ಭಾನುವಾರ, ಏಪ್ರಿಲ್ 27, 2025
Homeಮಿಸ್ ಮಾಡಬೇಡಿಪ್ರತಿಕಾರ ತೀರಿಸಿಕೊಳ್ಳೋಕೆ ಸಾಕಿದ್ದ ಪಾರಿವಾಳಗಳನ್ನೇ ಕೊಂದ !

ಪ್ರತಿಕಾರ ತೀರಿಸಿಕೊಳ್ಳೋಕೆ ಸಾಕಿದ್ದ ಪಾರಿವಾಳಗಳನ್ನೇ ಕೊಂದ !

- Advertisement -

ಮನುಷ್ಯ ಎಲ್ಲರಿಗಿಂತ ಸ್ವಾರ್ಥಿ. ಅತನು ತನ್ನಸ್ವಾರ್ಥಕ್ಕಾಗೆ ಯಾರ ಪ್ರಾಣ ತೆಗೆಯೋಕೂ ಹೇಸಲ್ಲ. ಅದರಲ್ಲೂ ಅದೆಷ್ಟು ಪುಟ್ಟ ಪುಟ್ಟ ಪ್ರಾಣಿಗಳು ಆತನ ಸ್ವಾರ್ಥಕ್ಕೆ ಬಲಿಯಾಗಿದೆ. ಉತ್ತರ ಪ್ರದೇಶದಲ್ಲೂ ಇಂತಹದೇ ಒಂದು ಹೇಯ ಕೃತ್ಯ ನಡೆದಿದೆ.

ಉತ್ತರಪ್ರದೇಶದ ಲಕ್ನೋದಲ್ಲಿ ಯುವಕನೊಬ್ಬ ಸೇಡಿನ ಹೆಸರಲ್ಲಿ 11 ಪಾರಿವಾಳಗಳ ಜೀವ ತೆಗೆದಿದ್ದಾನೆ. ಹೌದು ರಾಹುಲ್ ಸಿಂಗ್ ಎಂಬ ಯುವಕ ತನ್ನ ನೆರೆಮನೆಯಾತನ ಮೇಲಿನ ಕೋಪಕ್ಕೆ ಆತ ಸಾಕಿದ್ದ 11 ಪಾರಿವಾಳಗಳ ಪ್ರಾಣ ತೆಗೆದಿದ್ದಾನೆ. ಈ ಪಾರಿವಾಳಗಳು ಧರ್ಮಪಾಲ್ ಸಿಂಗ್ ಎಂಬಾತನಿಗೆ ಸೇರಿದ್ದು. ಹಲವು ವರ್ಷಗಳಿಂದ ಈತ ಮಹಡಿಯ ಮೇಲೆ ಸಾಕಿಕೊಂಡಿದ್ದ. ಆದ್ರೆ ಧರ್ಮ ಪಾಲ್ ಸಿಂಗ್ ಮೇಲೆ ಕೋಪವಿದ್ದ ರಾಹುಲ್ ಸಿಂಗ್ ಮಹಡಿಗೆ ಹೋಗಿ ಈ ಪಾರಿವಾಳಗಳ ಮೇಲೆ ಕಲ್ಲುಗಳನ್ನು ಎಸೆದಿದ್ದಾನೆ. ಇದರಿಂದ ೧೧ ಪಾರಿವಾಳಗಳು ಸತ್ತು ಹೋಗಿವೆ.

ಈ ಕುರಿತಂತೆ ಪ್ರತಿಕ್ರಿಯಿಸಿರೋ ಧರ್ಮ ಪಾಲ್ ಸಿಂಗ್ ರಾಹುಲ್ ನಮ್ಮ ಮನೆಯ ಬಳಿಯೇ ಉಗುಳುತ್ತಿದ್ದ. ನಾನು ಈಗ ವೈರಸ್ ಹರಡುತ್ತಿರೋ ಕಾರಣ ಹೀಗೆ ಉಗುಳಬೇಡ ಅಂತ ಹೇಳಿದ್ದೆ. ಇದನ್ನು ಅವಮಾನ ಅಂತ ಅಂದುಕೊಂಡ ಆತ ಈ ಕೃತ್ಯ ಎಸಗಿದ್ದಾನೆ ಅಂತ ಆರೋಪಿಸಿದ್ದಾರೆ.

ಸದ್ಯ ಈ ಕುರಿತಂತೆ ವನ್ಯ ಜೀವಿ ರಕ್ಷಣೆ ಕಾಯ್ದೆ ಅಡಿಯಲ್ಲಿ ಧರ್ಮ ಪಾಲ್ ಸಿಂಗ್ ದೂರು ನೀಡಿದ್ದಾರೆ. ಇನ್ನು ದೂರು ನೀಡುತ್ತಿದ್ದಂತೆ ರಾಹುಲ್ ತಲೆ ಮರೆಸಿಕೊಂಡಿದ್ದಾನೆ .ಅದೇನೇ ಇರಲಿ ಮನುಷ್ಯರ ಜಗಳಕ್ಕೆ ಪ್ರಾಣಿಗಳನ್ನು ಬಲಿ ನೀಡೋದು ಎಷ್ಟು ಸರಿ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular