ಭಾನುವಾರ, ಜೂನ್ 15, 2025
Homehoroscopeನಿತ್ಯಭವಿಷ್ಯ : 23-05-2020

ನಿತ್ಯಭವಿಷ್ಯ : 23-05-2020

- Advertisement -

ಮೇಷರಾಶಿ
ಆಗಾಗ ಮಾನಸಿಕ ಚಿಂತನೆಗಳು ಬದಲಾಗುತ್ತಾ ಹೋಗಲಿವೆ. ಆರ್ಥಿಕವಾಗಿ ಕೂಡ ಒಂದಲ್ಲಾ ಒಂದು ರೀತಿಯಲ್ಲಿ ಖರ್ಚು ವೆಚ್ಚಗಳು ಅಧಿಕವಾದಾವು. ವೃತ್ತಿರಂಗದಲ್ಲಿ ಹಲವಾರು ಬದಲಾವಣೆ ಕಂಡುಬರಲಿದೆ. ವಾಹನ- ಸ್ಥಿರಾಸ್ತಿಯಿಂದ ಅನುಕೂಲ, ಮಾತೃವಿನಿಂದ ಪ್ರಶಂಸೆ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಮೃಷ್ಟಾನ್ನ ಭೋಜನ, ಐಷಾರಾಮಿ ಜೀವನಕ್ಕೆ ಖರ್ಚು, ಅಲಂಕಾರಿಕ ವಸ್ತುಗಳ ಖರೀದಿ.

ವೃಷಭರಾಶಿ
ಪ್ರಯಾಣ ಮಾಡುವ ಸಾಧ್ಯತೆ, ಆತ್ಮೀಯರ ಜೀವನದಲ್ಲಿ ಪ್ರಗತಿ, ಗುರುಬಲದಿಂದ ಮಾನಸಿಕ ಸುಖಶಾಂತಿ ಕಂಡುಬರಲಿದೆ. ನಿರುದ್ಯೋಗಿಗಳಿಗೆ ಹಲವಾರು ಅವಕಾಶಗಳು ಒದಗಿ ಬಂದೀತು. ಹಳೆ ಮಿತ್ರರ ಆಗಮನ ಶುಭವಾರ್ತೆ ತಂದೀತು. ಸಂಚಾರಗಳು ಒದಗಿ ಬಂದೀತು. ಬಂಧುಗಳಿಂದ ಶುಭ ಸುದ್ದಿ, ಸ್ವಂತ ಉದ್ಯಮದಲ್ಲಿ ಅನುಕೂಲ, ವ್ಯಾಪಾರ-ವ್ಯವಹಾರದಲ್ಲಿ ಲಾಭ, ನೆರೆಹೊರೆಯವರಿಂದ ಸಹಕಾರ, ಕುಟುಂಬದಲ್ಲಿ ಉತ್ತಮ ಬೆಂಬಲ.

ಮಿಥುನರಾಶಿ
ಕುಟುಂಬಕ್ಕಾಗಿ ಅಧಿಕ ಖರ್ಚು, ಮೋಜು-ಮಸ್ತಿಯಲ್ಲಿ ತೊಡಗುವಿರಿ, ಚಿಂತಿತ ಕೆಲಸ ಕಾರ್ಯಗಳು ನಡೆಯಲಿವೆ. ವ್ಯಾಪಾರ, ವ್ಯವಹಾರಗಳು ತಕ್ಕಮಟ್ಟಿಗೆ ಲಾಭವನ್ನು ತಂದು ಕೊಡಲಿವೆ. ಇತರರ ಬಗ್ಗೆ ಚಿಂತಿಸದಿರಿ. ವೈಯಕ್ತಿಕ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಿರಿ. ಸುಖ ಭೋಜನ ಪ್ರಾಪ್ತಿ, ಬರಬೇಕಾದ ಹಣ ಲಭಿಸುವುದು, ಪೆಟ್ಟಾಗುವ ಸಾಧ್ಯತೆ, ಮಕ್ಕಳಿಂದ ಅನುಕೂಲ, ಪ್ರೇಮ ವಿಚಾರದಲ್ಲಿ ಯಶಸ್ಸು, ದೂರ ಪ್ರದೇಶದಲ್ಲಿ ಉದ್ಯೋಗ.

ಕಟಕರಾಶಿ
ಸ್ವಂತ ಉದ್ಯಮ ವ್ಯಾಪಾರದಲ್ಲಿ ಲಾಭ, ಗುರುಬಲದ ಪ್ರಭಾವದಿಂದ ನಿಮ್ಮ ಮನೋಕಾಮನೆಗಳು ನೆರವೇರಲಿವೆ. ದಾಯಾದಿಗಳ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿರಿ. ಶೀತ ಬಾಧೆ, ಕಫ‌ ಪ್ರವೃತ್ತಿಯ ದೋಷವು ಕಂಡುಬಂದೀತು. ಜಾಗ್ರತೆ ವಹಿಸಿರಿ. ಕೆಲಸ ಕಾರ್ಯಗಳಲ್ಲಿ ಯಶಸ್ಸು, ಸ್ತ್ರೀಯರಿಂದ ನೋವು, ಮಿತ್ರರ ಜೀವನದಲ್ಲಿ ಏರುಪೇರು, ಗೃಹ ನಿರ್ಮಾಣದ ಕನಸು, ಮಾತೃವಿನಿಂದ ಲಾಭ, ಹೊಸ ವಸ್ತುಗಳ ಖರೀದಿ, ಕಲಾವಿದರಿಗೆ ಅನುಕೂಲ.

ಸಿಂಹರಾಶಿ
ಉದ್ಯೋಗಕ್ಕಾಗಿ ಅಧಿಕ ಖರ್ಚು, ಅನಗತ್ಯ ವೆಚ್ಚ ಮಾಡುವಿರಿ, ಅನಿರೀಕ್ಷಿತ ರೀತಿಯಲ್ಲಿ ಶುಭವಾರ್ತೆ ಇರುತ್ತದೆ. ಖರ್ಚುವೆಚ್ಚಗಳಾದರೂ ಧನಾಗಮನದಿಂದ ಸಮಾಧಾನ ಸಿಗಲಿದೆ. ಸರಕಾರಿ ಅಧಿಕಾರಿಗಳಿಗೆ ತಮ್ಮ ಕ್ಷೇತ್ರದಲ್ಲಿ ಪ್ರಶಂಸೆಯ ಮಾತುಗಳು ಸಲ್ಲಲಿವೆ. ಆಕಸ್ಮಿಕ ದೂರ ಪ್ರಯಾಣ, ಬಂಧುಗಳಿಂದ ಲಾಭ, ಆರ್ಥಿಕ ಸಹಾಯ, ಸ್ತ್ರೀ ಜೊತೆ ಕಲಹ, ಸಂಬಂಧಿಕರಿಂದ ಅನುಕೂಲ, ಕುಟುಂಬದಲ್ಲಿ ಆತಂಕದ ವಾತಾವರಣ, ಪ್ರೇಮ ವಿಚಾರದಲ್ಲಿ ವೈಮನಸ್ಸು ನೋವು.

ಕನ್ಯಾರಾಶಿ
ಮಿತ್ರರಿಂದ ಅದೃಷ್ಟ ಒಲಿಯುವುದು, ತಂದೆಯಿಂದ ಅನುಕೂಲ-ಸಹಕಾರ, ತಪ್ಪು ಅಭಿಪ್ರಾಯಗಳು ಮನಸ್ಸಿನಲ್ಲಿ ಕ್ಲೇಶ ತಂದೀತು. ಇತರರ ಮಾತಿಗೆ ಕಿವಿಗೊಡದೆ ಸ್ವಂತವಾಗಿ ಆಲೋಚಿಸುವುದು ಉತ್ತಮ. ಹಿರಿಯರೊಡನೆ ಅನಾವಶ್ಯಕ ನಿಷ್ಠೂರಕ್ಕೆ ಕಾರಣರಾಗದಿರಿ. ಸಂಚಾರದಲ್ಲಿ ಜಾಗ್ರತೆ. ಪ್ರಯಾಣದಲ್ಲಿ ಯಶಸ್ಸು, ಯತ್ನ ಕಾರ್ಯದಲ್ಲಿ ಜಯ, ಉದ್ಯೋಗ ಸಮಸ್ಯೆ ಬಗೆಹರಿಯುವುದು, ಕುಟುಂಬದಲ್ಲಿ ಸಂತೋಷದ ವಾತಾವರಣ, ಶುಭ ಕಾರ್ಯ ಸುದ್ದಿ.

ತುಲಾರಾಶಿ
ಆಕಸ್ಮಿಕ ಅದೃಷ್ಟ ಖುಲಾಯಿಸುವುದು, ವ್ಯಾಪಾರಿ ವರ್ಗದವರಿಗೆ ಹೂಡಿಕೆಗಳು ಲಾಭಕರವಾದರೂ ಜಾಗ್ರತೆ ವಹಿಸುವುದು ಅಗತ್ಯವಿದೆ. ಆಲಂಕಾರಿಕ ವಸ್ತುಗಳ ಖರೀದಿಯು ಮನಸ್ಸಿಗೆ ಸಮಾಧಾನ, ಸಂತಸ ತಂದೀತು. ಉದ್ವೇಗಕ್ಕೆಡೆ ಕೊಡದಿರಿ. ಸೇವಕರಿಂದ ಉತ್ತಮ ಬೆಳವಣಿಗೆ, ಶೀತ, ಕಫ, ಬೆವರು ದೋಷ, ಬಂಧುಗಳ ಸಾಲದಿಂದ ನೋವು, ಉದ್ಯೋಗದಲ್ಲಿ ಒತ್ತಡ.

ವೃಶ್ಚಿಕರಾಶಿ
ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ಕುಟುಂಬದಲ್ಲಿ ವೈಮನಸ್ಸು, ಯೋಗ್ಯ ವಯಸ್ಕರಿಗೆ ಉತ್ತಮ ಸಂಬಂಧಗಳು ವೈವಾಹಿಕ ಭಾಗ್ಯಕ್ಕೆ ಸಾಧಕವಾಗಲಿದೆ. ವಿದ್ಯಾರ್ಥಿಗಳು ತಮ್ಮ ಅಭ್ಯಾಸಬಲವನ್ನು ಹೆಚ್ಚಿಸಿಕೊಂಡಲ್ಲಿ ಭವಿಷ್ಯಕ್ಕೆ ಅನುಕೂಲವಾಗಲಿದೆ. ಭೂಖರೀದಿಗೆ ಅನುಕೂಲ. ಮಕ್ಕಳಿಂದ ನೋವು, ಸಂಗಾತಿಯಿಂದ ಉತ್ತಮ ಸಹಕಾರ, ಪಾಲುದಾರಿಕೆಯಲ್ಲಿ ಅನುಕೂಲ, ಶುಭ ಫಲ ಯೋಗ, ಶುಭ ಸುದ್ದಿ ಕೇಳುವಿರಿ, ಭಾವನೆ, ಆಸೆ ಆಕಾಂಕ್ಷೆಗಳಲ್ಲಿ ವಿಹಾರ.

ಧನಸ್ಸುರಾಶಿ
ಶತ್ರುಗಳ ಕಾಟ ಅಧಿಕ, ಸಾಲಗಾರರಿಂದ ತೊಂದರೆ, ಯಾವುದೇ ಕೆಲಸವನ್ನು ಯೋಚಿಸಿ ಧರ್ಮ ಪತ್ನಿಯ ಸಲಹೆ ಪಡೆದು ಸೂಕ್ತ ನಿರ್ಧಾರದಿಂದ ಮುಂದುವರಿಯುವುದು ಉತ್ತಮ. ವ್ಯಾಪಾರಿ ವರ್ಗದವರು ತಮ್ಮ ವ್ಯವಹಾರವನ್ನು ಜಾಗ್ರತೆಯಿಂದ ನಡೆಸಿಕೊಂಡು ಹೋಗಿರಿ. ಸೇವಕರಿಂದ ನಷ್ಟ, ದುಷ್ಟ ಆಲೋಚನೆ, ಸ್ಥಿರಾಸ್ತಿಯಿಂದ ತೊಂದರೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಐಷಾರಾಮಿ ಜೀವನದ ಕಲ್ಪನೆ, ಸ್ನೇಹಿತರೊಂದಿಗೆ ಮೋಜು-ಮಸ್ತಿ.

ಮಕರರಾಶಿ
ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯ, ಹಿರಿಯರಿಗೆ ತೀರ್ಥಯಾತ್ರೆ ಶ್ರೀ ದೇವತಾ ದರ್ಶನ ಭಾಗ್ಯವಿದೆ. ವಾಹನ ಖರೀದಿಗೆ ಅನುಕೂಲವಾಗುವುದು. ಅನಿರೀಕ್ಷಿತ ರೂಪದಲ್ಲಿ ಅತಿಥಿಗಳ ಆಗಮನವು ನಿಮಗೆ ಸಂತಸ ತರಲಿದೆ. ವೃತ್ತಿರಂಗದಲ್ಲಿ ಸಮಾಧಾನ. ಪ್ರೀತಿ, ಪ್ರೇಮದ ಕಲ್ಪನೆಯಲ್ಲಿ ವಿಹಾರ, ಭಾವನೆಗಳಿಗೆ ಮನ್ನಣೆ, ಮಕ್ಕಳ ಜೀವನದಲ್ಲಿ ಪ್ರಗತಿ, ಉದ್ಯೋಗ ಬದಲಾವಣೆಗೆ ಅವಕಾಶ, ಪ್ರವಾಸ ಕೈಗೊಳ್ಳಲು ಯೋಚನೆ, ಬಂಧುಗಳಿಂದ ಸಹಕಾರ, ದಾಂಪತ್ಯದಲ್ಲಿ ಪ್ರೀತಿ ವಿಶ್ವಾಸ.

ಕುಂಭರಾಶಿ
ಸ್ಥಿರಾಸ್ತಿಯಿಂದ ಧನಾಗಮನ, ಕೃಷಿಕರಿಗೆ ಅನುಕೂಲ, ಮಕ್ಕಳಿಗಾಗಿ ಅಧಿಕ ಖರ್ಚು, ಐಷಾರಾಮಿ ವಸ್ತು-ವಾಹನ ಖರೀದಿಯ ಕಲ್ಪನೆ, ಅನಾವಶ್ಯಕವಾಗಿ ಉದ್ವೇಗಕ್ಕೆ ಒಳಗಾಗುವಿರಿ. ಸಾಂಸಾರಿಕವಾಗಿ ಒಂದಲ್ಲ ಒಂದು ರೀತಿಯಲ್ಲಿ ಕಿರಿಕಿರಿ ತಪ್ಪದು. ಆರ್ಥಿಕ ಸ್ಥಿತಿ ಸುಧಾರಿಸುತ್ತಾ ಹೋಗಲಿದೆ. ನಿರುದ್ಯೋಗಿಗಳು ಬಂದ ಅವಕಾಶವನ್ನು ಉಪಯೋಗಿಸಬೇಕು. ಸಂತೋಷ ಕೂಟಗಳಲ್ಲಿ ಭಾಗಿ, ಆರೋಗ್ಯದಲ್ಲಿ ಏರುಪೇರು, ತಾಯಿಯೊಂದಿಗೆ ಶತ್ರುತ್ವ, ನೀವಾಡುವ ಮಾತಿನಿಂದ ನೋವು.

ಮೀನರಾಶಿ
ಸ್ವಯಂಕೃತ ಅಪರಾಧಗಳಿಂದ ನಷ್ಟ, ಅನಗತ್ಯ ತಿರುಗಾಟ, ಸ್ಥಿರಾಸ್ತಿ ವಿಚಾರದಲ್ಲಿ ಕಲಹ, ಪತ್ರ ವ್ಯವಹಾರಗಳಲ್ಲಿ ಸಮಯ ವ್ಯರ್ಥ, ಹೊಂದಾಣಿಕೆಯ ಮನೋಭಾವದಿಂದ ಮುನ್ನಡೆದಲ್ಲಿ ಉತ್ತಮ ಫ‌ಲವಿದೆ. ನ್ಯಾಯಾಲಯದ ಕೆಲಸ ಕಾರ್ಯಗಳು ನಿಮಗೆ ಜಯ ತಂದು ಕೊಟ್ಟಿತು. ಅನಿರೀಕ್ಷಿತ ರೂಪದಲ್ಲಿ ಶುಭವಾರ್ತೆ, ಸಂತಸ ತರಲಿದೆ. ಬಂಧುಗಳಲ್ಲಿ ಕೀಳು ಮಟ್ಟದ ಆಲೋಚನೆ, ಮನಸ್ಸಿನಲ್ಲಿ ಗೊಂದಲ, ಚಂಚಲ, ಅತಿಯಾದ ಆಸೆಯಿಂದ ಸಂಕಷ್ಟಕ್ಕೆ ಸಿಲುಕುವಿರಿ, ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular