ಮಂಗಳವಾರ, ಏಪ್ರಿಲ್ 29, 2025
Homehoroscopeನಿತ್ಯಭವಿಷ್ಯ : 07-03-2020

ನಿತ್ಯಭವಿಷ್ಯ : 07-03-2020

- Advertisement -

ಮೇಷರಾಶಿ
ಉದ್ಯೋಗ ಬದಲಾವಣೆಯ ಅವಕಾಶ ಹುಡುಕಿ ಬರಲಿದೆ. ಸಾಂಸಾರಿಕವಾಗಿ ನೆಮ್ಮದಿ. ದೇಹಾರೋಗ್ಯದಲ್ಲಿ ಜಾಗೃತೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮಾಟ – ಮಂತ್ರದ ಭೀತಿ, ಚಂಚಲ ಬುದ್ದಿ, ಸ್ಥಿರಾಸ್ಥಿಗಾಗಿ ಸಾಲ, ವಾಹನ ನಷ್ಟ. ನೆರೆ ಹೊರೆಯವರಿಂದ ಅನುಕೂಲ. ದಿನಾಂತ್ಯಕ್ಕೆ ಶುಭವಾರ್ತೆ.

ವೃಷಭರಾಶಿ
ಮಕ್ಕಳಿಂದ ಧನಾಗಮನ, ವಿದ್ಯಾಕ್ಷೇತ್ರದಲ್ಲಿ ಶಿಕ್ಷಕರಿಗೆ ಕಾರ್ಯ ಒತ್ತಡ, ಕೋಪತಾಪಗಳು ಹೆಚ್ಚಳ, ಕಿರು ಪ್ರವಾಸ ಹೋಗುವ ಸಾಧ್ಯತೆ. ಹಿಂದೆ ಮಾಡಿದ ತಪ್ಪುಗಳು ನಿಮ್ಮನ್ನು ಕಾಡಲಿವೆ. ಕುಟುಂಬದೊಂದಿಗೆ ವಾಗ್ವಾದ. ಅವಿವಾಹಿತರಿಗೆ ವಿವಾಹ ಪ್ರಸ್ತಾವಗಳಲ್ಲಿ ಮುಜುಗರ. ಪ್ರಯಾಣದಲ್ಲಿ ಕಿರಿಕಿರಿ

ಮಿಥುನರಾಶಿ
ಉದ್ಯೋಗ ಬದಲಾವಣೆಗೆ ಅವಕಾಶ ಒದಗಿ ಬರಲಿದೆ. ವ್ಯವಹಾರ, ವ್ಯಾಪಾರಗಳಲ್ಲಿ ಆರ್ಥಿಕ ಬೆಳವಣಿಗೆ, ಆಲಸ್ಯದಲ್ಲಿ ಕೆಲಸ ಹಾಳಾಗುವ ಸಾಧ್ಯತೆ. ನೆಮ್ಮದಿಗೆ ಭಂಗ, ಉಷ್ಣ, ಸುಸ್ತು, ಸ್ಥಿರಾಸ್ತಿ ಕಳೆದುಕೊಳ್ಳುವ ಭೀತಿ. ಭಾವನಾತ್ಮಕ ವಿಚಾರಗಳನ್ನು ಮರೆತು ಬಿಡಿ.

ಕಟಕರಾಶಿ
ಸರಕಾರಿ ಕೆಲಸಕಾರ್ಯಗಳಲ್ಲಿ ಮುನ್ನಡೆ ಸಾಧಿಸಲಿದ್ದೀರಿ. ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯತ್ನ ಬಲದಿಂದ ಮುನ್ನಡೆ. ಅನಾರೋಗ್ಯ ಸಮಸ್ಯೆ, ಕುಟಂಬಕ್ಕಾಗಿ ಖರ್ಚು, ನಷ್ಟ ನಿರಾಸೆ. ದೂರ ಬಂಧುಗಳ ಮಾತಿನಿಂದ ಬೇಸರ. ಮುಚ್ಚಿಟ್ಟ ವಿಷಯವೊಂದು ಬಹಿರಂಗವಾಗೋ ಸಾಧ್ಯತೆ.

ಸಿಂಹರಾಶಿ
ಗುಪ್ತ ಧನಾಗಮನ, ದೂರದ ವ್ಯಕ್ತಿಗಳಿಂದ ಅನುಕೂಲ. ಮಕ್ಕಳಿಂದ ಕಿರಿಕಿರಿ, ಆರ್ಥಿಕವಾಗಿ ಸಾಲಬಾಧೆ ನಿವಾರಣೆಯಿಂದ ಸಮಾಧಾನ. ಪತ್ನಿಯಿಂದ ಸಹಕಾರ. ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ, ತಾಂತ್ರಿಕ ಕ್ಷೇತ್ರದವರಿಗೆ ಅನುಕೂಲ, ದುಶ್ಚಟಗಳಿಂದ ತೊಂದರೆ. ಸಮಾಧಾನದಿಂದ ಇರಿ. ಅವಿವಾಹಿತರಿಗೆ ಕಂಕಣ ಬಲ.

ಕನ್ಯಾರಾಶಿ
ಹಿರಿಯ ಸಹೋದರಿಯಿಂದ ಲಾಭ, ಉದ್ಯೋಗದಲ್ಲಿ ಪ್ರಶಂಸೆ, ಪ್ರಯತ್ನ ಬಲದಿಂದ ಸಮಸ್ಯೆ ಹಂತ ಹಂತವಾಗಿ ಪರಿಹಾರ. ಆರೋಗ್ಯದಲ್ಲಿ ವ್ಯತ್ಯಾಸ. ಹೊಟ್ಟೆನೋವು, ಕಫ, ಸುಸ್ತು ಸಮಸ್ಯೆ ಕಾಡಲಿದೆ. ಬಂದ ಅವಕಾಶವನ್ನು ಬಳಸಿಕೊಂಡಲ್ಲಿ ಸಮಸ್ಯೆಗಳು ಪರಿಹಾರ ಕಾಣಲಿದೆ.

ತುಲಾರಾಶಿ
ಅನಿರೀಕ್ಷಿತ ಅದೃಷ್ಟದ ಬೆಂಬಲ ಸಿಗಲಿದೆ. ಉದ್ಯೋಗ ಕಳೆದುಕೊಳ್ಳುವ ಭೀತಿ ನಿಮ್ಮನ್ನು ಕಾಡಲಿದೆ. ತಂದೆಯ ನಡವಳಿಕೆಯಿಂದ ಬೇಸರ. ಪಿತ್ರಾರ್ಜಿತ ಆಸ್ತಿ ಸಮಸ್ಯೆ ಬಗೆಹರಿಯಲಿದೆ. ಅಧಿಕ ಖರ್ಚು, ದ್ವೇಷ ನಿಂದನೆ, ಒಂಟಿತನ. ಸಾಂಸಾರಿಕ ಸಮಸ್ಯೆಯನ್ನು ಎದುರಿಸಿ ಗೆಲುವಿದೆ. ಉತ್ತಮ ಚಿಂತನೆಗಳಿಂದ ಗೆಲುವು.

ವೃಶ್ಚಿಕರಾಶಿ
ಅನಿರೀಕ್ಷಿತ ಅವಕಾಶ, ಉದ್ಯೋಗದಲ್ಲಿ ಭರವಸೆ. ಧನಾಗಮನದ ಅಭಿವೃದ್ದಿ ಗೋಚರಕ್ಕೆ ಬರಲಿದೆ. ಮಿತ್ರರಿಂದ ಉದ್ಯೋಗ ಭಾಗ್ಯ. ಉದ್ಯೋಗ ಸ್ಥಳದಲ್ಲಿ ಕಿರಿಕಿರಿ. ಅನಾರೋಗ್ಯ ಸಮಸ್ಯೆ ಕಾಡಲಿದೆ. ವಿದ್ಯಾರ್ಥಿಗಳಿಗೆ ವಿದ್ಯಾಬಲದ ಅಗತ್ಯ. ಸಮಸ್ಯೆಗಳಿಗೆ ಬಂಧುಗಳಿಂದ ಪರಿಹಾರ.

ಧನಸ್ಸುರಾಶಿ
ಉದ್ಯೋಗ ಕಳೆದುಕೊಳ್ಳುವಿರಿ, ಹೊಸ ಉದ್ಯೋಗ ಸಾಧ್ಯತೆ. ಪಾಲುದಾರಿಕೆ ವ್ಯವಹಾರದಲ್ಲಿ ಸಮಸ್ಯೆ, ಸಂಗಾತಿಯಿಂದ ಬೇಸರ. ಆರ್ಥಿಕ ಸಮಸ್ಯೆ ಪರಿಹಾರ, ಆರೋಗ್ಯದ ಮೇಲೆ ಹೆಚ್ಚಿನ ಗಮನ, ಅನಿರೀಕ್ಷಿತ ಸೋಲು, ಸ್ತ್ರೀಯರಿಂದ ಭಾದೆ. ದಿನಾಂತ್ಯಕ್ಕೆ ಒಳಿತು.

ಮಕರರಾಶಿ
ಆರ್ಥಿಕವಾಗಿ ಶನಿಯ ಬೆಂಬಲ ತುಸು ಚೇತರಿಕೆಯನ್ನು ತಂದು ಕೊಡಲಿದೆ. ವೃತ್ತಿರಂಗದಲ್ಲಿ ಮುನ್ನಡೆಯಿಂದ ಸಮಾಧಾನ, ಕೇಳಿದ ಸಾಲ ಸಿಗುವುದಿಲ್ಲ, ಕೊಟ್ಟ ಸಾಲ ಹಿಂದಿರುಗಲ್ಲ, ಶತ್ರುಗಳಿಂದ ತೊಂದರೆ, ಪ್ರಯಾಣದಲ್ಲಿ ಹಿನ್ನಡೆ, ಸಂಗಾತಿಗಳೇ ಶತ್ರುಗಳಾಗುವರು, ನರದೌರ್ಬಲ್ಯ, ಗರ್ಭದೋಷ, ಕೋರ್ಟ ಅಲೆದಾಟ,.

ಕುಂಭರಾಶಿ
ಆಕಸ್ಮಿಕ ಲಾಭ, ಧೀರ್ಘಕಾಲದ ಸಮಸ್ಯೆಗೆ ಪರಿಹಾರ, ಮಕ್ಕಳಿಂದ ಅನುಕೂಲ, ಬಂಧು ಬಳಗದವರ ಆಗಮನವು ಮನೆಯಲ್ಲಿ ಸಂತಸದ ವಾತಾವರಣವನ್ನು ತಂದು ಕೊಡಲಿದೆ, ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ, ದಾಂಪತ್ಯ ಕಿರಿಕಿರಿ, ವಿಕೃತ ಭಾವನೆಗಳು, ಆಗಾಗ ಸಂಚಾರಗಳು ದೇಹಾರೋಗ್ಯವನ್ನು ಹಾಳು ಮಾಡೀತು.

ಮೀನರಾಶಿ
ಆತ್ಮಸ್ಥೈರ್ಯದಿಂದ ಪ್ರಯತ್ನಬಲದಿಂದ ಮುನ್ನಡೆಯಿರಿ, ಹಲವಾರು ಅವಕಾಶಗಳು ಬರಲಿವೆ, ಮಕ್ಕಳಲ್ಲಿ ವಿದೇಶಿ ಕನಸು, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ. ಅನಿರೀಕ್ಷಿತ ಮೂಲದಿಂದ ಧನಾಗಮನ, ಪಾಲುದಾರಿಕೆಯಲ್ಲಿ ಹಿನ್ನಡೆ, ತಲೆನೋವು, ಬೆನ್ನು ನೋವಿನಂತಹ ಅನಾರೋಗ್ಯ ಸಮಸ್ಯೆ. ವಾಹನ ಚಾಲನೆಯಲ್ಲಿ ಜಾಗೃತೆವಹಿಸಿ. ಅವಿವಾಹಿತರಿಗೆ ಕಂಕಣಬಲ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular