ಸೋಮವಾರ, ಏಪ್ರಿಲ್ 28, 2025
Homedistrict NewsYouth commits suicide: ಸಾಲ ತೀರಿಸಲಾಗದೇ ನೇಣಿಗೆ ಶರಣಾದ ಯುವಕ

Youth commits suicide: ಸಾಲ ತೀರಿಸಲಾಗದೇ ನೇಣಿಗೆ ಶರಣಾದ ಯುವಕ

- Advertisement -

ಉಡುಪಿ : Youth commits suicide:ಈಗೆಲ್ಲ ನಿಮಗೆ ತುರ್ತಾಗಿ ಸಾಲ ಬೇಕು ಅಂದರೆ ಹೆಚ್ಚು ಕಷ್ಟ ಪಡಬೇಕಿಲ್ಲ. ನಿಮಗೆ ಸಾಲ ನೀಡಲೆಂದೇ ಸಾಕಷ್ಟು ಆ್ಯಪ್​ಗಳು ತಲೆ ಎತ್ತಿವೆ. ಹೀಗಾಗಿ ಅನೇಕರು ಈ ಆ್ಯಪ್​ಗಳ ಮೂಲ ಸಾಲ ಮಾಡಿಕೊಂಡು ಬಿಡ್ತಾರೆ. ಆದರೆ ಬಳಿಕ ಈ ಆ್ಯಪ್​ಗಳು ಹೇರುವ ಅತಿಯಾದ ಬಡ್ಡಿದರ ಮಾತ್ರ ಇನ್ನಷ್ಟು ಆರ್ಥಿಕ ಸಂಕಷ್ಟಕ್ಕೆ ದಾರಿ ಮಾಡಿಕೊಡುತ್ತದೆ. ಇದೇ ರೀತಿ ಮೊಬೈಲ್​ ಆ್ಯಪ್​​ಗಳಲ್ಲಿ ಸಾಲ ಸೋಲ ಮಾಡಿಕೊಂಡಿದ್ದ ಯುವಕನೊಬ್ಬ ಮಾಡಿದ ಸಾಲ ತೀರಿಸಲಾಗದೇ ಆತ್ಮಹತ್ಯೆಗೆ ಶರಣಾಗಿದ್ದಾನೆ.


ಕುಂದಾಪುರದ ಹೆಮ್ಮಾಡಿಯಲ್ಲಿ ಈ ಘಟನೆ ನಡೆದಿದೆ.ಹರೆಗೋಡು ಕೊಳಹಿತ್ಲು ನಿವಾಸಿಯಾದ ಸಂಜೀವ್​ ದೇವಾಡಿಗ ಮತ್ತು ಕನಕ ಎಂಬವರ ಪುತ್ರ 25 ವರ್ಷದ ವಿಘ್ನೇಶ್​ ಎಂಎನ್​​ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಈತ ಡೆತ್​ನೋಟ್​ ಬರೆದಿಟ್ಟು ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.


ರಾತ್ರಿ ಮನೆಯಲ್ಲಿ ಊಟ ಮಾಡಿದ್ದ ವಿಘ್ನೇಶ್​ ಬೇಗನೇ ಮಲಗಲು ಹೋಗಿದ್ದ. ಬೆಳಗ್ಗೆ ತಾಯಿ ಎದ್ದ ವೇಳೆಯಲ್ಲಿ ಮನೆಯ ಬಾಗಿಲು ತೆರೆದೇ ಇತ್ತು. ಇದೇನಾಯ್ತು ಎಂದು ಮನೆಯಿಂದ ಹೊರ ಬಂದ ವೇಳೆಯಲ್ಲಿ ಮರಕ್ಕೆ ಪುತ್ರ ನೇಣು ಹಾಕಿಕೊಂಡಿರೋದನ್ನು ಕಂಡಿದ್ದಾರೆ.


ಸಾಯುವುದಕ್ಕೂ ಮುನ್ನ ವಿಘ್ನೇಶ್​ ಡೆತ್​ ನೋಟ್​ ಕೂಡ ಬರೆದಿದ್ದ. ಇದರಲ್ಲಿ ಆತ ನನ್ನ ಸಾವಿಗೆ ಬೇರೆ ಯಾರೂ ಕಾರಣರಲ್ಲ.ನಾನು ಮೊಬೈಲ್​ ಆ್ಯಪ್​ಗಳಲ್ಲಿ ಮಾಡಿಕೊಂಡಿರುವ ಸಾಲಗಳೇ ಇದಕ್ಕೆ ಕಾರಣ.ನನಗೆ ಈ ಸಾಲಗಳನ್ನು ತೀರಿಸಲು ಆಗುತ್ತಿಲ್ಲ. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಸಾಲ ತೀರಿಸಿ ಎಂದು ಯಾರಾದರೂ ಕರೆ ಮಾಡಿದರೆ ಅವನು ಸತ್ತು ಹೋದ ಎಂದು ಹೇಳಿಬಿಡಿ.ಆಫೀಸನವರಿಗೂ ಕರೆ ಮಾಡಿ ಮಾಹಿತಿ ನೀಡಿ.ಶುಕ್ರವಾರ ನನಗೆ ಸಂಬಳ ಬರುತ್ತದೆ ಎಂದು ಬರೆದು ಅದರ ಜೊತೆಯಲ್ಲಿ ಎಟಿಎಂ ಪಾಸ್​​ವರ್ಡ್​ನ್ನೂ ಬರೆದಿಟ್ಟಿದ್ದಾನೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

Youth committed suicide without paying his debts

ಇದನ್ನು ಓದಿ :Accused arrest :ದೈವಸ್ಥಾನ ,ಮಸೀದಿಗಳಲ್ಲಿ ಕಾಂಡೋಮ್​ ಎಸೆಯುತ್ತಿದ್ದವನ ಬಂಧನ..!

ಇದನ್ನೂ ಓದಿ : Sangolli Rayanna statue: ಸಂಗೊಳ್ಳಿ ರಾಯಣ್ಣ ಮೂರ್ತಿ ಭಗ್ನಗೊಳಿಸಿದ ಆರೋಪಿಗಳ ಗುರುತು ಪತ್ತೆ..!

RELATED ARTICLES

Most Popular