ಮಂಗಳವಾರ, ಏಪ್ರಿಲ್ 29, 2025
Homehoroscopeನಿತ್ಯಭವಿಷ್ಯ : 12-06-2020

ನಿತ್ಯಭವಿಷ್ಯ : 12-06-2020

- Advertisement -

ಮೇಷರಾಶಿ
ಉದ್ಯೋಗ, ಗೃಹಕೃತ್ಯಗಳಲ್ಲಿ ತೊಂದರೆ ಕಂಡು ಬಂದರೂ ಲಾಭಸ್ಥಾನದ ರಾಹು ಲಾಭದಾಯಕನಾದಾನು. ಸ್ಥಿರಾಸ್ತಿ-ವಾಹನದಿಂದ ಲಾಭ, ಪಿತ್ರಾರ್ಜಿತ ಆಸ್ತಿ ತಗಾದೆ ನಿವಾರಣೆ, ತಾಯಿ ಕಡೆಯಿಂದ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಮನಸ್ಸಿನಲ್ಲಿ ಗೊಂದಲ – ಆತಂಕ, ದೈವ ಕಾರ್ಯ – ಪ್ರಯಾಣಕ್ಕೆ ಅಡೆತಡೆ, ದಾನ ಧರ್ಮ ಕಾರ್ಯಕ್ಕೆ ಖರ್ಚು. ಕುಜನು ಅನುಕೂಲನಾಗಿದ್ದು ಪರಿಹಾರ ದೊರೆತು ಉದ್ದೇಶಿತ ಕಾರ್ಯವು ನೆರವೇರಿ ಸಮಾಧಾನವಾದೀತು.

ವೃಷಭರಾಶಿ
ಆರ್ಥಿಕವಾಗಿ ಆಗಾಗ ಸಮಸ್ಯೆಗಳು ಕಂಡು ಬರಲಿವೆ. ಉದ್ಯೋಗಿಗಳಿಗೆ ಪರಸ್ಥಳವಾಸದ ಸಂಚಾರವಿದೆ. ಆರ್ಥಿಕ ಸಂಕಷ್ಟಗಳು ಕಡಿಮೆಯಾಗಲಿವೆ. ಸುಳ್ಳು ಆಪಾದನೆಗೆ ಗುರಿಯಾಗುವ ಸಂದರ್ಭವು ಇರುತ್ತದೆ. ವಾಹನ ಚಾಲನೆಯಲ್ಲಿ ಎಚ್ಚರಿಕೆ, ವಿಪರೀತ ಧೈರ್ಯ, ಸಾಹಸ-ಆತುರದ ಮನಸ್ಥಿತಿ, ಉದ್ಯೋಗ ಬದಲಾವಣೆಯ ಆಲೋಚನೆ, ಸ್ನೇಹಿತರಿಂದ ಅನುಕೂಲ, ಶುಭ ಕಾರ್ಯಗಳಲ್ಲಿ ಪ್ರಗತಿ, ಹಣಕಾಸು ವಿಚಾರವಾಗಿ ಕಲಹ.

ಮಿಥುನರಾಶಿ
ವಾಹನ ಸಂಚಾರ, ಬೆಂಕಿ ವಿಚಾರದಲ್ಲಿ ಜಾಗ್ರತೆ ವಹಿಸಿರಿ.ಮಾತಿನಿಂದ ವಿವಾಹಗಳು ಹುಟ್ಟು ಹಾಕಲಿವೆ.ಆರೋಗ್ಯದಲ್ಲಿ ಸುಧಾರಣೆ ಇದೆ. ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ. ನೀವಾಡುವ ಮಾತಿನಿಂದ ತೊಂದರೆ, ಕುಟುಂಬಸ್ಥರಿಂದಲೇ ನೋವು, ಆರ್ಥಿಕ ಸಂಕಷ್ಟಗಳು, ಸಾಲದ ಸಹಾಯ ಲಭಿಸುವುದು, ಪ್ರಯಾಣ ಯೋಗ, ಚಿನ್ನಾಭರಣ ಕಳವು ಸಾಧ್ಯತೆ, ಅಲರ್ಜಿ,ಅಜೀರ್ಣ ಸಮಸ್ಯೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಶುಭವಿದೆ.

ಕಟಕರಾಶಿ
ಇಷ್ಟ ಜನರ ಆಗಮನವು ಸಂತಸ ತರಲಿದೆ. ಗುರುಬಲದಿಂದ ಅಶುಭ ಫ‌ಲಗಳಿಗೆ ಸ್ವಲ್ಪ ಮಟ್ಟಿಗೆ ತಡೆಯಾಗಲಿದೆ. ಸ್ವಂತ ಉದ್ಯಮದಲ್ಲಿ ನಷ್ಟ, ವ್ಯಾಪಾರ ವ್ಯವಹಾರದಲ್ಲಿ ತೊಂದರೆ, ಮಕ್ಕಳಿಂದ ಅನುಕೂಲ, ಮಕ್ಕಳಿಗಾಗಿ ಅಧಿಕ ಖರ್ಚು, ಗ್ಯಾಸ್ಟ್ರಿಕ್,ದೃಷ್ಠಿ ದೋಷ, ದೈಹಿಕ ನೋವು, ಸಾಲ ಬಾಧೆ, ನಿದ್ರಾಭಂಗ, ಪಿತ್ರಾರ್ಜಿತ ಆಸ್ತಿ ನಷ್ಟದ ಭೀತಿ.
ಒಮ್ಮೊಮ್ಮೆ ಸ್ಫೂರ್ತಿದಾಯಕ ಆರಾಮ ಜೀವನ ಸಂತಸ ತರಲಿದೆ. ಹೊಟ್ಟೆಯಲ್ಲಿ ಸಮಸ್ಯೆ ಬರುವುದು.

ಸಿಂಹರಾಶಿ
ವೃತ್ತಿರಂಗದಲ್ಲಿ ಅಧಿಕಾರಿ ಜನರಿಂದ ಕಾರ್ಯ ಸಾಧನೆಯಾಗಲಿದೆ. ಸ್ಥಿರಾಸ್ತಿ ವಾಹನಕ್ಕಾಗಿ ಅಧಿಕ ಖರ್ಚು, ಮಾತೃವಿನಿಂದ ಲಾಭ, ಸಂಗಾತಿಯಿಂದ ಅನುಕೂಲ, ಪಾಲುದಾರಿಕೆಯಲ್ಲಿ ನಷ್ಟ, ಆರ್ಥಿಕ ಸಂಕಷ್ಟ, ನಷ್ಟ, ನಿರಾಸೆಗಳಿಂದ ವ್ಯಥೆ, ಅತೀ ಒಳ್ಳೆಯತನದಿಂದ ತೊಂದರೆ, ಸಾಲ ಮರುಪಾವತಿಗೆ ಹಿನ್ನಡೆ. ಸ್ತಿರಾಸ್ಥಿ ವಿಚಾರದಲ್ಲಿ ಸಮಸ್ಯೆಗಳಿರುತ್ತದೆ.ಬಂಧು ಬಳಗದವರ ಕಿರಿಕಿರಿ ಇದ್ದರೂ ಹಂತ ಹಂತವಾಗಿ ಕಡಿಮೆಯಾಗಿ ಸಮಾಧಾನವಾದೀತು.

ಕನ್ಯಾರಾಶಿ
ಮನಸ್ಸಿನಲ್ಲಿದ್ದ ಕೆಲಸಕಾರ್ಯಗಳು ಚಾಲನೆಗೆ ಬರಲಿದೆ. ವ್ಯಾಪಾರ-ಉದ್ಯೋಗಕ್ಕಾಗಿ ತಿರುಗಾಟ, ಸ್ಥಿರಾಸ್ತಿಯ ಪತ್ರ ವ್ಯವಹಾರಗಳಲ್ಲಿ ತೊಡಗುವಿರಿ, ಶುಭ ಕಾರ್ಯ ಯೋಗ, ಅದೃಷ್ಟ ಒಲಿಯುವುದು, ಸ್ನೇಹಿತರು-ನಂಬಿಕಸ್ಥರಿಂದ ಮೋಸ, ತೀರ್ಥಕ್ಷೇತ್ರ ದರ್ಶನ, ದಾಯಾದಿಗಳ ಕಲಹ, ಸಹೋದರಿಯಿಂದ ಸಮಸ್ಯೆ, ಇಲ್ಲ ಸಲ್ಲದ ಅಪವಾದ. ಗೃಹದಲ್ಲಿ ಶುಭಮಂಗಲ ಕಾರ್ಯದ ಚಿಂತನೆ ಇರುತ್ತದೆ. ವಿರೋಧಿಗಳನ್ನು ಸಮರ್ಥವಾಗಿ ಎದುರಿಸಬಹುದಾಗಿದೆ. ಆರೋಗ್ಯದಲ್ಲಿ ಜಾಗ್ರತೆ ಇರಲಿ.

ತುಲಾರಾಶಿ
ಶಾರೀರಿಕ ತೊಂದರೆಗಳು ಆಗಾಗ ಕಂಡು ಬಂದಾವು. ಉದ್ಯೋಗ ಬದಲಾಯಿಸುವ ಪರಿಸ್ಥಿತಿ, ಆರ್ಥಿಕ ಅನುಕೂಲ, ಸಾಲದ ಸಮಸ್ಯೆ ಬಗೆಹರಿಯುವುದು, ಬಂಧುಗಳ ಆಗಮನ, ನೆರೆಹೊರೆಯವರಿಂದ ಧನ ಸಹಾಯ, ನೀವಾಡುವ ಮಾತುಗಳಿಂದ ವೈಮನಸ್ಸು, ಶತ್ರುತ್ವ ಹೆಚ್ಚಾಗುವುದು, ಉದ್ಯೋಗ ಸ್ಥಳದಲ್ಲಿ ನಷ್ಟ, ಗ್ಯಾಸ್ಟ್ರಿಕ್, ಅಜೀರ್ಣ ಸಮಸ್ಯೆ, ನೀರಿನ ವ್ಯತ್ಯಾಸದಿಂದ ಅನಾರೋಗ್ಯ. ದಾಂಪತ್ಯ ಭಿನ್ನಾಭಿಪ್ರಾಯದಿಂದ ವಿರಸುವ ಮೂಡಲಿದೆ. ಶತ್ರುಕೃತ ದೋಷದಿಂದ ಸಮಸ್ಯೆಗಳಿರುತ್ತದೆ. ಸಾಂಸಾರಿಕವಾಗಿ ಉತ್ತಮ ಕೆಲಸ ನಡೆಯಲಿವೆ.

ವೃಶ್ಚಿಕರಾಶಿ
ದೈವಾನುಗ್ರಹವು ಉತ್ತಮವಿದ್ದು ಶಾರೀರಕವಾಗಿ, ವ್ಯವಹಾರಿಕವಾಗಿಯೂ ವಿಶೇಷ ಆರೋಗ್ಯ ಸೌಲಭ್ಯ ಹೊಂದುವಿರಿ. ಒಡ ಹುಟ್ಟವರಿಗೆ ಕೆಲವೊಂದು ತೊಂದರೆಗಳು ಅನುಭವಕ್ಕೆ ಬರಲಿವೆ. ಸಂಚಾರದಲ್ಲಿ ಜಾಗ್ರತೆ. ಸ್ವಂತ ಉದ್ಯಮದಲ್ಲಿ ಪ್ರಗತಿ, ವ್ಯಾಪಾರ-ವ್ಯವಹಾರದಲ್ಲಿ ಬೆಳವಣಿಗೆ, ಮಕ್ಕಳಿಂದ ನೋವು, ಭವಿಷ್ಯದ ಬಗ್ಗೆ ಚಿಂತನೆ, ಮಾನಸಿಕ ಗೊಂದಲ, ತಂದೆಯಿಂದ ಧನ ಸಹಾಯ, ಸ್ಥಿರಾಸ್ತಿ-ವಾಹನದ ಮೇಲೆ ಹೂಡಿಕೆ, ಅದೃಷ್ಟ ಕೈ ತಪ್ಪುವುದೆಂಬ ಆತಂಕ, ಪ್ರಶಾಂತವಾದ ಭಾವನೆಗಳು ಕೆರಳುವುದು.

ಧನುರಾಶಿ
ವೃತ್ತಿ,ಉದ್ಯೋಗದಲ್ಲಿ ಸ್ಪರ್ಧೆ, ಬದಲಾವಣೆಗಳು ಕಂಡು ಬರಲಿದೆ. ವಾಸಸ್ಥಳ ಬದಲಾವಣೆಯ ಸಾಧ್ಯತೆ ಇದೆ. ಸ್ಥಿರಾಸ್ತಿಯಿಂದ ಯೋಗ, ಮಾತೃವಿನಿಂದ ಅದೃಷ್ಟ, ಸ್ಥಿರಾಸ್ತಿ ಮಾರಾಟಕ್ಕೆ ಸೂಚನೆ, ವಾಹನಗಳಿಂದ ಅಧಿಕ ಖರ್ಚು, ದಾಂಪತ್ಯದಲ್ಲಿ ವೈರತ್ವ ಹೆಚ್ಚಾಗುವುದು, ಕೌಟುಂಬಿಕ ಕಲಹಗಳಿಂದ ನಿದ್ರಾಭಂಗ, ಅನಿರೀಕ್ಷಿತ ಸೋಲು, ನಷ್ಟ, ನಿರಾಸೆ, ಅಧಿಕವಾದ ಚಿಂತೆ ಶುರುವಾಗುವುದು. ಆಗಾಗ ಧನವ್ಯಯ ಉಂಟಾಗಲಿದೆ. ವಿರೋಧಿಗಳನ್ನು ಸಮರ್ಥವಾಗಿ ಎದುರಿಸಬೇಕಾದೀತು.

ಮಕರರಾಶಿ
ವ್ಯಾಪಾರಿಗಳಿಗೆ ತೆರಿಗೆ ಅಧಿಕಾರಿಗಳಿಂದ ಕಿರುಕುಳ ತಂದೀತು. ಅಪೇಕ್ಷಿತ ಜನ ಸಹಾಯದಿಂದ ಕಾರ್ಯಸಾಧನೆಯಾಗಲಿದೆ. ಸಂಗಾತಿಯಿಂದ ಧನಾಗಮನ ನಿರೀಕ್ಷೆ, ನೆರೆಹೊರೆ-ಬಂಧುಗಳಿಂದ ಅನುಕೂಲ, ಆರೋಗ್ಯದಲ್ಲಿ ವ್ಯತ್ಯಾಸ, ಪಾಲುದಾರಿಕೆಯಲ್ಲಿ ಲಾಭ, ಸಾಲ ತೀರಿಸುವ ಯೋಗ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ಜನ್ಮ ಸ್ಥಳದಿಂದ ದೂರ ಉಳಿಯುವ ಆಲೋಚನೆ. ಸಾಮಾಜಿಕ ಕ್ಷೇತ್ರದಲ್ಲಿ ಆತ್ಮ, ಗೌರವವೃದ್ದಿ,ಕಾರ್ಯಸಿದ್ಧಿ ಆರ್ಥಿಕಾಭಿವೃದ್ಧಿ ಪ್ರಾಪ್ತಿ.

ಕುಂಭರಾಶಿ
ಆಗಾಗ ಕಾರ್ಯವೈಫ‌ಲ್ಯ, ಬಂಧುಮಿತ್ರ ರೊಡನೆ ವಿರೋಧ, ಬದ್ದಿ ಅಸ್ಥಿರತೆ ಇತ್ಯಾದಿಗಳು ಎದುರಾಗಾಲಿವೆ. ಸಂಚಾರದಲ್ಲಿ ದುಃಖವಿದೆ. ಧಾತು, ದ್ರವ್ಯಗಳ ವ್ಯವಹಾರದಲ್ಲಿ ಲಾಭ ತಂದೀತು. ಆರೋಗ್ಯದ ಕಡೆ ಗಮನವಿರಲಿ. ಸಾಲ ದೊರೆಯುವ ಸಾಧ್ಯತೆ, ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗದಲ್ಲಿ ಪ್ರಗತಿ, ಆಕಸ್ಮಿಕ ಧನಾಗಮನ, ನೀರಿನ ಪ್ರದೇಶಗಳಲ್ಲಿ ಎಚ್ಚರ, ಬಡ್ತಿ ವಿಚಾರದಲ್ಲಿ ಪ್ರಗತಿ, ಶುಭ ಹಾರೈಕೆ, ಪ್ರಶಂಸೆ ಲಭಿಸುವುದು.

ಮೀನರಾಶಿ
ಇತರರಿಂದ ಅನಾವಶ್ಯಕ ತಪ್ಪು ಅಭಿಪ್ರಾಯ ಹೊಂದುವಿರಿ. ಮಕ್ಕಳ ಜೀವನದಲ್ಲಿ ಪ್ರಗತಿ, ಅಹಂಭಾವ ಹೆಚ್ಚಾಗುವುದು, ಸ್ವಂತ ಉದ್ಯಮದಲ್ಲಿ ಅನುಕೂಲ, ವ್ಯಾಪಾರ – ವ್ಯವಹಾರದಲ್ಲಿ ಪ್ರಗತಿ, ದೇವರು-ಗುರುಗಳ ಅನುಗ್ರಹದಿಂದ ಲಾಭ, ಉದ್ಯೋಗ ನಿಮಿತ್ತ ಪ್ರಯಾಣ, ತಂದೆಯಿಂದ ಅದೃಷ್ಟದ ಯೋಗ, ಆರ್ಥಿಕ ಸಮಸ್ಯೆ ಬಗೆಹರಿಯವುದು. ಮನೆಯಲ್ಲಿ ಸುಖಶಾಂತಿ ನೆಲೆಸಲಿದೆ. ಶುಭಮಂಗಲ ಕಾರ್ಯಗಳಿಗೂ ಈ ಇದು ಸುಸಮಯ. ಆರ್ಥಿಕವಾಗಿ ಅಭಿವೃದ್ಧಿ ಹೊಂದುವಿರಿ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular