ಭಾನುವಾರ, ಜೂನ್ 15, 2025
HomeNationalPM Narendra Modi : ಕೇಂದ್ರದ 3 ವಿವಾದಿತ ಕೃಷಿ ಕಾಯಿದೆ ವಾಪಾಸ್‌ : ಪ್ರಧಾನಿ...

PM Narendra Modi : ಕೇಂದ್ರದ 3 ವಿವಾದಿತ ಕೃಷಿ ಕಾಯಿದೆ ವಾಪಾಸ್‌ : ಪ್ರಧಾನಿ ಮೋದಿ ಮಹತ್ವದ ಘೋಷಣೆ

- Advertisement -

ನವದೆಹಲಿ : ಕಳೆದ ಕೆಲವು ತಿಂಗಳಿನಿಮದ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಕೇಂದ್ರ ಸರಕಾರ ಕೊನೆಗೂ ಮಣಿದಿದೆ. ಕೇಂದ್ರ ಸರಕಾರ ಜಾರಿಗೆ ತರಲು ಹೊರಟಿದ್ದ ಮೂರು ವಿವಾದಿತ ಕೃಷಿ ಕಾಯ್ದೆಯನ್ನು ( three farm laws ) ವಾಪಾಸ್‌ ಪಡೆಯಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಘೋಷಿಸಿದ್ದಾರೆ. ಈ ಮೂಲಕ ರೈತರು ಪ್ರತಿಭಟನೆ ಕೈ ಬಿಟ್ಟು ಮನೆಗಳಿಗೆ ತೆರಳುವಂತೆ ಮನವಿ ಮಾಡಿಕೊಂಡಿದ್ದಾರೆ.

ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ದೇಶದಲ್ಲಿನ ರೈತರ ಸಮಸ್ಯೆಯನ್ನು ನಾನು ಅರಿತಿದ್ದೇನೆ. ಅವರ ಸಮಸ್ಯೆಯನ್ನು ಬಗೆ ಹರಿಸುವುದು ನಮ್ಮ ಸರಕಾರದ ಆಧ್ಯತೆಯಾಗಿದೆ. ಹೀಗಾಗಿ ರೈತರ ವಿರೋಧಕ್ಕೆ ಕಾರಣವಾಗಿರುವ ಮೂರು ವಿವಾದಿತ ಕೃಷಿ ಕಾಯ್ದೆಗಳನ್ನುಸಂಸತ್‌ನಲ್ಲಿ ವಾಪಾಸ್‌ ಪಡೆಯಲಾಗುವುದು ಎಂದು ಅವರು ಘೋಷಣೆ ಮಾಡಿದ್ದಾರೆ.

ಸಣ್ಣ ರೈತರ ಹಿತದೃಷ್ಟಿಯಿಂದ ಕೃಷಿ ಕಾಯ್ದೆಯನ್ನು ಜಾರಿ ಮಾಡಲಾಗಿತ್ತು. ಆದರೆ ರೈತರ ಹೋರಾಟದಿಂದಾಗಿ ಕೇಂದ್ರ ಸರಕಾರ ಈ ನಿರ್ಧಾರಕ್ಕೆ ಬಂದಿದೆ. ರೈತರಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ ಬಿತ್ತನೆ, ಬೀಜ, ಮಾರುಕಟ್ಟೆ ಉಳಿತಾಯ ಯೋಜನೆ, ಫಸಲ್‌ ಭೀಮಾ ಯೋಜನೆಯನ್ನು ಜಾರಿಗೆ ತರಲಾಗಿದೆ. ಕೃಷಿ ಬಜೆಟ್‌ ಹೆಚ್ಚಳ ಮಾಡುವುದರ ಜೊತೆಗೆ ಅನ್ನದಾತರಿಗೆ ಹೆಲ್ತ್‌ ಕಾರ್ಡ್‌ ವಿತರಿಸುವ ಕಾರ್ಯವನ್ನು ಮಾಡಿದ್ದೇವೆ ಎಂದಿದ್ದಾರೆ.

ರೈತರು ಕಳೆದ 15 ತಿಂಗಳಿನಿಂದಲೂ ಕೃಷಿ ಕಾಯ್ದೆಯ ವಿರುದ್ದ ಹೋರಾಟವನ್ನು ನಡೆಸುತ್ತಿದ್ದರು. ಇದೀಗ ಕೇಂದ್ರ ಸರಕಾರ ರೈತರ ಪ್ರತಿಭಟನೆಗೆ ಮಣಿದಿದೆ. ಈ ಮೂಲಕ ವರ್ಷ ದಲ್ಲಿಯೇ ಕೇಂದ್ರ ಸರಕಾರ ದೊಡ್ಡ ಹೋರಾಟಕ್ಕೆ ಮಣಿದಂತಾಗಿದೆ.

ಇದನ್ನೂ ಓದಿ : ದೆಹಲಿಯಲ್ಲಿ ರೈತರ ಪ್ರತಿಭಟನೆ : ಘರ್ಷಣೆಗೆ ಓರ್ವ ಅನ್ನದಾತ ಬಲಿ

ಇದನ್ನೂ ಓದಿ : ಭಾರೀ ಮಳೆಗೂ ಜಗ್ಗದ ಅನ್ನದಾತರು : ಮಳೆಯ ನೀರಲ್ಲೇ ಕುಳಿತು ರೈತರ ಪ್ರತಿಭಟನೆ

(PM Narendra Modi Announce will repeal all three farm laws)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular