ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ : 17-04-2020

ನಿತ್ಯಭವಿಷ್ಯ : 17-04-2020

- Advertisement -

ಮೇಷರಾಶಿ
ಸ್ವಂತ ಉದ್ಯಮದಲ್ಲಿ ನೆಮ್ಮದಿ, ವಾಹನ-ಭೂಮಿ ಖರೀದಿಗೆ ಮನಸ್ಸು, ಚಿಂತಿತ ಕೆಲಸ ಕಾರ್ಯಗಳು ತಕ್ಕಮಟ್ಟಿಗೆ ನೆರವೇರಲಿವೆ. ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶಗಳಿಗೆ ಕಾಯುವಂತಾದೀತು. ಸಂಚಾರದಲ್ಲಿ ಜಾಗ್ರತೆ ವಹಿಸಬೇಕು. ಆಕಸ್ಮಿಕ ಉದ್ಯೋಗ ಲಭಿಸುವುದು, ಕೆಲಸ ಕಾರ್ಯಗಳಲ್ಲಿ ಮುನ್ನಡೆ.

ವೃಷಭರಾಶಿ
ಹಿರಿಯ ಸಹೋದರನಿಂದ ಲಾಭ, ಮುಖ್ಯವಾಗಿ ಆರೋಗ್ಯದ ಬಗ್ಗೆ ಗಮನಹರಿಸಬೇಕಾಗುತ್ತದೆ. ಹೆಂಡತಿಯ ಸೂಕ್ತಸಲಹೆಗಳು ನಿಮಗೆ ಉಪಯುಕ್ತವಾದೀತು. ಖರ್ಚು ವೆಚ್ಚಗಳ ಬಗ್ಗೆ ನಿಗಾ ಇರಲಿ. ಕಿರಿಯ ಸಹೋದರನಿಂದ ನಷ್ಟ, ಸಂಗಾತಿಯಿಂದ ಭಾಗ್ಯೋದಯ.

ಮಿಥುನರಾಶಿ
ನಿಮ್ಮ ಮನಸ್ಸಿನಂತೆ ಕೆಲವೊಂದು ಕೆಲಸಗಳಾಗಲಿವೆ. ವಿದ್ಯಾರ್ಥಿಗಳಿಗೆ ಶುಭ ಸಮಾಚಾರ ಸಂತಸ ತಂದೀತು. ಆಗಾಗ ಆರೋಗ್ಯ ಏರುಪೇರಾಗುತ್ತಲೇ ಹೋಗಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಅನಿರೀಕ್ಷಿತ ಅವಕಾಶ, ಶತ್ರುಗಳ ಬಾಧೆ, ಋಣ ಬಾಧೆಗಳಿಂದ ತೊಂದರೆ, ಆಯುಷ್ಯಕ್ಕೆ ಕಂಟಕವಾಗುವ ಸಾಧ್ಯತೆ.

ಕಟಕರಾಶಿ
ಪ್ರೀತಿ ಪ್ರೇಮ ವಿಚಾರದಲ್ಲಿ ಯಶಸ್ಸು, ರಾಜಕೀಯ ವರ್ಗದವರು ವಿವೇಚನೆಯಿಂದ ನಡೆಯಬೇಕಾಗುತ್ತದೆ. ಬಂಧುಮಿತ್ರರ ಸಹಕಾರ ಸಿಕ್ಕಿದ್ದರೂ ಮನೆಯಲ್ಲಿ ಧರ್ಮಪತ್ನಿಯ ಕಿರಿಕಿರಿ ಆಗಾಗ ತಪ್ಪಲಾರದು. ಸಂತಾನ ಯೋಗ, ಉದ್ಯೋಗದಲ್ಲಿ ಉನ್ನತ ಮಟ್ಟಕ್ಕೇರುವಿರಿ, ಇಂದು ಶುಭ ಫಲ ಯೋಗ.

ಸಿಂಹರಾಶಿ
ಸ್ಥಿರಾಸ್ತಿಗಾಗಿ ಮಾಡಿದ ಸಾಲ ತೀರಿಸುವಿರಿ, ಮಕ್ಕಳಿಂದ ಅನಗತ್ಯ ಖರ್ಚು, ಆದಷ್ಟು ತಾಳ್ಮೆ ಸಮಾಧಾನದಿಂದ ವ್ಯವಹರಿಸ ಬೇಕಾಗುತ್ತದೆ. ಶನಿಯ ಅನುಕೂಲತೆಯಿಂದ ಆರ್ಥಿಕವಾಗಿ ಸಮಸ್ಯೆ ಇರಲಾರದು. ನಿಶ್ಚಿತವಾಗಿ ಕಾರ್ಯಸಾಧನೆ ಇದೆ. ತಂದೆ ಮಾಡಿದ ಸಾಲ ಬಾಧೆ, ಈ ದಿನ ಮಿಶ್ರ ಫಲ ಯೋಗ.

ಕನ್ಯಾರಾಶಿ
ಮಕ್ಕಳು ಬಿದ್ದು ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ, ವಿದ್ಯಾರ್ಥಿಗಳಿಗೆ ದೈವಾನುಗ್ರಹ ಪೂರಕವಾಗಲಿದೆ. ವೃತ್ತಿರಂಗದಲ್ಲಿ ಸಮಾಧಾನ ಕಂಡುಬರುತ್ತದೆ. ಅಧಿಕಾರಿಗಳು ಮುಂಭಡ್ತಿ ಪಡೆಯಲಿದ್ದಾರೆ. ದಿನಾಂತ್ಯ ಶುಭವಾರ್ತೆ. ಸ್ಥಿರಾಸ್ತಿ ವ್ಯವಹಾರದಲ್ಲಿ ಅನುಕೂಲ, ಪತ್ರ ವ್ಯವಹಾರಗಳಲ್ಲಿ ಲಾಭ, ಪಾಲುದಾರಿಕೆ ವ್ಯವಹಾರ ಅಭಿವೃದ್ಧಿಗೊಳಿಸುವ ಚಿಂತೆ, ಜೂಜು-ರೇಸ್, ದುಶ್ಚಟಗಳಿಂದ ಸಂಕಷ್ಟಕ್ಕೆ ಸಿಲುಕುವಿರಿ.

ತುಲಾರಾಶಿ
ಉದ್ಯೋಗ ಸ್ಥಳದಲ್ಲಿ ಹಣಕಾಸು ನೆರವು, ವಕೀಲರಿಗೆ ಅನುಕೂಲ, ದಲ್ಲಾಳಿಗಳಿಗೆ ಧನ ಲಾಭ, ವ್ಯಾಪಾರ ವ್ಯವಹಾರಗಳಲ್ಲಿ ಅಭಿವೃದ್ಧಿಕಂಡುಬರಲಿದೆ. ವೃತ್ತಿರಂಗದಲ್ಲಿ ನಿಮ್ಮ ನಿರೀಕ್ಷೆ ಪರಿ ಪೂರ್ಣವಾಗಲಿದೆ.ಆರ್ಥಿಕವಾಗಿ ಖರ್ಚು ವೆಚ್ಚಗಳಲ್ಲಿ ಮಿತಿ ಇರಬೇಕು. ಪತ್ರ ವ್ಯವಹಾರದಲ್ಲಿ ಉತ್ತಮ, ಕುಟುಂಬದಲ್ಲಿ ಸಂಕಷ್ಟ ನಿವಾರಣೆಯಾಗುವ ಸಾಧ್ಯತೆ.

ವೃಶ್ಚಿಕರಾಶಿ
ನೆರೆಹೊರೆ-ಬಂಧುಗಳಿಂದ ಸಹಕಾರ, ಆಗಾಗ ಧನಾಗಮನದಿಂದ ಕಾರ್ಯಸಾಧನೆಗೆ ಅನುಕೂಲವಾಗಲಿದೆ. ಶುಭಮಂಗಲ ಕಾರ್ಯ ಚಿಂತನೆಯು ಸದ್ಯದಲ್ಲೇ ಕಾರ್ಯಗತವಾಗಲಿದೆ. ಕುಟುಂಬದಲ್ಲಿನ ಭಿನ್ನಾಭಿಪ್ರಾಯಕ್ಕೆ ಪ್ರತಿಕ್ರಿಯಿಸದಿರಿ. ಸ್ವಯಂಕೃತ ಅಪರಾಧಗಳಿಂದ ಸಂಕಷ್ಟ, ಸಾಲದ ಸುಳಿಗೆ ಸಿಲುಕುವಿರಿ.

