ಕೇರಳ : ಕ್ಯಾಲಿಕಟ್ ನಿಂದ ಕುವೈತ್ ಗೆ ಪ್ರಯಾಣಿಸ ಬೇಕಾಗಿದ್ದ ಏರ್ ಇಂಡಿಯಾ ವಿಮಾನ ತುರ್ತು ಲ್ಯಾಂಡಿಂಗ್ ಮಾಡಿದೆ. ಪೈಲೆಟ್ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಕೋಝಿಕ್ಕೋಡ್ ನಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದೆ. ವಿಮಾನದ ಕಾರ್ಗೋ ಕಂಪಾರ್ಟ್ಮೆಂಟ್ನಲ್ಲಿ ಫೈರ್ ಅಲಾರಂ ಬಾರಿಸಿದೆ ಈ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡ ಪೈಲೆಟ್ ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡಿದ್ದಾರೆ.

ಏರ್ ಇಂಡಿಯಾ ವಿಮಾನ ಕ್ಯಾಲಿಕಟ್-ಕುವೈತ್ಗೆ ಹಾರಾಟ ನಡೆಸ ಬೇಕಾಗಿತ್ತು.ವಿಮಾನದಲ್ಲಿ ಒಟ್ಟು 17 ಮಂದಿ ಪ್ರಯಾಣಿಕರಿ ದ್ದರು. ಬೆಂಕಿ ಸೂಚಕ ಅಲರಾಮ್ ಬಾರಿಸುತ್ತಿದ್ದಂತೆಯೇ ವಿಮಾನ ವನ್ನು ತುರ್ತು ಭೂಸ್ಪರ್ಶ ಮಾಡಲಾಗಿದೆ. ಯಾವುದೇ ರೀತಿಯಲ್ಲಿ ಯೂ ಹಾನಿ ಸಂಭವಿಸಿಲ್ಲ ಎಂದು ಏರ್ ಇಂಡಿಯಾ ತಿಳಿಸಿದೆ.