ನಿತ್ಯಭವಿಷ್ಯ : ಈ ರಾಶಿಯವರು ಹಿತಶತ್ರುಗಳ ಕಾಟದ ಬಗ್ಗೆ ಎಚ್ಚರದಿಂದ ಇರಿ (12-04-2021)

ಮೇಷರಾಶಿ
ಆತ್ಮೀಯರೊಂದಿಗೆ ಕಲಹ, ಹಂತ ಹಂತವಾಗಿ ಅಭಿವೃದ್ದಿ, ಅತೀ ಆತ್ಮವಿಶ್ವಾಸ ಅಹಂಕಾರವನ್ನು ತೋರಿಸುತ್ತದೆ. ಪುಣ್ಯಕ್ಷೇತ್ರ ದರ್ಶನ, ಸೇವಕರಿಂದ ತೊಂದರೆ, ತಾಳ್ಮೆಯಿಂದ ಗೊಂ‌ದಲ ನಿವಾರಣೆ, ಸಾಮಾನ್ಯ ನೆಮ್ಮದಿಗೆ ದಕ್ಕೆ, ಅತಿಯಾದ ನಿದ್ರೆ.

ವೃಷಭರಾಶಿ
ಆರೋಗ್ಯ ಸಮಸ್ಯೆ ಎದುರಾಗಲಿದೆ, ವಾದ-ವಿವಾದಗಳಲ್ಲಿ ಸೋಲು, ವಿವಾಹ ಮತ್ರು ಉದ್ಯೋಗ ಸಂಬಂಧಿತ ವಿಚಾರಗಳಲ್ಲಿ ಗೆಲುವು, ಪಿತ್ರಾರ್ಜಿತ ಆಸ್ತಿಗಾಗಿ ಕಲಹ, ವಿರೋಧಿಗಳಿಂದ ತೊಂದರೆ, ಅಕಾಲ ಭೋಜನ.

ಮಿಥುನರಾಶಿ
ಅದೃಷ್ಟ ನಿಮ್ಮ ಪಾಲಿಗಿದ್ದು, ವ್ಯವಹಾರ, ವ್ಯಾಪಾರ, ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು, ಉತ್ತಮ ಬುದ್ಧಿಶಕ್ತಿ, ವಸ್ತ್ರ ಖರೀದಿ, ಮಹಿಳೆಯರಿಗೆ ಅನುಕೂಲ, ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಪ್ರಗತಿ, ಅವಿವಾಹಿತರಿಗೆ ವಿವಾಹಯೋಗ, ಶತ್ರು ಭಾದೆ, ಕಾರ್ಯದಲ್ಲಿ ವಿಳಂಬ.

ಕಟಕರಾಶಿ
ಸಾಲಭಾದೆ, ಮನಕ್ಲೇಶ, ಹೊಸ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳ ಬೇಡಿ, ಕುಟುಂಬಸ್ಥರ ಜಗಳ‌ ಮನಸಿನ ನೆಮ್ಮದಿಯನ್ನು ಹಾಳು ಮಾಡಲಿದೆ, ಯತ್ನ ಕಾರ್ಯ ಭಂಗ, ಉದ್ಯೋಗದಲ್ಲಿ ಬಡ್ತಿ, ಹಿತಶತ್ರುಗಳಿಂದ ತೊಂದರೆ, ಧನವ್ಯಯ.

ಸಿಂಹರಾಶಿ
ಹಿತಶತ್ರುಗಳ ಕಾಟ, ಉತ್ತಮ‌ ಅವಕಾಶಗಳು ಕಂಡುಬರಲಿದೆ, ಅಭಿವೃದ್ಧಿ ಕುಂಠಿತ, ಹಣಕಾಸು ನಷ್ಟ, ಶೀತ ಸಂಬಂಧಿತ ಸಮಸ್ಯೆ, ವಿದ್ಯಾರ್ಥಿಗಳಿಗೆ ಅನುಕೂಲ, ಭೂಮಿ ವಿಚಾರದಲ್ಲಿ ವಿಘ್ನ, ಶರೀರದಲ್ಲಿ ಆಲಸ್ಯ, ಅಕಾಲ ಭೋಜನ.

ಕನ್ಯಾರಾಶಿ
ಉದ್ಯೋಗ ಕ್ಷೇತ್ರದಲ್ಲಿ ಮೇಲಾಧಿಕಾರಿಗಳಿಂದ ಪ್ರಶಂಸೆ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಹೊಸ ವ್ಯವಹಾರ ಸದ್ಯಕ್ಕೆ ಬೇಡ, ವಿದ್ಯಾರ್ಥಿಗಳಿಗೆ ಅನುಕೂಲಕರ, ಭೂಲಾಭ, ವಿವಾಹ ಯೋಗ, ಋಣವಿಮೋಚನ ಕುಟುಂಬ ಸೌಖ್ಯ, ಚೋರಾಗ್ನಿ ಭೀತಿ.

