ಭಾನುವಾರ, ಏಪ್ರಿಲ್ 27, 2025
Homehoroscopeನಿತ್ಯಭವಿಷ್ಯ : 28-03-2020

ನಿತ್ಯಭವಿಷ್ಯ : 28-03-2020

- Advertisement -

ಮೇಷರಾಶಿ
ಆರ್ಥಿಕ ಸ್ಥಿತಿಯಲ್ಲಿ ಏರುಪೇರು. ವ್ಯಾಪಾರಿಗಳಿಗೆ ಅನುಕೂಲ. ಸುದ್ಧಿ ಸಮಾಚಾರದವರಿಗೆ ಕಾರ್ಯಒತ್ತಡ ತಂದೀತು. ಸಂಬಂಧಿಕರೊಡನೆ ಭಿನ್ನಾಭಿಪ್ರಾಯಿದಿಂದ ಕಲಹ ತಂದೀತು. ಮಾತೃವಿನಿಂದ ಧನಾಗಮನ, ವಿದ್ಯಾಭ್ಯಾಸದಲ್ಲಿ ಅನುಕೂಲ, ಮಕ್ಕಳಲ್ಲಿ ಮಂದತ್ವ, ಆಸೆ ಆಕಾಂಕ್ಷೆಗಳಿಗೆ ಧಕ್ಕೆ, ದುಶ್ಚಟಗಳಿಂದ ನಷ್ಟ.

ವೃಷಭರಾಶಿ
ಪಿತ್ರಾರ್ಜಿತ ಆಸ್ತಿ ಲಾಭ, ಸರ್ಕಾರಿ ಕೆಲಸಗಳಲ್ಲಿ ಜಯ, ಸಾಂಸಾರಿಕ ಸಾಮರಸ್ಯದಿಂದ ಸಂತಸ ನೆಮ್ಮದಿ ತರಲಿದೆ. ಯತ್ನಿತ ಕಾರ್ಯಗಳು ನಿಶ್ಚಿತರೂಪದಲ್ಲಿ ನಡೆಯಲಿದೆ. ವಿವಾಹಾದಿ ಮಂಗಲಕಾರ್ಯಗಳು ಮುಂದುವರಿಯಲಿವೆ. ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ವಾಹನ ಖರೀದಿ ಯೋಗ, ಗೃಹ ನಿರ್ಮಾಣಕ್ಕೆ ಮನಸ್ಸು, ಉದ್ಯೋಗದಲ್ಲಿ ಅನುಕೂಲ, ತಂದೆ-ಬಂಧುಗಳಿಂದ ಸಹಕಾರ.

ಮಿಥುನರಾಶಿ
ಹಣಕಾಸು ಸಮಸ್ಯೆ, ವಿದ್ಯಾ ವ್ಯವಹಾರಗಳಲ್ಲಿ ಅಭಿವೃದ್ಧಿ ಕಂಡು ಬರುತ್ತದೆ. ಆರ್ಥಿಕವಾಗಿ ಆತಂಕ ತರಲಿದೆ. ದೂರ ಸಂಚಾರದಲ್ಲಿ ಅಡಚಣೆ ತರುತ್ತದೆ. ಹಿರಿಯರಿಗೆ ವಿಶ್ರಾಂತಿ ಜೀವನವಾಗಲಿದೆ. ದೂರ ಪ್ರಯಾಣ, ರಾಜಕೀಯ ವ್ಯಕ್ತಿ, ಅಧಿಕಾರಿಗಳ ಭೇಟಿ, ಉದ್ಯೋಗದಲ್ಲಿ ಪ್ರಗತಿ, ಸ್ಥಳ ಬದಲಾವಣೆಗೆ ಚಿಂತೆ, ಆರೋಗ್ಯದಲ್ಲಿ ಏರುಪೇರು.

ಕಟಕರಾಶಿ
ಯಂತ್ರೋದ್ಯಮ ಇವುಗಳ ವ್ಯವಹಾರವುಳ್ಳವರು ತೀವ್ರತಾಪತ್ರಯವನ್ನು ಅನುಭವಿಸುವರು. ಹಿರಿಯರ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಬೇಕು. ಸರಕಾರಿ ನೌಕರ ವರ್ಗದವರಿಗೆ ಕಿರಿಕಿರಿ ಇದೆ. ಸ್ವಂತ ಉದ್ಯಮದಲ್ಲಿ ಅನುಕೂಲ, ವ್ಯಾಪಾರದಲ್ಲಿ ಲಾಭ, ಪಾಲುದಾರಿಕೆ ವ್ಯವಹಾರದಲ್ಲಿ ಸಮಸ್ಯೆ, ಸರ್ಕಾರದಿಂದ ತೊಂದರೆ, ರಾಜಕೀಯ ವ್ಯಕ್ತಿಗಳೊಂದಿಗೆ ಮನಃಸ್ತಾಪ, ಕುಟುಂಬದಲ್ಲಿಕಲಹ.

ಸಿಂಹರಾಶಿ
ಮಹಿಳಾವರ್ಗದವರಿಗೆ ಕಾರ್ಯಒತ್ತಡ ತರುತ್ತದೆ. ರಾಜಕಾರಣಿಗಳು ಉತ್ತಮ ರೀತಿಯಲ್ಲಿ ಪ್ರಶಂಸೆ ಪಡೆಯಲಿದ್ದಾರೆ. ವಿದ್ಯಾರ್ಥಿಗಳಿಗೆ ಶುಭವಾರ್ತೆ ತರಲಿದೆ. ಉದರ ಬಾಧೆ, ಶತ್ರುಗಳ ನಾಶ, ಮಕ್ಕಳೊಂದಿಗೆ ಕಿರಿಕಿರಿ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಸಂಗಾತಿಯೊಂದಿಗೆ ಕಲಹ, ಸೇವಕರಿಂದ ತೊಂದರೆ, ಸ್ವಯಂಕೃತ್ಯಗಳಿಂದ ನಷ್ಟ,

ಕನ್ಯಾರಾಶಿ
ವಿದ್ಯಾಭ್ಯಾಸದಲ್ಲಿ ಒತ್ತಡ, ಮಿತ್ರರಿಂದ ಹಣ ಖರ್ಚು, ತಂದೆ-ಸಂಗಾತಿಯಿಂದ ಅಹಂಭಾವ, ಪಾಲುದಾರಿಕೆಯಲ್ಲಿ ನಷ್ಟ, ನಾನಾ ರೀತಿಯಲ್ಲಿ ಮನಸ್ತಾಪ ತರುತ್ತದೆ. ಮಾನಸಿಕ ಅಸ್ಥಿರತೆಯಿಂದ ಕೋಪತಾಪಗಳು ಹೆಚ್ಚಲಿವೆ. ಪ್ರಯಾಣದಲ್ಲಿ ಧನವ್ಯಯವಾಗಲಿದೆ. ಅವಿವಾಹಿತರಿಗೆ ಸದ್ಯದಲ್ಲೇ ಕಂಕಣಬಲಕ್ಕೆ ಸಾಧಕವಾಗಲಿದೆ. ಸರ್ಕಾರಿ ಅಧಿಕಾರಿಗಳಿಂದ ತೊಂದರೆ, ಮೇಲಾಧಿಕಾರಿಗಳಿಂದ ದರ್ಪ.

ತುಲಾರಾಶಿ
ಹಿರಿಯರಿಗೆ ದೇಹಾರೋಗ್ಯದ ಬಗ್ಗೆ ಗಮನ ಹರಿಸಬೇಕಾದೀತು. ನ್ಯಾಯಾಲಯದಲ್ಲಿ ಮೊಕದ್ದಮೆಗಳ ನಿರೀಕ್ಷಿತ ಸಮಯದಲ್ಲಿ ನಡೆಯಲಾರದು. ವಿವಾಹಾದಿ ಮಂಗಲಕಾರ್ಯಗಳಿಗೆ ಅನುಕೂಲವಲ್ಲಾ ಶುಭವಿದೆ. ಉದ್ಯೋಗದಲ್ಲಿ ಅಭಿವೃದ್ಧಿ, ಸ್ಥಳ ಬದಲಾವಣೆಯ ಚಿಂತೆ, ಕೆಲಸಗಾರರ ಕೊರತೆ ನಿವಾರಣೆ, ದಾಯಾದಿಗಳ ಕಲಹ, ಕುಟುಂಬದಲ್ಲಿ ನೋವು.

ವೃಶ್ಚಿಕರಾಶಿ
ಉದ್ಯೋಗಾವಕಾಶಗಳು ವಿಳಂಬ, ದೂರ ಸಂಚಾರದಲ್ಲಿ ಜಾಗ್ರತೆ ವಹಿಸಿರಿ. ಭೂ ಸಂಬಂಧಿತ ವ್ಯವಹಾರಗಳು ಲಾಭಕರವಾಗಲಿವೆ. ಸಜ್ಜನರ ಗೆಳೆತನ ಮುನ್ನಡೆಗೆ ಸಾಧಕವಾಗಿ ಮನಸ್ಸು ಸಮಾಧಾನವಾಗಲಿದೆ. ಹಿರಿಯರಿಗೆ ಅಧಿಕಾರ ಪ್ರಾಪ್ತಿಯಾಗಲಿದೆ. ಸಂಗಾತಿಯಿಂದ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಉದ್ಯೋಗದಲ್ಲಿ ಒತ್ತಡ, ನೀವಾಡುವ ಮಾತಿನಿಂದ ಸಮಸ್ಯೆ, ದುಶ್ಚಟಗಳು ಅಧಿಕವಾಗುವುದು.

ಧನಸ್ಸುರಾಶಿ
ಸ್ಥಿರಾಸ್ತಿ ವಿಚಾರದಲ್ಲಿ ಕಲಹ, ಜೀವನದಲ್ಲಿ ಸಮಾಧಾನ ಸಿಗಲಾರದು. ಕೈಗೊಂಡ ಕಾರ್ಯಗಳು ಅನಿರೀಕ್ಷಿತ ರೀತಿಯಲ್ಲಿ ನೆರವೇರಲಿವೆ. ಆದರೂ ದೇಹಕ್ಕೂ ಮನಸ್ಸಿಗೂ ಸುಖ ಶಾಂತಿಗಳು ಕಡಿಮೆ. ವಿದ್ಯಾರ್ಥಿಗಳಿಗೆ ಅನುಕೂಲವಾದ ವಾತಾವರಣವಿದೆ. ಕುಟುಂಬದಲ್ಲಿ ಮನಃಸ್ತಾಪ, ತಂದೆಯ ನಡವಳಿಕೆಯಲ್ಲಿ ಬದಲಾವಣೆ, ಪ್ರಯಾಣದಲ್ಲಿ ನಿರಾಸಕ್ತಿ, ಭವಿಷ್ಯದ ಬಗ್ಗೆ ಚಿಂತೆ, ವಾಹನದಿಂದ ತೊಂದರೆ, ತಾಯಿಗೆ ಅನಾರೋಗ್ಯ, ಪಿತ್ತ-ಉಷ್ಣ ಬಾಧೆ.

ಮಕರರಾಶಿ
ಆಕಸ್ಮಿಕ ದೂರ ಪ್ರಯಾಣ, ಆರೋಗ್ಯ ವ್ಯತ್ಯಾಸದಿಂದ ವಿಶ್ರಾಂತಿ, ರಾಜಕೀಯ ವ್ಯಕ್ತಿಗಳು ರಾಜಕೀಯದಿಂದ ನಿವೃತ್ತಿಯಾಗಲಿದ್ದಾರೆ. ನೌಕರ ವರ್ಗದವರಿಗೆ ಆತಂಕದ ವಾತಾವರಣ ವಿರುತ್ತದೆ. ಕಠಿಣ ಪರಿಶ್ರಮದಿಂದ ಮುಂದುವರಿದ್ದಲ್ಲಿ ಯಶಸ್ಸು ನಿಮ್ಮದಾದೀತು. ದೇಹಾರೋಗ್ಯದಲ್ಲಿ ಜಾಗ್ರತೆ. ಪ್ರಯಾಣದಲ್ಲಿ ಎಚ್ಚರಿಕೆ, ಅಪಘಾತ ಸಾಧ್ಯತೆ, ಬಂಧುಗಳಿಂದ ತೊಂದರೆ, ಕಾರಣವಿಲ್ಲದೇ ಜಗಳವಾಗುವುದು.

ಕುಂಭರಾಶಿ
ಸಂಗಾತಿಯಿಂದ ಧನಾಗಮನ, ಪಾಲುದಾರಿಕೆಯಲ್ಲಿ ಅನುಕೂಲ, ತಾಯಿಯೊಂದಿಗೆ ಮನಃಸ್ತಾಪ, ಕೆಲಸ ಕಾರ್ಯಗಳಲ್ಲಿ ಜಯ, ವೃತ್ತಿರಂಗದಲ್ಲಿ ಮನಸ್ಸಿಗೆ ನೆಮ್ಮದಿ ಇರದು. ವ್ಯಾಪಾರ, ವ್ಯವಹಾರಗಳನ್ನು ಬಹು ಎಚ್ಚರದಿಂದ ಮುನ್ನಡೆಸಬೇಕಾಗುತ್ತದೆ. ಪ್ರಯಾಣದಲ್ಲಿ ಅಡಚಣೆಗಳು ಕಂಡು ಬಂದಾವು. ಸ್ತ್ರೀಯರಿಗೆ ಆರೋಗ್ಯದಲ್ಲಿ ಏರುಪೇರು ತಂದೀತು. ರಾಜಕಾರಣಿಗಳಿಂದ ಸಹಕಾರ, ಅಧಿಕಾರಿಗಳಿಂದ ಅನುಕೂಲ.

ಮೀನರಾಶಿ
ಮಹಿಳೆಯರಿಗೆ ಕುಟುಂಬ ಸುಖವಿದೆ. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಅಗತ್ಯವಿದೆ. ವ್ಯಾಪಾರಿವರ್ಗಕ್ಕೆ ತುಸು ಸಮಾಧಾನ ಸಿಗಲಿದೆ. ಕೋರ್ಟುಕಚೇರಿ ವ್ಯವಹಾರಗಳು ಮುಂದುವರಿಯಲಿವೆ. ಸಂಚಾರದಲ್ಲಿ ಜಾಗ್ರತೆ.ಅಧಿಕ ಉಷ್ಣ ಬಾಧೆ, ಶರೀರದಲ್ಲಿ ನೋವು, ಶತ್ರುಗಳಿಂದ ಮಾನಸಿಕ ಹಿಂಸೆ, ಉದ್ಯೋಗ ಸ್ಥಳದಲ್ಲಿ ಒತ್ತಡ, ತಂದೆಯ ಬಂಧುಗಳಿಂದ ಬೇಸರ, ಮಕ್ಕಳೇ ಬುದ್ಧಿಮಾತು ಹೇಳುವರು.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular