ಮಂಗಳವಾರ, ಏಪ್ರಿಲ್ 29, 2025
Homehoroscopeನಿತ್ಯಭವಿಷ್ಯ : 17-06-2020

ನಿತ್ಯಭವಿಷ್ಯ : 17-06-2020

- Advertisement -

ಮೇಷರಾಶಿ
ಸಾರ್ವಜನಿಕ ಕ್ಷೇತ್ರದಲ್ಲಿ ನಿಮ್ಮ ಶ್ರಮಕ್ಕೆ ಯಶಸ್ಸು ದೊರಕಲಿದೆ. ಪರಿಶ್ರಮಕ್ಕೆ ತಕ್ಕ ಫಲ ಲಭಿಸುವುದು, ಕಾರ್ಯ ಸಾಧನೆಗಾಗಿ ತಿರುಗಾಟ, ದೇವತಾ ಕಾರ್ಯಗಳಲ್ಲಿ ಭಾಗಿ, ಮನಸ್ಸಿನಲ್ಲಿ ಗೊಂದಲ. ಸ್ತಿರಾಸ್ಥಿ ವಿಚಾರದಲ್ಲಿ ಅಡಚಣೆಗಳು ಉಂಟಾಗುತ್ತವೆ. ವಿದ್ಯಾರ್ಥಿಗಳಿಗೆ ಉತ್ತಮ ಫ‌ಲಿತಾಂಶ ದೊರಕಲಿದೆ. ದುಷ್ಟರ ಸಂಗದಿಂದ ದೂರವಿರಿ.

ವೃಷಭರಾಶಿ
ಕೃಷಿಕರಿಗೆ ಕಾರ್ಯಕ್ಷೇತ್ರದಲ್ಲಿ ಉತ್ತಮ ಉತ್ತೇಜನ ಕಂಡು ಬಂದೀತು. ಆರ್ಥಿಕವಾಗಿ ಧನಪ್ರಾಪ್ತಿ ಇದ್ದೀತು. ಅಧಿಕಾರಿಗಳಿಂದ ಪ್ರಶಂಸೆ, ಕೋರ್ಟ್ ಕೇಸ್‍ಗಳಲ್ಲಿ ಜಯ, ಮಿತ್ರರು ಮೋಸ ಮಾಡುವ ಸಾಧ್ಯತೆ, ವ್ಯವಹಾರಗಳಲ್ಲಿ ಎಚ್ಚರ, ಅತಿಯಾಗಿ ಯಾರನ್ನೂ ನಂಬಬೇಡಿ. ಮನೆ ಹಾಗೂ ವೃತ್ತಿಯಲ್ಲಿ ಉತ್ತಮ ಅಭಿವೃದ್ಧಿ ಕಂಡು ಬರುವುದು. ಉದ್ಯೋಗಿಗಳಿಗೆ ಬದಲಾವಣೆ ಇದೆ.

ಮಿಥುನರಾಶಿ
ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ. ಅನಿರೀಕ್ಷಿತವಾಗಿ ಅಗ್ನಿಭಯ ತಂದೀತು. ಸ್ತ್ರೀಯರಿಗೆ ತಾಳ್ಮೆ ಅತ್ಯಗತ್ಯ, ಆತುರ ಸ್ವಭಾವದಿಂದ ನಷ್ಟ, ಮಕ್ಕಳಿಂದ ಶುಭ ಸುದ್ದಿ, ಕೆಲಸ ಕಾರ್ಯಗಳಲ್ಲಿ ಯಶಸ್ಸು, ಮಿಶ್ರ ಫಲ ಯೋಗ. ನೌಕರರಿಂದ ಅಡೆತಡೆಗಳು ತೋರಿ ಬಂದು ಕಾರ್ಯಸಾಧನೆಗೆ ಅಡ್ಡಿಯಾದೀತು. ಅಧಿಕಾರಿಗಳಿಗೆ ಅಭಿವೃದ್ಧಿ ಇದೆ.

ಕಟಕರಾಶಿ
ಆರ್ಥಿಕವಾಗಿ ಹೆಚ್ಚಿನ ಜಾಗ್ರತೆ ವಹಿಸಬೇಕಾಗುತ್ತದೆ. ಅಪರಿಚಿತರ ವಿಚಾರದಲ್ಲಿ ಜಾಗ್ರತೆ, ವಿದ್ಯಾರ್ಥಿಗಳಲ್ಲಿ ಗೊಂದಲ, ಕ್ರಯ-ವಿಕ್ರಯಗಳಲ್ಲಿ ಲಾಭ, ಹಣಕಾಸು ಸಮಸ್ಯೆ ಅಲ್ಪ ಚೇತರಿಕೆ, ಶುಭ ಫಲ ಯೋಗ. ದಾಂಪತ್ಯಕ್ಕೆ ಅನಾವಶ್ಯಕವಾಗಿ ಕಲಹಗಳು ಕಂಡು ಬರುತ್ತವೆ. ವಿದ್ಯಾರ್ಥಿಗಳಿಗೆ ಅತೀ ಹೆಚ್ಚಿನ ಪ್ರಯತ್ನಬಲದ ಅಗತ್ಯವು ಕಂಡು ಬರುವುದು.

ಸಿಂಹರಾಶಿ
ಸಾಂಸಾರಿಕವಾಗಿ ನೆಮ್ಮದಿಯ ದಿನಗಳಿವು. ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು ಒದಗಿ ಬರಲಿವೆ. ವಿವಿಧ ಮೂಲಗಳಿಂದ ಧನಾಗಮನ, ಹಣಕಾಸು ಪರಿಸ್ಥಿತಿ ಚೇತರಿಕೆ, ವೈರಿಗಳಿಂದ ದೂರವಿರಿ, ಮಾನಸಿಕ ನೆಮ್ಮದಿ, ಬೇಜವಾಬ್ದಾರಿಯಿಂದ ನಷ್ಟ, ಅಮೂಲ್ಯ ವಸ್ತು ಕಳೆದುಕೊಳ್ಳುವಿರಿ. ಇದರ ಸದುಪಯೋಗ ಮಾಡಿಕೊಳ್ಳಿರಿ. ಭಿನ್ನಾಭಿಪ್ರಾಯದಿಂದ ಮಾನಸಿಕ ದೃಢತೆ ಕುಂಠಿತಗೊಳ್ಳಲಿದೆ.

ಕನ್ಯಾರಾಶಿ
ವೃತ್ತಿರಂಗದಲ್ಲಿ ಭಿನ್ನಾಭಿಪ್ರಾಯ ಕಂಡು ಬರಲಿದೆ. ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ, ಕುಟುಂಬ ಸೌಖ್ಯ, ಕೃಷಿಯಲ್ಲಿ ಲಾಭ, ವಿಪರೀತ ಕೋಪ, ನಾನಾ ರೀತಿಯ ಸಂಕಷ್ಟ, ಯೋಚಿಸಿ ನಿರ್ಧಾರ ಕೈಗೊಳ್ಳಿ. ಸಾಂಸಾರಿಕವಾಗಿ ಸಂಬಂಧ ಕೆಡುಕು ಕಂಡು ಬರಲಿದೆ.ದೈಹಿಕ ಆರೋಗ್ಯದ ಬಗ್ಗೆ ಗಮನ ಹರಿಸಿರಿ. ಜನರಿಂದ ದೂರವಿರಿ.

ತುಲಾರಾಶಿ
ಕಾರ್ಯಕ್ಷೇತ್ರದ ಒತ್ತಡದಿಂದ ದೇಹಾರೋಗ್ಯದ ಮೇಲೆ ಪರಿಣಾಮ ಬೀರಲಿದೆ. ವಿಪರೀತ ಕೆಲಸ, ಒತ್ತಡದಿಂದ ವಿಶ್ರಾಂತಿ ಬಯಸುವಿರಿ, ವಸ್ತ್ರ ವ್ಯಾಪಾರಿಗಳಿಗೆ ಅಧಿಕ ಲಾಭ, ಬಡ ರೋಗಿಗಳಿಗೆ ಸಹಾಯ ಮಾಡುವಿರಿ. ಕೌಟುಂಬಿಕವಾಗಿ ಅಸಮಾಧಾನ ವಾತಾವರಣದಿಂದ ಕಿರಿಕಿರಿಯೆನಿಸಲಿದೆ. ವೃಥಾ ಮನೋಪಹಾನಿಗಳಿಗೆ ಕಾರಣರಾಗದಿರಿ.

ವೃಶ್ಚಿಕರಾಶಿ
ಹಿತೈಷಿಗಳ ಸಲಹೆಯಿಂದ ಉತ್ತಮ, ಹಣಕಾಸು ಸಮಸ್ಯೆ, ಇಲ್ಲ ಸಲ್ಲದ ಅಪವಾದ, ಗೆಳೆಯರೊಂದಿಗೆ ವೈಮನಸ್ಸು. ಕಾರ್ಯಸಾಧನೆಯಲ್ಲಿ ಸಾವಧಾನವಾಗಿ ಮುಂದುವರಿಯಲಿದ್ದೀರಿ. ವಿಶೇಷ ಸಂಚಾರದಿಂದ ಸುಖ ಹಾಗೂ ಶುಭ ತರಲಿದೆ. ಸಕಾಲಿಕ ಚಿಂತನೆಗಳು ಕಾರ್ಯರೂಪಕ್ಕೆ ಬರಲು ಅಪ್ತರ ಸಹಕಾರವು ದೊರಕಲಿವೆ.

ಧನುರಾಶಿ
ಯಂತ್ರೋಪಕರಣಗಳಿಂದ ಲಾಭ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಕೆಲಸ ಕಾರ್ಯಗಳಲ್ಲಿ ಜಯ, ನಾನಾ ವಿಚಾರಗಳಲ್ಲಿ ಆಸಕ್ತಿ.
ಆರ್ಥಿಕವಾಗಿ ಅತೀ ಹೆಚ್ಚಿನ ಜಾಗ್ರತೆ ಮಾಡುವುದು.ಹೆಚ್ಚಿನ ಹೂಡಿಕೆಗಳು ಈಗಿನ ಪರಿಸ್ಥಿತಿಯಲ್ಲಿ ಸಮಸ್ಯೆಯನ್ನು ತಂದುಕೊಟ್ಟಾವು. ಸಾಮಾಜಿಕವಾಗಿ ಜನರೊಳಗಿನ ನಡುವಳಿಕೆಯಲ್ಲಿ ಎಚ್ಚರ ವಹಿಸಿರಿ.

ಮಕರರಾಶಿ
ವ್ಯಾಪಾರ, ವ್ಯವಹಾರಗಳು ನಿರೀಕ್ಷಿತ ರೀತಿಯಲ್ಲಿ ಅಭಿವೃದ್ದಿದಾಯಕವಾಗಲಿವೆ. ದೇಹದಲ್ಲಿ ಅತಿಯಾದ ಆಲಸ್ಯ, ಬಾಕಿ ಹಣ ಕೈ ಸೇರುವುದು, ಸುಖ ಭೋಜನ ಪ್ರಾಪ್ತಿ, ಷೇರು ವ್ಯವಹಾರಗಳಲ್ಲಿ ಎಚ್ಚರ, ಪರರಿಂದ ತೊಂದರೆ. ಯಾವ ವಿಷಯದಲ್ಲಿ ಯೋಚಿಸಿ,ಆಲೋಚಿಸಿ ಮುಂದುವರಿದ್ದಲ್ಲಿ ಯಶಸ್ಸು ದೊರಕಲಿದೆ.ಮನೋಕಾಮನೆಗಳು ನೆರವೇರಲಿವೆ.

ಕುಂಭರಾಶಿ
ಅನೇಕ ಪ್ರಯತ್ನಬಲಕ್ಕೆ ಅಲ್ಪ ಪರಿಣಾಮ ವಾಗದಂತೆ ಕಾಳಜಿ ವಹಿಸಬೇಕಾದೀತು. ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ, ಸ್ತ್ರೀಯರಿಗೆ ಅನುಕೂಲ, ಚೋರ ಭಯ, ಚಂಚಲ ಸ್ವಭಾವ, ಆತ್ಮೀಯರಿಂದ ನೋವು. ಕೌಟುಂಬಿಕವಾಗಿ ಆಗಾಗ ನೆರೆಹೊರೆಯವರ ಕಿರಿಕಿರಿ,ಚಾಡಿ ಮಾತುಗಳಿಂದ ತಲೆಕೆಟ್ಟು ಹೋದೀತು. ಸಾಂಸಾರಿಕವಾಗಿ ತುಸು ನೆಮ್ಮದಿ.

ಮೀನರಾಶಿ
ದೈವಾನುಗ್ರಹ ಪಡೆದ ನೀವು ಭಾಗ್ಯಶಾಲಿಗಳಾದಾರು. ವಿದ್ಯಾಭ್ಯಾಸದಲ್ಲಿ ಪ್ರಗತಿ, ಕೆಲಸ ಕಾರ್ಯಗಳಲ್ಲಿ ನಿಧಾನಗತಿ, ಕೃಷಿಯಲ್ಲಿ ಲಾಭ, ವಿದೇಶ ಪ್ರಯಾಣ, ಶತ್ರುಗಳ ಧ್ವಂಸ. ಅಹಂಭಾವ ಬಿಟ್ಟುಬಿಡಿರಿ. ಆತ್ಮ ವಿಶ್ವಾಸದಿಂದ ಮುಂದುವರಿದ್ದಲ್ಲಿ ಯಶಸ್ಸು ನಿಮಗೆ ದೊರಕಲಿದೆ. ನಿರುದ್ಯೋಗಿಗಳಿಗೆ ಉದ್ಯೋಗಲಾಭವು ದೊರಕೀತು.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular