ಮೇಷರಾಶಿ
ನಿಮಗೆ ಇಂದು ಆರ್ಥಿಕವಾಗಿ ಅನುಕೂಲಕರ, ಕತ್ತಲೆಯನ್ನು ದೂರ ಮಾಡಿ, ಅದು ನಿಮ್ಮ ಪ್ರಗತಿಗೆ ಅಡ್ಡಿಪಡಿಸುತ್ತದೆ, ಒಂದೇ ಅಭಿರುಚಿಯ ಜನರೊಂದಿಗೆ ಸಂಪರ್ಕಕ್ಕೆ ಬರಲು ಯತ್ನಿಸಿ, ಪ್ರಣಯದ ವಿಚಾರವು ಹದಗೆಡುತ್ತದೆ, ಹೊಸ ಯೋಜನೆಗಾಗಿ ಕಾರ್ಯತಂತ್ರವನ್ನು ರೂಪಿಸಿ, ಒತ್ತಡದ ವೇಳಾಪಟ್ಟಿಯಿಂದ ವಿಶ್ರಾಂತಿಯನ್ನು ಪಡೆಯಿರಿ.
ವೃಷಭರಾಶಿ
ಅಸ್ವಸ್ಥತೆಯು ನಿಮ್ಮ ಮಾನಸಿಕ ಶಾಂತಿಯನ್ನು ಕದಡಬಹುದು. ಆದರೆ ಸ್ನೇಹಿತರು ನಿಮ್ಮ ಸಹಾಯಕ್ಕೆ ಬರಲಿದ್ದಾರೆ, ಒತ್ತಡದಿಂದ ಹೊರ ಬರಲು ಇತರ ಚಟವಟಿಕೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ, ಆರ್ಥಿಕ ಬಿಕ್ಕಟ್ಟಿನಿಂದ ಸಮಾಧಾನ, ನಿರೀಕ್ಷೆಗೆ ತಕ್ಕಂತೆ ಜೀವಿಸುವ ನಿಮ್ಮ ಕನಸು ನನಸಾಗಲಿದೆ, ಸಮಯವನ್ನು ವ್ಯರ್ಥ ಮಾಡಬೇಡಿ, ಸಂಗಾತಿಯಿಂದ ಸಂತಸ ಮೂಡಲಿದೆ.
ಮಿಥುನರಾಶಿ
ವಿಶ್ರಾಂತಿಯನ್ನು ಪಡೆಯಲು ಆಪ್ತ ಸ್ನೇಹಿತರು ಹಾಗೂ ಕುಟುಂಬ ಸದಸ್ಯರ ಜೊತೆಗೆ ಸಂತಸದಿಂದ ಕಳೆಯುವಿರಿ, ಹಣಕಾಸಿನ ವಿಚಾರದಲ್ಲ ಸುಧಾರಣೆ ಕಂಡು ಬರಲಿದೆ, ಅಲಂಕಾರಿಕ ವಸ್ತುಗಳ ಖರೀದಿ ಮಾಡುವಿರಿ, ಆಸಕ್ತಿದಾಯಕ ವ್ಯಕ್ತಿಯನ್ನು ಭೇಟಿ ಮಾಡುವಿರಿ, ನಿಮ್ಮ ಭಾವನೆಯನ್ನು ನಿಯಂತ್ರಣದಲ್ಲಿ ಇಟ್ಟು ಕೊಳ್ಳಿ, ಅಮೂಲ್ಯವಾದ ಸಮಯವನ್ನು ಹಾಳು ಮಾಡಬೇಡಿ.
ಕರ್ಕಾಟಕರಾಶಿ
ಕ್ರೀಡಾ ಚಟುವಟಿಕೆಯಲ್ಲಿ ಭಾಗಿಯಾಗುವಿರಿ, ಸಾಲವನ್ನು ತೆಗೆದುಕೊಂಡ ಜನರು ಇಂದು ಮರುಪಾವತಿಯನ್ನು ಮಾಡಲಿದ್ದಾರೆ, ಸುತ್ತಮುತ್ತಲಿನ ಜನರು ನಿಮಗೆ ಪ್ರೀತಿಯನ್ನು ನೀಡಲಿದ್ದಾರೆ, ನಿಮ್ಮ ಹತ್ತಿರದವರೇ ನಿಮಗೆ ದ್ರೋಹ ಮಾಡುವ ಸಾಧ್ಯತೆಯಿದೆ, ಸ್ನೇಹಿತರು ನಿಮ್ಮನ್ನು ಔತಣ ಕೂಟವನ್ನು ಆಮಂತ್ರಿಸುವ ಸಾಧ್ಯತೆಯಿದೆ, ಹೊಂದಾಣಿಕೆಯಿಂದ ಕಾರ್ಯ ಸಾಧನೆಯಾಗಲಿದೆ.
ಸಿಂಹರಾಶಿ
ನಿಮ್ಮ ಆಕರ್ಷಕ ನಡುವಳಿಕೆ ಇತರರ ಗಮನ ಸೆಳೆಯುತ್ತದೆ, ಕೋಪವನ್ನು ಹತೋಟಿಯಲ್ಲಿ ಇಟ್ಟುಕೊಳ್ಳಿ, ಕಚೇರಿಯಲ್ಲಿರುವ ಎಲ್ಲರನ್ನೂ ಚೆನ್ನಾಗಿಯೇ ನೋಡಿಕೊಳ್ಳಿ, ಪ್ರೀತಿ ಪಾತ್ರರ ಬೇಡಿಕೆಗೆ ಸ್ಪಂಧಿಸಿ, ಕೆಲಸದ ಪ್ರಗತಿಯು ನಿಮಗೆ ಒತ್ತಡವನ್ನು ತರಲಿದೆ, ಬಿಡುವಿನ ಸಮಯವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ, ಪ್ರೀತಿಸುವವರಿಂದ ಉಡುಗೊರೆಯನ್ನು ಸ್ವೀಕರಿಸುವಿರಿ.
ಇದನ್ನೂ ಓದಿ : ಗುಂಡ್ಮಿ ಶ್ರೀ ಮಾಣಿಚನ್ನಕೇಶವ ದೇವರಿಗೆ ಸ್ವರ್ಣಲೇಪಿತ ರಜತ ಮುಖವಾಡ ಸಮರ್ಪಣೆ
ಕನ್ಯಾರಾಶಿ
ನಿಮ್ಮ ಕನಸು ನನಸಾಗುತ್ತದೆ, ಆದರೆ ಉತ್ಸಾಹವನ್ನು ಹತೋಟಿಯಲ್ಲಿಟ್ಟುಕೊಳ್ಳಿ, ಅತಿಯಾದ ಸಂತೋಷವು ನಿಮಗೆ ಸಮಸ್ಯೆಯನ್ನು ಉಂಟು ಮಾಡುವ ಸಾಧ್ಯತೆಯಿದೆ, ಆಹ್ಲಾದಕರ ಬೆಳವಣಿಗೆ ಕುಟುಂಬದ ಸಂತೋಷವನ್ನು ಹೆಚ್ಚಿಸಲಿದೆ, ಪ್ರೀತಿ ಪಾತ್ರರು ನಿಮ್ಮ ಮಾತನ್ನು ಆಲಿಸಲಿದ್ದಾರೆ, ನಿಮ್ಮ ಮನಸ್ಸು ಇಂದು ಅಸಮಧಾನಗೊಳ್ಳಬಹುದು, ರಂಗಭೂಮಿ ಕಲಾವಿದರಿಗೆ ಅನುಕೂಲಕರ ದಿನ.
ತುಲಾರಾಶಿ
ಯಶಸ್ಸು ನಿಮ್ಮನ್ನು ಹಿಂಬಾಲಿಸಲಿದೆ, ನಿಮ್ಮ ಆಲೋಚನೆಯನ್ನು ಬದಲಾಯಿಸಿಕೊಳ್ಳಿ, ಅನಿರೀಕ್ಷಿತ ಲಾಭ ಸಂತಸವನ್ನು ತರಲಿದೆ, ಪಾಲುದಾರರನ್ನು ಯಾವುದೇ ಕಾರಣಕ್ಕೂ ಲಘುವಾಗಿ ಪರಿಗಣಿಸಬೇಡಿ, ಮನೆಯಿಂದ ದೂರವಾಗಿ ವಾಸಿಸುವವರು ವಿಶ್ರಾಂತಿಯನ್ನು ಪಡೆಯಲು ಯತ್ನಿಸಿ, ಹೊಂದಾಣಿಕೆಯಿಂದ ಕಾರ್ಯ ಸಾಧನೆಯಾಗಲಿದೆ. ವ್ಯವಹಾರ ನಿಮಿತ್ತ ಪ್ರಯಾಣ ಲಾಭವನ್ನು ತರಲಿದೆ.
ವೃಶ್ಚಿಕರಾಶಿ
ಆರೋಗ್ಯದ ಸಮಸ್ಯೆಯಿಂದ ಪ್ರಮುಖ ಕಾರ್ಯ ಯೋಜನೆ ಅರ್ಧಕ್ಕೆ ನಿಲ್ಲುವ ಸಾಧ್ಯತೆಯಿದೆ, ಉದ್ಯಮಿಗಳಿಗೆ ಅಧಿಕ ಹಣಕಾಸಿನ ಲಾಭವನ್ನು ತಂದುಕೊಡಲಿದೆ,
ಮನೆಯ ಸದಸ್ಯರಿಂದ ಅನಿವಾರ್ಯವಾಗಿ ದೂರವಿರಬೇಕಾದ ಸ್ಥಿತಿ ನಿರ್ಮಾಣವಾಗಲಿದೆ, ಕುಟುಂಬ ಸದಸ್ಯರು ನಿಮ್ಮ ಬೆಂಬಲಕ್ಕೆ ನಿಲ್ಲಲಿದ್ದಾರೆ, ಹೊಸ ಉತ್ಸಾಹ ನಿಮ್ಮ ಆತ್ಮಶಕ್ತಿಯನ್ನು ವೃದ್ದಿಸಲಿದೆ, ಸಂಗಾತಿ ಬೇಡಿಕೆಯನ್ನು ಪೂರೈಸಿ.
ಧನಸ್ಸುರಾಶಿ
ಹಣಕಾಸಿನ ವಿಚಾರದಲ್ಲಿ ಸುಧಾರಣೆ ಕಂಡು ಬರಲಿದೆ, ಅಗತ್ಯ ವಸ್ತುಗಳ ಖರೀದಿ ಅನುಕೂಲಕರವಾಗಲಿದೆ, ನ್ಯಾಯಯುತವಾಗಿ ಪ್ರತಿಫಲವನ್ನು ಪಡೆಯುವ ಸಾಧ್ಯತೆಯಿದೆ, ಒಂದೇ ಮನಸ್ಥಿತಿಯ ಜನರೊಂದಿಗೆ ವ್ಯವಹರಿಸಲು ಯತ್ನಿಸಿ, ಸಂಗಾತಿಯು ನಿಮ್ಮನ್ನು ಮೆಚ್ಚುತ್ತಾರೆ, ಸೃಜನಾತ್ಮಕ ಆಲೋಚನೆ ಹೊಂದಿರುವ ಜನರೊಂದಿಗೆ ಕೈ ಜೋಡಿಸಿ, ಹಿರಿಯರು ನಿಮಗೆ ಮಾರ್ಗದರ್ಶನವನ್ನು ನೀಡುತ್ತಾರೆ.
ಮಕರರಾಶಿ
ಆಹಾರ ಸೇವನೆಯಲ್ಲಿ ಎಚ್ಚರಿಕೆಯನ್ನು ವಹಿಸಿ, ದೀರ್ಘ ಕಾಲದಿಂದ ಬಳಲುತ್ತಿದ್ದ ಆರ್ಥಿಕ ಸಮಸ್ಯೆಗೆ ಪರಿಹಾರ ದೊರೆಯಲಿದೆ, ಜೀವನದಲ್ಲಿನ ಹಲವು ಸಮಸ್ಯೆ ಇಂದು ಬಗೆ ಹರಿಯಲಿದೆ, ಪೋಷಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಲ್ಲಿ ಕೆಲಸ ಕಾರ್ಯಗಳಲ್ಲಿ ಗೆಲುವನ್ನು ಕಾಣುವಿರಿ, ಹಳೆಯೆ ಕೆಲಸವನ್ನು ಇಂದೇ ಮುಗಿಸಲು ಯತ್ನಿಸಿ, ವೈವಾಹಿಕ ಜೀವನವು ನಿಮಗೆ ಸಂತಸವನ್ನು ತರಲಿದೆ.
ಕುಂಭರಾಶಿ
ಮಾನಸಿಕ ಆರೋಗ್ಯವನ್ನು ವೃದ್ದಿಸಿಕೊಳ್ಳಿ, ಆಧ್ಯಾತ್ಮದ ಜೀವನ ವೃದ್ದಿಸಲಿದೆ, ಸಮಸ್ಯೆಗಳ ಪರಿಹಾರಕ್ಕೆ ಹಲವು ಮಾರ್ಗಗಳು ಗೋಚರಿಸಲಿದೆ, ಉಳಿತಾದ ಕಡೆಗೆ ಗಮನ ಹರಿಸಿ, ಖರ್ಚುಗಳು ಇತಿ ಮಿತಿಯಲ್ಲಿ ಇರಲಿ, ಕುಟುಂಬ ಸದಸ್ಯರು ನಿಮ್ಮ ಬೆಂಬಲಕ್ಕೆ ನಿಲ್ಲಲಿದ್ದಾರೆ, ಸಂಗಾತಿಯೊಂದಿಗೆ ವೈಯಕ್ತಿಕ ಸಮಸ್ಯೆಯನ್ನು ಹಂಚಿಕೊಳ್ಳಿ, ಬಿಡುವಿಲ್ಲದ ಕಾರ್ಯದಿಂದಾಗಿ ಒತ್ತಡಕ್ಕೆ ಸಿಲುಕುವ ಸಾಧ್ಯತೆಯಿದೆ.
ಮೀನರಾಶಿ
ಸ್ಟಾಕ್ ಹಾಗೂ ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆಯನ್ನು ಮಾಡಿ, ಪತ್ನಿಯ ಹೊರೆಯನ್ನು ಕಡಿಮೆ ಮಾಡಲು ಪ್ರಯತ್ನಿಸಿ, ಯಾವುದೇ ಕಾರಣಕ್ಕೂ ಸೋಲನ್ನು ಒಪ್ಪಿಕೊಳ್ಳಬೇಡಿ, ಸಂಬಂಧಿಯೋರ್ವರು ನಿಮಗೆ ಆಶ್ಚರ್ಯವನ್ನು ಉಂಟು ಮಾಡಲಿದ್ದಾರೆ, ಹೊಸ ಸಂಪಾದನೆಯ ಮಾರ್ಗ ನಿಮಗಿಂದು ಗೋಚರವಾಗಲಿದೆ, ಪ್ರೇಮಿಗೆ ಇಷ್ಟವಾಗದ ಬಟ್ಟೆಯನ್ನು ಯಾವುದೇ ಕಾರಣಕ್ಕೂ ಧರಿಸಬೇಡಿ, ದಿನಾಂತ್ಯಕ್ಕೆ ಶುಭವಾರ್ತೆ.
ನಿಮ್ಮ ಯಾವುದೇ ಸಮಸ್ಯೆಗಳಿಗೂ ಪೋನಿನ ಮೂಲಕ ಶಾಶ್ವತ ಪರಿಹಾರ : ಪಂಡಿತ್. ಪ್ರಮೋದ್ ಗುರೂಜಿ – 8123311267
ಇದನ್ನೂ ಓದಿ : ಶಬರಿಮಲೆ ದರ್ಶನಕ್ಕೆ 13 ಲಕ್ಷ ಭಕ್ತರಿಂದ ನೋಂದಣಿ : ಮಂಡಲ-ಮಕರವಿಳಕ್ಕು ಯಾತ್ರೆಗೆ ಮಳೆಯ ಭೀತಿ
ಇದನ್ನೂ ಓದಿ : ಬಿಟ್ಕಾಯಿನ್ ಪ್ರಕರಣ : ಶ್ರೀಕಿ ಲ್ಯಾಪ್ಟಾಪ್ನಲ್ಲಿ ಬಯಲಾಯ್ತು ಸ್ಪೋಟಕ ರಹಸ್ಯ
( Horoscope today astrological prediction for November 18 )