ಭಾನುವಾರ, ಜೂನ್ 15, 2025
HomeNationalDelhi CM: ಹಿಂದುತ್ವ ಅಜೆಂಡಾ: ಪ್ರಧಾನಿ ಮೋದಿಗೆ ದೆಹಲಿ ಸಿಎಂ ಕೇಜ್ರಿವಾಲ್ ಮನವಿ ಮಾಡಿದ್ದೇನು

Delhi CM: ಹಿಂದುತ್ವ ಅಜೆಂಡಾ: ಪ್ರಧಾನಿ ಮೋದಿಗೆ ದೆಹಲಿ ಸಿಎಂ ಕೇಜ್ರಿವಾಲ್ ಮನವಿ ಮಾಡಿದ್ದೇನು

- Advertisement -

ದೆಹಲಿ: Delhi CM; ಪ್ರಧಾನಿ ತವರುಕ್ಷೇತ್ರ ಗುಜರಾತ್ ಮೇಲೆ ಕಣ್ಣಿಟ್ಟಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅಲ್ಲಿನ ಮತದಾರರನ್ನು ಸೆಳೆಯಲು ಹಿಂದುತ್ವವನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳಲು ಪ್ಲಾನ್ ಮಾಡ್ತಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಏಕೆಂದರೆ ಭಾರತದ ಕರೆನ್ಸಿ ನೋಟಿನ ಮೇಲೆ ಗಾಂಧೀಜಿ ಫೋಟೋ ಜೊತೆಗೆ ಗಣೇಶ ಹಾಗೂ ಲಕ್ಷ್ಮೀ ದೇವರ ಫೋಟೋ ಮುದ್ರಿಸಬೇಕೆಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಬಗ್ಗೆ ಪ್ರಧಾನಿ ಮೋದಿಗೆ ಪತ್ರದ ಮೂಲಕ ಮನವಿ ಮಾಡುವುದಾಗಿ ಕೇಜ್ರಿವಾಲ್ ತಿಳಿಸಿದ್ದಾರೆ.

ಇದೇ ಪರಿಕಲ್ಪನೆಯನ್ನು ಅನುಸರಿಸುವ ಮುಸಲ್ಮಾನ್ ದೇಶ ಇಂಡೋನೇಷ್ಯಾದ ಉದಾಹರಣೆಯನ್ನು ಉಲ್ಲೇಖಿಸಿರುವ ದೆಹಲಿ ಸಿಎಂ ‘ಇಂಡೋನೇಷ್ಯಾದ ಕರೆನ್ಸಿ ನೋಟುಗಳ ಮೇಲೆ ಒಂದು ಬದಿಯಲ್ಲಿ ಗಣೇಶನ ಚಿತ್ರವಿದೆ. ಆ ದೇಶದಲ್ಲಿ ಶೇಕಡಾ 85ಕ್ಕೂ ಹೆಚ್ಚು ಮುಸ್ಲಿಮರನ್ನು ಒಳಗೊಂಡಿದೆ. ಅಂಥ ಇಂಡೋನೇಷ್ಯಾದಲ್ಲೇ ಕರೆನ್ಸಿ ನೋಟುಗಳ ಮೇಲೆ ಗಣೇಶನ ಚಿತ್ರವನ್ನು ಮುದ್ರಿಸಲಾಗಿದೆ ಅಂದ ಮೇಲೆ ಹಿಂದೂರಾಷ್ಟ್ರವೆಂದೇ ಕರೆಯಲ್ಪಡುವ ಭಾರತದಲ್ಲಿ ಏಕೆ ಈ ಕ್ರಮ ಸಾಧ್ಯವಿಲ್ಲ ಎಂದು’ ಅವರು ಪ್ರಶ್ನಿಸಿದ್ದಾರೆ. ನಮ್ಮ ದೇಶದಲ್ಲೂ ಕರೆನ್ಸಿ ನೋಟುಗಳ ಮೇಲೆ ಗಣೇಶ, ಲಕ್ಷ್ಮೀ ಚಿತ್ರವನ್ನು ಮುದ್ರಿಸಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.


ಗುಜರಾತ್, ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆ ಹಿನ್ನೆಲೆ ಹಿಂದೂಗಳ ಮತಗಳನ್ನು ಸೆಳೆಯಲು ಕೇಜ್ರಿವಾಲ್ ಅವರು ಇಂಥ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ ಎನ್ನಲಾಗುತ್ತಿದೆ. ಡಾಲರ್ ಎದುರು ರೂಪಾಯಿ ನಿರಂತರವಾಗಿ ಕುಸಿಯುತ್ತಿದೆ. ನಮ್ಮ ಪ್ರಯತ್ನಕ್ಕೆ ದೇವಿ, ದೇವರುಗಳ ಆಶೀರ್ವಾದ ಇದ್ದರೆ ಯಶಸ್ಸು ಸಿಗುತ್ತದೆ, ಭಾರತದ ಕರೆನ್ಸಿಗಳ ಮೇಲೆ ದೇವರುಗಳ ಫೋಟೋ ಮುದ್ರಿಸಿದರೆ ಇಡೀ ದೇಶಕ್ಕೆ ಆಶೀರ್ವಾದ ಸಿಕ್ಕಂತೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ದೀಪಾವಳಿ ಪೂಜೆ ಮಾಡುವ ಸಂದರ್ಭದಲ್ಲಿ ನನಗೆ ಈ ಐಡಿಯಾ ಹೊಳೆದಿದೆ. ಕರೆನ್ಸಿ ಬದಲಾವಣೆ ಮಾಡುವಂತೆ ನಾನು ಹೇಳುತ್ತಿಲ್ಲ. ಇನ್ನು ಮುದ್ರಿಸಲಾಗುವ ಹೊಸ ನೋಟುಗಳ ಮೇಲೆ ದೇವರುಗಳ ಫೋಟೋ ಹಾಕಿ. ಈಗ ಇರುವ ನೋಟುಗಳು ಹಾಗೇ ಮುಂದುವರಿಯಲಿ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.


ಆಪ್ ಸಂಚಾಲಕ ಕೇಜ್ರಿವಾಲ್ ಅವರ ಈ ಹೇಳಿಕೆಯ ವಿರುದ್ಧ ಬಿಜೆಪಿ ಸಿಡಿದೆದ್ದಿದೆ. ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯ ಆಡಳಿತದತ್ತ ಮಾತ್ರ ಗಮನಹರಿಸಲಿ. ಕರೆನ್ಸಿ ಬಗ್ಗೆ ಸಲಹೆ ನೀಡುವುದು ಬೇಡ ಎಂದು ಬಿಜೆಪಿ ಸೋಶಿಯಲ್ ಮೀಡಿಯಾ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: Detection of covid sub-variant : ಮಹಾರಾಷ್ಟ್ರದಲ್ಲಿ ಕೋವಿಡ್ ವೈರಸ್ ಹೊಸ ತಳಿ ಪತ್ತೆ : ಹೊಸ ಮಾರ್ಗಸೂಚಿ ಪ್ರಕಟಿಸಿದ ಕರ್ನಾಟಕ

ಇದನ್ನೂ ಓದಿ: Ram Mandir in Ayodhya:2024ರ ಜನವರಿಯಿಂದ ಅಯೋಧ್ಯೆಯ ರಾಮ ಮಂದಿರ ಭಕ್ತರ ಪ್ರವೇಶಕ್ಕೆ ಮುಕ್ತ

Delhi CM Kejriwal appeals to Centre: Include photos of Lakshmi, Ganesh on currency notes

RELATED ARTICLES

Most Popular