ಧನಸ್ಸುರಾಶಿ
ಕುಟುಂಬದಲ್ಲಿ ಆರ್ಥಿಕ ಸಂಕಷ್ಟ, ನೀವಾಡುವ ಮಾತಿನಲ್ಲಿ ಹಿಡಿತವಿರಲಿ, ತೊಂದರೆಗೆ ಸಿಲುಕುವ ಸಾಧ್ಯತೆ, ಮುಖ್ಯವಾಗಿ ಮಾನಸಿಕ ಸಮಾಧಾನವಿರದೆ ಗೊಂದಲಗಳು ಕಂಡುಬಂದಾವು. ನಿರುದ್ಯೋಗಿಗಳಿಗೆಆದಷ್ಟು ಬೇಗ ಉದ್ಯೋಗ ಲಾಭವಿದೆ. ನಿಮ್ಮ ಸಮಸ್ಯೆಗಳಿಗೆ ನಿಮ್ಮ ಸ್ವಬುದ್ಧಿಯನ್ನೇ ಅವಲಂಬಿಸಬೇಕಾದೀತು. ವಾಹನ ಚಾಲನೆಯಲ್ಲಿ ಎಚ್ಚರಿಕೆ, ಅಪಘಾತವಾಗುವ ಸಾಧ್ಯತೆ, ಗಂಡು ಮಕ್ಕಳಿಂದ ಹಣಕಾಸು ಸಹಾಯ.

ಮಕರರಾಶಿ
ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಉತ್ತಮ ಲಾಭ, ಸಂಗಾತಿಯಿಂದ ಆಸ್ತಿ ಒಲಿಯುವುದು, ಮುಖ್ಯವಾಗಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಿರಿ. ಕೆಲಸ ಕಾರ್ಯಗಳು ಅಡ್ಡಿ ಆತಂಕ ದಿಂದಲೇ ನಡೆಯಲಿವೆ. ಅತಿಯಾದ ಮಾನಸಿಕ ಒತ್ತಡಗಳು ಕಾರ್ಯಸಾಧನೆಗೆ ಅಡ್ಡಿಯಾಗಲಿವೆ. ಆರೋಗ್ಯದಲ್ಲಿ ಜಾಗ್ರತೆ. ಪೆಟ್ರೋಲ್ ಬಂಕ್‍ನವರಿಗೆ ಅನುಕೂಲ, ವ್ಯಾಪಾರ-ಕಟ್ಟಡ ಕೆಲಸಗಾರರಿಗೆ ಲಾಭ.

ಕುಂಭರಾಶಿ
ಉದ್ಯೋಗಕ್ಕಾಗಿ ಸಾಲ ಮಾಡಿಕೊಳ್ಳುವಿರಿ, ಮಾನಸಿಕ ಒತ್ತಡ, ದೊರೆತ ಕಾರ್ಯದಲ್ಲೇ ನೆಮ್ಮದಿ ಇರಲಿ. ವೈವಾಹಿಕ ಸಂಬಂಧಗಳು ಹೊಂದಾಣಿಕೆಯಿಂದ ಕಂಕಣಬಲಕ್ಕೆ ಪೂರಕವಾದೀತು. ಹಿರಿಯರ ತಪ್ಪು ತಿಳಿವಳಿಕೆಯು ಆತಂಕಕ್ಕೆ ಕಾರಣವಾಗಲಿದೆ. ಸಾಲಬಾಧೆಗಳಿಂದ ನಿದ್ರಾಭಂಗ, ಗೃಹ ಬದಲಾವಣೆಯಿಂದ ತೊಂದರೆಗೆ ಸಿಲುಕುವಿರಿ.

ಮೀನರಾಶಿ
ಉತ್ತಮ ಹೆಸರು ಕೀರ್ತಿ ಪ್ರತಿಷ್ಠೆ, ಸಾಂಸಾರಿಕವಾಗಿ ಕಿರಿಕಿರಿಯ ನಡವಳಿಕೆ ಮನಸ್ಸನ್ನು ನೋಯಿಸಲಿದೆ. ಶನಿಯ ಅನುಕೂಲತೆ ಆರ್ಥಿಕವಾಗಿ ಸಮಾಧಾನ ತರಲಿದೆ. ಆಗಾಗ ಸಂಚಾರಗಳು ದೇಹಾ ರೋಗ್ಯದ ಮೇಲೆ ಪರಿಣಾಮ ಬೀರದಂತೆ ಜಾಗ್ರತೆ ಮಾಡಿರಿ. ಹಣಕಾಸು ಸಮಸ್ಯೆ ಬಗೆಹರಿಯುವುದು, ಉದ್ಯೋಗದಲ್ಲಿ ಬಡ್ತಿ, ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular