ಮಂಗಳವಾರ, ಜೂನ್ 17, 2025
Homedistrict NewsSiddaramautsava program : ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ತೆರಳಿ ಕಣ್ಮರೆಯಾದ ವ್ಯಕ್ತಿ : ಕುಟುಂಬಸ್ಥರನ್ನು ಭೇಟಿಯಾದ ವಿಪಕ್ಷ...

Siddaramautsava program : ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ತೆರಳಿ ಕಣ್ಮರೆಯಾದ ವ್ಯಕ್ತಿ : ಕುಟುಂಬಸ್ಥರನ್ನು ಭೇಟಿಯಾದ ವಿಪಕ್ಷ ನಾಯಕ

- Advertisement -

ಬಾಗಲಕೋಟೆ :Siddaramautsava disappeared : ಆಗಸ್ಟ್ 3 ರಂದು ದಾವಣಗೆರೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ 75 ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸಿದ್ದರಾಮೋತ್ಸವ ಕಾರ್ಯಕ್ರಮ ನಡೆದಿರುವುದು ಎಲ್ಲರಿಗೂ ಗೊತ್ತೆ ಇದೆ. ಆದ್ರೆ ಈ ಕಾರ್ಯಕ್ರಮ ನಡೆದು ಒಂದು ತಿಂಗಳು ಕಳೆದರು ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಹೋಗಿ ವ್ಯಕ್ತಿ ಕಾಣೆ ಆಗಿರುವ ಪ್ರಕರಣ ಇನ್ನು ಪತ್ತೆಯಾಗಿಲ್ಲ. ಹೀಗಾಗಿ ಕಾಣೆಯಾಗಿರುವ ವ್ಯಕ್ತಿಯ ಕುಟುಂಬ ಸದಸ್ಯರನ್ನು ಸಿದ್ದರಾಮಯ್ಯ ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಅಡಿಹುಡಿ ಗ್ರಾಮದ ಗಿರಿಮಲ್ಲ ಖಂಡೇಕರ ಕಾಣೆಯಾಗಿರುವ ವ್ಯಕ್ತಿ. ಈತ ಆಗಸ್ಟ್ ಎರಡರಂದು ಗ್ರಾಮದ ಜನರ ಜೊತೆ ಬಸ್ ಹತ್ತಿಕೊಂಡು ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ತೆರಳಿದ್ದಾನೆ. ಆದ್ರೆ ಪ್ರೋಗ್ರಾಂ ಮುಗಿದ ಬಳಿಕ ಗಿರಿಮಲ್ಲ ವಾಪಾಸು ಊರಿಗೆ ಬಂದಿಲ್ಲ. ಈವರೆಗೂ ಗಿರಿಮಲ್ಲ ಎಲ್ಲಿ ಇದ್ದಾನೆ ಎಂಬ ಮಾಹಿತಿಯು ಇಲ್ಲ‌. ಹೀಗಾಗಿ ದಾವಣಗೆರೆಗೆ ತೆರಳಿ‌ ಅಲ್ಲಿನ‌ ಮನೆ ಮನೆಗೂ ಹೋಗಿ ಗಿರಿಮಲ್ಲನ ಫೋಟೋ ತೋರಿಸಿ ಕುಟುಂಬ ಸದಸ್ಯರು ಹುಡುಕಾಟ ನಡೆಸಿದ್ದಾರೆ. ಆದ್ರೆ ಇದ್ಯಾವುದು ಪ್ರಯೋಜನ ನೀಡಿಲ್ಲ.

ಹೀಗಾಗಿ ಜಮಖಂಡಿಗೆ ಬಂದಿದ್ದ ಸಿದ್ದರಾಮಯ್ಯ ಅಡಿಹುಡಿ ಗ್ರಾಮಕ್ಕೆ ತೆರಳಿ ಗಿರಿಮಲ್ಲನ ಮನೆಗೆ ಭೇಟಿ ನೀಡಿದರು. ಗಿರಿಮಲ್ಲನ ಕುಟುಂಬ ಸದಸ್ಯರಿಗೆ ಧೈರ್ಯ ಹೇಳಿ ಎಲ್ಲ ರೀತಿಯ ಸಹಾಯ ಮಾಡುವ ಅಭಯವನ್ನು ಸಿದ್ದರಾಮಯ್ಯ ನೀಡಿದರು. ಇದೇ ಸಂದರ್ಭ ಮಾತನಾಡಿದ ಸಿದ್ದರಾಮಯ್ಯ ಗಿರಿಮಲ್ಲ ಜೀವಂತ ಇದ್ದಾನೆ ಎಂದು ಪೊಲೀಸರು ಹೇಳಿದ್ದಾರೆ‌. ನಾನು ಎಸ್ಪಿ ಅವರಿಗೆ ಹೇಳಿ ಹುಡುಕಿಸಿಕೊಡುವ ಪ್ರಯತ್ನ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು. ನಿಮ್ಮ‌ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುತ್ತೇನೆ ಎಂದು ಹೇಳಿದ ಸಿದ್ದರಾಮಯ್ಯ ನಿಮಗೆ ಎಲ್ಲ ಅಗತ್ಯ ಸಹಾಯ ಮಾಡುತ್ತೇನೆ ಎಂದರು.

ಶಾಸಕ ಆನಂದ ನ್ಯಾಮಗೌಡ ಎಲ್ಲವನ್ನೂ ನೋಡಿಕೊಳ್ಳುತ್ತಾರೆ. ಇದೇ ಸೆಪ್ಟೆಂಬರ್‌ 27 ಕ್ಕೆ ಮತ್ತೆ ಜಮಖಂಡಿಗೆ ಬರುತ್ತೇನೆ‌. ಆಗ ಮತ್ತೆ ಬರುವೆ, ನಿಮಗೆ ಆರ್ಥಿಕ ಸಹಾಯ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಗಿರಿಮಲ್ಲ ಕುಟುಂಬ ಸದಸ್ಯರಿಗೆ ಅಭಯ ನೀಡಿದರು. ಸದ್ಯ ಗಿರಿಮಲ್ಲ ಎಲ್ಲಿ ಹೋಗಿದ್ದಾನೆ, ಏನಾಗಿದ್ದಾನೆ ಎಂಬ ಸ್ಪಷ್ಟ ಮಾಹಿತಿ ಇಲ್ಲ. ಹೀಗಾಗಿ ಗಿರಿಮಲ್ಲನ ಕುಟುಂಬ ಸದಸ್ಯರು ಆತಂಕಕ್ಕೆ ಒಳಗಾಗಿದ್ದಾರೆ‌.

ಇದನ್ನು ಓದಿ : Brahmastra:ಬಾಕ್ಸ್ ಆಫೀಸ್‌ನಲ್ಲಿ 160 ಕೋಟಿ ಕಲೆಕ್ಷನ್ ಬಾಚಿದ ಬ್ರಹ್ಮಾಸ್ತ್ರ

ಇದನ್ನೂ ಓದಿ : Dhoni Factor in Sri Lanka’s Asia Cup Victory: ನಂಬರ್ 7 ‘D’ ಮೋಡಿ.. ಶ್ರೀಲಂಕಾ ಏಷ್ಯಾ ಕಪ್ ಗೆಲುವಿನ ಹಿಂದೆ ಧೋನಿ ಜರ್ಸಿ ನಂಬರ್ ಮೋಡಿ

A man who disappeared after going to the Siddaramautsava program

RELATED ARTICLES

Most Popular