ತುಲಾರಾಶಿ
ಆರೋಗ್ಯದ ಬಗ್ಗೆ ಎಚ್ಚರಿಕೆಯಿರಲಿ, ಆದಾಯಕ್ಕಿಂತ ಖರ್ಚು ಹೆಚ್ಚು, ಅಪಘಾತ ಭಯ ಕಾಡಲಿದೆ, ಬಂಧುಗಳಿಂದ ಕಿರಿಕಿರಿ, ವಿದ್ಯಾರ್ಜನೆಯಲ್ಲಿ ಪ್ರಗತಿ, ಶತ್ರುಭಯ, ಪರಸ್ಥಳ ವಾಸ, ವ್ಯಾಪಾರದಲ್ಲಿ ಅಲ್ಪ ಲಾಭ.

ವೃಶ್ಚಿಕರಾಶಿ
ಉದ್ಯೋಗದಲ್ಲಿ ವರ್ಗಾವಣೆ ಸಾಧ್ಯತೆ, ಆರ್ಥಿಕ ಬಿಕ್ಕಟ್ಟು, ಆರೋಗ್ಯದಲ್ಲಿ ಚೇತರಿಕೆ, ಅನಗತ್ಯ ವಿಚಾರಗಳಲ್ಲಿ ಭಿನ್ನಾಭಿಪ್ರಾಯ, ಕಲಹವಾಗದಂತೆ ಎಚ್ಚರಿಕೆಯಿರಲಿ, ರೋಗಭಾದೆ, ಮಾನಸಿಕ ವ್ಯಥೆ, ಶ್ರಮಕ್ಕೆ ತಕ್ಕ ಫಲ, ಸ್ವಯಂ ಕೃತ್ಯಗಳಿಂದ ತೊಂದರೆ.

ಧನಸ್ಸುರಾಶಿ
ಹಂತ ಹಂತವಾಗಿ ಅಭಿವೃದ್ದಿ, ಮನಸಿಗೆ ನೆಮ್ಮದಿ, ವ್ಯಾಪಾರ, ಉದ್ಯಮ ಕ್ಷೇತ್ರದಲ್ಲಿ ಹೆಚ್ಚಿನ‌ಲಾಭ, ಆಕಸ್ಮಿಕ ದ್ರವ್ಯಲಾಭ, ಯತ್ನ ಕಾರ್ಯಗಳಲ್ಲಿ ಅನುಕೂಲ, ಅಧಿಕ ಕೋಪ, ದಾಂಪತ್ಯದಲ್ಲಿ ಅನ್ಯೋನ್ಯತೆ.

ಮಕರರಾಶಿ
ಮನೆಯಲ್ಲಿ ನಮ್ಮದಿಯ ವಾತಾವರಣ, ಸ್ತ್ರೀಯರಿಗೆ ಶುಭ, ದೂರ ಪ್ರಯಾಣದಿಂದ ಉಲ್ಲಾಸಕರ, ಪತ್ನಿ, ಮಕ್ಕಳಿಂದ ನೆಮ್ಮದಿ, ಧನಲಾಭ, ಮಂಗಳ ಕಾರ್ಯದಲ್ಲಿ ಭಾಗಿ, ವಿಪರೀತ ವ್ಯಸನ, ದೂರ ಪ್ರಯಾಣದಿಂದ ಕಾರ್ಯಾನುಕೂಲವಾಗಲಿದೆ.

ಕುಂಭರಾಶಿ
ಸ್ನೇಹಿತರಿಂದ ಸಹಕಾರ, ವೈಯಕ್ತಿಕ ತಪ್ಪುಗಳಿಂದ ಸಮಸ್ಯೆಯಲ್ಲಿ ಸಿಲುಕುವಿರಿ, ಸಾಲದಿಂದ ಮುಕ್ತಿ, ಅವಿವಾಹಿತರಿಗೆ ಕಂಕಣಬಲ ಕೂಡಿಬರಲಿದೆ,  ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ಚಂಚಲ ಮನಸ್ಸು, ಶತ್ರು ಭಾದೆ, ದಾಯಾದಿಗಳ ಕಲಹ.

ಮೀನರಾಶಿ
ನಿರುದ್ಯೋಗಿಗಳಿಗೆ, ಉದ್ಯೋಗ ಭಾಗ್ಯ, ವಿದೇಶ ಪ್ರಯಾಣದ ಯೋಗ, ವ್ಯವಹಾರದಲ್ಲಿ ಎಚ್ಚರಿಕೆಯ ಹೆಜ್ಜೆಯನ್ನಿಡಿ, ಅವಕಾಶಗಳನ್ನು ಉಪಯೋಗಿಸಿ ಕೊಳ್ಳುವುದರ ಹಿಂದೆ ನಿಮ್ಮ ಯಶಸ್ಸು ಅಡಗಿದೆ, ಅನಗತ್ಯ ವಿಪರೀತ ಖರ್ಚು, ಮಕ್ಕಳಿಂದ ನಿಂದನೆ, ಕಾರ್ಯಕ್ಷೇತ್ರದಲ್ಲಿ ಉತ್ತಮ ಗೌರವ

Comments are closed.