ಮಂಗಳವಾರ, ಏಪ್ರಿಲ್ 29, 2025
Homedistrict Newsbelagavi : ಮತ್ತೆ ಎಂಇಎಸ್​ ಗೂಂಡಾಗಳ ಪುಂಡಾಟ: ಕನ್ನಡ ಹಾಡು ಹಾಕಿದ್ದಕ್ಕೆ ವಧು-ವರರ ಮೇಲೆ...

belagavi : ಮತ್ತೆ ಎಂಇಎಸ್​ ಗೂಂಡಾಗಳ ಪುಂಡಾಟ: ಕನ್ನಡ ಹಾಡು ಹಾಕಿದ್ದಕ್ಕೆ ವಧು-ವರರ ಮೇಲೆ ಹಲ್ಲೆ

- Advertisement -

ಬೆಳಗಾವಿ : belagavi : ಎಂಇಎಸ್​ ಗೂಂಡಾಗಳ ಪುಂಡಾಟಕ್ಕೆ ಕೊನೆ ಇಲ್ಲ ಎಂಬಂತಾಗಿದೆ. ಕರ್ನಾಟಕದಲ್ಲಿದ್ದುಕೊಂಡೇ ಪದೇ ಪದೇ ಕನ್ನಡದ ವಿಚಾರವಾಗಿ ಕಿರಿಕ್​ ತೆಗೆಯುವುದು ಇವರ ಖಯಾಲಿಯಾಗಿದೆ. ಈ ಮಾತಿಗೆ ಸ್ಪಷ್ಟ ಉದಾಹರಣೆ ಎಂಬಂತೆ ಮದುವೆ ಸಮಾರಂಭವೊಂದರಲ್ಲಿ ಕನ್ನಡ ಹಾಡನ್ನು ಹಾಕಿದ್ದಾರೆ ಎಂಬ ಒಂದೇ ಕಾರಣಕ್ಕೆ ವಧು – ವರರು ಹಾಗೂ ಕನ್ನಡಿಗ ಸಂಬಂಧಿಗಳ ಮೇಲೆ ಎಂಇಎಸ್ ಗೂಂಡಾಗಳು ಹಲ್ಲೆ ನಡೆಸಿದ ಘಟನೆಯು ಬೆಳಗಾವಿ ಜಿಲ್ಲೆ ಧಾಮನೆ ಗ್ರಾಮದಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ.

ವರ ಸಿದ್ದು ಸೈಬಣ್ಣವರ್​, ವಧು ರೇಷ್ಮಾ ಎಂಬವರ ಮದುವೆ ಕಾರ್ಯಕ್ರಮದಲ್ಲಿ ಕರುನಾಡೇ ಎಂಬ ಕನ್ನಡ ಹಾಡನ್ನು ಹಾಕಲಾಗಿತ್ತು. ಇದಕ್ಕೆ ಕೆಲವರು ಕನ್ನಡದ ಬಾವುಟವನ್ನು ಹಿಡಿದು ನೃತ್ಯ ಮಾಡಿದ್ದರು. ಇದರಿಂದ ಆಕ್ರೋಶಗೊಂಡ ಎಂಇಎಸ್​ ಪುಂಡರು ಮದುವೆ ಮೆರವಣಿಗೆಯಲ್ಲಿಯೇ ವಧು ರೇಷ್ಮಾ , ವರ ಸಿದ್ದು ಸೈಬಣ್ಣವರ್​​ ಹಾಗೂ ವರನ ತಮ್ಮ ಭರಮಾ ಮೇಲೆ ಹಲ್ಲೆ ನಡೆಸಿದ್ದಾರೆ. ಗಾಯಗೊಂಡಿರುವವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು ಓರ್ವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಈ ಎಂಇಎಸ್​ ಪುಂಡರು ಭರಮ ಎಂಬವರ ಬೈಕ್​ಗೆ ಬೆಂಕಿ ಹಚ್ಚಿದ್ದಾರೆ. ರಾಣಿ ಚೆನ್ನಮ್ಮ ಎಂದು ಬರೆಯಲಾದ ಬೋರ್ಡ್​ ಮೇಲೆ ಧರ್ಮವೀರ ಸಂಭಾಜಿ ಎಂದು ಮೆರೆದು ಉದ್ಧಟತನ ತೋರಿದ್ದಾರೆ. ಈ ಸಂಬಂಧ ಆಕಾಶ್​ ಸೇರಿದಂತೆ 10 ಮಂದಿಯ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೊದಲು ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿಲ್ಲ ಎಂದು ಸ್ಥಳೀಯರು ತೀವ್ರ ಆಕ್ರೋಶ ಹೊರ ಹಾಕಿದ್ದರು.

ಇದನ್ನು ಓದಿ : IPL Crickter Umran Mailk ಭರವಸೆಯ ದ್ರುವತಾರೆ ಉಮ್ರಾನ್ ಮಲ್ಲಿಕ್

ಇದನ್ನೂ ಓದಿ : KL Rahul creates history : IPL 2022ನಿಂದ ಹೊರಬಿದ್ದ ಲಕ್ನೋ : ಇತಿಹಾಸ ಸೃಷ್ಟಿಸಿದ ಕೆ.ಎಲ್.ರಾಹುಲ್‌

belagavi police takes 10 mes accused to custody for setting fire to bike and assault on kannadigas

RELATED ARTICLES

Most Popular