ್ರಾಪ್ತಿ.

ಕುಂಭರಾಶಿ
ಮನಸ್ಸಿನ ಹತೋಟಿ ಕಳೆದುಕೊಳ್ಳುವಿರಿ, ಧನವ್ಯಯದಿಂದಾಗಿ ಆರ್ಥಿಕ ಸ್ಥಿತಿಯಲ್ಲಿ ಏರುಪೇರಾದೀತು. ಆಗಾಗ ಆತ್ಮೀಯರೊಂದಿಗೆ ಕಲಹ, ನಿಷ್ಠುರ, ದುಡಿಕಿನಿಂದ ಕಿರಿಕಿರಿ ಎನಿಸಲಿದೆ. ತಾಳ್ಮೆ, ಸಮಾಧಾನದಿಂದ ಮುನ್ನಡೆದರೆ ಕಾರ್ಯಸಿದ್ಧಿ ಇದೆ. ಚಂಚಲ ಮನಸ್ಸು, ಹೇಳಿಕೆ ಮಾತನ್ನು ಕೇಳಬೇಡಿ, ಅನ್ಯರಿಂದ ಸಮಸ್ಯೆಗೆ ಸಿಲುಕುವಿರಿ ಎಚ್ಚರಿಕೆ.

ಮೀನರಾಶಿ
ಕೆಲವೊಂದು ಮೂಲಗಳು ಧನಾಗಮನವನ್ನು ಒದಗಿಸಿಕೊಡುತ್ತದೆ. ಬಂಧುಗಳು, ಹಿತೈಷಿಗಳು ನಿಮಗೆ ಸಹಕಾರವನ್ನು ನೀಡಲಿದ್ದಾರೆ. ವೈಯಕ್ತಿಕ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸುವುದು. ವಿದ್ಯಾರ್ಥಿಗಳಲ್ಲಿ ಪ್ರಗತಿ, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಸಹೋದರರಿಂದ ಪ್ರೀತಿ, ಸುಖ ಭೋಜನ ಪ್ರಾಪ್ತಿ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular