Earthquake in Himachal Pradesh :ಹಿಮಾಚಲ ಪ್ರದೇಶದಲ್ಲಿ ಬೆಳ್ಳಂಬೆಳಗ್ಗೆ ಭಾರೀ ಭೂಕಂಪ ಸಂಭವಿಸಿದೆ. ಮಂಡಿ ಜಿಲ್ಲೆಯಲ್ಲಿ ಇಂದ ಬೆಳಗ್ಗೆ ಜನರಿಗೆ ಪ್ರಬಲ ಭೂಕಂಪದ ಅನುಭವವಾಗಿದೆ. ಇದು ಒಂದು ವಾರದಲ್ಲಿ ದಾಖಲಾದ ಎರಡನೇ ಭೂಕಂಪವಾಗಿದೆ. ಹಿಂದಿನ ಭೂಕಂಪಕ್ಕೆ ಹೋಲಿಸಿದರೆ ಈ ಭೂಕಂಪವು ಹೆಚ್ಚು ತೀವ್ರತೆಯನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ. ಈವರೆಗೆ ಭೂಕಂಪದಿಂದ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟವಾಗಿರುವ ಬಗ್ಗೆ ವರದಿಯಾಗಿಲ್ಲ.
ಇನ್ನು ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 3.4 ದಾಖಲಾಗಿದೆ.
ಇಂದು ಬೆಳಗ್ಗೆ 6:07ರ ಸುಮಾರಿಗೆ ಮಂಡಿ ಜಿಲ್ಲೆಯ ಜನತೆಗೆ ಪ್ರಬಲ ಅನುಭವವಾಗಿದೆ. ಅವರವರ ಮನೆಯಲ್ಲಿ ಇನ್ನೂ ಮಲಗಿದ್ದ ಜನರು ಇದ್ದಕ್ಕಿದ್ದಂತೆ ಭೂಮಿ ಕಂಪಿಸಿದ್ದನ್ನು ಕಂಡು ಹೈರಾಣಾಗಿದ್ದಾರೆ. ಅನೇಕರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 3.4 ದಾಖಲಾಗಿದೆ. ಹಿಮಾಚಲ ಪ್ರದೇಶದಲ್ಲಿ ಆಗಾಗ ಭೂಕಂಪಗಳು ಸಂಭವಿಸುತ್ತಲೇ ಇರುತ್ತದೆ. ಅದರಲ್ಲೂ ಹಿಮಾಚಲ ಪ್ರದೇಶದ ಚಂಬಾ, ಮಂಡಿ ಹಾಗೂ ಶಿಮ್ಲಾ ಪದೇ ಪದೇ ಭೂಕಂಪಕ್ಕೆ ತುತ್ತಾಗುತ್ತಿರುವ ಪ್ರದೇಶವಾಗಿದೆ.
ಹಿಮಾಚಲದ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಡಿಸೆಂಬರ್ 17ರಂದು ಭೂಕಂಪದ ಅನುಭವವಾಗಿತ್ತು. ತಡರಾತ್ರಿ 11:09ರ ಸುಮಾರಿಗೆ ಭೂಕಂಪದ ಅನುಭವವಾಗಿತ್ತು. ರಿಕ್ಟರ್ ಮಾಪಕದಲ್ಲಿ 2.9 ತೀವ್ರತೆ ದಾಖಲಾಗಿತ್ತು. ಈ ಘಟನೆ ನಡೆದು ಕೇವಲ ಐದೇ ದಿನದಲ್ಲಿ ಮಂಡಿ ಜಿಲ್ಲೆಯಲ್ಲಿ ಮತ್ತೊಂದು ಭೂಕಂಪದ ಅನುಭವವಾದಂತಾಗಿದೆ. ಇವೆರಡರಿಕ್ಕಿಂತ ಮೊದಲು ಅಂದರೆ ನವೆಂಬರ್ 24ರಂದು ಹಿಮಾಚಲ ಪ್ರದೇಶದಲ್ಲಿ ಭೂಕಂಪದ ಅನುಭವವಾಗಿತ್ತು. ಮಂಡಿ ಹಾಗೂ ಶಿಮ್ಲಾದಲ್ಲಿ ಅಂದು ಭೂಮಿ ಕಂಪಿಸಿತ್ತು. ಆದರೆ ಆ ಸಮಯದಲ್ಲೂ ಕೂಡ ಯಾವುದೇ ಪ್ರಾಣ ಹಾನಿ ಅಥವಾ ಆಸ್ತಿಪಾಸ್ತಿ ನಷ್ಟ ಉಂಟಾಗಿರಲಿಲ್ಲ.
ದೆಹಲಿ ಮೊಹಲ್ಲಾ ಕ್ಲಿನಿಕ್ನಲ್ಲಿ ಔಷಧಿ ಸೇವಿಸಿದ ಮೂವರು ಮಕ್ಕಳು ಸಾವು
ರಾಜ್ಯದ ಜನತೆಗೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಪ್ ಸರ್ಕಾರವು ಮೊಹಲ್ಲಾ ಕ್ಲಿನಿಕ್ನ್ನು ದೆಹಲಿ ರಾಜ್ಯದಾದ್ಯಂತ ತೆರೆದಿದೆ. ಆದರೆ ಇದೇ ಮೊಹಲ್ಲಾ ಕ್ಲಿನಿಕ್ ಒಂದರಲ್ಲಿ ನೀಡಲಾದ ಕಫ್ ಸಿರಪ್ ಸೇವಿಸಿದ ಪರಿಣಾಮ ಮೂವರು ಮಕ್ಕಳು ಸಾವನ್ನಪ್ಪಿದ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ಈ ಸಂಬಂಧ ತನಿಖೆ ನಡೆಸುವಂತೆ ಆರೋಗ್ಯ ಇಲಾಖೆ ಆದೇಶ ನೀಡಿದೆ. ಮೂವರು ಮಕ್ಕಳು ಮೊಹಲ್ಲಾ ಕ್ಲಿನಿಕ್ನಲ್ಲಿ ಸೂಚಿಸಲಾದ ಸಿರಪ್ ಸೇವಿಸಿದ ತಕ್ಷಣವೇ ಸಾವನ್ನಪ್ಪಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ಒಟ್ಟು 16 ಮಕ್ಕಳನ್ನು ಕಲಾವತಿ ಸರಣ್ ಮಕ್ಕಳ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಇದರಲ್ಲಿ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿರುವ ಕಲಾವತಿ ಸರಣ್ ಮಕ್ಕಳ ಆಸ್ಪತ್ರೆಯಲ್ಲಿ 16 ಡೆಕ್ಸ್ಟ್ರೋಮೆಥೋರ್ಫಾನ್ ವಿಷದ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಮೂವರು ಮಕ್ಕಳು ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈ ಎಲ್ಲಾ ಮಕ್ಕಳಿಗೆ ದೆಹಲಿ ರಾಜ್ಯ ಸರ್ಕಾರ ನಡೆಸುತ್ತಿರುವ ಮೊಹಲ್ಲಾ ಕ್ಲಿನಿಕ್ನಲ್ಲಿ ಡೆಕ್ಸ್ಟ್ರೋಮೆಥೋರ್ಫಾನ್ ಔಷಧಿ ಸೇವಿಸುವಂತೆ ವೈದ್ಯರು ಸೂಚನೆ ನೀಡಿದ್ದರು. ಆದರೆ ಈ ಔಷಧಿಗಳು ಮಕ್ಕಳಿಗೆ ನೀಡಬಾರದು. ಆದರೂ ಇದನ್ನು ಮಕ್ಕಳಿಗೆ ನೀಡಲಾಗಿದೆ ಎಂದು ವಿಚಾರಣಾ ವರದಿಯು ಹೇಳಿದೆ.
ಪತ್ರದಲ್ಲಿ ಡಿಜಿಹೆಚ್ಎಸ್ ಎಲ್ಲಾ ಮೊಹಲ್ಲಾ ಕ್ಲಿನಿಕ್ಗಳಲ್ಲಿ ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಡೆಕ್ಸ್ಟ್ರೋಮೆಥೋರ್ಫಾನ್ ವೈದ್ಯರು ಶಿಫಾರಸು ಮಾಡದಂತೆ ಸೂಚನೆ ನೀಡಿ ಎಂದು ದೆಹಲಿ ಸರ್ಕಾರಕ್ಕೆ ಹೇಳಿದ್ದಾರೆ. ಇನ್ನು ಈ ವಿಚಾರವಾಗಿ ಮಾತನಾಡಿದ ಪಾಟ್ನಾದ ಮಕ್ಕಳ ವೈದ್ಯರ ಡಾ. ಚಂದ್ರ ಮೋಹನ್ ಕುಮಾರ್, ಐದು ವರ್ಷಕ್ಕಿಂತ ಕಡಿಮೆ ಪ್ರಾಯದ ಮಕ್ಕಳಿಗೆ ಈ ಔಷಧಿಯನ್ನು ನೀಡದಂತೆ ಸೂಚನೆ ಇದ್ದರೂ ಸಹ ಇದನ್ನು ಬಳಕೆ ಮಾಡಲಾಗುತ್ತಿದೆ. ಈ ಔಷಧಿ ಸೇವನೆಯಿಂದ ಮಕ್ಕಳಲ್ಲಿ ಅರೆನಿದ್ರಾವಸ್ಥೆ, ಕಿರಿಕಿರಿ ಸೇರಿದಂತೆ ವಿವಿಧ ಅಡ್ಡಪರಿಣಾಮಗಳು ಉಂಟಾಗುತ್ತದೆ ಎಂದು ಹೇಳಿದರು.
ಇದನ್ನು ಓದಿ : Supriya Lifescience IPO: ಸುಪ್ರಿಯಾ ಲೈಫ್ಸೈನ್ಸ್ ಐಪಿಓಗೆ ಭರ್ಜರಿ ರೆಸ್ಪಾನ್ಸ್; ಚಂದಾದಾರಿಕೆ ಸಂಖ್ಯೆಯಲ್ಲಿ ಭಾರೀ ಏರಿಕೆ
ಇದನ್ನೂ ಓದಿ : Free buspass garment employees : ಗಾರ್ಮೆಂಟ್ಸ್ ಮಹಿಳಾ ಉದ್ಯೋಗಿಗಳಿಗೆ ಸಿಹಿಸುದ್ದಿ: BMTC ನೀಡಲಿದೆ ಉಚಿತ ಪಾಸ್
earthquake magnitude 3.4 on richter scale in himachal pradesh today