Agriculture Minister BC Patil : ಕೆಂಪಣ್ಣನಿಗೆ ತಲೆ ಕೆಟ್ಟಿದೆ, ಹುಚ್ಚಾಸ್ಪತ್ರೆಗೆ ಸೇರಿಸಿ : ಭ್ರಷ್ಟಾಚಾರ ಆರೋಪಗಳಿಗೆ ಬಿ.ಸಿ ಪಾಟೀಲ್​ ಖಾರ ಪ್ರತಿಕ್ರಿಯೆ

ಕಲಬುರಗಿ : Agriculture Minister BC Patil : ಕೆಲಸ ಮಾಡಿ ಇಲ್ಲವೇ ಜಾಗ ಖಾಲಿ ಮಾಡಿ ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಕೃಷಿ ಸಚಿವ ಬಿ.ಸಿ ಪಾಟೀಲ್​ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಕಲಬುರಗಿಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯರನ್ನು ಜನರೇ ಜಾಗ ಖಾಲಿ ಮಾಡಿಸಿ ಕಳಿಸಿಕೊಟ್ಟಿದ್ದಾರೆ. ಅಂತಹ ಪರಿಸ್ಥಿತಿ ನಮ್ಮ ಪಕ್ಷಕ್ಕೆ ಬಂದಿಲ್ಲ ಎಂದು ತಿರುಗೇಟು ನೀಡಿದರು.


ಇಡೀ ಭಾರತದಲ್ಲೇ ಆಗದ ಇರುವಂತಹ ಕೆಲಸಗಳನ್ನು ನಮ್ಮ ಕರ್ನಾಟಕ ಸರ್ಕಾರ ಮಾಡಿದೆ. ಕಾಂಗ್ರೆಸ್​​ನವರಿಗೆ ಒಂದು ರೀತಿ ಕಾಮಾಲೆ ಕಣ್ಣು. ಹೀಗಾಗಿ ಅವರಿಗೆ ಎಲ್ಲವೂ ಹಳದಿಯಾಗೇ ಕಾಣುತ್ತೆ. ಸಿದ್ದರಾಮಯ್ಯ ಮತ್ತೆ ಅಧಿಕಾರಕ್ಕೆ ಬರಬೇಕೆಂದು ಹವಣಿಸುತ್ತಿದ್ದಾರೆ. ಆದರೆ ಅದು ಅಸಾಧ್ಯ ಎಂದು ಬಿ.ಸಿ ಪಾಟೀಲ್​ ಗುಡುಗಿದ್ದಾರೆ.


ರಾಜ್ಯ ಸರ್ಕಾರದ ವಿರುದ್ಧ ಪರ್ಸಂಟೇಜ್​ ಆರೋಪ ಹೊರಿಸಿರುವ ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪಗಳಿಗೂ ಇದೇ ವೇಳೆ ಪ್ರತಿಕ್ರಿಯಿಸಿದ ಬಿ.ಸಿ ಪಾಟೀಲ್​, ಯಾರೋ ಒಬ್ಬ ತಲೆಪಟ್ಟಿ ಇಲ್ಲದವನು ನೀಡುವ ಆಧಾರವಿಲ್ಲದ ಹೇಳಿಕೆಗಳಿಗೆ ಪ್ರಾಮುಖ್ಯತೆ ನೀಡಬಾರದು. ಆತ ಸಿದ್ದರಾಮಯ್ಯ ಮನೆಯ ಒಳಗೆ ಹೋಗಿ ಹೊರ ಬಂದು ಈ ರೀತಿ ಹೇಳಿಕೆ ನೀಡ್ತಾನೆ ಅಂದರೆ ನೀವೇ ಅರ್ಥ ಮಾಡಿಕೊಳ್ಳಿ. ಕಳೆದೊಂದು ವಾರದಿಂದ ರಾಜ್ಯದಲ್ಲಿ ಸಿದ್ದರಾಮಯ್ಯ ಇಮೇಜ್​ ಡೌನ್ ಆಗಿದೆ. ಅದನ್ನು ಸರಿ ಮಾಡೋಕೆ ಸಿದ್ದರಾಮಯ್ಯ ಮಾಡಿದ ಕುತಂತ್ರವಿದು ಎಂದು ಆರೋಪಿಸಿದ್ದಾರೆ.


ಕೆಂಪಣ್ಣ ಅವನ್ಯಾವ ಘನಂದಾರಿ ಲೀಡರ್​..? ಆತನ ಹೇಳಿಕೆಯಲ್ಲಿ ಯಾವುದೇ ಆಧಾರವಿಲ್ಲ. ಆತ ರಾಜ್ಯದ ಎಲ್ಲಾ ಶಾಸಕರು ಇದ್ದಾರೆ ಎಂದು ಹೇಳಿದ್ದಾನೆ ಅಂದ ಮೇಲೆ ಸಿದ್ದರಾಮಯ್ಯ, ರಮೇಶ್​ ಕುಮಾರ್​, ಪರಮೇಶ್ವರ್ ಕೂಡ ಕಮಿಷನ್​ನಲ್ಲಿ ಭಾಗಿಯಾಗಿದ್ದಾರೆ ಅಂದಗಾಯ್ತು. ಬಹುಶಃ ಆ ಮನುಷ್ಯನ ಮಾನಸಿಕ ಸ್ಥಿತಿ ಸ್ಥಿಮಿತ ಕಳೆದುಕೊಂಡಿರಬಹುದು. ಕೆಂಪಣ್ಣನನ್ನು ಮೆಂಟಲ್​ ಆಸ್ಪತ್ರೆಗೆ ಸೇರಿಸಿ ಎಂದು ಟಾಂಗ್​ ನೀಡಿದ್ದಾರೆ.

ಇದನ್ನು ಓದಿ : BIG BREAKING : ಕಾಂಗ್ರೆಸ್​ ಪ್ರಾಥಮಿಕ ಸದಸ್ಯತ್ವಕ್ಕೆ ಗುಲಾಂ ನಬಿ ಆಜಾದ್​ ರಾಜೀನಾಮೆ

ಇದನ್ನೂ ಓದಿ : Shaheen Shah Afridi : ಕಾಲಿಗೆ ಸ್ಟ್ರೆಚರ್ ಕಟ್ಟಿಕೊಂಡಿದ್ದ ಪಾಕ್ ವೇಗಿ ಅಫ್ರಿದಿಯನ್ನು ಭೇಟಿ ಮಾಡಿದ ಕೊಹ್ಲಿ, ರಾಹುಲ್

Agriculture Minister BC Patil attacked Siddaramaiah and Kempanna

Comments are closed.