ಬುಧವಾರ, ಏಪ್ರಿಲ್ 30, 2025
Homehoroscopeನಿತ್ಯಭವಿಷ್ಯ : 12-04-2020

ನಿತ್ಯಭವಿಷ್ಯ : 12-04-2020

- Advertisement -

ಮೇಷರಾಶಿ
ವ್ಯಾಪಾರ ವ್ಯವಹಾರದಲ್ಲಿ ಲಾಭ, ಅಧಿಕ ಲಾಭ, ಆಸ್ತಿ ಸಂಬಂಧಿ ವಿವಾದಗಳು ಸಮಸ್ಯೆ ತಂದಾವು. ಅಧಿಕಾರಿ ವರ್ಗದವರಿಗೆ ಭಡ್ತಿ ತಡೆ ಹಿಡಿದೀತು. ಹಿರಿಯರ ಆರೋಗ್ಯ ಸರಿಯಿರದು. ಸಂಚಾರದಲ್ಲಿ ಜಾಗ್ರತೆ ಇರಲಿ. ಮನೆಯಲ್ಲಿ ಸಂತಸ, ಮಾನಸಿಕ ನೆಮ್ಮದಿ, ಪ್ರಾಮಾಣಿಕತೆಯಿಂದ ಯಶಸ್ಸು, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ.

ವೃಷಭರಾಶಿ
ಮಹಿಳೆಯರಿಗೆ ವಿಶೇಷ ಲಾಭ, ಪರಮಾಪ್ತನಿಂದ ವಂಚನೆ ಇರುತ್ತದೆ. ಉನ್ನತ ವ್ಯಾಸಂಗಕ್ಕಾಗಿ ಮಕ್ಕಳಿಗೆ ಧನ ವಿನಿಯೋಗ ವಾಗಲಿದೆ. ಅಲ್ಪಸ್ವಲ್ಪ ರೀತಿಯಲ್ಲಿ ಆರೋಗ್ಯ ಭಾಗ್ಯವು ಹದಗೆಡ ಬಹುದು. ಅಪರಿಚಿತರಿಂದ ಕಲಹ, ಪ್ರಿಯರ ಜನರ ಭೇಟಿ, ಹಿರಿಯರಲ್ಲಿ ಭಕ್ತಿ, ತೀರ್ಥಯಾತ್ರೆ ದರ್ಶನ, ಉದ್ಯೋಗದಲ್ಲಿ ಬಡ್ತಿ

ಮಿಥುನರಾಶಿ
ವೃತ್ತಿರಂಗದಲ್ಲಿ ಅಧಿಕಾರಿ ವರ್ಗದವರಿಗೆ ಜವಾಬ್ದಾರಿಯು ಹೆಚ್ಚಲಿದೆ. ವಿದ್ಯಾರ್ಚನೆಯಲ್ಲಿ ವಿದ್ಯಾರ್ಥಿಗಳಿಗೆ ನಿರುತ್ಸಾಹವು ತೋರಲಿದೆ. ಸಾಂಸಾರಿಕವಾಗಿ ಪತ್ನಿಯರೊಳಗೆ ಸಾಮರಸ್ಯ ಅಗತ್ಯವಿದೆ. ಆಸ್ತಿ ಖರೀದಿ ಯೋಗ, ನೆರೆಹೊರೆಯವರಿಂದ ಕುತಂತ್ರ, ಹಿತ ಶತ್ರುಗಳಿಂದ ತೊಂದರೆ, ಮೋಸಗೆ ಒಳಗಾಗುವಿರಿ, ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ.

ಕಟಕರಾಶಿ
ಹೆಚ್ಚಿನ ಜವಾಬ್ದಾರಿ, ವಾಹನ ಅಪಘಾತ ಸಾಧ್ಯತೆ,ಮಾತುಮಾತಿಗೆ ಮುನಿಸು ತೋರುವ ಮನದನ್ನೆಯ ಮನಕ್ಕೆ ಮುದ ನೀಡಬೇಕಾದೀತು. ನೌಕರ ವರ್ಗಕ್ಕೆ ಆರ್ಥಿಕವಾಗಿ ಸಹಕಾರವು ಸಿಗಲಿದೆ. ಆಟೋಟ ಕೆಲಸಗಳು ಹಿನ್ನಡೆ ತಂದೀತು. ದೂರ ಸಂಚಾರದಿಂದ ತೊಂದರೆ. ವಿದ್ಯಾಭ್ಯಾಸದಲ್ಲಿ ಪ್ರಗತಿ, ಶತ್ರುಗಳ ಕಾಟ, ಕೃಷಿಯಲ್ಲಿ ಲಾಭ, ಸ್ತ್ರೀಯರಿಗೆ ಅನುಕೂಲ, ಅಮೂಲ್ಯ ವಸ್ತುಗಳ ಖರೀದಿ, ಪುಣ್ಯ ಕ್ಷೇತ್ರ ದರ್ಶನ.

ಸಿಂಹರಾಶಿ
ನೂತನ ಆಭರಣ ಖರೀದಿ, ಮಂಗಲಕಾರ್ಯಗಳ ಚಿಂತನೆ ತೋರಿ ಬರುವುದು. ಉದರ ಸಂಬಂಧಿ ಸಮಸ್ಯೆಗಳು ತೋರಿ ಬಂದಾವು. ಶನಿಯ ಉತ್ತಮ ಫ‌ಲಗಳನ್ನು ಅನುಭವಿಸಲಿದ್ದೀರಿ. ದಿನಾಂತ್ಯ ಶುಭವಿದೆ. ಯತ್ನ ಕಾರ್ಯದಲ್ಲಿ ವಿಘ್ನ, ಮಾತಿನ ಚಕಮಕಿ, ಅಧಿಕ ಧನವ್ಯಯ ಎಚ್ಚರಿಕೆ, ಸ್ಥಳ ಬದಲಾವಣೆ, ಆಕಸ್ಮಿಕ ಧನ ಲಾಭ, ಮಂಗಳ ಕಾರ್ಯಗಳಲ್ಲಿ ಭಾಗಿ.

ಕನ್ಯಾರಾಶಿ
ದ್ರವ್ಯ ಲಾಭ, ಅಧಿಕ ತಿರುಗಾಟ, ಆರೋಗ್ಯದಲ್ಲಿ ಚೇತರಿಕೆ, ಉದ್ಯಮರಂಗದಲ್ಲಿ ತೀವ್ರ ಪೈಪೋಟಿಯನ್ನು ಎದುರಿಸಬೇಕಾದೀತು. ಆರ್ಥಿಕ ಅಡಚಣೆಯಿಂದ ಪಾರಾಗಲು ವಿವಿಧ ಮೂಲದ ಆದಾಯದ ಮೂಲವನ್ನು ಕಂಡುಕೊಳ್ಳಬೇಕಾದೀತು. ಸಂಚಾರದಲ್ಲಿ ಜಾಗ್ರತೆ. ಸುಖ ಭೋಜನ ಪ್ರಾಪ್ತಿ, ಮಾತಿನಲ್ಲಿ ಹಿಡಿತವಿರಲಿ, ಉದ್ಯೋಗದಲ್ಲಿ ತೊಂದರೆ, ಸ್ವಗೃಹ ವಾಸ, ಅನ್ಯ ಜನರಲ್ಲಿ ವೈಮನಸ್ಸು.

ತುಲಾರಾಶಿ
ಮಾನಸಿಕ ನೆಮ್ಮದಿ ಭಂಗ, ಅತಿಯಾದ ಕೋಪ, ಜೀವನದಲ್ಲಿ ಕೆಲವೊಂದು ಬದಲಾವಣೆಯನ್ನು ಮಾಡಿಕೊಳ್ಳಬೇಕಾದೀತು. ಆರ್ಥಿಕವಾಗಿ ನ್ಯಾಯವಾಗಿ ಬರಬೇಕಾದನ್ನು ನಿಮಗೆ ಸಿಗಲಿದೆ. ಉತ್ತಮ ಫ‌ಲಿತಾಂಶವು ವಿದ್ಯಾರ್ಥಿಗಳಿಗೆ ಒದಗಲಿದೆ. ಧರ್ಮ ಕಾರ್ಯಗಳಿಂದ ನೆಮ್ಮದಿ, ವಾಹನ ಚಾಲನೆಯಲ್ಲಿ ಎಚ್ಚರ, ಅಪಘಾತವಾಗುವ ಸಾಧ್ಯತೆ, ತೀರ್ಥಯಾತ್ರೆ ದರ್ಶನ, ಮಿತ್ರರಲ್ಲಿ ದ್ವೇಷ

ವೃಶ್ಚಿಕರಾಶಿ
ಬಾಕಿ ಹಣ ಕೈ ಸೇರುವುದು, ಸೇವಕರಿಂದ ತೊಂದರೆ, ಅಧಿಕ ತಿರುಗಾಟ, ಶುಭ ಕಾರ್ಯಪ್ರವೃತ್ತಿಗೆ ಉತ್ತಮ ಪ್ರೇರಣೆ ದೊರಕುವುದಾದರೂ ಸರಿಯಾದ ಸಮಯಕ್ಕಾಗಿ ಕಾಯುವಂತಾದೀತು. ಅವಿವಾಹಿತರಿಗೆ ಮಾಂಗಲ್ಯಭಾಗ್ಯ ನೂತನ ಬಾಂಧವ್ಯಕ್ಕೆ ಪೂರಕವಾಗಲಿದೆ. ಕೋರ್ಟ್ ವ್ಯವಹಾರಗಳಲ್ಲಿ ಜಯ, ಮಂಗಳ ಕಾರ್ಯಗಳಿಗೆ ಧನವ್ಯಯ, ನೆಮ್ಮದಿ ಇಲ್ಲದ ಜೀವನ.

ಧನಸ್ಸುರಾಶಿ
ಶತ್ರುಗಳ ನಾಶ, ಸಾಲ ಬಾಧೆ, ಬಂಧುಗಳಲ್ಲಿ ಪ್ರೀತಿ ವಾತ್ಸಲ್ಯ, ನೆಮ್ಮದಿ ಇಲ್ಲದ ಜೀವನ, ನಿಮ್ಮ ಪ್ರಯತ್ನ ಬಲದಿಂದ ಕ್ರಿಯಾಶೀಲತೆಯಿಂದ ಹಿತಶತ್ರುಗಳಿಗೆ ಸಮಾಧಾನವಿರದು. ಅಪವಾದ ಗಳನ್ನು ಅನಾವಶ್ಯಕವಾಗಿ ಅನುಭವಿಸುವಂತಾದೀತು. ಯಂತ್ರವಾಹನಗಳಿಂದ ಜಾಗ್ರತೆ ವಹಿಸ ಬೇಕಾಗುತ್ತದೆ. ಮಾತಿನ ಚಕಮಕಿ, ದುಷ್ಟರಿಂದ ದೂರವಿರಿ, ವಾರಾಂತ್ಯದಲ್ಲಿ ಮಾನಸಿಕ ನೆಮ್ಮದಿ.

ಮಕರರಾಶಿ
ಮಾನಸಿಕ ಒತ್ತಡ, ಯತ್ನ ಕಾರ್ಯದಲ್ಲಿ ಸ್ವಲ್ಪ ವಿಳಂಬ, ಸ್ತ್ರೀಯರಿಗೆ ಅನುಕೂಲ, ನಿರುದ್ಯೋಗಿಗಳ ಪ್ರಯತ್ನಬಲ ಸಾರ್ಥಕವಾಗಲಿದೆ. ನವದಂಪತಿಗಳಿಗೆ ಸಂತಾನ ಭಾಗ್ಯದ ಸೂಚನೆ ತೋರಿಬಂದೀತು. ಆರ್ಥಿಕವಾಗಿ ಹಂತಹಂತವಾಗಿ ಅಭಿವೃದ್ಧಿಯ ಸಾಧ್ಯತೆ ಕಂಡುಬಂದೀತು. ವಿದ್ಯೆಯಲ್ಲಿ ಅಭಿವೃದ್ಧಿ, ವಿವಾಹ ಯೋಗ, ಮಾತೃವಿನಿಂದ ಶುಭ ಹಾರೈಕೆ, ಸುಖ ಭೋಜನ, ವಾರಾಂತ್ಯದಲ್ಲಿ ಧನಾಗಮನ.

ಕುಂಭರಾಶಿ
ಮನೆಯಲ್ಲಿ ಶಾಂತಿಯ ವಾತಾವರಣ, ಬಂಧುಗಳ ಆಗಮನ, ವಾಹನ ರಿಪೇರಿ, ಅಸ್ತವ್ಯಸ್ತವಾಗದ ಕೆಲಸ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಇರದು. ಪ್ರತಿಯೊಂದು ಕೆಲಸವನ್ನು ಹಲವು ಬಾರಿ ಯೋಚಿಸಿ ಮುಂದಿನ ಹೆಜ್ಜೆ ಇಡಿರಿ. ಬಂಧುಮಿತ್ರರು ಹಿತಶತ್ರುಗಳಾದಾರು. ಶೀಘ್ರದಲ್ಲಿ ಸಂತಸದ ಸಮಾಚಾರ ಕೇಳುವಿರಿ, ಮಹಿಳೆಯರಿಗೆ ವಸ್ತ್ರಾಭರಣ ಪ್ರಾಪ್ತಿ.

ಮೀನರಾಶಿ
ಅಧಿಕಾರಿಗಳಿಂದ ಪ್ರಶಂಸೆ, ಆರೋಗ್ಯ ಸಮಸ್ಯೆ, ಯತ್ನ ಕಾರ್ಯದಲ್ಲಿ ಅನುಕೂಲ, ಕೆಲವೊಂದು ವಿಚಾರಗಳಿಂದ ಮನಸ್ಸಿನ ನೆಮ್ಮದಿಗೆ ಭಂಗ ಬರಲಿದೆ. ಗುರು ಭಾಗ್ಯ ಸ್ಥಾನದಲ್ಲಿ ಸಂಚರಿಸುತ್ತಾ ಒಳ್ಳೆಯ ಫ‌ಲ ನೀಡಲಿದ್ದಾನೆ. ಆಗಾಗ ವ್ಯರ್ಥವಾದ ಅಲೆದಾಟದಿಂದ ಧನವ್ಯಯವಿದೆ. ದೂರ ಪ್ರಯಾಣ, ಕಾರ್ಯ ಸಾಧನೆ, ಇಷ್ಟಾರ್ಥ ಸಿದ್ಧಿ, ಮನೆಯಲ್ಲಿ ಶುಭ ಕಾರ್ಯ, ಪರಿಶ್ರಮಕ್ಕೆ ತಕ್ಕ ಫಲ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular