ವಿನಯ್ ಗೂರೂಜಿಗೆ ಬ್ಲಾಕ್ ಮೇಲ್ : ಐವರ ಬಂಧನ

0

ಬೆಂಗಳೂರು : ಚಿಕ್ಕಮಗಳೂರು ಜಿಲ್ಲೆಯ ಗೌರಿ ಗದ್ದೆ ಆಶ್ರಮದ ಅವಧೂತ ವಿನಯ್​ ಗುರೂಜಿ ಅವರಿಗೆ ಐವರು ಪತ್ರಕರ್ತರ ಸೋಗಿನಲ್ಲಿ ಜೀವ ಬೆದರಿಕೆಯೊಡ್ಡಿದ್ದಾರೆ. ಸ್ವಾಮೀಜಿಗೆ ಜೀವಬೆದರಿಕೆಯೊಡ್ಡಿದ್ದ 5 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರರನ್ನು ರವಿಕುಮಾರ್, ಮನೋಜ್, ಮುರುಳಿ, ಮಂಜುನಾಥ್ ಹಾಗೂ ಸಂತೋಷ್ ಎಂದು ಗುರುತಿಸಲಾಗಿದೆ. ಪತ್ರಕರ್ತರ ಸೋಗಿನಲ್ಲಿ ಐವರು ಆರೋಪಿಗಳು ವಿನಯ್ ಗುರೂಜಿಗೆ 50 ಲಕ್ಷ ನೀಡುವಂತೆ ಬ್ಲಾಕ್ ಮೇಲ್ ಮಾಡಿದ್ದರು. ನಂತರ 30 ಲಕ್ಷ ರೂಪಾಯಿಗೆ ಡೀಲ್ ಕುದುರಿಸಿದ್ದರು. ವಿನಯ್ ಗುರೂಜಿಗೆ ಜೀವ ಬೆದರಿಕೆಯೊಡ್ಡಿದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

Leave A Reply

Your email address will not be published.