ಮಂಗಳವಾರ, ಏಪ್ರಿಲ್ 29, 2025
HomehoroscopeHoroscope Today - ದಿನ ಭವಿಷ್ಯ : ಈ ರಾಶಿಯವರಿಗೆ ಮಾತಿನ ಮೇಲೆ ಹಿಡಿತವಿರಲಿ

Horoscope Today – ದಿನ ಭವಿಷ್ಯ : ಈ ರಾಶಿಯವರಿಗೆ ಮಾತಿನ ಮೇಲೆ ಹಿಡಿತವಿರಲಿ

- Advertisement -

ಮೇಷರಾಶಿ
ಆರ್ಥಿಕ ಸ್ಥಿತಿ ಸುಧಾರಣೆ, ಉದ್ಯೋಗದಲ್ಲಿ ಅಧಿಕ ಶ್ರಮದಿಂದ ಲಾಭ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡ್ರೆ ಯಶಸ್ಸು, ಸರ್ಕಾರಿ ಕೆಲಸಗಳಲ್ಲಿ ಜಯ, ಅಧಿಕ ಲಾಭ, ಸುಖ ಭೋಜನ, ರಿಯಲ್‍ಎಸ್ಟೇಟ್ ವ್ಯವಹಾರದಲ್ಲಿ ಲಾಭ.

ವೃಷಭರಾಶಿ
ವಾಹನ ಖರೀದಿ ಯೋಗ, ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಅಕಾಲ ಬೋಜನ, ಪರಸ್ಥಳ ವಾಸ, ಅನಾರೋಗ್ಯ, ಅತಿಯಾದ ಭಯ, ನಂಬಿದ ಜನರಿಂದ ಮೋಸ, ವಾದ-ವಿವಾದಗಳಲ್ಲಿ ಎಚ್ಚರ.

ಮಿಥುನರಾಶಿ
ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ, ಕಾರ್ಯಕ್ಷೇತ್ರದಲ್ಲಿ ಸಂಶಯ ಪಡಬೇಡಿ, ಸಾಂಸಾರಿಕವಾಗಿ ನೆಮ್ಮದಿ, ಅಭಿವೃದ್ಧಿ ಕುಂಠಿತ, ಆಪ್ತರಿಂದ ಸಹಾಯ, ಅನಾರೋಗ್ಯ, ಸುಳ್ಳು ಮಾತನಾಡ ಬೇಡಿ, ಯತ್ನ ಕಾರ್ಯಗಳಲ್ಲಿ ಜಯ.

ಕರ್ಕಾಟಕರಾಶಿ
ಅಧ್ಯಯನ ಕೈಗೊಳ್ಳುವಿರಿ, ಮೇಲಾಧಿಕಾರಿಗಳ ಜೊತೆಗೆ ಪ್ರಯಾಣ, ಹೊಸ ಅವಕಾಶವೊಂದು ದೊರೆಯಲಿದೆ, ಉತ್ತಮ ಬುದ್ಧಿಶಕ್ತಿ, ಪರರಿಗೆ ಸಹಾಯ, ಶತ್ರು ನಾಶ, ಮನಶಾಂತಿ, ನಾನಾ ರೀತಿಯ ಸಂಪಾದನೆ, ಅಕಾಲ ಭೋಜನ.

ಸಿಂಹರಾಶಿ
ನಿರೀಕ್ಷಿತ ಕೆಲಸ ಕಾರ್ಯಗಳಲ್ಲಿ ಮುನ್ನಡೆ, ಧನಾರ್ಜನೆಗೆ ಕೊರತೆ ಇರದು, ಸಹೋದ್ಯೋಗಿಗಳಿಂದ ಸಹಕಾರ, ಯತ್ನ ಕಾರ್ಯಗಳಲ್ಲಿ ಜಯ, ವಾಹನ ಕೊಳ್ಳುವಿಕೆ, ವಸ್ತ್ರ ಖರೀದಿ, ದಾನ ಧರ್ಮದಲ್ಲಿ ಆಸಕ್ತಿ, ಸ್ಥಳ ಬದಲಾವಣೆ.

ಕನ್ಯಾರಾಶಿ
ದಂಪತಿಗಳಿಗೆ ಶುಭಫಲ, ಪಾಲುದಾರಿಕೆ ಕ್ಷೇತ್ರದಲ್ಲಿ ಬದಲಾವಣೆ, ಆರ್ಥಿಕವಾಗಿ ಅಭಿವೃದ್ದಿ, ದೈವಿಕ ಚಿಂತನೆ, ಗುರು ಹಿರಿಯರಲ್ಲಿ ಭಕ್ತಿ, ತೀರ್ಥಕ್ಷೇತ್ರ ದರ್ಶನ, ಶತ್ರು ನಾಶ, ಉದ್ಯೋಗದಲ್ಲಿ ಭಡ್ತಿ, ವಿದ್ಯಾಭಿವೃದ್ಧಿ.

ತುಲಾರಾಶಿ
ಸರಕಾರಿ ವರ್ಗದವರಿಗೆ ಅನುಕೂಲ, ಅವಿವಾಹಿತರಿಗೆ ಸೂಕ್ತ ಸಂಬಂಧ ಕೂಡಿಬರಲಿದೆ, ಸರಕಾರಿ ನೌಕರರಿಗೂ ಅನುಕೂಲ, ದಾಂಪತ್ಯದಲ್ಲಿ ಸುಖ, ಮಕ್ಕಳಿಂದ ಸಹಾಯ, ಆರೋಗ್ಯ ದಲ್ಲಿ ತೊಂದರೆ, ಮಾತಿನ ವೈಖರಿ, ಕುಟುಂಬ ಸೌಖ್ಯ, ಕಾರ್ಯಸಾಧನೆ.

ವೃಶ್ಚಿಕರಾಶಿ
ಕೃಷಿಕರಿಗೆ ಅನುಕೂಲಕರ, ಮೇಲಾಧಿಕಾರಿಗಳ ಪ್ರಶಂಸೆ, ಆರ್ಥಿಕವಾಗಿ ಅಭಿವೃದ್ದಿ, ಸಾಂಸಾರಿಕವಾಗಿ ನೆಮ್ಮದಿ, ಪರಸ್ತ್ರೀಯಿಂದ ತೊಂದರೆ, ರೋಗಭಾದೆ, ವ್ಯಾಪಾರದಲ್ಲಿ ಲಾಭ, ವಿದ್ಯಾರ್ಥಿಗಳಲ್ಲಿ ಪ್ರಗತಿ, ದುಷ್ಟರಿಂದ ದೂರವಿರಿ

ಧನಸ್ಸುರಾಶಿ
ಮೇಲಾಧಿಕಾರಿಗಳು ಸಂಯಮದಿಂದ ವರ್ತಿಸಿ, ಆರೋಗ್ಯಕ್ಕೆ ಸಂಬಂಧಿಸಿದಂತೆ ವೈದ್ಯರ ಭೇಟಿ, ಸ್ವಯಂ ಪ್ರಯತ್ನದಿಂದ ಕಾರ್ಯ ಸಾಧನೆ, ವಿಷಯಗಳನ್ನು ಬೇಗ ಗ್ರಹಿಸುವಿರಿ, ಮನಃಶಾಂತಿ, ನಿರುದ್ಯೋಗಿಗಳಿಗೆ ಉತ್ತಮ ಅವಕಾಶ.

ಮಕರರಾಶಿ
ನೇರವಾದ ಮಾತಿನಿಂದ ಕಾರ್ಯಹಾನಿ, ಉದ್ಯೋಗದಲ್ಲಿ ಹೊಸ ಜವಾಬ್ದಾರಿ ಹೆಗಲೇರಲಿದೆ, ಧನಾರ್ಜನೆ ಉತ್ತಮ, ವಯುಕ್ತಿಕ ಕೆಲಸಗಳಲ್ಲಿ ನಿಗಾವಹಿಸಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ವಿದೇಶಿ ವ್ಯಾಪಾರದಿಂದ ನಷ್ಟ, ಭೂ ಲಾಭ

ಕುಂಭರಾಶಿ
ಆರೋಗ್ಯದ ವಿಚಾರದಲ್ಲಿ ಗಮನವಿರಲಿ, ಅವಿವಾಹಿತರಿಗೆ ವಿವಾಹ ಯೋಗ, ವಿದ್ಯಾರ್ಥಿಗಳಿಗೆ ಅಧಿಕ ಪರಿಶ್ರಮ ಅಗತ್ಯ, ವಿವಾದಗಳಿಗೆ ಆಸ್ಪದವಾಗದಂತೆ ವ್ಯವಹರಿಸಿ, ಶತ್ರು ಭಾದೆ, ಮಿತ್ರರ ಭೇಟಿಯಿಂದ ಸಂತಸ, ಉತ್ತಮ ಫಲ.

ಮೀನರಾಶಿ
ಧನಾರ್ಜನೆಗೆ ನಾನಾ ಅವಕಾಶ ದೊರೆಯಲಿದೆ, ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ, ಕಠಿಣ ಶ್ರಮಕ್ಕೆ ತಕ್ಕ ಫಲ, ಶುಭ ಕಾರ್ಯದ ಮಾತುಕತೆ, ಹೊಸ ಒಪ್ಪಂದಕ್ಕೆ ಸಹಿ ಹಾಕುವಿರಿ, ವಾಹನದಿಂದ ತೊಂದರೆ, ದಾಂಪತ್ಯದಲ್ಲಿ ಕಲಹ, ವೈಮನಸ್ಸು.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular