ಸೋಮವಾರ, ಜೂನ್ 16, 2025
Homeನಮ್ಮ ಬೆಂಗಳೂರುPuneeth Raj Kumar : ಅಪ್ಪು ಪ್ರತಿಮೆ ಸ್ಥಾಪನೆಗೆ ವಿಘ್ನ: ಪವರ್ ಸ್ಟಾರ್ ಅಭಿಮಾನಿಗಳಿಗೆ ಬಿಬಿಎಂಪಿ...

Puneeth Raj Kumar : ಅಪ್ಪು ಪ್ರತಿಮೆ ಸ್ಥಾಪನೆಗೆ ವಿಘ್ನ: ಪವರ್ ಸ್ಟಾರ್ ಅಭಿಮಾನಿಗಳಿಗೆ ಬಿಬಿಎಂಪಿ ಶಾಕ್

- Advertisement -

ಕನ್ನಡಿಗರ ಮನೆ ಮನದಲ್ಲಿ ಸ್ಥಾನ ಪಡೆದಿದ್ದ ನಟ ಪುನೀತ್ ರಾಜ್ ಕುಮಾರ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ಘಟನೆಯಿಂದ ಶಾಕ್ ಗೆ ಒಳಗಾಗಿರುವ ಅಭಿಮಾನಿಗಳು ಪವರ್ ನೆನಪು ಅಮರವಾಗಿಸಲು ನಗರದಾದ್ಯಂತ ಪುತ್ಥಳಿ ನಿರ್ಮಾಣಕ್ಕೆ ಸಿದ್ಧವಾಗಿದ್ದರು. ಆದರೆ ಈ ಉತ್ಸಾಹಕ್ಕೆ ಬಿಬಿಎಂಪಿ ಬ್ರೇಕ್ ಹಾಕಿದೆ.

ನಗರದಾದ್ಯಂತ ಪುನೀತ್ ರಾಜ್ ಕುಮಾರ್ ಪ್ರತಿಮೆ ಸ್ಥಾಪಿಸಿ ಬಾಲನಟನ ನೆನಪನ್ನು ಅಮರವಾಗಿಸಲು ಅಭಿಮಾನಿಗಳು ಸಿದ್ಧತೆ ನಡೆಸಿದ್ದರು. ಈಗಾಗಲೇ ಪುನೀತ್ ರಾಜ್ ಕುಮಾರ್ ಪ್ರತಿಮೆ ನಿರ್ಮಾಣಕ್ಕೂ ಆರ್ಡರ್ ನೀಡಲಾಗಿತ್ತು.

ಆದರೇ ಅಭಿಮಾನಿಗಳ ಉತ್ಸಾಹಕ್ಕೆ ಬಿಬಿಎಂಪಿ ನಿಯಮಗಳ ಎಚ್ಚರಿಕೆಯೊಂದಿಗೆ ಕಡಿವಾಣ ಹಾಕಿದೆ. ಯಾವುದೇ ಸ್ಥಳದಲ್ಲಿ ಪುನೀತ್ ಪ್ರತಿಮೆ ನಿರ್ಮಾಣಕ್ಕೂ ಮುನ್ನ ಬಿಬಿಎಂಪಿ ಯಿಂದ ಅನುಮತಿ ಪಡೆಯುವಂತೆ ಸೂಚಿಸಿದೆ.

ಮಾತ್ರವಲ್ಲ ಎಲ್ಲೆಂದರಲ್ಲಿ, ಪುಟ್ ಪಾತ್, ರಸ್ತೆಗಳ ಪಕ್ಕ, ಅಪಾಯಕಾರಿ ಸ್ಥಳಗಳು, ಇಕ್ಕಟ್ಟಾದ ಸ್ಥಳದಲ್ಲಿ ಪ್ರತಿಮೆ ಸ್ಥಾಪಿಸದಂತೆ ಕೂಡ ಬಿಬಿಎಂಪಿ ತನ್ನ ಆದೇಶದಲ್ಲಿ ಹೇಳಿದೆ.

ಬಿಬಿಎಂಪಿ ಈ ಖಡಕ್ ನಿಯಮದಿಂದ ಪುನೀತ್ ಅಭಿಮಾನಿಗಳ ಅತಿ ಉತ್ಸಾಹಕ್ಕೆ ಬ್ರೇಕ್ ಬಿದ್ದಂತಾಗಿದ್ದು ನಿಯಮಗಳನ್ನು ಅನುಸರಿಸದೇ ಎಲ್ಲೆಂದರಲ್ಲಿ ಪ್ರತಿಮೆ‌ ನಿರ್ಮಿಸುವುದಕ್ಕೆ ಬಿಬಿಎಂಪಿ ನಿಯಮದ ನಿರ್ಬಂಧ ಹೇರಿದೆ.

(Opposition to construction of Puneet Rajkumar statue, BBMP shock to Power Star fans)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular