ಭಾನುವಾರ, ಜೂನ್ 15, 2025
Homehoroscopeನಿತ್ಯಭವಿಷ್ಯ : 03-05-2020

ನಿತ್ಯಭವಿಷ್ಯ : 03-05-2020

- Advertisement -

ಮೇಷರಾಶಿ
ವ್ಯವಹಾರದಲ್ಲಿ ಅನಿರೀಕ್ಷಿತ ಲಾಭ, ವಿದ್ಯಾರ್ಥಿಗಳಿಗೆ ಹಿರಿಯರಿಂದ ಸಹಕಾರ ಸಿಗುತ್ತದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭವಾಗಲಿದೆ. ನ್ಯಾಯಾಲಯದ ಕೆಲಸಗಳು ನಿಮ್ಮ ಪರವಾಗಲಿದೆ. ವಿದ್ಯಾರ್ಥಿಗಳಲ್ಲಿ ಪ್ರಗತಿ, ಮನಸ್ಸಿನ ಮೇಲೆ ದುಷ್ಪರಿಣಾಮ, ಶ್ರಮಕ್ಕೆ ತಕ್ಕ ಫಲ, ಅಕಾಲ ಭೋಜನ.

ವೃಷಭರಾಶಿ
ಸರಕಾರಿ ಕೆಲಸಗಳಿಗೆ ಧನವ್ಯಯವಾಗುತ್ತದೆ. ಆಗಾಗ ಸಂಚಾರಗಳು ಒದಗಿ ಬರುತ್ತವೆ. ವೃತ್ತಿರಂಗದಲ್ಲಿ ಅದೃಷ್ಟ ನಿಮ್ಮನ್ನು ಮೇಲೆತ್ತಲಿದೆ. ಅಧಿಕಾರಿ ವರ್ಗದವರಿಗೆ ವರ್ಗಾವಣೆ ಇದೆ. ಕುಟುಂಬ ಸೌಖ್ಯ, ಮೇಲಾಧಿಕಾರಿಗಳಿಂದ ತೊಂದರೆ, ಚಂಚಲ ಮನಸ್ಸು, ಅಧಿಕ ಖರ್ಚು, ಆರೋಗ್ಯದಲ್ಲಿ ಸುಧಾರಣೆ, ಹಿತ ಶತ್ರುಗಳ ಬಾಧೆ, ಉದ್ಯೋಗದಲ್ಲಿ ಬಡ್ತಿ.

ಮಿಥುನರಾಶಿ
ದಾನ-ಧರ್ಮದಲ್ಲಿ ಆಸಕ್ತಿ, ಆರೋಗ್ಯ ಸಮಸ್ಯೆ, ವೃತ್ತಿರಂಗದಲ್ಲಿ ಸಹೋದ್ಯೋಗಿಗಳೊಂದಿಗೆ ನಿಷ್ಠುರಕ್ಕೆ ಕಾರಣರಾಗದಿರಿ. ಕಾರ್ಯತಂತ್ರಗಳಲ್ಲಿ ಅವಸರಿಸದಿರಿ. ವಿಶೇಷವಾಗಿ ಆಗಾಗ ಧನಾಗಮನ ಕಾರ್ಯ ಸಾಧನೆಗೆ ಅನುಕೂಲವಾಗಲಿದೆ. ಆರೋಗ್ಯದಲ್ಲಿ ಜಾಗ್ರತೆ. ಯತ್ನ ಕಾರ್ಯದಲ್ಲಿ ವಿಳಂಬ, ಕೆಲವು ವಿಚಾರಗಳಿಂದ ಅಸಮಾಧಾನ, ಮಾತಿನ ಮೇಲೆ ನಿಗಾವಹಿಸಿ, ಯೋಚಿಸಿ ನಿರ್ಧಾರ ಕೈಗೊಳ್ಳಿ, ಈ ವಾರ ಎಚ್ಚರಿಕೆಯಲ್ಲಿರುವುದು ಉತ್ತಮ.

ಕಟಕರಾಶಿ
ಹಣಕಾಸು ಲಾಭ, ಅಧಿಕವಾದ ಖರ್ಚು, ಪಾಲುಗಾರಿಕೆ ವಿಚಾರದಲ್ಲಿ ಹೆಚ್ಚಿನ ಗಮನ ಹರಿಸಿರಿ. ಹಿರಿಯರ ಆರೋಗ್ಯ ಆಗಾಗ ಏರುಪೇದಾದೀತು. ವ್ಯಾಪಾರಿ ವರ್ಗದವರಿಗೆ ಚೇತರಿಕೆ ಕಂಡುಬರಲಿದೆ. ಅನಿರೀಕ್ಷಿತವಾಗಿ ಕಿರುಸಂಚಾರವಿರುತ್ತದೆ. ಅಪರಿಚಿತ ವ್ಯಕ್ತಿಗಳಿಂದ ತೊಂದರೆ, ಋಣ ಬಾಧೆ, ಇಲ್ಲ ಸಲ್ಲದ ಅಪವಾದ, ಗೌರವಕ್ಕೆ ಧಕ್ಕೆ, ನಿಂದನೆ, ಹಣಕಾಸು ವಿಚಾರದಲ್ಲಿ ಎಚ್ಚರ, ಆರೊಗ್ಯದ ಬಗ್ಗೆ ಕಾಳಜಿವಹಿಸಿ.

ಸಿಂಹರಾಶಿ
ತಾಳ್ಮೆ, ಸಮಾಧಾನ ಅಗತ್ಯ, ಸ್ನೇಹಿತರಿಂದ ತೊಂದರೆ, ಆತ್ಮೀಯರೊಂದಿಗೆ ಮನಃಸ್ತಾಪ, ಯತ್ನ ಕಾರ್ಯಗಳಲ್ಲಿ ಹಿನ್ನಡೆ, ಆರೋಗ್ಯದಲ್ಲಿ ಏರುಪೇರು, ಮಾತಿನ ಚಕಮಕಿ, ದಂಡ ಕಟ್ಟುವ ಸಾಧ್ಯತೆ. ಹಳೆಯ ಸಂಘರ್ಷದಿಂದ ನಿಮ್ಮ ಮನಸ್ಸು ಘಾಸಿಯಾದೀತು. ಎಲ್ಲಾ ಇದ್ದರೂ ಏನೂ ಇಲ್ಲದಂತಹ ವಾತಾವರಣವಿರುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಫ‌ಲಿತಾಂಶ ಸಿಗಲಿದೆ. ದಿನಾಂತ್ಯದಲ್ಲಿ ಶುಭವಿದೆ.

ಕನ್ಯಾರಾಶಿ
ಅನ್ಯರ ತಪ್ಪಿಗೆ ನೀವು ಗುರಿಯಾಗುವಿರಿ, ಆರ್ಥಿಕವಾಗಿ ಭಿನ್ನವಾದ ಚೈತನ್ಯ ಉಂಟಾಗಲಿದೆ. ವಿದ್ಯಾರ್ಥಿಗಳಿಗೆ ಸತತ ಪ್ರಯತ್ನ ಬಲದಿಂದ ಯಶಸ್ಸು ಸಿಗಲಿದೆ. ಸರಕಾರೀ ನೌಕರರಿಗೆ ಓಡಾಟ ಹೆಚ್ಚಿರುತ್ತದೆ. ಸಾಂಸಾರಿಕವಾಗಿ ಸಂತಸದ ವಾತಾವರಣ. ಗೌರವಕ್ಕೆ ಧಕ್ಕೆ, ಮಕ್ಕಳ ಬಗ್ಗೆ ಅಧಿಕ ಚಿಂತೆ, ಮನಸ್ಸಿನಲ್ಲಿ ನಾನಾ ಆಲೋಚನೆ, ದಾಯಾದಿಗಳ ಕಲಹ, ವಿವಾದಾತ್ಮಕ ವಿಚಾರಗಳಿಂದ ದೂರವಿರಿ, ಈ ವಾರ ಅಶುಭ ಫಲ.

ತುಲಾರಾಶಿ
ಚಿನ್ನಾಭರಣ ಯೋಗ, ಹಿತೈಷಿಗಳಿಂದ ನೆರವು, ಸಾಮಾಜಿಕ ವಲಯದಲ್ಲಿ ಗೌರವ ಸಿಗಲಿದೆ. ವ್ಯಾಪಾರದಲ್ಲಿ ಸಮಾಧಾನದ ವಾತಾವರಣ ಸಂತಸ ತರಲಿದೆ. ವೃತ್ತಿರಂಗದಲ್ಲಿ ನಿಮ್ಮ ನಡವಳಿಕೆಯ ಬಗ್ಗೆ ಹೆಚ್ಚಿನ ಗಮನಹರಿಸಿರಿ. ಶುಭವಿದೆ. ಎಲ್ಲಾ ಕಡೆಯಿಂದಲೂ ಒತ್ತಡ, ಕೆಲಸ ಕಾರ್ಯಗಳಲ್ಲಿ ಅಲ್ಪ ಮುನ್ನಡೆ, ವಿದ್ಯಾರ್ಥಿಗಳಿಗೆ ಅನುಕೂಲ, ಮನೆಯಲ್ಲಿ ನೆಮ್ಮದಿ ವಾತಾವರಣ,
ಶುಭ ಫಲಗಳು ಲಭಿಸುವುದು.

ವೃಶ್ಚಿಕರಾಶಿ
ವರಮಾನ ಕಡಿಮೆ, ಆರ್ಥಿಕವಾಗಿ ಧನಾಗಮನವಿದ್ದರೂ ಆಗಾಗ ಆತಂಕಕ್ಕೆ ಕಾರಣವಾಗುತ್ತದೆ. ಕಾರ್ಮಿಕ ವರ್ಗದವರಿಗೆ ಸಮಾಧಾನದ ವಾತಾವರಣವಿರುತ್ತದೆ. ಬಂದ ಅವಕಾಶಗಳನ್ನು ನಿರಾಕರಿಸದೆ ನಿಭಾಯಿಸ ಬೇಕಾಗುತ್ತದೆ. ತೊಂದರೆಗಳು ಹೆಚ್ಚು, ಉದರ ಬಾಧೆ, ಶತ್ರುಗಳ ನಾಶ, ಅನಾವಶ್ಯಕ ಮಾತಿನಿಂದ ಕಲಹ, ಮಿತ್ರರಿಂದ ವಿರೋಧ, ಶೀತ ಸಂಬಂಧಿತ ರೋಗ, ಈ ವಾರ ಅಶುಭ ಫಲ ಯೋಗ.

ಧನಸ್ಸುರಾಶಿ
ಬಂಧುಬಳಗದವರ ಸಹಕಾರ ಸಂತಸ ತಂದೀತು. ಹಿಡಿದ ಕೆಲಸಗಳು ನಿಮ್ಮ ಪ್ರಯತ್ನ ಬಲದಿಂದ ಮುನ್ನಡೆಯಲಿದೆ. ಸಾಂಸಾರಿಕವಾಗಿ ಹೊಂದಾಣಿಕೆ ಮನೋಭಾವದಿಂದ ಜೀವನ ಸಂತಸ ತರುತ್ತದೆ. ಸ್ನೇಹಿತರಿಂದ ಸಹಾಯ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ವ್ಯವಹಾರಗಳಲ್ಲಿ ಅಭಿವೃದ್ಧಿ, ಅತಿಯಾದ ನಿದ್ರೆ, ನಂಬಿದ ಜನರಿಂದ ಅಶಾಂತಿ, ಅಕಾಲ ಭೋಜನ, ಮಾನಸಿಕ ವ್ಯಥೆ, ಈ ವಾರ ಮಿಶ್ರಫಲ ಯೋಗ.

ಮಕರರಾಶಿ
ಸ್ತ್ರೀ ಸಂಬಂಧಿತ ವ್ಯವಹಾರಗಳಲ್ಲಿ ಎಚ್ಚರ, ಕೃಷಿಕರಿಗೆ, ಬೇಸಾಯಗಾರರಿಗೆ ಮುನ್ನಡೆಯ ದಿನಗಳಿವು. ಧಾರ್ಮಿಕ ಕೆಲಸ ಕಾರ್ಯಗಳಿಗಾಗಿ ಧನ ವ್ಯಯವಾದೀತು. ವೃತ್ತಿರಂಗದಲ್ಲಿ ಚೇತರಿಕೆ ಕಂಡುಬರುವುದ ರಿಂದ ಮುನ್ನಡೆಗೆ ಸಾಧಕವಾಗುತ್ತದೆ. ಅಧಿಕಾರಿಗಳಲ್ಲಿ ಕಲಹ, ವ್ಯರ್ಥ ಧನಹಾನಿ, ಆಲಸ್ಯ ಮನೋಭಾವ, ದಾಂಪತ್ಯದಲ್ಲಿ ಕಲಹ, ಆಕಸ್ಮಿಕ ಖರ್ಚು, ಖರ್ಚುಗಳ ಬಗ್ಗೆ ನಿಗಾವಹಿಸಿ, ಪ್ರಯಾಣದಿಂದ ದೂರ ಉಳಿಯುವುದು ಉತ್ತಮ.

ಕುಂಭರಾಶಿ
ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಯಾವುದೇ ಕೆಲಸಗಳು ಅಡೆತಡೆಗಳಿಂದಲೇ ಮುನ್ನಡೆಯಲಿವೆ. ಮಕ್ಕಳ ಆರೋಗ್ಯದ ಬಗ್ಗೆ ಗಮನಹರಿಸಿರಿ. ಬಂಧುಬಳಗದವರ ಆಗಮನದಿಂದ ಸಂತಸ ತರುತ್ತದೆ . ಖರ್ಚು ವೆಚ್ಚದಲ್ಲಿ ಮಿತಿ ಇರಲಿ. ಮನಸ್ಸಿನಲ್ಲಿ ಭಯ ಭೀತಿ, ಅಗ್ನಿ ಭಯ, ಶತ್ರುತ್ವ ಹೆಚ್ಚಾಗುವುದು, ಸುಳ್ಳು ಹೇಳುವ ಸಾಧ್ಯತೆ, ಅನ್ಯ ಜನರಲ್ಲಿ ವೈಮನಸ್ಸು, ಕೆಲಸ ಕಾರ್ಯಗಳಿಗೆ ಅಡೆತಡೆ.

ಮೀನರಾಶಿ
ಮಾತೃವಿನಿಂದ ಲಾಭ, ಪ್ರೀತಿ ಸಮಾಗಮ, ಗೃಹದಲ್ಲಿ ಸಮಾಧಾನದ ವಾತಾವರಣವಿರುತ್ತದೆ. ಕೆಲಸ ಕಾರ್ಯಗಳು ಹಂತ ಹಂತವಾಗಿ ನೆರವೇರಲಿವೆ. ಶುಭಮಂಗಲ ಕಾರ್ಯಕ್ಕೆ ಅವಸರಿಸದಿರಿ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುವುದು. ವಿದ್ಯಾರ್ಥಿಗಳಲ್ಲಿ ಪ್ರಗತಿ, ದ್ರವ ರೂಪದ ವಸ್ತುಗಳಿಂದ ಅನುಕೂಲ, ಹಣಕಾಸು ಲಾಭ, ಆರೋಗ್ಯದಲ್ಲಿ ವ್ಯತ್ಯಾಸ, ಶರೀರದಲ್ಲಿ ಆತಂಕ, ಈ ವಾರ ಮಿಶ್ರ ಫಲ ಯೋಗ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular