ಮಂಗಳವಾರ, ಜೂನ್ 17, 2025
Homehoroscopeನಿತ್ಯಭವಿಷ್ಯ : 20-06-2020

ನಿತ್ಯಭವಿಷ್ಯ : 20-06-2020

- Advertisement -

ಮೇಷರಾಶಿ
ವ್ಯಾಪಾರ, ವ್ಯವಹಾರಗಳಲ್ಲಿ ಸಾಧಾರಣ ಧನ ಲಾಭ. ಎಲೆಕ್ಟ್ರಾನಿಕ್, ಯಂತ್ರೋಪಕರಣ ಮಾರಾಟಗಾರಿಗೆ ಲಾಭ, ವ್ಯಾಪಾರದಲ್ಲಿ ಅಧಿಕ ಧನಾಗಮನ, ವಾಹನ ಚಾಲನೆಯಲ್ಲಿ ಎಚ್ಚರ, ಅಪಘಾತವಾಗುವ ಸಾಧ್ಯತೆ, ಸ್ವಯಂಕೃತ ಅಪರಾಧಗಳಿಂದ ಸಂಕಷ್ಟ, ದೇಹದಲ್ಲಿ ಆಲಸ್ಯ, ಅವಕಾಶ ಕಳೆದುಕೊಳ್ಳುವಿರಿ. ಸ್ತ್ರೀ ಸಂಬಂಧಿ ಚಿಂತೆಯು ಆಗಾಗ ಭಾದಿಸಲಿದೆ. ಹಿರಿಯರಿಗೆ ಪುಣ್ಯಕ್ಷೇತ್ರದ ದರ್ಶನ ಭಾಗ್ಯವಿದೆ. ಮಿತ್ರರ ಅಸಹಕಾರದಿಂದ ಬೇಸರವಾದೀತು.

ವೃಷಭರಾಶಿ
ವಾಹನ-ಸ್ಥಿರಾಸ್ತಿ ನಷ್ಟ, ದಾಂಪತ್ಯದಲ್ಲಿ ಕಲಹ, ಮನೆ ವಾತಾವರಣ ಅಶಾಂತಿ, ಮಿತ್ರರೇ ದೂರಾಗುವರು, ಪತ್ರ ವ್ಯವಹಾರಗಳಲ್ಲಿ ತೊಂದರೆ, ಉದ್ಯೋಗ-ಗೃಹ ಬದಲಾವಣೆಯಿಂದ ಸಮಸ್ಯೆ. ಆದಾಯಕ್ಕಿಂತ ಹೆಚ್ಚಿನ ಖರ್ಚು ಉಂಟಾದೀತು. ಕೃಷಿ ಕಾರ್ಯಕ್ಕಾಗಿ ಹೆಚ್ಚಿನ ಖರ್ಚ ಮಾಡುವುದು ಹಿತಕರವಲ್ಲಾ. ವಿದ್ಯಾರ್ಥಿಗಳು ಶ್ರಮ ವಹಿಸಿ ಅಭ್ಯಸಿಸಿದರೆ ಮಾತ್ರ ಯಶಸ್ಸು ಕಟ್ಟಿಟ್ಟ ಬುತ್ತಿಯಾದೀತು.

ಮಿಥುನರಾಶಿ
ಕೋರ್ಟು ಕಚೇರಿ ಕೆಲಸಗಳಲ್ಲಿ ಅಪಜಯ ತಂದೀತು. ಬಂಧುಗಳಿಂದ ಪಡೆದ ಸಾಲದ ಚಿಂತೆ, ನಾನಾ ಚಿಂತೆಯಿಂದ ನಿದ್ರಾಭಂಗ, ಆರ್ಥಿಕ ಸಂಕಷ್ಟ, ಕೌಟುಂಬಿಕ ಸಮಸ್ಯೆ, ಸಹೋದ್ಯೋಗಿಗಳ ಜೊತೆ ಕಲಹ, ನೆಮ್ಮದಿ ಇಲ್ಲದ ಜೀವನ. ಸಿಟ್ಟಿನ ಭರದಲ್ಲಿ ಕಾರ್ಯಭಂಗವಾದೀತು. ವೃತ್ತಿರಂಗದಲ್ಲಿ ಮೇಲಾಧಿಕಾರಿಗಳಿಂದ ಅಡೆತಡೆಗಳು ಕಂಡು ಬಂದಾವು. ಹೆಚ್ಚಿನ ಭಡ್ತಿ, ಪ್ರಮೊಶನ್‌ ಇಲ್ಲ.

Alvas1

ಕಟಕರಾಶಿ
ಮಕ್ಕಳಿಂದ ಧನ ಲಾಭ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಪ್ರಾಪ್ತಿ, ಭವಿಷ್ಯದ ಬಗ್ಗೆ ಚಿಂತನೆ, ಉತ್ತಮ ಗೌರವ ಸಂಪಾದನೆಗೆ ಹಂಬಲ, ಶುಭ ಫಲ ಯೋಗ. ನಿಮ್ಮ ಕರ್ತವ್ಯದಲ್ಲಿ ಚ್ಯುತಿಯಾಗದಂತೆ ಜಾಗ್ರತೆ ವಹಿಸಿರಿ. ಮಿತ್ರರು ಆಗಾಗ ನಿಮಗೆ ಮೋಸ ಮಾಡುತ್ತಲೆ ಇರುವರು. ಹೆಚ್ಚಿನ ಭಡ್ತಿ, ಪ್ರಮೋಶನ್‌ವಗೈರೆ ನಿಮ್ಮ ಪ್ರಯತ್ನಬಲವನ್ನು ಅವಲಂಬಿಸಿರುತ್ತದೆ.

ಸಿಂಹರಾಶಿ
ಉದ್ಯೋಗ ನಿಮಿತ್ತ ಪ್ರಯಾಣ, ಸ್ಥಿರಾಸ್ತಿ-ವಾಹನ ಖರೀದಿಗೆ ಅನುಕೂಲ, ಸಾಲದ ಸಹಾಯ ಲಭಿಸುವುದು, ಉದ್ಯೋಗ ಸ್ಥಳದಲ್ಲಿ ಮಂದಗತಿ, ಕೆಲಸ ಕಾರ್ಯದಲ್ಲಿ ಪ್ರಗತಿ. ಸೇವಕ ವರ್ಗದವರಿಂದ ಸಹಕಾರ ಸಿಗಲಿದೆ. ದುಷ್ಟ ಜನರಿಂದ ಸಮಸ್ಯೆಗಳು ಕಂಡು ಬಂದಾವು. ಮೇಲಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ಸಟ್ಟಾ , ಲಾಟರಿಗಳಿಂದ ಧನಲಾಭವು ಕಂಡು ಬರುವುದು.

ಕನ್ಯಾರಾಶಿ
ವಾಹನ ಖರೀದಿಗೆ ಇದು ಸಕಾಲವಾಗಿದೆ. ತಂದೆಯಿಂದ ಅದೃಷ್ಟ ಬದಲಾಗುವುದು, ಮಿತ್ರರಿಂದ ದಾಂಪತ್ಯದಲ್ಲಿ ಕಲಹ, ನೆಮ್ಮದಿ ಇಲ್ಲದ ವಾತಾವರಣ, ಸಾಲದ ಸಹಾಯ ಲಭಿಸುವುದು. ಕೋರ್ಟುಕಚೇರಿ ಕೆಲಸದಲ್ಲಿ ಅಪಜಯವಾದೀತು. ಸ್ತ್ರೀ ಸಂಬಂಧ ಚಿಂತೆಯು ಆಗಾಗ ಕಾಡಲಿದೆ. ಸಿಟ್ಟಿನ ಭರದಲ್ಲಿ ಅಪಚಾರ ಕೆಲಸ ಮಾಡಿ ಪಶ್ಚಾತ್ತಾಪ ಪಡುವಿರಿ.

Maks Infotech Web1

ತುಲಾರಾಶಿ
ಕೌಟುಂಬಿಕ ಜೀವನವು ನೆಮ್ಮದಿ ಎನಿಸುವುದು. ಮಿತ್ರರೊಂದಿಗೆ ವಾಗ್ವಾದ, ಕುಟುಂಬದಲ್ಲಿ ವೈಮನಸ್ಸು, ಅನಿರೀಕ್ಷಿತ ಉದ್ಯೋಗ ನಷ್ಟ, ಸಂಗಾತಿಯಿಂದ ಲಾಭ. ವ್ಯಾಪಾರ, ವ್ಯವಹಾರಗಳು ನಿರೀಕ್ಷಿತ ರೀತಿಯಲ್ಲಿ ನಡೆಯಲಾರದು. ಬಂಧುಮಿತ್ರರಿಂದ ನಿರೀಕ್ಷಿತ ಸಹಕಾರವು ಸಿಗಲಾರದು. ಅತೀ ಸಂಭ್ರಮ ಬೇಡ.

ವೃಶ್ಚಿಕರಾಶಿ
ಉದ್ಯೋಗ ಸ್ಥಳದಲ್ಲಿ ಒತ್ತಡ, ದಾಂಪತ್ಯದ ಮೇಲೆ ದುಷ್ಪರಿಣಾಮ, ಪಾಲುದಾರಿಕೆ ವ್ಯವಹಾರದಲ್ಲಿ ಮನಃಸ್ತಾಪ, ಗೌರವಕ್ಕೆ ಧಕ್ಕೆ, ತಂದೆಯ ಆರೋಗ್ಯದಲ್ಲಿ ಸಮಸ್ಯೆ. ಎಲ್ಲ ಕೆಲಸ ಕಾರ್ಯಗಳಲ್ಲಿ ಪ್ರಯತ್ನಬಲದ ಅಗತ್ಯವಿದೆ. ಹೊಸ ವಿಚಾರಗಳಿಗೆ ಅನುಕೂಲವಾದ ಸ್ಥಿತಿ ಮನಸ್ಸಿಗೆ ಮುದ ನೀಡಲಿದೆ. ನಿಮ್ಮ ವ್ಯಾಪಾರ, ವ್ಯವಹಾರಗಳು ಪ್ರಗತಿ ಪಥದಲ್ಲಿ ಸಾಗಲಿವೆ.

ಧನುರಾಶಿ
ದಾನಧರ್ಮ, ಪರೋಪಕಾರಗಳಿಗೆ ಧನವ್ಯಯ ವಾದೀತು. ಮಿತ್ರರಿಗಾಗಿ ಅಧಿಕ ಖರ್ಚು, ಅನಿರೀಕ್ಷಿತ ಬೆಳವಣಿಗೆ, ಪ್ರೀತಿ ಪ್ರೇಮದ ಬಲೆಗೆ ಸಿಲುಕುವಿರಿ, ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಕಲಹ, ಕೋರ್ಟ್ ಕೇಸ್‍ಗಳಿಗೆ ಓಡಾಟ. ಆದರೂ ಹಣದ ಬಗ್ಗೆ ಜಾಗ್ರತೆ ಮಾಡಿರಿ. ಅಧಿಕ ತಿರುಗಾಟದಿಂದ ದೇಹಾರೋಗ್ಯದಲ್ಲಿ ಸಮಸ್ಯೆ ತಂದೀತು. ನಿಮ್ಮ ಕೆಲಸಕಾರ್ಯಗಳನ್ನು ಮನಪೂರ್ವಕವಾಗಿ ಮಾಡಿರಿ.

Alvas1

ಮಕರರಾಶಿ
ದಾಂಪತ್ಯದಲ್ಲಿ ಅಶಾಂತಿ, ಬಂಧುಗಳಿಂದ ಕಿರಿಕಿರಿ, ನೆರೆಹೊರೆಯವರಿಂದ ತೊಂದರೆ, ಆಕಸ್ಮಿಕ ಅನುಕೂಲ, ಸೇವಾ ವೃತ್ತಿಯ ಉದ್ಯೋಗ ಲಭಿಸುವುದು. ಸ್ವಜನ, ಪರಜನರೊಡನೆ ಮನಸ್ತಾಪ, ಅಪವಾದ ಭೀತಿ ತಂದೀತು. ವೃತ್ತಿರಂಗದಲ್ಲಿ ಮುಂಭಡ್ತಿಯು ದೊರಕಲಿದೆ. ಆದಾಯಕ್ಕಿಂತ ಖರ್ಚು ಅಧಿಕವಾಗಲಿದೆ. ವ್ಯಾಪಾರ, ವ್ಯವಹಾರಗಳು ನಿರೀಕ್ಷಿತ ರೀತಿಯಲ್ಲಿ ನಡೆಯದು.

ಕುಂಭರಾಶಿ
ಸಂಗಾತಿಯ ಬಂಧುಗಳಿಂದ ಅನುಕೂಲ, ಆರ್ಥಿಕ ಸಮಸ್ಯೆ ಬಗೆಹರಿಯವುದು, ಉದ್ಯೋಗದಲ್ಲಿ ಸಮಸ್ಯೆ, ಕೆಲಸದಲ್ಲಿ ಗೊಂದಲಗಳು ನಿವಾರಣೆ. ಮೇಲಾಧಿಕಾರಿಗಳ ಕಿರಿಕಿರಿಯನ್ನು ಸಹಿಸಲೇಬೇಕು. ಸಾಂಸಾರಿಕವಾಗಿ ದೇಹಾರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿರಿ. ಹಿತಶತ್ರುಗಳ ಕಾಟದಿಂದ ಮನಸ್ಸಿಗೆ ನೆಮ್ಮದಿ ಇರಲಾರದು. ತಾಳ್ಮೆ ಇರಲಿ.

ಮೀನರಾಶಿ
ವಿರೋಧಿಗಳ, ಪ್ರತಿಸ್ಪರ್ಧಿಗಳ ಮುಖಭಂಗವಾದೀತು. ಪ್ರಯಾಣದಲ್ಲಿ ಅಡೆತಡೆ, ಉದ್ಯೋಗದಲ್ಲಿ ಬದಲಾವಣೆ, ಸ್ಥಳ ಬದಲಾವಣೆ, ಯಶಸ್ಸು ಲಭಿಸುವುದು, ಅಧಿಕವಾದ ಉಷ್ಣ ಬಾಧೆ, ಅಜೀರ್ಣ, ಹೊಟ್ಟೆ ನೋವು. ವ್ಯಾಪಾರ, ವ್ಯವಹಾರಗಳಲ್ಲಿ ಉತ್ತಮವಾದ ಲಾಭವಿದೆ. ಅನಿರೀಕ್ಷಿತ ಮುಂಭಡ್ತಿಯ ಯೋಗವಿದೆ. ಬೇಸಾಯಗಾರರಿಗೆ ಉತ್ತಮವಾದ ಫ‌ಲ ಸಿಗಲಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular