ಸೋಮವಾರ, ಜೂನ್ 16, 2025
Homehoroscopeನಿತ್ಯಭವಿಷ್ಯ : 09-05-2020

ನಿತ್ಯಭವಿಷ್ಯ : 09-05-2020

- Advertisement -

ಮೇಷರಾಶಿ
ಸಾಲಬಾಧೆ ಮುಕ್ತಿಗಾಗಿ ಅವಕಾಶ, ನೆಮ್ಮದಿಯ ವಾತಾವರಣ, ಸಾಂಸಾರಿಕ ಅಡೆತಡೆಗಳು ಭಿನ್ನಾಭಿಪ್ರಾಯ ಕಂಡುಬರುತ್ತದೆ. ಹಿರಿಯರ ಆರೋಗ್ಯದ ಬಗ್ಗೆ ಗಮನಹರಿಸಬೇಕು. ಅಗ್ನಿಭಯದ ಭೀತಿ ತಂದೀತು. ದಿನಾಂತ್ಯ ಕಿರುಸಂಚಾರವಿದೆ. ವಾಹನದಿಂದ ಪೆಟ್ಟಾಗುವ ಸಾಧ್ಯತೆ, ಶತ್ರುಗಳಿಂದ ಕುತಂತ್ರ, ಬಂಧು-ಮಿತ್ರರು ಬದಲಾವಣೆಯ ನಾಟಕವಾಡುವರು.

ವೃಷಭರಾಶಿ
ಆಕಸ್ಮಿಕ ಧಾರ್ಮಿಕ ವ್ಯಕ್ತಿಗಳಿಂದ ಅನುಕೂಲ, ಮಿತ್ರರು-ಕುಟುಂಬಸ್ಥರಿಂದ ಧನಾಗಮನ, ಉದ್ಯೋಗ ವ್ಯವಹಾರಗಳು ಆರ್ಥಿಕವಾಗಿ ಅಭಿವೃದ್ಧಿಯಿದೆ. ಜ್ಞಾನಾರ್ಜನೆಯಲ್ಲಿಯೂ ಯಶಸ್ಸು ಲಭಿಸುವುದು. ಆಗಾಗ ಅನಾವಶ್ಯಕವಾಗಿ ಚಿಂತೆಗಳು ಕಾಡಬಹುದು. ಗೌರವ, ಸನ್ಮಾನ, ಕೀರ್ತಿ ಪ್ರಾಪ್ತಿ, ಹೊಗಳಿಕೆಗೆ ಪಾತ್ರರಾಗುವಿರಿ, ಬಂಧುಗಳಲ್ಲಿ ಎಚ್ಚರಿಕೆ, ಪತ್ರ ವ್ಯವಹಾರಗಳಲ್ಲಿ ತೊಂದರೆಗೆ ಸಿಲುಕುವಿರಿ.

ಮಿಥುನರಾಶಿ
ಸ್ವಂತ ಉದ್ಯಮ ವ್ಯಾಪಾರದಲ್ಲಿ ನಷ್ಟ, ದಾಂಪತ್ಯದಲ್ಲಿ ಶುಭ ಸಂತೋಷಗಳು ಹೆಚ್ಚಲಿವೆ. ದೈವಬಲವಿಲ್ಲದಿದ್ದರೂ ಪ್ರಯತ್ನಬಲದಿಂದ ಕಾರ್ಯಸಾಧನೆಯಾಗಲಿದೆ. ಯಾವುದೇ ಕಾರ್ಯಗಳನ್ನು ಗ್ರಹಿಸಿದರೂ ಪ್ರಥಮದಲ್ಲಿ ವಿಘ್ನಗಳೇ ಕಂಡಾವು. ವ್ಯವಹಾರಗಳಲ್ಲಿ ಎಚ್ಚರಿಕೆ, ಉದ್ಯೋಗದಲ್ಲಿ ಕಿರಿಕಿರಿ, ಬಾಯಿ ಹುಣ್ಣು, ಅಧಿಕ ಉಷ್ಣ, ರೋಗ ಬಾಧೆ, ನರದೌರ್ಬಲ್ಯ, ಆರೋಗ್ಯ ವ್ಯತ್ಯಾಸ, ಸ್ಥಿರಾಸ್ತಿ ಪತ್ರ ವ್ಯವಹಾರದಲ್ಲಿ ಅನುಕೂಲ.

Alvas1

ಕಟಕರಾಶಿ
ಗೌರವಕ್ಕೆ ಧಕ್ಕೆ, ಅಪವಾದ ನಿಂದನೆ, ದುರ್ಜನರ ಸಹವಾಸದಿಂದ ಸಮಸ್ಯೆಗಳನ್ನು ಅನುಭವಿಸಬೇಕಾದೀತು. ಆಗಾಗ ಧನಹಾನಿಯಿಂದ ಆತಂಕಕ್ಕೆ ಕಾರಣವಾಗಬಹುದು. ಸಾಮಾಜಿಕವಾಗಿ ಅವಮಾನ ಪ್ರಸಂಗವನ್ನು ಅನುಭವಿಸಬೇಕಾದೀತು. ತಂದೆಯಿಂದ ವ್ಯವಹಾರದಲ್ಲಿ ಎಡವಟ್ಟು, ನಷ್ಟಗಳಿಂದ ಚಿಂತೆ ಅಧಿಕವಾಗುವುದು, ನೆರೆಹೊರೆ, ಬಂಧುಗಳು ಶತ್ರುವಾಗುವರು, ಮಕ್ಕಳಲ್ಲಿ ದ್ವೇಷ.

ಸಿಂಹರಾಶಿ
ಗೃಹದಲ್ಲಿ ಶುಭಮಂಗಲ ಕಾರ್ಯದ ಚಿಂತನೆ ನಡೆಯಲಿದೆ. ಹೊಸಗೃಹ ಯಾ ಹೊಸ ಪರಿಸರಕ್ಕೆ ಹೋಗಬೇಕಾದೀತು. ಸಮಸ್ಯೆಗಳು ಅಡಚಣೆಗಳಿದ್ದರೂ ಒಂದೊಂದಾಗಿ ನೆರವೇರುವುದು ನಿಶ್ಚಿತ. ಮಕ್ಕಳಿಗೆ ಆಕಸ್ಮಿಕ ಪೆಟ್ಟಾಗುವ ಸಾಧ್ಯತೆ, ಗೌರವ ಸನ್ಮಾನಕ್ಕೆ ಮಿತ್ರರಿಂದ ಅಡ್ಡಿ, ಸಂಕಷ್ಟಕ್ಕೆ ಸಿಲುಕುವಿರಿ, ಆರ್ಥಿಕ ಮುಗ್ಗಟ್ಟು, ವಾಹನ ಚಾಲನೆಯಲ್ಲಿ ಎಚ್ಚರ, ಅಪಘಾತವಾಗುವ ಸಾಧ್ಯತೆ.

ನ್ಯಾರಾಶಿ
ಸ್ವಯಂಕೃತ ಅಪರಾಧಗಳಿಂದ ನೆಮ್ಮದಿಗೆ ಭಂಗ, ಸಮೀಪದ ಬಂಧುಗಳಿಂದ ತೊಂದರೆಗಳು ಕಂಡುಬಂದಾವು. ಪಂಚಮದ ಶನಿಯಿಂದ ಸಾಕಷ್ಟು ತೊಂದರೆಗಳನ್ನು ಅನುಭವಿಸುವಂತಾದೀತು. ಧರ್ಮಸಮ್ಮತವಲ್ಲದ ಕೆಲಸಕಾರ್ಯದಲ್ಲಿ ಆಸಕ್ತಿ ತಂದೀತು. ದಾಂಪತ್ಯದಲ್ಲಿ ಕಿರಿಕಿರಿ, ಮಿತ್ರರೊಂದಿಗೆ ಪ್ರಯಾಣ, ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿ, ವಿವಿಧ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಲಭಿಸುವುದು.

Maks Infotech Digital1

ತುಲಾರಾಶಿ
ಹಣಕಾಸು ವಿಚಾರವಾಗಿ ಓಡಾಟ, ಉದ್ಯೋಗದಲ್ಲಿ ಸಹೋದ್ಯೋಗಿಗಳಿಂದ ಸಮಸ್ಯೆಗಳು ಉದ್ಭವಿಸುವುದು. ಬಂಡವಾಳ ಹೂಡಿಕೆ ಕಷ್ಟನಷ್ಟಗಳಿಗೆ ಕಾರಣವಾದೀತು. ದೇಹಾರೋಗ್ಯದಲ್ಲಿ ಬದಲಾವಣೆ ಕಾಣಬಹುದು. ಗೃಹ ಸುಖವಿಲ್ಲ. ಮಿತ್ರರ ಭೇಟಿ, ಗ್ಯಾಸ್ಟ್ರಿಕ್-ಅಜೀರ್ಣ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯಮ-ವ್ಯಾಪಾರ ಆರಂಭಕ್ಕೆ ಅವಕಾಶ ಲಭಿಸುವುದು.

ವೃಶ್ಚಿಕರಾಶಿ
ಉದ್ಯೋಗ ನಿಮಿತ್ತ ಪ್ರಯಾಣಕ್ಕೆ ಅಡ್ಡಿ, ಆದಾಯ ಹೆಚ್ಚಲಿದೆ. ಕೆಲವೊಂದು ಶುಭಫ‌ಲವನ್ನು ಅನುಭವಿಸುವಿರಿ. ಉದ್ಯೋಗದಲ್ಲಿರುವವರಿಗೆ ಮೇಲಧಿಕಾರಿಗಳಿಂದ ಸಹಕಾರ ಸಿಗಲಿದೆ. ದೂರಸಂಚಾರದಲ್ಲಿ ಅಪಘಾತದ ಭೀತಿ ತಂದೀತು. ಮಕ್ಕಳಿಂದ ಕಿರಿಕಿರಿ, ಕುಟುಂಬದಲ್ಲಿ ಆಕಸ್ಮಿಕ ದುರ್ಘಟನೆ, ಮಿತ್ರರಿಂದ ಬೇಸರ, ಜಿಗುಪ್ಸೆ, ನೆಮ್ಮದಿ ಇಲ್ಲದ ಜೀವನ, ಅನಗತ್ಯ ಯೋಚನೆಗಳಿಂದ ದೂರ ಉಳಿಯಿರಿ.

ಧನಸ್ಸುರಾಶಿ
ಉದ್ಯೋಗದಲ್ಲಿ ಬಡ್ತಿ, ಮಾನ ಸನ್ಮಾನ ಪ್ರಶಂಸೆ, ಉತ್ತಮ ಹೆಸರು ಕೀರ್ತಿ ಪ್ರಾಪ್ತಿ, ಅನ್ಯರಿಂದ ಸಮಸ್ಯೆಗಳು ಕಂಡುಬಂದಾವು. ಆರೋಗ್ಯದಲ್ಲಿ ಸುಧಾರಣೆ ತೋರಿಬರಲಿದೆ. ಪತಿ-ಪತ್ನಿಯರಲ್ಲಿ ಹೆಚ್ಚಿನ ಅನ್ಯೋನ್ಯತೆ ದಾಂಪತ್ಯದಲ್ಲಿ ಸಾಮರಸ್ಯವಿರುತ್ತದೆ. ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ. ಆಕಸ್ಮಿಕ ಅವಘಡ, ಮನಸ್ಸಿನಲ್ಲಿ ಆತಂಕ, ಒತ್ತಡ, ಜವಾಬ್ದಾರಿ ಹೆಚ್ಚಾಗುವುದು, ಚಿಂತೆಯಿಂದ ನಿದ್ರಾಭಂಗ.

Alvas1

ಮಕರರಾಶಿ
ಪ್ರಯಾಣದಲ್ಲಿ ಸಂಕಷ್ಟ, ನೂತನ ಕೆಲಸ ಕಾರ್ಯಗಳಲ್ಲಿ ತೊಡಗಿಸಿ ಕೊಂಡಲ್ಲಿ ಉತ್ತಮ. ಇತರರಿಂದ ಸಹಾಯ ಒದಗ ಬಹುದು. ಸಾಮಾಜಿಕವಾಗಿ ಉತ್ತಮ ಸ್ಥಾನಮಾನ ತೋರಿ ಬಂದರೂ ಕೆಲವೊಂದು ಸಮಸ್ಯೆಗಳನ್ನು ಎದುರಿಸಬೇಕಾದೀತು. ಸ್ವಯಂಕೃತ ಅಪರಾಧಗಳಿಂದ ನಷ್ಟ, ಉದ್ಯೋಗ ಬದಲಾವಣೆಯಿಂದ ತೊಂದರೆ, ನೆರೆಹೊರೆ-ಬಂಧುಗಳಿಂದ ಕಿರಿಕಿರಿ, ನಾನಾ ಆಲೋಚನೆಗಳಿಂದ ನಿದ್ರಾಭಂಗ.

ಕುಂಭರಾಶಿ
ಉದ್ಯೋಗ ಸ್ಥಳದಲ್ಲಿ ಸಹಕಾರ, ಮಿತ್ರರಿಂದ ಸಾಲದ ಸಹಾಯ ಲಭಿಸುವುದು, ಮಕ್ಕಳಿಂದ ಆರ್ಥಿಕ ಸಂಕಷ್ಟ, ಕೌಟುಂಬಿಕ ಸಮಸ್ಯೆ, ಬದುಕಿನಲ್ಲಿ ಮನೋವ್ಯಾಕುಲತೆ ತೋರಿಬರಬಹುದು. ಹಾಗೇ ಶಾರೀರಿಕ ಸಮಸ್ಯೆಗಳು ಹೆಚ್ಚಲಿವೆ. ವಾಹನಾದಿಗಳಲ್ಲಿ ಜಾಗ್ರತೆ ವಹಿಸಿರಿ. ಶನಿಯ ಅಶುಭ ಫ‌ಲಗಳು ತೋರಿಬಂದರೂ ಹೆಚ್ಚಿನ ಪ್ರಭಾವ ಬೀರಲಾರದು. ಪಾಲುದಾರಿಕೆ ವ್ಯವಹಾರದಲ್ಲಿ ಸಂತೃಪ್ತಿ,

ಮೀನರಾಶಿ
ಮಕ್ಕಳಲ್ಲಿ ಬೇಸರ, ಉತ್ತಮ ದೈವಬಲವಿದ್ದರೂ ಬಲಕ್ಕೆ ಒತ್ತು ನೀಡಬೇಕಾದೀತು. ಕೆಲವೊಂದು ಕಾರ್ಯಗಳು ಅನಿರೀಕ್ಷಿತ ರೂಪದಲ್ಲಿ ನೆರವೇರಲಿವೆ. ಯತ್ನಿಸಿದ ಕಾರ್ಯಗಳು ಉತ್ತಮ ಫ‌ಲವನ್ನು ನೀಡಲಿವೆ. ಉದ್ಯೋಗ ಸ್ಥಳದಲ್ಲಿ ಶತ್ರುಕಾಟ, ಮಾನಸಿಕ ಕಿರಿಕಿರಿ, ಆರೋಗ್ಯ ಸಮಸ್ಯೆ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ.

Bhavishya Ads
Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular