ಮಂಗಳವಾರ, ಏಪ್ರಿಲ್ 29, 2025
Homeನಮ್ಮ ಬೆಂಗಳೂರುoperation buldozer :ರಾಜ್ಯ ರಾಜಧಾನಿಯಲ್ಲಿ ಎರಡನೇ ದಿನವೂ ಬುಲ್ಡೋಜರ್​ ಸದ್ದು : ಕೆ.ಆರ್​ಪುರಂನಲ್ಲಿ ಕಾರ್ಯಾಚರಣೆ

operation buldozer :ರಾಜ್ಯ ರಾಜಧಾನಿಯಲ್ಲಿ ಎರಡನೇ ದಿನವೂ ಬುಲ್ಡೋಜರ್​ ಸದ್ದು : ಕೆ.ಆರ್​ಪುರಂನಲ್ಲಿ ಕಾರ್ಯಾಚರಣೆ

- Advertisement -

ಬೆಂಗಳೂರು : operation buldozer : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಎರಡನೇ ದಿನವೂ ಆಪರೇಷನ್​ ಬುಲ್ಡೋಜರ್​ ಸದ್ದು ಜೋರಾಗಿದೆ. ಮಹದೇವಪುರ ವ್ಯಾಪ್ತಿಯಲ್ಲಿ ಒತ್ತುವರಿ ಮಾಡಿಕೊಂಡು ದೊಡ್ಡ ದೊಡ್ಡ ಬಿಲ್ಡಿಂಗ್​ಗಳನ್ನು ಕಟ್ಟಿದ್ದ ಶ್ರೀಮಂತ ಮಾಲೀಕರಿಗೆ ಜೆಸಿಬಿ ಸದ್ದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಮಳೆಯಿಂದಾಗಿ ಮಹದೇವಪುರದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾದ ಬಳಿಕ ಸರ್ಕಾರ ಎಚ್ಚೆತ್ತಿದ್ದು ಈ ವ್ಯಾಪ್ತಿಯಲ್ಲಿ ಬುಲ್ಡೋಜರ್​ಗಳು ಘರ್ಜನೆ ಶುರುವಿಟ್ಟುಕೊಂಡಿವೆ.


ಇನ್ನು ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.ರಾಜಕಾಲುವೆ ಮೇಲೆ ಕಟ್ಟಡಗಳು ಇಲ್ಲದಿದ್ದರೂ ಸಹ ಬಿಲ್ಡಿಂಗ್​ ಧ್ವಂಸ ಮಾಡುತ್ತಿದ್ದಾರೆಂಬ ಆರೋಪಗಳೂ ಸಹ ಕೇಳಿ ಬರುತ್ತಿದೆ. ಪ್ರಭಾವಿ ವ್ಯಕ್ತಿಗಳನ್ನು ಕಾಪಾಡಿಕೊಳ್ಳುವ ಸಲುವಾಗಿ ರಾಜಕಾಲುವೆ ಮೇಲೆ ನಮ್ಮ ಮನೆ ಇಲ್ಲದೇ ಇದ್ದರೂ ಸಹ ಬುಲ್ಡೋಜರ್​ಗಳನ್ನು ಹತ್ತಿಸಲಾಗುತ್ತಿದೆ. ರಾಜಕಾಲುವೆ ಮೇಲೆ ಇರುವ ಪ್ರಭಾವಿಗಳ ಮನೆಯನ್ನು ಮುಟ್ಟದೇ ರಕ್ಷಣೆ ಮಾಡಲಾಗುತ್ತಿದೆ ಎಂದು ಮಹದೇವಪುರದ ನಿವಾಸಿಗಳು ಆರೋಪಿಸಿದ್ದಾರೆ.


ಆಪರೇಷನ್​ ಬುಲ್ಡೋಜರ್​ ಕಾರ್ಯಾಚರಣೆಯ ಎರಡನೇ ದಿನವಾದ ಇಂದು ಕೆ.ಆರ್ ಪುರಂನ ಬಸವನಪುರ ವಾರ್ಡಿನ ಗಾಯತ್ರಿ ಬಡಾವಣೆ, ದೇವಸಂದ್ರ ಸ್ಮಶಾನದಿಂದ ಶೀಗೆಹಳ್ಳಿ ಕೆರೆಗೆ ಸಂಪರ್ಕಿಸುವ ರಾಜಕಾಲುವೆ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಸ್ಥಳೀಯ ನಿವಾಸಿಗಳು ಬಿಬಿಎಂಪಿ ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಪಾರ್ಟ್​ಮೆಂಟ್​​ಗಳನ್ನು ಬಚಾವ್​ ಮಾಡುವ ಸಲುವಾಗಿ ನಮ್ಮ ಚಿಕ್ಕ ಪುಟ್ಟ ಮನೆಗಳನ್ನು ಕೆಡವುತ್ತಿದ್ದಾರೆ. ಇಲ್ಲೇ ಸಮೀಪದಲ್ಲಿ ಪ್ರಭಾವಿ ರಾಜಕಾರಣಿಯ ಕಾಲೇಜಿದೆ. ಅದೂ ರಾಜಕಾಲುವೆ ಮೇಲಿದೆ. ಆದರೆ ಆ ಕಾಲೇಜು ಕಟ್ಟಡಕ್ಕೆ ಒಂದು ನೋಟಿಸ್​ ಕೂಡ ನೀಡಿಲ್ಲ ಎಂದು ಆರೋಪಿಸಿದ್ದಾರೆ.


ರಾಜಕಾಲುವೆ ಮೇಲೆ ನಮ್ಮ ಮನೆ ನಿರ್ಮಾಣವಾಗಿಲ್ಲ ಎಂಬುದಕ್ಕೆ ನಮ್ಮಲ್ಲಿ ದಾಖಲೆಗಳಿವೆ. ಆದರೆ ಈ ದಾಖಲೆಗಳನ್ನು ತೋರಿಸಿದರೂ ಸಹ ಅಧಿಕಾರಿಗಳು ನಮ್ಮ ಮಾತನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ರಾಜಕಾರಣಿಗಳ ಮನೆಗಳನ್ನು ಸರ್ವೇ ಕೂಡ ಮಾಡುತ್ತಿಲ್ಲ. ಆದರೆ ಸಾಮಾನ್ಯರ ವಿಚಾರಕ್ಕೆ ಬಂದರೆ ಮಾತ್ರ ಕ್ಷಣಮಾತ್ರದಲ್ಲಿ ನಮ್ಮ ಮನೆಯ ಕಾಂಪೌಂಡ್​ ಹಾಗೂ ಗೋಡೆಗಳನ್ನೆಲ್ಲ ತೆರವು ಮಾಡಲಾಗುತ್ತಿದೆ. ಸರ್ಕಾರ ಈ ಬಗ್ಗೆ ಕೂಡಲೇ ಗಮನ ಹರಿಸಬೇಕು ಎಂದು ಮನೆ ಕಾಂಪೌಂಡ್​ ಕಳೆದುಕೊಂಡ ಮಹಿಳೆಯೊಬ್ಬರು ಆಗ್ರಹಿಸಿದ್ದಾರೆ.

ಇದನ್ನು ಓದಿ : Dinesh Karthik: 12 ವರ್ಷಗಳ ನಂತರ ಮತ್ತೊಮ್ಮೆ ವಿಶ್ವಕಪ್ ಆಡಲಿದ್ದಾರೆ ಡಿಕೆ ; ನಾಲ್ಕೇ ಶಬ್ದಗಳಲ್ಲಿ ಖುಷಿ ಹಂಚಿಕೊಂಡ ಕಾರ್ತಿಕ್

ಇದನ್ನೂ ಓದಿ : ICC T20 World Cup India Team: ಭಾರತ ಟಿ20 ವಿಶ್ವಕಪ್ ತಂಡದಲ್ಲೊಬ್ಬ “ಕೋಟಾ” ಪ್ಲೇಯರ್

2nd day for operation buldozer in bengaluru

RELATED ARTICLES

Most Popular