ಮಂಗಳವಾರ, ಏಪ್ರಿಲ್ 29, 2025
HomehoroscopeToday Horoscope - ದಿನ ಭವಿಷ್ಯ : ಮಿಥುನರಾಶಿಯವರಿಗೆ ತಾಳ್ಮೆ ಅಗತ್ಯ

Today Horoscope – ದಿನ ಭವಿಷ್ಯ : ಮಿಥುನರಾಶಿಯವರಿಗೆ ತಾಳ್ಮೆ ಅಗತ್ಯ

- Advertisement -

ಮೇಷರಾಶಿ
ವ್ಯವಹಾರದ ಕ್ಷೇತ್ರದಲ್ಲಿ ಅಭಿವೃದ್ದಿ, ಹಣಕಾಸಿನ ಅನುಕೂಲ, ಮನೆಯಲ್ಲಿ ನೆಮ್ಮದಿ, ರಾಜಕೀಯ ವ್ಯಕ್ತಿಗಳಿಂದ ತೊಂದರೆ ಹಾಗೂ ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಅಪಘಾತಗಳು, ಆರೋಗ್ಯದಲ್ಲಿ ವ್ಯತ್ಯಾಸ ಆರ್ಥಿಕವಾಗಿ ನಷ್ಟ ಮತ್ತು ಮೋಸವಾಗುತ್ತದೆ.

ವೃಷಭರಾಶಿ
ಆಸ್ತಿ ವಿಚಾರದಲ್ಲಿ ಸಮಸ್ಯೆ ಪರಿಹಾರ, ಪಾಲುದಾರಿಕೆ ವೃತ್ತಿಯಲ್ಲಿ ಅನುಕೂಲ, ದೂರ ಪ್ರಯಾಣ, ಅಹಂಭಾವದಿಂದ ಸಮಸ್ಯೆಯಿಂದಾಗಿ ಧನ ನಷ್ಟವಾಗುತ್ತದೆ. ಸಾಲ ಮಾಡುವ ಸಂದರ್ಭ ಬರುತ್ತದೆ. ತಂದೆ ಮಕ್ಕಳಲ್ಲಿ ಮನಸ್ತಾಪ ಸ್ಥಿರಾಸ್ತಿ ಸಮಸ್ಯೆ ಊಮಟಾಗುತ್ತದೆ.

ಮಿಥುನರಾಶಿ
ತಾಳ್ಮೆ ಅಗತ್ಯ, ಸ್ನೇಹಿತರಿಂದ ಸಹಕಾರ, ನಿರೀಕ್ಷಿತ ಧನಾಗಮನ, ಉದ್ಯೋಗ ಲಾಭ, ದೂರ ಪ್ರಯಾಣ, ಅಧಿಕ ಉತ್ಸಾಹ, ಸೇವಕರಿಂದ ತೊಂದರೆ, ಉದ್ಯೋಗ ಒತ್ತಡ, ಸಾಲ ಮಾಡುವ ಸನ್ನಿವೇಶ ಬರುತ್ತದೆ.

ಕರ್ಕಾಟಕರಾಶಿ
ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಇರಲಿ, ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಯತ್ನ ಬಲ ಅಗತ್ಯ, ಸರಕಾರಿ ಕಾರ್ಯಗಳಲ್ಲಿ ಗೆಲುವು, ಮಕ್ಕಳಿಂದ ಧನಾಗಮನ, ಉದ್ಯೋಗ ನಷ್ಟ, ಪ್ರೀತಿ-ಪ್ರೇಮದಲ್ಲಿ ವಿರೋಧ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಕುಟುಂಬಸ್ಥರಿಂದ ನೋವು ಉಂಟಾಗುತ್ತದೆ.

ಸಿಂಹರಾಶಿ
ಹಿರಿಯ ಪ್ರೋತ್ಸಾಹದಿಂದ ಸಂತಸ, ನೆನಗುದಿಗೆ ಬಿದ್ದಿದ್ದ ಕಾರ್ಯಗಳಿಗೆ ಚಾಲನೆ, ಹಣಕಾಸಿನ ಸ್ಥಿತಿ ಸುಧಾರಣೆ, ಅವಕಾಶ ವಂಚಿತರಾಗುವಿರಿ, ತಂದೆಯಿಂದ ನಷ್ಟ, ಉದ್ಯೋಗ ಚಿಂತೆ, ದೂರ ಪ್ರದೇಶಕ್ಕೆ ತೆರಳುವ ಆಸೆ, ಪ್ರಯಾಣದಲ್ಲಿ ಸಮಸ್ಯೆ, ದಾಯಾದಿ ಕಲಹ, ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದಾಗಿದೆ.

ಕನ್ಯಾರಾಶಿ
ಉತ್ತಮ ಅವಕಾಶಗಳು ಲಭ್ಯವಾಗಲಿದೆ, ದೂರ ಪ್ರಯಾಣದಿಂದ ನೆಮ್ಮದಿ, ಹೊಂದಾಣಿಕೆಯಿಂದ ಅಧಿಕ ಲಾಭ, ಮಿತ್ರರೊಂದಿಗೆ ಮನಸ್ತಾಪ, ಉದ್ಯೋಗ ಬದಲಾವಣೆಯಿಂದ ಸಮಸ್ಯೆ, ಅನಿರೀಕ್ಷಿತ ಪ್ರಯಾಣ, ಕೋರ್ಟ್ ಕೇಸ್ ಚಿಂತೆ, ಭೂ ವ್ಯವಹಾರಗಳಿಂದ ಸಮಸ್ಯೆ ದಾಂಪತ್ಯ ಕಲಹ

ತುಲರಾಶಿ
ಮನೆಯಲ್ಲಿ ಧಾರ್ಮಿಕ ಕಾರ್ಯಕ್ಕೆ ಚಿಂತನೆ, ಹೊಸ ಹೂಡಿಕೆಗೆ ಅವಕಾಶ, ಹಿರಿಯರ ಸಲಹೆಯನ್ನು ಆಲಿಸಿ, ಆತ್ಮಸಂಕಟ, ಆರೋಗ್ಯದಲ್ಲಿ ಏರುಪೇರು, ಅಪವಾದ ಪಾಲುದಾರಿಕೆ ಯಲ್ಲಿ ನಷ್ಟ, ಅನಿರೀಕ್ಷಿತ ಧನಾಗಮನವಾಗುತ್ತದೆ.

ವೃಶ್ಚಿಕರಾಶಿ
ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ, ಹಳೆಯ ಸ್ನೇಹಿತರ ಭೇಟಿ, ಮನೆಯಲ್ಲಿ ಸಂತಸದ ವಾತಾವರಣ, ಮಾನಾಪಮಾನ, ಪ್ರೀತಿ-ಪ್ರೇಮದಲ್ಲಿ ತೊಂದರೆ, ಭಾವನಾತ್ಮಕ ಯೋಚನೆ ಯಿಂದ ನೋವು, ಮಕ್ಕಳಲ್ಲಿ ಮಂದತ್ವ, ಭೂಮಿ ಮತ್ತು ವಾಹನದ ಮೇಲೆ ಸಾಲ ಆರೋಗ್ಯ ಸಮಸ್ಯೆ ಕಾಡುತ್ತದೆ.

ಧನಸ್ಸುರಾಶಿ
ಪುಣ್ಯಕ್ಷೇತ್ರಗಳ ಭೇಟಿ, ದುಡುಕಿನ ನಿರ್ಧಾರ ಬೇಡ, ಹೊಂದಾಣಿಕೆ ಲಾಭ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಹಿತಶತ್ರು ಕಾಟ, ಉದ್ಯೋಗ ಅನುಕೂಲ, ಬಂಧು-ಬಾಂಧವರು ದೂರ, ದುಃಸ್ವಪ್ನಗಳು, ಒತ್ತಡಗಳಿಂದ ನಿದ್ರಾಭಂಗ ಶತ್ರು ದಮನ.

ಮಕರರಾಶಿ
ಎಲ್ಲಾ ಅಡೆತಡೆಗಳು ನಿವಾರಣೆಯಾಗಲಿದೆ, ಪಾಲುದಾರಿಕೆ ವೃತ್ತಿಯಲ್ಲಿ ಅಭಿವೃದ್ದಿ, ಹಣಕಾಸಿನ ವಿಷಯದಲ್ಲಿ ಚೇತರಿಕೆ, ಪ್ರೀತಿ-ಪ್ರೇಮದಲ್ಲಿ ಸಂಶಯ, ಬಾಲಗ್ರಹ ದೋಷ, ಮಕ್ಕಳ ಲ್ಲಿ ಮೊಂಡತನ, ವಿದ್ಯಾಭ್ಯಾಸದಲ್ಲಿ ತೊಂದರೆ, ಅನಾರೋಗ್ಯ, ದಾಯಾದಿಗಳಿಂದ ತೊಂದರೆ ಪ್ರಯಾಣ ವಿಘ್ನ.

ಕುಂಭರಾಶಿ
ದೂರ ಪ್ರಯಾಣ, ಸಹೋದ್ಯೋಗಿಗಳಿಂದ ಕಿರಿಕಿರಿ, ಧಾರ್ಮಿಕ ಕ್ಷೇತ್ರಗಳ ಭೇಟಿ, ಭೂ ವ್ಯವಹಾರಗಳಿಂದ ತೊಂದರೆ, ಮಾತಿನಿಂದ ಸಮಸ್ಯೆ, ಕುಟುಂಬದಲ್ಲಿ ಅಂತಃಕಲಹಗಳು, ಸ್ತ್ರೀಯ ರಿಂದ ತೊಂದರೆ, ವಾಹನಗಳಿಂದ ಸಮಸ್ಯೆ ,ವಿದ್ಯಾಭ್ಯಾಸದ ಒತ್ತಡವಾಗುತ್ತದೆ.

ಮೀನರಾಶಿ
ಹೊಸ ಒಪ್ಪಂದಕ್ಕೆ ಸಹಿ ಹಾಕುವಿರಿ, ಹಳೆಯ ಸ್ನೇಹಿತರ ಭೇಟಿಯಿಂದ ಅನುಕೂಲ, ಆಧ್ಯಾತ್ಮದ ಕಡೆಗೆ ಒಲವು, ಆರ್ಥಿಕ ಚೇತರಿಕೆ, ಪ್ರಯಾಣದಲ್ಲಿ ಅನುಕೂಲ, ತಂದೆಯಿಂದ ಸಹಕಾರ, ನೆರೆಹೊರೆಯವರೊಂದಿಗೆ ಕಿರಿಕಿರಿ, ಬಂಧುಗಳ ಮನಸ್ತಾಪ, ವೇಗದ ಚಾಲನೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular