ಬೆಂಗಳೂರು : ಬಿಬಿಎಂಪಿ ಮಾಜಿ ಕಾರ್ಪೋರೇಟರ್ ರೇಖಾ ಕದರೀಶ್ ಹತ್ಯೆ ಪ್ರಕರಣ ಬೆಂಗಳೂರನ್ನೇ ಬೆಚ್ಚಿಬೀಳಿಸಿದೆ. ಇದೀಗ ರೇಖಾ ಹತ್ಯೆಯ ಭೀಕರ ವಿಡಿಯೋ ವೈರಲ್ ಆಗಿದೆ.

ಛಲವಾದಿ ಪಾಳ್ಯದ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಅವರು ನಿನ್ನೆ ತನ್ನ ಮನೆ ಸಮೀಪದಲ್ಲಿ ಆಹಾರ ಸಾಮಗ್ರಿಗಳನ್ನು ವಿತರಣೆ ಮಾಡುತ್ತಿದ್ದರು. ಈ ವೇಳೆ ದುಷ್ಕರ್ಮಿಗಳು ಮಾರಕಾಸ್ತ್ರ ಗಳಿಂದ ಹಲ್ಲೆ ನಡೆಸಿದ್ದರು. ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ರೇಖಾ ಕದಿರೇಶ್ ಸಾವನ್ನಪ್ಪಿದ್ದಾರೆ.

ರೇಖಾ ಕದರೀಶ್ ಅವರನ್ನು ಹತ್ಯೆ ಮಾಡುವುದಕ್ಕೆ ಮುನ್ನ ಆರೋಪಿ ಗಳು ತಮ್ಮನ್ನು ಮರೆ ಮಾಚುವ ನಿಟ್ಟಿನಲ್ಲಿ ಮನೆಯ ಸುತ್ತಮುತ್ತಲಿನ ಸುಮಾರು 7 ಸಿಸಿ ಕ್ಯಾಮರಾಗಳನ್ನು ಮೇಲೆಕ್ಕೆ ತಿರುಗಿಸಿದ್ದಾರೆ. ಆದರೆ ರೇಖಾ ಅವರ ಹತ್ಯೆಯ ವೇಳೆಯಲ್ಲಿ ಸಾರ್ವಜನಿಕರು ಕೊಲೆಯ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಈ ಮೊಬೈಲ್ ವಿಡಿಯೋ ವೈರಲ್ ಆಗಿದೆ.

ಮೂವರು ದುಷ್ಕರ್ಮಿಗಳು ಪುಡ್ ಕಿಟ್ ಹಂಚುತ್ತಿದ್ದ ರೇಖಾ ಮೇಲೆ ದಾಳಿ ಮಾಡಿದ್ದಾರೆ. ದುಷ್ಜರ್ಮಿಗಳಿಂದ ತಪ್ಪಸಿಕೊಂಡು ಓಡಿದ್ರೂ ಬಿಡದ ಅರೋಪಿಗಳು ರೇಖಾ ಕದರೀಶ್ ಅವರ ಕತ್ತನ್ನು ಸೀಳಿ ಭೀಕರವಾಗಿ ಕೊಲೆಗೈದಿದ್ದಾರೆ. ಇದೀಗ ಪ್ರಕರಣಕ್ಕೆ ಸೆರೆಯಾಗಿರುವ ಮೊಬೈಲ್ ವಿಡಿಯೋ ಬೆಂಗಳೂರಿಗರನ್ನು ಬೆಚ್ಚಿಬೀಳಿಸಿದೆ.