ಸೋಮವಾರ, ಜೂನ್ 16, 2025
HomeNationalEarthquake in Himachal Pradesh : ಹಿಮಾಚಲ ಪ್ರದೇಶದಲ್ಲಿ ಮತ್ತೊಮ್ಮೆ ಪ್ರಬಲ ಭೂಕಂಪನ..!ಬೆಚ್ಚಿಬಿದ್ದ ಜನತೆ

Earthquake in Himachal Pradesh : ಹಿಮಾಚಲ ಪ್ರದೇಶದಲ್ಲಿ ಮತ್ತೊಮ್ಮೆ ಪ್ರಬಲ ಭೂಕಂಪನ..!ಬೆಚ್ಚಿಬಿದ್ದ ಜನತೆ

- Advertisement -

Earthquake in Himachal Pradesh :ಹಿಮಾಚಲ ಪ್ರದೇಶದಲ್ಲಿ ಬೆಳ್ಳಂಬೆಳಗ್ಗೆ ಭಾರೀ ಭೂಕಂಪ ಸಂಭವಿಸಿದೆ. ಮಂಡಿ ಜಿಲ್ಲೆಯಲ್ಲಿ ಇಂದ ಬೆಳಗ್ಗೆ ಜನರಿಗೆ ಪ್ರಬಲ ಭೂಕಂಪದ ಅನುಭವವಾಗಿದೆ. ಇದು ಒಂದು ವಾರದಲ್ಲಿ ದಾಖಲಾದ ಎರಡನೇ ಭೂಕಂಪವಾಗಿದೆ. ಹಿಂದಿನ ಭೂಕಂಪಕ್ಕೆ ಹೋಲಿಸಿದರೆ ಈ ಭೂಕಂಪವು ಹೆಚ್ಚು ತೀವ್ರತೆಯನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ. ಈವರೆಗೆ ಭೂಕಂಪದಿಂದ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟವಾಗಿರುವ ಬಗ್ಗೆ ವರದಿಯಾಗಿಲ್ಲ.

ಇನ್ನು ರಿಕ್ಟರ್​ ಮಾಪಕದಲ್ಲಿ ಭೂಕಂಪದ ತೀವ್ರತೆ 3.4 ದಾಖಲಾಗಿದೆ.

ಇಂದು ಬೆಳಗ್ಗೆ 6:07ರ ಸುಮಾರಿಗೆ ಮಂಡಿ ಜಿಲ್ಲೆಯ ಜನತೆಗೆ ಪ್ರಬಲ ಅನುಭವವಾಗಿದೆ. ಅವರವರ ಮನೆಯಲ್ಲಿ ಇನ್ನೂ ಮಲಗಿದ್ದ ಜನರು ಇದ್ದಕ್ಕಿದ್ದಂತೆ ಭೂಮಿ ಕಂಪಿಸಿದ್ದನ್ನು ಕಂಡು ಹೈರಾಣಾಗಿದ್ದಾರೆ. ಅನೇಕರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ರಿಕ್ಟರ್​ ಮಾಪಕದಲ್ಲಿ ಭೂಕಂಪದ ತೀವ್ರತೆ 3.4 ದಾಖಲಾಗಿದೆ. ಹಿಮಾಚಲ ಪ್ರದೇಶದಲ್ಲಿ ಆಗಾಗ ಭೂಕಂಪಗಳು ಸಂಭವಿಸುತ್ತಲೇ ಇರುತ್ತದೆ. ಅದರಲ್ಲೂ ಹಿಮಾಚಲ ಪ್ರದೇಶದ ಚಂಬಾ, ಮಂಡಿ ಹಾಗೂ ಶಿಮ್ಲಾ ಪದೇ ಪದೇ ಭೂಕಂಪಕ್ಕೆ ತುತ್ತಾಗುತ್ತಿರುವ ಪ್ರದೇಶವಾಗಿದೆ.

ಹಿಮಾಚಲದ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಡಿಸೆಂಬರ್​ 17ರಂದು ಭೂಕಂಪದ ಅನುಭವವಾಗಿತ್ತು. ತಡರಾತ್ರಿ 11:09ರ ಸುಮಾರಿಗೆ ಭೂಕಂಪದ ಅನುಭವವಾಗಿತ್ತು. ರಿಕ್ಟರ್​ ಮಾಪಕದಲ್ಲಿ 2.9 ತೀವ್ರತೆ ದಾಖಲಾಗಿತ್ತು. ಈ ಘಟನೆ ನಡೆದು ಕೇವಲ ಐದೇ ದಿನದಲ್ಲಿ ಮಂಡಿ ಜಿಲ್ಲೆಯಲ್ಲಿ ಮತ್ತೊಂದು ಭೂಕಂಪದ ಅನುಭವವಾದಂತಾಗಿದೆ. ಇವೆರಡರಿಕ್ಕಿಂತ ಮೊದಲು ಅಂದರೆ ನವೆಂಬರ್​ 24ರಂದು ಹಿಮಾಚಲ ಪ್ರದೇಶದಲ್ಲಿ ಭೂಕಂಪದ ಅನುಭವವಾಗಿತ್ತು. ಮಂಡಿ ಹಾಗೂ ಶಿಮ್ಲಾದಲ್ಲಿ ಅಂದು ಭೂಮಿ ಕಂಪಿಸಿತ್ತು. ಆದರೆ ಆ ಸಮಯದಲ್ಲೂ ಕೂಡ ಯಾವುದೇ ಪ್ರಾಣ ಹಾನಿ ಅಥವಾ ಆಸ್ತಿಪಾಸ್ತಿ ನಷ್ಟ ಉಂಟಾಗಿರಲಿಲ್ಲ.

ದೆಹಲಿ ಮೊಹಲ್ಲಾ ಕ್ಲಿನಿಕ್​ನಲ್ಲಿ ಔಷಧಿ ಸೇವಿಸಿದ ಮೂವರು ಮಕ್ಕಳು ಸಾವು

ರಾಜ್ಯದ ಜನತೆಗೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಅರವಿಂದ ಕೇಜ್ರಿವಾಲ್​ ನೇತೃತ್ವದ ಆಪ್​ ಸರ್ಕಾರವು ಮೊಹಲ್ಲಾ ಕ್ಲಿನಿಕ್​​ನ್ನು ದೆಹಲಿ ರಾಜ್ಯದಾದ್ಯಂತ ತೆರೆದಿದೆ. ಆದರೆ ಇದೇ ಮೊಹಲ್ಲಾ ಕ್ಲಿನಿಕ್​ ಒಂದರಲ್ಲಿ ನೀಡಲಾದ ಕಫ್​ ಸಿರಪ್​ ಸೇವಿಸಿದ ಪರಿಣಾಮ ಮೂವರು ಮಕ್ಕಳು ಸಾವನ್ನಪ್ಪಿದ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ಈ ಸಂಬಂಧ ತನಿಖೆ ನಡೆಸುವಂತೆ ಆರೋಗ್ಯ ಇಲಾಖೆ ಆದೇಶ ನೀಡಿದೆ. ಮೂವರು ಮಕ್ಕಳು ಮೊಹಲ್ಲಾ ಕ್ಲಿನಿಕ್​ನಲ್ಲಿ ಸೂಚಿಸಲಾದ ಸಿರಪ್​ ಸೇವಿಸಿದ ತಕ್ಷಣವೇ ಸಾವನ್ನಪ್ಪಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

ಒಟ್ಟು 16 ಮಕ್ಕಳನ್ನು ಕಲಾವತಿ ಸರಣ್​ ಮಕ್ಕಳ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಇದರಲ್ಲಿ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿರುವ ಕಲಾವತಿ ಸರಣ್​ ಮಕ್ಕಳ ಆಸ್ಪತ್ರೆಯಲ್ಲಿ 16 ಡೆಕ್ಸ್ಟ್ರೋಮೆಥೋರ್ಫಾನ್ ವಿಷದ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಮೂವರು ಮಕ್ಕಳು ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈ ಎಲ್ಲಾ ಮಕ್ಕಳಿಗೆ ದೆಹಲಿ ರಾಜ್ಯ ಸರ್ಕಾರ ನಡೆಸುತ್ತಿರುವ ಮೊಹಲ್ಲಾ ಕ್ಲಿನಿಕ್​ನಲ್ಲಿ ಡೆಕ್ಸ್ಟ್ರೋಮೆಥೋರ್ಫಾನ್ ಔಷಧಿ ಸೇವಿಸುವಂತೆ ವೈದ್ಯರು ಸೂಚನೆ ನೀಡಿದ್ದರು. ಆದರೆ ಈ ಔಷಧಿಗಳು ಮಕ್ಕಳಿಗೆ ನೀಡಬಾರದು. ಆದರೂ ಇದನ್ನು ಮಕ್ಕಳಿಗೆ ನೀಡಲಾಗಿದೆ ಎಂದು ವಿಚಾರಣಾ ವರದಿಯು ಹೇಳಿದೆ.

ಪತ್ರದಲ್ಲಿ ಡಿಜಿಹೆಚ್​ಎಸ್​ ಎಲ್ಲಾ ಮೊಹಲ್ಲಾ ಕ್ಲಿನಿಕ್​ಗಳಲ್ಲಿ ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಡೆಕ್ಸ್ಟ್ರೋಮೆಥೋರ್ಫಾನ್ ವೈದ್ಯರು ಶಿಫಾರಸು ಮಾಡದಂತೆ ಸೂಚನೆ ನೀಡಿ ಎಂದು ದೆಹಲಿ ಸರ್ಕಾರಕ್ಕೆ ಹೇಳಿದ್ದಾರೆ. ಇನ್ನು ಈ ವಿಚಾರವಾಗಿ ಮಾತನಾಡಿದ ಪಾಟ್ನಾದ ಮಕ್ಕಳ ವೈದ್ಯರ ಡಾ. ಚಂದ್ರ ಮೋಹನ್​ ಕುಮಾರ್​, ಐದು ವರ್ಷಕ್ಕಿಂತ ಕಡಿಮೆ ಪ್ರಾಯದ ಮಕ್ಕಳಿಗೆ ಈ ಔಷಧಿಯನ್ನು ನೀಡದಂತೆ ಸೂಚನೆ ಇದ್ದರೂ ಸಹ ಇದನ್ನು ಬಳಕೆ ಮಾಡಲಾಗುತ್ತಿದೆ. ಈ ಔಷಧಿ ಸೇವನೆಯಿಂದ ಮಕ್ಕಳಲ್ಲಿ ಅರೆನಿದ್ರಾವಸ್ಥೆ, ಕಿರಿಕಿರಿ ಸೇರಿದಂತೆ ವಿವಿಧ ಅಡ್ಡಪರಿಣಾಮಗಳು ಉಂಟಾಗುತ್ತದೆ ಎಂದು ಹೇಳಿದರು.

ಇದನ್ನು ಓದಿ : Supriya Lifescience IPO: ಸುಪ್ರಿಯಾ ಲೈಫ್​ಸೈನ್ಸ್​ ಐಪಿಓಗೆ ಭರ್ಜರಿ ರೆಸ್ಪಾನ್ಸ್​; ಚಂದಾದಾರಿಕೆ ಸಂಖ್ಯೆಯಲ್ಲಿ ಭಾರೀ ಏರಿಕೆ

ಇದನ್ನೂ ಓದಿ : Free buspass garment employees : ಗಾರ್ಮೆಂಟ್ಸ್ ಮಹಿಳಾ ಉದ್ಯೋಗಿಗಳಿಗೆ ಸಿಹಿಸುದ್ದಿ: BMTC ನೀಡಲಿದೆ ಉಚಿತ ಪಾಸ್

earthquake magnitude 3.4 on richter scale in himachal pradesh today

RELATED ARTICLES

Most Popular