PFI leaders arrested : ಎನ್ಐಎ ಅಧಿಕಾರಿಗಳ ತಂಡ ಎಸ್ಡಿಪಿಐ ಕಚೇರಿಗೆ ಅತಿಕ್ರಮಣವಾಗಿ ದಾಳಿ ಮಾಡಿ ಕಚೇರಿಯ ಬೀಗ ಹೊಡೆದು ಗ್ಲಾಸ್ ಚೇಂಬರ್ ಹೊಡೆದು ಹಾಕಿದೆ,ದಾಖಲೆಗಳನ್ನು ಚೆಲ್ಲಾಪಿಲ್ಲಿ ಮಾಡಿ ಅವ್ಯವಸ್ಥೆ ಮಾಡಿ ಹಾಕಿದ್ದಾರೆ ಎಂದು ಎಸ್ ಡಿಪಿಐ ದಕ್ಷಿಣಕನ್ನಡ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ಆರೋಪಿಸಿದ್ದಾರೆ. ದಾಳಿ ಬಳಿಕ ಮಂಗಳೂರಿನಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಪಿಎಫ್ಐ, ಎಸ್ ಡಿಪಿಐ ಈ ಅಕ್ರಮ ಪ್ರವೇಶದ ವಿರುದ್ದ ಉನ್ನತ ಕಾನೂನು ತಜ್ಞರ ಸಲಹೆ ಪಡೆಯುತ್ತೇವೆ. ಇದರ ವಿರುದ್ದ ಕಾನೂನಾತ್ಮಕ ಹೋರಾಟ ಮಾಡುತ್ತೇವೆ ಎಂದು ಹೇಳಿದೆ.
ಅವರ ವಾರೆಂಟ್ ನಲ್ಲಿ ಪಿಎಫ್ ಐ ಕಚೇರಿಗೆ ಮಾತ್ರ ದಾಳಿ ಬಗ್ಗೆ ಉಲ್ಲೇಖವಿತ್ತು ಎಂದು ಹೇಳಿರುವ ಅಬೂಬಕ್ಕರ್ ಕುಳಾಯಿ ಅದನ್ನ ಪ್ರಶ್ನೆ ಮಾಡಿದಾಗ ಪಿಎಫ್ ಐ ಕಚೇರಿ ಇದೇ ಕಟ್ಟಡದಲ್ಲಿ ಇದೆ ಅಂತ ದಾಳಿ ಮಾಡಿದ್ದಾಗಿ ಹೇಳಿದ್ದಾರೆ ಎಂದರು. 2009ರಿಂದ ನಡೆದ ನಮ್ಮ ಕಾರ್ಯಕ್ರಮಗಳನ್ನು ದಾಖಲೆ ಪುಸ್ತಕ, ಲ್ಯಾಪ್ ಟಾಪ್, ಹಾರ್ಡ್ ಡಿಸ್ಕ್, ಫೋಟೋ ಅಲ್ಬಂ ವಶಕ್ಕೆ ಪಡೆದಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ಐದು ಜಿಲ್ಲಾ ನಾಯಕರ ಬಂಧನ ಮಾಡಲಾಗಿದೆ. ಇವರನ್ನು 24 ಗಂಟೆಯೊಳಗೆ ಬಿಡುಗಡೆ ಮಾಡದೇ ಇದ್ದರೆ ನಾಳೆಯಿಂದ ಉಗ್ರ ಹೋರಾಟ ಮಾಡುತ್ತೇವೆ. ಕಾನೂನು ಮತ್ತು ಸಂವಿಧಾನಾತ್ಮಕವಾಗಿ ಉಗ್ರ ಹೋರಾಟ ಮಾಡುವುದಾಗಿ ಎಂದರು.
ಎಸ್ ಡಿಪಿಐ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ಹೋರಾಟ ಮಾಡ್ತಿದೆ. ಬಿಜೆಪಿಯ ಬಗ್ಗೆ ಸಾರ್ವಜನಿಕವಾಗಿ ಜನ ವಿರೋಧಿ ನಿಲುವು ಇದೆ. ಇವರು ಅಭಿವೃದ್ಧಿ ಮಾಡದೇ ಜನವಿರೋಧಿ ಕೆಲಸ ಮಾಡ್ತಿದಾರೆ. ಹಿಜಾಬ್, ಹಲಾಲ್ ಕಟ್ ಅನ್ನೋ ವಿಚಾರಗಳಲ್ಲೇ ಕಾಲ ಕಳೀತಿದಾರೆ. ಹೀಗಾಗಿ ಬಿಜೆಪಿ ಕಾರ್ಯಕರ್ತರನ್ನ ಖುಷಿ ಪಡಿಸಲು ಈ ದಾಳಿ ನಡೆಸಲಾಗ್ತಿದೆ ಎಂದು ಅವರು ಆರೋಪಿಸದರು. ಆದರೆ ನಾವು ಇಂಥಹ ದಾಳಿಗೆ ಹೆದರಲ್ಲ, ನಾವು ಮತ್ತಷ್ಟು ಹೆಜ್ಜೆ ಮುಂದಿಡ್ತೇವೆ. ನಿಮ್ಮ ಕಾರ್ಯಕರ್ತರ ಮೇಲಿನ ಆರೋಪಗಳ ಬಗ್ಗೆ ಎನ್ ಐಎ ಯಾಕೆ ಬರ್ತಿಲ್ಲ ಎಂದು ಪ್ರಶ್ನಿಸಿದರು.
ಹಲವು ಕ್ರಿಮಿನಲ್ ಗಳ ಕೇಸ್ ವಾಪಾಸ್ ತೆಗೆಯುವ ಕೆಲಸ ಮಾಡಲಾಗ್ತಿದೆ. ಆದರೆ ಏನೇ ಮಾಡಿದರೂ ಎಸ್ ಡಿಪಿಐ ಸದೆ ಬಡಿಯಲು ಸಾಧ್ಯವೇ ಇಲ್ಲ. ಪಿಎಫ್ ಐ ಕಾರ್ಯಕರ್ತರು ಕೂಡ ಸಜ್ಜಾಗಿದ್ದು, ಈಗಾಗಲೇ ಪ್ರತಿಭಟನೆ ಆಗ್ತಿದೆ. ಆದ್ದರಿಂದ ನಮ್ಮ ನಾಯಕರನ್ನು 24 ಗಂಟೆಯೊಳಗೆ ಬಿಡದಿದ್ದರೆ ಉಗ್ರ ಹೋರಾಟ ನಿಶ್ಚಿತ ಎಂದರಯ. ಬಂಧಿತ ಐದೂ ಜನರು ಪಿಎಫ್ ಐ ನಾಯಕರು, ಎಸ್ ಡಿಪಿಐ ನಾಯಕರು ಇಲ್ಲ ಯಾವ ಕಾರಣಕ್ಕೆ ದಾಳಿ ಅಂದಾಗ ಅವರಲ್ಲಿ ಸಮರ್ಪಕ ಉತ್ತರ ಇರಲಿಲ್ಲ. ಇದೊಂದು ರಾಜಕೀಯ ಪ್ರೇರಿತ ದಾಳಿ ಅನ್ನೋದು ಸ್ಪಷ್ಟ ಎಂದರು.
ರಾತ್ರಿ ರಾತ್ರಿ ಬಂದು ಬೀಗ ಹೊಡೆದು ದಾಳಿ ಮಾಡೋದು ಯಾವ ಕಳ್ಳಾಟಿಕೆ ಎಂದು ಪ್ರಶ್ನಿಸಿದ ನಾಯಕರು ಇದರಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಜವಾಬ್ದಾರಿ ಯಾರು ಎಂದರು. ಈ ರಸ್ತೆಯಲ್ಲಿ ಗೋಲಿಬಾರ್ ಆಗಿ ಮೊದಲೇ ಇಬ್ಬರು ಸಾವನ್ನಪ್ಪಿದ್ದಾರೆ. ಅದರ ನೋವು ಇರುವಾಗಲೇ ಈ ರೀತಿ ದಾಳಿ ಮಾಡೋದು ಏನರ್ಥ. ಎನ್ಐಎ ಮೊದಲು ಬಿಜೆಪಿಯ ಶಾಸಕರು ಮತ್ತು ಸಚಿವರ ಕಚೇರಿಗೆ ದಾಳಿ ನಡೆಸಲಿ. ಎನ್.ಐ.ಎ ಶೋಕಿಗಾಗಿ ಈ ರೀತಿ ದಾಳಿ ಮಾಡ್ತಿದೆ. ಎಸ್ ಡಿಪಿಐ ನ್ನು ಬ್ಯಾನ್ ಮಾಡೋಕೆ ಅದು ಗೂಡಂಗಡಿ ಅಲ್ಲ, ಚುನಾವಣಾ ಆಯೋಗದಲ್ಲಿ ನೋಂದಾಣಿಯಾದ ರಾಷ್ಟ್ರೀಯ ಪಕ್ಷ ಎಂದರು.
ಇದನ್ನು ಓದಿ : HD Deve Gowda :‘ನಾನು ಆರೋಗ್ಯವಾಗಿದ್ದೇನೆ, ಶೀಘ್ರದಲ್ಲೇ ಪಕ್ಷದ ಕಚೇರಿಗೆ ಭೇಟಿ ನೀಡುವೆ’ : ಮಾಜಿ ಪ್ರಧಾನಿ ಹೆಚ್ಡಿಡಿ
ಇದನ್ನೂ ಓದಿ : Special Gift for Virat Kohli: ವಿರಾಟ್ ಕೊಹ್ಲಿಗೆ ವಿಶೇಷ ಉಡುಗೊರೆ ನೀಡಿದ ಪಂಜಾಬ್ ಮಹಿಳೆ ; ಗಿಫ್ಟ್ ನೋಡಿ ಕಿಂಗ್ ಫುಲ್ ಫಿದಾ
protest if PFI leaders arrested by NIA are not released within 24 hours