ಮಂಗಳವಾರ, ಏಪ್ರಿಲ್ 29, 2025
HomeNationalMettupalayam : ಸೇನಾ ಕಾಪ್ಟರ್​ ದುರಂತ: ಅಪಘಾತಕ್ಕೀಡಾದ ಹುತಾತ್ಮ ಯೋಧರ ಪಾರ್ಥೀವ ಶರೀರ ಸಾಗಿಸುತ್ತಿದ್ದ...

Mettupalayam : ಸೇನಾ ಕಾಪ್ಟರ್​ ದುರಂತ: ಅಪಘಾತಕ್ಕೀಡಾದ ಹುತಾತ್ಮ ಯೋಧರ ಪಾರ್ಥೀವ ಶರೀರ ಸಾಗಿಸುತ್ತಿದ್ದ ಶವವಾಹನ

- Advertisement -

ತಮಿಳುನಾಡಿನ ಕುನೂರಿನಲ್ಲಿ ನಡೆದ ದುರಂತದಲ್ಲಿ ಹುತಾತ್ಮರಾದ ಯೋಧರು ಹಾಗೂ ಸೇನಾಧಿಕಾರಿಗಳಲ್ಲಿ ಒಬ್ಬರ ಪಾರ್ಥಿವ ಶರೀರಗಳನ್ನು ಸಾಗಿಸುತ್ತಿದ್ದ ಆ್ಯಂಬುಲೆನ್ಸ್​​ ತಮಿಳುನಾಡಿನ ಮೆಟ್ಟುಪಾಳ್ಯಂ(Mettupalayam) ಎಂಬಲ್ಲಿ ಅಪಘಾತಕ್ಕೀಡಾಗಿದೆ.


ಹುತಾತ್ಮ ಯೋಧರ ಪಾರ್ಥೀವ ಶರೀರಗಳನ್ನು ದೆಹಲಿ ಸಾಗಿಸಲು ಯೋಜನೆ ರೂಪಿಸಲಾಗಿತ್ತು. ಅದರಂತೆಯೇ ಸೇನಾಧಿಕಾರಿಗಳ ಪಾರ್ಥೀವ ಶರೀರಗಳನ್ನು ಹೊತ್ತ ಆ್ಯಂಬುಲೆನ್ಸ್​ ಸುಲೂರು ಏರ್​ಬೇಸ್​ ಮಾರ್ಗವಾಗಿ ತೆರಳುತ್ತಿದ್ದ ವೇಳೆ ಮೆಟ್ಟುಪಾಳ್ಯಂ ಎಂಬಲ್ಲಿ ಈ ಅವಘಡ ಸಂಭವಿಸಿದೆ. ಅಪಘಾತದಲ್ಲಿ ಕೆಲ ಪೊಲೀಸರಿಗೆ ಗಾಯಗಳಾಗಿದೆ ಎಂದು ತಿಳಿದುಬಂದಿದೆ. ಈ ಆ್ಯಂಬುಲೆನ್ಸ್​ನಲ್ಲಿ ಮೃತ ಸೇನಾಧಿಕಾರಿಗಳ ಪೈಕಿ ಓರ್ವರ ಪಾರ್ಥೀವ ಶರೀರವಿತ್ತು ಎನ್ನಲಾಗಿದೆ.


ತಮಿಳುನಾಡಿನಲ್ಲಿ ನಿನ್ನೆ ಮಧ್ಯಾಹ್ನ ಸಂಭವಿಸಿದ ಸೇನಾ ಹೆಲಿಕಾಪ್ಟರ್​ ದುರಂತದಲ್ಲಿ ಸಿಡಿಎಸ್​ ಬಿಪಿನ್​ ರಾವತ್​, ಅವರ ಪತ್ನಿ ಮಧುಲಿಕಾ ರಾವತ್​, ಸಿಡಿಎಸ್​​ ರಕ್ಷಣಾ ಸಲಹೆಗಾರ ಬ್ರಿಗೇಡಿಯರ್​​​ ಲಖ್ಬಿಂದರ್​ ಸಿಂಗ್​ ಲಿಡ್ಡೆರ್​, ಲೆ.ಕ ಹರ್ಜಿಂದರ್​ ಸಿಂಗ್, ವಿಂಗ್​ ಕಮಾಂಡರ್​ ಪಿಎಸ್​ ಚವ್ಹಾಣ್​, ಸ್ಕ್ವಾಡ್ರನ್​ ಲೀಡರ್​ ಕೆ ಸಿಂಗ್​, ಜೆಡಬ್ಲು ಓ ಪ್ರದೀಪ್​, ಜೆಡಬ್ಲುಓ ದಾಸ್​, ನಾಯಕ್​ ಬಿ ಸಾಯಿ ತೇಜ, ಸತ್ಪಾಲ್​, ನಾಯಕ್​ ವಿವೇಕ ಕುಮಾರ್, ನಾಯಕ್​ ಗುರುಸೇವಕ್​ ಸಿಂಗ್​ ಹುತಾತ್ಮರಾಗಿದ್ದಾರೆ. ಐಎಎಫ್​ ಗ್ರೂಪ್​ ಕ್ಯಾಪ್ಟನ್​​ ವರುಣ್​ ಸಿಂಗ್​ ಮಾತ್ರ ಬದುಕುಳಿದಿದ್ದು ಅವರ ಶೀಘ್ರ ಚೇತರಿಕೆಗೆ ಇಡೀ ದೇಶವೇ ಪ್ರಾರ್ಥಿಸುತ್ತಿದೆ.

A hearse service vehicle, ferrying the body of one of the 13 victims met with an accident near Mettupalayam

ಇದನ್ನು ಓದಿ : Lt col Harjinder Singh: ಸೇನಾ ಹೆಲಿಕಾಪ್ಟರ್​ ಪತನ: ಕನ್ನಡತಿಯನ್ನೇ ವರಿಸಿದ್ದರು ಹುತಾತ್ಮ ಲೆ.ಕ.ಹರ್ಜಿಂದರ್​ ಸಿಂಗ್​​

ಇದನ್ನೂ ಓದಿ : Varun Singh : ವೆಲ್ಲಿಂಗ್ಟನ್​ನಿಂದ ಬೆಂಗಳೂರಿನ ಆಸ್ಪತ್ರೆಗೆ ವರುಣ್​ ಸಿಂಗ್​ ಶಿಫ್ಟ್​: ತಂದೆಯಿಂದ ಅಧಿಕೃತ ಮಾಹಿತಿ

RELATED ARTICLES

Most Popular