Ahmedabad plane crash Live : ಅಹಮದಾಬಾದ್: ಭಾರತದಲ್ಲಿ ಮತ್ತೊಂದು ವಿಮಾಣ ದುರಂತ ಸಂಭವಿಸಿದೆ. ಏರ್ ಇಂಡಿಯಾ ಕಂಪೆನಿಗೆ ಸೇರಿದ ಬೋಯಿಂಗ್ 737-8 ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ, 242 ಮಂದಿ ಸಾವನ್ನಪ್ಪಿದ್ದಾರೆ. ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಸಾವನ್ನಪ್ಪಿದ್ದಾರೆ. ಸದ್ಯ ವಿಮಾನದ ಬ್ಯ್ಕಾಕ್ ಬಾಕ್ಸ್ ಪತ್ತೆಯಾಗಿದ್ದು, ವಿಮಾನ ದುರಂತದ ರಹಸ್ಯ ಬಯಲಾಗಲಿದೆ.
ಜೂನ್ 12ರಂದು ಮಧ್ಯಾಹ್ನ 1 ಗಂಟೆಗೆ ಗುಜರಾತ್ ರಾಜ್ಯದ ಅಹಮದಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಟೇಕ್ ಆಪ್ ಆಗಿದ್ದ ವಿಮಾನ ಲಂಡನ್ ತಲುಪಬೇಕಾಗಿತ್ತು. ವಿಮಾನದಲ್ಲಿ ಸುಮಾರು 242 ಮಂದಿ ಪ್ರಯಾಣಿಸುತ್ತಿದ್ದರು. ಆದರೆ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ವಿಮಾನ ಪತನವಾಗಿದೆ. ಅಹಮದಾಬಾದ್ ಮೇಘಾನಿ ನಗರದಲ್ಲಿರುವ ವೈದ್ಯರ ಹಾಸ್ಟೆಲ್ಗೆ ವಿಮಾನ ಢಿಕ್ಕಿಯಾಗಿದ್ದು, ವಿಮಾನ ಹೊತ್ತಿ ಉರಿದಿದೆ. ಸದ್ಯದ ಮಾಹಿತಿಯ ಪ್ರಕಾರ ವಿಮಾನದಲ್ಲಿ 169 ಮಂದಿ ಭಾರತೀಯ ಪ್ರಯಾಣಿಕರು, 53 ಮಂದಿ ಬ್ರಿಟನ್ ಪ್ರಜೆಗಳು ಪ್ರಯಾಣಿಸುತ್ತಿದ್ದರು.
ವಿಮಾನ ದುರಂತಗಳು ಸಂಭವಿಸಿದಾಗ ವಿಮಾನ ಅಂತಿಮವಾಗಿ ತನ್ನ ಕೈಯಲ್ಲಿ ನಿಯಂತ್ರಿಸೋದಕ್ಕೆ ಸಾಧ್ಯವೇ ಇಲ್ಲಾ ಅನ್ನೋದು ಫೈಲೆಟ್ಗೆ ಅರಿವಾಗುತ್ತಲೇ ಮೇ ಡೇ ಅನ್ನೋ ಸಂದೇಶವನ್ನು ರವಾನಿಸುತ್ತಾರೆ. ಇದೀಗ ಅಹಮದಾಬಾದ್ನಲ್ಲಿ ದುರಂತಕ್ಕೆ ಒಳಗಾಗಿರುವ ವಿಮಾನದಲ್ಲಿದ್ದ ಫೈಲೆಟ್ ಕ್ಯಾಪ್ಟನ್ ಕ್ಯಾಪ್ಟನ್ ಸುಮಿತ್ ಸಬರ್ವಾಲ್ ವಿಮಾನವನ್ನು ನಿಯಂತ್ರಣಕ್ಕೆ ತರಲು ಯತ್ನಿಸಿದ್ದಾರೆ. ಆದರೆ ವಿಮಾನ ಟೇಕ್ ಆಫ್ ಆಗುವ ಸಾಮರ್ಥ್ಯವನ್ನು ಸಂಪೂರ್ಣವಾಗಿ ಕಳೆದುಕೊಂಡಿತ್ತಿ. ಇದೇ ಕಾರಣದಿಂದಲೇ ಪೈಲೆಟ್ ಸುಮಿತ್ ಮೂರು ಬಾರಿ ಮೇ ಡೇ ಸಂದೇಶವನ್ನು ರವಾನಿಸಿದ್ದರಂತೆ. ಕ್ಯಾಪ್ಟನ್ ಸುಮಿತ್ ಸಬರ್ವಾಲ್ ಸುಮಾರು 8000 ಗಂಟೆಗಳಿಗೂ ಅಧಿಕ ಕಾಲ ವಿಮಾನವನ್ನು ಹಾರಾಟ ನಡೆಸಿದ್ದ ಅನುಭವ ಹೊಂದಿದ್ರೆ, ಕರ್ನಾಟಕ ಕರಾವಳಿ ಮೂಲದ ಕೋ ಪೈಲೆಟ್ ಕ್ಲೈವ್ ಕುಂದರ್ ಸುಮಾರು ಒಂದು ಸಾವಿರ ಗಂಟೆಗಳ ಕಾಲ ವಿಮಾನ ಹಾರಾಟ ನಡೆಸಿದ ಅನುಭವಿದೆ. ಆದ್ರೂ ಕೂಡ ಈ ಇಬ್ಬರೂ ಫೈಲೆಟ್ಗಳಿಗೆ ಈ ವಿಮಾನದಲ್ಲಿ ಉಂಟಾಗಿದ್ದ ತಾಂತ್ರಿಕ ದೋಷ ನಿವಾರಣೆ ಮಾಡೋದಕ್ಕೆ ಸಾಧ್ಯವಾಗಲೇ ಇಲ್ಲ.
Ahmedabad plane crash Live : ಪತ್ತೆಯಾಯ್ತು ಏರ್ಇಂಡಿಯಾ ವಿಮಾನದ ಬ್ಲ್ಯಾಕ್ ಬಾಕ್ಸ್
ಏರ್ ಇಂಡಿಯಾ ವಿಮಾನ ದುರಂತಕ್ಕೆ ಒಳಗಾಗಿದ್ದ ಮೇಘಾನಿ ನಗರದಲ್ಲಿಯೇ ಇದೀಗ ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆ. ವಿಮಾನದಲ್ಲಿರುವ ಬ್ಲ್ಯಾಕ್ ಬಾಕ್ಸ್ ವಿಮಾನ ದುರಂತಕ್ಕೆ ನಿಖರವಾದ ಕಾರಣ ಏನು ಅನ್ನೋದನ್ನು ತಿಳಿಸುತ್ತದೆ. ಇದೇ ಕಾರಣದಿಂದಲೇ ಬ್ಲ್ಯಾಕ್ ಬಾಕ್ಸ್ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಬ್ಲ್ಯಾಕ್ ಬಾಕ್ಸ್ ಕುರಿತು ಡಿಜಿಸಿಎ ತನಿಖೆಯನ್ನು ನಡೆಸಿ ಅಂತಿಮ ವರದಿಯನ್ನು ನೀಡಲಿದೆ. ಈ ಹಿಂದೆ ಮಂಗಳೂರಿನ ಬಜಪೆ ಅಂತರಾಷ್ಟ್ರೀಯ ವಿಮಾನದಲ್ಲಿ ನಡೆದ ವಿಮಾನ ದುರಂತದ ರಹಸ್ಯ ಕೂಡ ಇದೇ ಬ್ಲ್ಯಾಕ್ ಬಾಕ್ಸ್ನಿಂದಲೇ ಪತ್ತೆಯಾಗಿತ್ತು. ಇದೀಗ ಅಹಮದಾಬಾದ್ನ ವಿಮಾನ ದುರಂತದ ರಹಸ್ಯ ಬಯಲಾಗಲಿದೆ.
Ahmedabad plane crash Live : ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಸಾವು
ಗುಜರಾತ್ನಲ್ಲಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದ ವಿಜಯ್ ರೂಪಾನಿ ಲಂಡನ್ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಲಂಡನ್ನಲ್ಲಿ ಇರುವ ತನ್ನ ಪತ್ನಿಯನ್ನು ನೋಡಲು ತೆರಳುತ್ತಿದ್ದ ವಿಜಯ್ ರೂಪಾನಿ ವಿಮಾನ ದುರಂತದಲ್ಲಿ ಸುಟ್ಟು ಕರಕಲಾಗಿದ್ದಾರೆ. ವಿಜಯ್ ರೂಪಾನಿ ಅವರು ಪ್ರಯಾಣಿಕ ನಡುವಲ್ಲಿ ಕುಳಿತಿರುವ ಪೋಟೋವನ್ನು ಸಹ ಪ್ರಯಾಣಿಕರು ಸೆರೆ ಹಿಡಿದಿದ್ದರು. ಇದೀಗ ವಿಜಯ್ ರೂಪಾನಿ ಪ್ರಯಾಣಿಸುತ್ತಿದ್ದ ಪೋಟೋ ವೈರಲ್ ಆಗಿದೆ.
ದುರಂತದಲ್ಲಿ ಬದುಕಿಳಿದ ಓರ್ವ ಪ್ರಯಾಣಿಕ..!
ಏರ್ ಇಂಡಿಯಾ ವಿಮಾನ ದುರಂತದಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ ಪ್ರಯಾಣಿಕರು ಹಾಗೂ ಸಿಬ್ಬಂದಿಗಳು ಮೃತಪಟ್ಟಿದ್ದರು ಎನ್ನಲಾಗುತ್ತಿತ್ತು. ಆದರೆ ವಿಮಾನ ದುರಂತದಲ್ಲಿ ಓರ್ವ ಪ್ರಯಾಣಿಕ ಬದುಕಿ ಉಳಿದಿದ್ದಾನೆ ಅನ್ನೋ ಕುರಿತು ಮಾಧ್ಯಮಗಳು ವರದಿ ಮಾಡಿವೆ. ಪ್ರಯಾಣಿಕ ರಮೇಶ್ ಎಮರ್ಜೆನ್ಸಿ ಬಾಗಿಲ ಮೂಲಕ ವಿಮಾನದಿಂದ ಹೊರಗೆ ಹಾರಿ ತನ್ನ ಪ್ರಾಣ ಉಳಿಸಿಕೊಂಡಿದ್ದಾನೆ. ನಂತರ ತಾನೇ ನಡೆದುಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ ಎನ್ನಲಾಗುತ್ತಿದೆ.
ಏರ್ ಇಂಡಿಯಾ ವಿಮಾನ ಮೇಘಾನಿ ನಗರದಲ್ಲಿರುವ ವೈದ್ಯರ ಹಾಸ್ಟೆಲ್ ಕಟ್ಟಡಕ್ಕೆ ಢಿಕ್ಕಿ ಹೊಡೆದಿದೆ. ಮಧ್ಯಾಹ್ನ ಊಟದ ಸಮಯ ಆಗಿರೋದ್ರಿಂದಾಗಿ ಬಹುತೇಕರು ಹಾಸ್ಟೆಲ್ನಲ್ಲಿಯೇ ಇದ್ದರು ಎನ್ನಲಾಗುತ್ತಿದೆ. ಇದೀಗ ಮಾಧ್ಯಮಗಳ ವರದಿಯ ಪ್ರಕಾರ ಸುಮಾರು 22 ಮಂದಿ ಹಾಸ್ಟೆಲ್ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ.
ಅಹಮದಾಬಾದ್ನಲ್ಲಿ ನಡೆದಿರುವ ವಿಮಾನ ದುರಂತದ ಬೆನ್ನಲ್ಲೇ ಹಲವು ಅನುಮಾನಗಳು ವ್ಯಕ್ತವಾಗಿದೆ. ಪಾಕಿಸ್ತಾನ ಯುದ್ದ, ಪಹಲ್ಗಾಮ್ ಉಗ್ರರ ದಾಳಿಯ ಬೆನ್ನಲ್ಲೇ ನಡೆದಿರುವ ಏರ್ಇಂಡಿಯಾ ವಿಮಾನ ದುರಂತದ ಹಿಂದೆ ಕೂಡ ಉಗ್ರರ ಕೈವಾಡ ಇದೆಯಾ ಅನ್ನೋ ಅನುಮಾನವೂ ವ್ಯಕ್ತವಾಗಿದೆ. ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ರಕ್ಷಣಾ ಇಲಾಖೆ, ಡಿಜಿಸಿಎ ತನಿಖೆಯನ್ನು ನಡೆಸುತ್ತಿದೆ. ವಿಮಾನದಲ್ಲಿ ತಾಂತ್ರಿಕ ಕಾರಣ ಸಂಭವಿಸಿರೋದಕ್ಕೆ ಕಾರಣವೇನು ಅನ್ನೋ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.
ಬೋಯಿಂಗ್ 787-8 ಡ್ರೀಮ್ ಲೈನರ್ ವಿಶೇಷತೆಯೇನು ?
ದುರಂತಕ್ಕೆ ಒಳಗಾಗಿದ್ದ ಬೋಯಿಂಗ್ 787-8 ಡ್ರೀಮ್ ಲೈನರ್ ವಿಮಾನವನ್ನು ಆಕಾಶದ ಅರಮನೆ ಅಂತಾನೆ ಕರೆಯಲಾಗುತ್ತದೆ. ಈ ವಿಮಾನವನ್ನು ವಿಶೇಷವಾಗಿ ವಿನ್ಯಾಸ ಮಾಡಲಾಗಿತ್ತು. ಅಷ್ಟೇ ಅಲ್ಲಾ ಇದು ವಿಶ್ವದ ಎರಡನೇ ಅತೀ ದೊಡ್ಡ ವಿಮಾನವೂ ಹೌದು. ಬೋಯಿಂಗ್ 787 ಡ್ರೀಮ್ ಲೈನರ್ ಅನ್ನೋದು ಅಮೇರಿಕನ್ ವೈಡ್-ಬಾಡಿ ವಿಮಾನವಾಗಿದ್ದು, ಇದನ್ನು ಬೋಯಿಂಗ್ ಕಮರ್ಷಿಯಲ್ ಏರ್ಪ್ಲೇನ್ಸ್ ಅಭಿವೃದ್ದಿ ಪಡಿಸಿದೆ. ಈ ವಿಮಾನವು ಹೆಚ್ಚು ದಕ್ಷತೆಯಿಂದ ಕೂಡಿದ್ದು ವಾಣಿಜ್ಯ ಉದ್ದೇಶಕ್ಕಾಗಿ ಈ ವಿಮಾನವನ್ನು ಬಳಕೆ ಮಾಡಲಾಗುತ್ತಿದೆ. ಒಮ್ಮೆ ಟೇಕ್ ಆಫ್ ಆದ ನಂತರದಲ್ಲಿ ಈ ವಿಮಾನ 8,500 ನಾಟಿಕಲ್ ಮೈಲು ದೂರದ ವರೆಗೆ ಪಾಯಿಂಟ್-ಟು-ಪಾಯಿಂಟ್ ಮಾರ್ಗದಲ್ಲಿ ಸಂಚಾರ ನಡೆಸುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೇ ಏಕಕಾಲದಲ್ಲಿ 200 ರಿಂದ 300 ಹೊತ್ತೊಯ್ಯಲಿದೆ. ವಿಶ್ವದಲ್ಲಿರುವ ವಿಮಾನಗಳ ಪೈಕಿ ಅತ್ಯಂತ ಉತ್ಕೃಷ್ಟ ತಂತ್ರಜ್ಞಾನವನ್ನು ಒಳಗೊಂಡಿರುವ ವಿಮಾನ ಎನಿಸಿಕೊಂಡಿದೆ.
ಮಂಗಳೂರು ದುರಂತ ಸಂಭವಿಸಿದ್ದು ಹೇಗೆ ?
ಅಂದು 2010 ಮೇ 22ರ ಮುಂಜಾನೆ 6 ಗಂಟೆಯ ಸುಮಾರಿಗೆ ದುಬೈ ಇಂಟರ್ನ್ಯಾಷನಲ್ ವಿಮಾನ ನಿಲ್ದಾಣದಿಂದ ಮಂಗಳೂರಿಗೆ ಹೊರಟಿದ್ದ ಏರ್ಇಂಡಿಯಾ ಬೋಯಿಂಗ್ 737-8 ವಿಮಾನ ಬಜಪೆ ಅಂತರಾಷ್ಟ್ರೀಯ ವಿಮಾಣ ನಿಲ್ದಾಣದಲ್ಲಿ ದುರಂತಕ್ಕೆ ಒಳಗಾಗಿತ್ತು. ಮಂಗಳೂರು ವಿಮಾನ ನಿಲ್ದಾಣದ ಟೇಬಲ್ ಟಾಪ್ ರನ್ವೇನಲ್ಲಿ ವಿಮಾನವನ್ನು ಲ್ಯಾಂಡ್ ಮಾಡುವ ವೇಳೆಯಲ್ಲಿ ವಿಮಾನ ಫೈಲೆಟ್ ನಿಯಂತ್ರಣ ತಪ್ಪಿತ್ತು. ವಿಮಾನ ರನ್ವೇ ದಾಟಿ ಕಾಂಪೌಂಡ್ ಸೀಳಿಕೊಂಡು ಕಣಿವೆಗೆ ಜಾರಿ ಬಿದ್ದ ಕೂಡಲೇ ವಿಮಾನ ಎರಡು ತುಂಡಾಗಿದ್ದು, ಬೆಂಕಿಯ ಕೆನ್ನಾಲಗೆಗೆ ಸಿಲುಕಿ ಸಂಪೂರ್ಣ ವಿಮಾನ ಹೊತ್ತಿ ಉರಿದಿತ್ತು. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 158 ಮಂದಿ ಸಾವನ್ನಪ್ಪಿದ್ದರು. ಈ ದುರಂತದ ಘಟನೆ ಮಾಸುವ ಮುನ್ನವೇ ಗುಜರಾತ್ನ ಅಹಮದಾಬಾದ್ನಲ್ಲಿ ಮತ್ತೊಂದು ಮಹಾ ದುರಂತ ಸಂಭವಿಸಿದೆ.
1947 ರಿಂದ ಇಲ್ಲಿಯವರೆಗೆ ಅಂದ್ರೆ 2025 ರವರೆಗೆ ಭಾರತದಲ್ಲಿ ನಡೆದಿರುವ ವಿಮಾನ ದುರಂತಗಳನ್ನು ಲೆಕ್ಕ ಹಾಕಿದ್ರೆ ಒಟ್ಟು ಭಾರತದಲ್ಲಿ 52 ವಿಮಾನ ದುರಂತಗಳು ಸಂಭವಿಸಿದೆ. ವಿಮಾನ ದುರಂತದಲ್ಲಿ ಒಟ್ಟು 2,100 ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ವಿಮಾನ ದುರಂತಕ್ಕೆ ಭಯೋತ್ಪಾದಕರ ದಾಳಿ, ತಾಂತ್ರಿಕ ದೋಷ, ಪೈಲೆಟ್ ನಿರ್ಲಕ್ಷ್ಯ ಅನ್ನೋ ದೃಢಪಟ್ಟಿತ್ತು. ಆದರೆ ಅಹಮದಾಬಾದ್ನಲ್ಲಿ ನಡೆದ ದುರಂತಕ್ಕೆ ಏನು ಕಾರಣ ಅನ್ನೋದು ನಿಗೂಢವಾಗಿದೆ. ಮತ್ತೊಂದು ವಿಡಿಯೋದ ಜೊತೆಗೆ ನಿಮ್ಮ ಮುಂದೆ ಹಾಜರಾಗ್ತೇವೆ ಅಲ್ಲಿಯವರೆಗೆ ನೋಡ್ತಾ ಇರಿ ಅಖಂಡ ಭಾರತ -ಸನಾತನ ಯುಗ ಆರಂಭ.
Ahmedabad plane crash Live Air India Flight 171 Black box found, mystery revealed in Kannada News