ಶನಿವಾರ, ಜೂನ್ 14, 2025
Homehoroscopeನಿತ್ಯಭವಿಷ್ಯ : 30-04-2020

ನಿತ್ಯಭವಿಷ್ಯ : 30-04-2020

- Advertisement -

ಮೇಷರಾಶಿ
ಮಕ್ಕಳ ವಿದ್ಯಾಭ್ಯಾಸದ ಚಿಂತೆ, ಭವಿಷ್ಯದ ಬಗ್ಗೆ ಆಲೋಚನೆ, ನೌಕರರಿಗೆ ಅನುಕೂಲ, ದೈವಬಲವಿಲ್ಲದೆ ಆಗಾಗ ಮಾನಸಿಕ ಚಿಂತೆ, ಕುಟುಂಬದಲ್ಲಿ ಅಸಮಾಧಾನಕರವಾದ ವಾತಾವರಣ, ಆಕಸ್ಮಿಕ ಧನನಷ್ಟಗಳು ಗೋಚರಕ್ಕೆ ಬರಲಿವೆ. ವಿದ್ಯಾರ್ಥಿಗಳಿಗೆ ವಿದ್ಯೆಗೆ ಸಂಬಂಧಿಸಿದ ಪ್ರವೃತ್ತಿಯವರಿಗೆ ಯಶಸ್ಸಿದೆ. ಸರ್ಕಾರಿ ಉದ್ಯೋಗದ ಹಂಬಲ, ಉದ್ಯೋಗ ಒತ್ತಡದಿಂದ ನಿದ್ರಾಭಂಗ, ಆತ್ಮ ಸಂಕಟ, ಮನಸ್ಸಿಗೆ ಬೇಸರ, ಆಸೆ ಆಕಾಂಕ್ಷೆ ಭಾವನೆಗಳಿಗೆ ಧಕ್ಕೆ, ಅಕ್ರಮ ಸಂಪಾದನೆಗೆ ಮುಂದಾಗುವಿರಿ, ಅಧಿಕ ಉಷ್ಣ, ತಲೆನೋವು, ಪಿತ್ತಬಾಧೆ.

ವೃಷಭರಾಶಿ
ಸಾರ್ವಜನಿಕ ಸೇವಾಕಾರ್ಯಗಳಿಗೆ ಧನವ್ಯಯವಾಗಲಿದೆ. ಉದ್ಯೋಗ, ವ್ಯವಹಾರದಲ್ಲಿ ಅಭಿವೃದ್ಧಿ ತೋರಿಬಂದು ಸಂತಸ ತರಲಿದೆ. ಉದ್ಯೋಗ ನಷ್ಟವಾಗುವ ಭೀತಿ, ಆತ್ಮ ಸಂಕಟ, ಭಯ, ಗಾಬರಿ, ಸ್ಥಿರಾಸ್ತಿ ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಆರೋಗ್ಯ ಸುಧಾರಣೆಯಾಗಲಿದೆ. ಸಾಂಸಾರಿಕವಾಗಿ ಉತ್ತಮ ಕೆಲಸಗಳು ಜರಗಲಿವೆ. ಅಧಿಕಾರಿ-ರಾಜಕೀಯ ವ್ಯಕ್ತಿಗಳಿಂದ ನಷ್ಟ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಪ್ರಯಾಣಕ್ಕೆ ವಿಘ್ನಗಳಿಂದ ಬೇಸರ, ನೆರೆಹೊರೆ-ಬಂಧುಗಳಿಂದ ನೋವು.

ಮಿಥುನರಾಶಿ
ಮನೆಯಲ್ಲಿ ಸೌಕರ್ಯಗಳು ವೃದ್ಧಿಯಾಗಲಿವೆ. ದಾಂಪತ್ಯದಲ್ಲಿ ಸಾಮರಸ್ಯದ ಕೊರತೆ ಕಾಣಿಸಲಿದೆ. ವಿದ್ಯಾರ್ಥಿಗಳು ಅಲ್ಪ ಪ್ರಯತ್ನಬಲದಿಂದ ಯಶಸ್ಸನ್ನು ಗಳಿಸಲಿದ್ದಾರೆ. ನಿಮ್ಮ ವಿರೋಧಿಗಳನ್ನು ಸಮರ್ಥವಾಗಿ ಎದುರಿಸಿರಿ. ಹಣಕಾಸು ವಿಚಾರದಲ್ಲಿ ನಷ್ಟ, ಆತ್ಮೀಯರಿಂದ ಹಣ ಬೇಡಿಕೆ, ದೂರ ಪ್ರಯಾಣಕ್ಕೆ ವಿಘ್ನಗಳು, ಮಿತ್ರರಿಂದ ಸಹಕಾರ, ಪತ್ರ ವ್ಯವಹಾರಗಳಲ್ಲಿ ಹಿನ್ನಡೆ ಆರೋಗ್ಯ-ಆಯುಷ್ಯದ ಆತಂಕ, ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ, ಹಿರಿಯರಿಂದ ಧನ ಸಹಾಯ, ಗ್ಯಾಸ್ಟ್ರಿಕ್ ಸಮಸ್ಯೆ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ.

ಕಟಕರಾಶಿ
ಸ್ವಂತ ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಸರ್ಕಾರಿ ಅಧಿಕಾರಿಗಳಿಗೆ ಅನುಕೂಲ, ಸಮಸ್ಯೆಗಳು ಹಂತಹಂತವಾಗಿ ಪರಿಹಾರ ವಾಗದು. ಅನಾವಶ್ಯಕ ವಾಗಿ ವಾದ ವಿವಾದಗಳಿಂದ ಸಹನೆ ಕಳೆದುಕೊಳ್ಳುವಿರಿ. ಉದ್ಯೋಗ, ವ್ಯವಹಾರದಲ್ಲಿ ಜಯಲಾಭಾದಿಗಳಿರುತ್ತವೆ. ನಿಮ್ಮ ವ್ಯಾಪಾರ, ವ್ಯವಹಾರಗಳು ಅಭಿವೃದ್ಧಿಯಾಗಲಿವೆ. ಸಂಗಾತಿಯ ನಡವಳಿಕೆಯಿಂದ ಬೇಸರ, ಪಾಲುದಾರಿಕೆಯಲ್ಲಿ ಉತ್ತಮ ಭರವಸೆ, ತಂದೆಯಿಂದ ಧನಸಹಾಯ, ಹೇಳಿಕೆ ಮಾತಿನಿಂದ ಸಂಸಾರದಲ್ಲಿ ಅಶಾಂತಿ, ನೆಮ್ಮದಿಗೆ ಭಂಗ, ಕಾಲು ನೋವು, ಬಾಯಿ ಹುಣ್ಣು.

ಸಿಂಹರಾಶಿ
ಸ್ವಯಂಕೃತ ಅಹಂಭಾವದಿಂದ ತೊಂದರೆ, ಆರೋಗ್ಯದಲ್ಲಿ ವ್ಯತ್ಯಾಸ, ಇತರರೊಂದಿಗೆ ಅನಾವಶ್ಯಕವಾಗಿ ಕೆಲವೊಂದು ಮನಸ್ತಾಪಗಳು ಉಂಟಾಗಲಿವೆ. ಆದರೂ ವಿವಿಧ ಮೂಲಗಳಿಂದ ಧನಪ್ರಾಪ್ತಿಯಾಗಲಿದೆ. ಸಾಲಗಾರರಿಂದ ಕಿರಿಕಿರಿ, ಶತ್ರುಗಳಿಂದ ನಷ್ಟ, ಸಂಬಂಧಿಕರೇ ಶತ್ರುಗಳಾಗುವರು, ಕೆಲಸಗಾರರ ಕೊರತೆ, ಶತ್ರುಗಳ ದಮನ, ಮನೋರೋಗದಿಂದ ನಿದ್ರಾಭಂಗ. ಭೂ ಸಂಬಂಧಿ ವ್ಯವಹಾರಗಳು ಈಗ ಸುಲಭವಾಗಿ ನಡೆಯಬಹುದು. ಶುಭವಿದೆ.

ಕನ್ಯಾರಾಶಿ
ಮಕ್ಕಳಿಗಾಗಿ ಅಧಿಕ ಖರ್ಚು, ದುಶ್ಚಟಗಳಿಂದ ತೊಂದರೆ, ಭಾವನಾತ್ಮಕ ವಿಚಾರಗಳಿಂದ ನೋವು, ಸೋಲು, ನಷ್ಟ, ನಿರಾಸೆ, ವೇದನೆ, ಸಂತಾನ ದೋಷ, ಪ್ರಗತಿಯಲ್ಲಿ ಹಿನ್ನಡೆ, ಕೆಲವೊಂದು ವ್ಯವಹಾರಗಳು ನಿರೀಕ್ಷಿತ ರೀತಿಯಲ್ಲಿ ನಡೆಯಲಾರದು. ಗೃಹಸುಖ ಹಾನಿ, ದೈಹಿಕ ಅನಾರೋಗ್ಯ ಆಗಾಗ ಕಂಡುಬರಲಿದೆ. ಹೊಸದಾದ ಕೆಲಸ ಆರಂಭಕ್ಕೆ ಹಾಗೂ ಬಂಡವಾಳ ಹೂಡುವಿಕೆಗೆ ಈ ಸಮಯ ಉತ್ತಮವಲ್ಲ. ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಸ್ನೇಹಿತರಿಂದ ಬೇಸರ, ಕೋರ್ಟ್ ಕೇಸ್‍ಗಳಲ್ಲಿ ಸಮಸ್ಯೆ.

ತುಲಾರಾಶಿ
ಆಧ್ಯಾತ್ಮಿಕ ಆಸಕ್ತಿಯಿಂದ ಸಮಾಧಾನ, ಸಂಗಾತಿ ನಡವಳಿಕೆಯಿಂದ ಕೋಪ, ಮನೆ ವಾತಾವರಣದಲ್ಲಿ ಆತಂಕ, ಉದ್ಯೋಗದ ಬಗ್ಗೆ ಕೆಲವೊಂದು ಸಮಸ್ಯೆಗಳು ತೋರಿಬಂದು ಆತಂಕಕ್ಕೆ ಕಾರಣವಾಗಬಹುದು. ಆದರೂ ಭಾಗ್ಯಸ್ಥಾನದ ಗುರುವಿನ ಕೃಪೆಯಿಂದ ಈ ಎಲ್ಲವನ್ನೂ ಸಮರ್ಥವಾಗಿ ಎದುರಿಸುವಿರಿ. ಭೂ ಸಂಬಂಧ ವ್ಯವಹಾರದಲ್ಲಿ ಜಯ. ಸ್ಥಿರಾಸ್ತಿಯಿಂದ ಅನುಕೂಲ, ಉದ್ಯೋಗದ ಚಿಂತೆ, ಸಂಪಾದನೆಯಲ್ಲಿ ಕುಂಠಿತವಾಗುವ ಆತಂಕ, ದೈವ ಶಾಪ, ತಂತ್ರದ ಭೀತಿ, ಹಣಕಾಸು ವಿಚಾರದಲ್ಲಿ ಯೋಚನೆ.

ವೃಶ್ಚಿಕರಾಶಿ
ಕಾರ್ಯ ನಿಮಿತ್ತ ಪ್ರಯಾಣದ ಚಿಂತೆ, ಉದ್ಯೋಗ ಬದಲಾವಣೆಯ ಆಲೋಚನೆ, ಹಿರಿಯರಿಂದ ಬೈಗುಳ, ಉಷ್ಣ, ಕಿವಿ ನೋವು, ಬೆನ್ನು ಸೆಳೆತ, ಸೇವಾವೃತ್ತಿಯ ಉದ್ಯೋಗಸ್ಥರಿಗೆ ಅಲ್ಪ ಲಾಭ, ನಿಮ್ಮಲ್ಲಿ ಆಂತರಿಕ ಧೈರ್ಯ ಹಾಗೂ ಪ್ರಚೋದನೆಗಳು ಉತ್ಪನ್ನವಾಗಲಿವೆ. ಎಲ್ಲಾ ಕಾರ್ಯಗಳಲ್ಲಿ ಉತ್ಸಾಹ ದಿಂದ ಪಾಲ್ಗೊಳ್ಳುವಿರಿ. ಆರ್ಥಿಕ ಅಡಚಣೆಗಳು ಆಗಾಗ ಕಂಡುಬಂದು ಕಾರ್ಯಾನುಕೂಲಕ್ಕೆ ಅಡ್ಡಿಯಾಗಲಿವೆ. ಆತ್ಮವಿಶ್ವಾಸದಿಂದ ಗೆಲ್ಲುವ ಭರವಸೆ, ಸಂಬಂಧಗಳಲ್ಲಿ ಬಿರುಕು.

ಧನಸ್ಸುರಾಶಿ
ತಂದೆ, ಬಂಧುಗಳಿಂದ ಧನ ಸಹಾಯ, ಮಕ್ಕಳಲ್ಲಿ ಗೆಲ್ಲುವ ಉತ್ಸಾಹ, ಹಿಂದಿನ ಕಷ್ಟ ನಷ್ಟಗಳ ನೆನಪು, ಕೆಲವೊಂದು ವಿಚಾರದಲ್ಲಿ ವಿಘ್ನಗಳ ಹೊರತಾಗಿಯೂ ಕಾರ್ಯಸಿದ್ಧಿ ಇದೆ. ವಿವಿಧ ಮೂಲ ಗಳಿಂದ ಧನಪ್ರಾಪ್ತಿ. ಸಾಂಸಾರಿಕವಾಗಿ ಸಂತೃಪ್ತಿದಾಯಕ ವಾತಾವರಣ ಗೋಚರಕ್ಕೆ ಬಂದರೂ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ಮಾಡಿರಿ. ಪ್ರೀತಿ ಪ್ರೇಮ ವಿಚಾರದಲ್ಲಿ ಯಶಸ್ಸು, ಆಹಾರ ಸೇವನೆಯಲ್ಲಿ ವ್ಯತ್ಯಾಸ, ಪೆಟ್ಟಾಗುವ ಸಾಧ್ಯತೆ ಎಚ್ಚರ, ಉದ್ಯೋಗ ಬಡ್ತಿಗಾಗಿ ಪ್ರಯತ್ನ.

ಮಕರರಾಶಿ
ಸ್ವಯಂಕೃತ ಅಪರಾಧಗಳಿಂದ ಸಂಕಷ್ಟ, ಆರೋಗ್ಯ ಸಮಸ್ಯೆ, ವ್ಯಾಪಾರ ವ್ಯವಹಾರದಲ್ಲಿ ಏರುಪೇರು, ಸಂಶಯಗಳು ಸುಳಿದಾಟ, ವಾಹನ ಚಾಲನೆಯಿಂದ ತೊಂದರೆ, ನೀವು ಗ್ರಹಿಸಿದ ಕಾರ್ಯಗಳನ್ನು ಪ್ರಯತ್ನ  ಬಲ ದಿಂದ ಮುಂದುವರಿಸಿದಲ್ಲಿ ಅನುಕೂಲ ಉಂಟಾಗಲಿದೆ. ಆರ್ಥಿಕವಾಗಿ ಕೆಲವು ಅನುಕೂಲ ಅಭಿವೃದ್ಧಿಯು ಗೋಚರಕ್ಕೆ ಬರಲಿದೆ. ಆದರೂ ಹೆಚ್ಚಿನ ಜಾಗ್ರತೆ ವಹಿಸಿರಿ. ಆತ್ಮ ಸಂಕಟ, ಮಾನಸಿಕ ವ್ಯಥೆ, ಗೌರವ, ಕೀರ್ತಿ ಪ್ರತಿಷ್ಠೆಗೆ ಧಕ್ಕೆ.

ಕುಂಭರಾಶಿ
ದೂರದ ವ್ಯಕ್ತಿಗಳಿಂದ ಉದ್ಯೋಗ ಭರವಸೆ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಸರ್ಕಾರಿ ಕಾರ್ಯ ನಿಮಿತ್ತ ಪ್ರಯಾಣ, ಉದ್ಯೋಗದಲ್ಲಿ ಒತ್ತಡ ನಿದ್ರಾಭಂಗ, ಮೇಲಾಧಿಕಾರಿಗಳಿಗಾಗಿ ಖರ್ಚು, ಸಂತಾನ ಸಂಬಂಧ ದುಃಖ ಎದುರಾದೀತು. ತಾಳ್ಮೆ, ಸಮಾಧಾನದಿಂದ, ಸ್ವಸಾಮರ್ಥ್ಯದಲ್ಲಿ ಭರವಸೆ ಇಡಿರಿ. ಸದ್ಯದಲ್ಲೇ ಶುಭಮಂಗಲ ಕಾರ್ಯಗಳು ನಡೆಯಲಿವೆ. ಆರೋಗ್ಯದಲ್ಲಿ ಸುಧಾರಣೆ ಇದ್ದರೂ ಉದಾಸೀನತೆ ಸಲ್ಲದು. ಮಕ್ಕಳ ಸಂಸಾರದಲ್ಲಿ ವ್ಯತ್ಯಾಸ, ನೊರೆಹೊರೆಯವರಿಂದ ಮೋಸ, ಅವಮಾನ.

ಮೀನರಾಶಿ
ಆರ್ಥಿಕ ಸಮಸ್ಯೆ ಬಗೆಹರಿಯುವುದು, ಸಾಲ ದೊರೆಯುವ ಭರವಸೆ, ಕೆಲಸ ಕಾರ್ಯಗಳು ಅನಿರೀಕ್ಷಿತ ರೂಪದಲ್ಲಿ ನಡೆಯಲಿವೆ. ವಿವಾಹಾದಿ ಶುಭಮಂಗಲ ಕಾರ್ಯ ಗಳಲ್ಲಿ ಅಡಚಣೆಗಳು ಕಂಡುಬಂದಾವು. ವೈಯಕ್ತಿಕವಾಗಿ ಸ್ವಭಾವ ದಲ್ಲಿ ಪರಿವರ್ತನೆಯು ಕಂಡುಬರಲಿದೆ. ತುಸು ವ್ಯತ್ಯಾಸವಾದೀತು. ನೀವಾಡಿದ ಮಾತಿನಿಂದ ಸಮಸ್ಯೆ, ಪೂರ್ವಿಕರಿಂದ ಶುಭ ಫಲ ಯೋಗ, ಉದ್ಯೋಗದಲ್ಲಿ ಯಶಸ್ಸು, ಪಿತ್ತಬಾಧೆ, ಬಾಯಿ ಹುಣ್ಣು, ಕೆಲಸಗಾರರ ಕೊರತೆ ನಿವಾರಣೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular