ಲಕ್ನೋ : ರಾಜ್ಯ ಸರ್ಕಾರಗಳು ಒಂದೇ ಮಾದರಿಯಯೋಜನೆಗಳನ್ನು ಪ್ರತಿಯೊಂದು ರಾಜ್ಯದಲ್ಲೂ ಅಳವಡಿಸೋದು ಕಾಮನ್. ಈಗ ಉತ್ತರ ಪ್ರದೇಶದ ಸರದಿ. ಎಲ್ಲ ರಾಜ್ಯಗಳು ಉತ್ತರ ಪ್ರದೇಶ ಮಾದರಿ ಅನುಸರಿಸಲು ಸಿದ್ಧವಾಗಿದ್ದರೇ ಉತ್ತರ ಪ್ರದೇಶ ಮಾತ್ರ ಕರ್ನಾಟಕದ ಮಾದರಿ ಅನುಸರಿಸುತ್ತಿದೆ. ಹೌದು, ಕರ್ನಾಟಕದ ಮಾದರಿ ಯಲ್ಲಿ ಅತ್ಯಲ್ಪ ಬೆಲೆಗೆ ಊಟ- ಉಪಹಾರ ಒದಗಿಸುವ ಯೋಜನೆಗೆ ಸರ್ಕಾರ ಸಿದ್ಧತೆ ನಡೆಸಿದೆ. ಎರಡನೇ ಭಾರಿಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಯೋಗಿ ಆದಿತ್ಯನಾಥ (yogi adityanath ) ಎರಡು ವರ್ಷಗಳಿಂದ ರಾಜ್ಯದಲ್ಲಿ ಉಚಿತ ಪಡಿತರ ವಿತರಣೆ ಘೋಷಿಸಿದ್ದಾರೆ.
ಈಗ ಉಚಿತ ಪಡಿತರ ವಿತರಣೆ ಬಳಿಕ ಯೋಗಿ (yogi adityanath ) ನೇತೃತ್ವದ ಸರ್ಕಾರ ಉಚಿತವಾಗಿ ಅಥವಾ ಅತ್ಯಲ್ಪ ಬೆಲೆಯಲ್ಲಿ ಊಟ ತಿಂಡಿ ವಿತರಣೆಗೆ ಸಿದ್ಧತೆ ನಡೆಸಿದೆ. ಕರ್ನಾಟಕದಲ್ಲಿ ಈ ಯೋಜನೆ ಈಗಾಗಲೇ ಜಾರಿಯಲ್ಲಿದೆ. ಇಂದಿರಾ ಕ್ಯಾಂಟೀನ್ ಮೂಲಕ ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ಬೆಂಗಳೂರಿನಲ್ಲಿ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಅತಿ ಕಡಿಮೆ ದರದಲ್ಲಿ ಎರಡು ಹೊತ್ತಿನ ಊಟ ಹಾಗೂ ಒಂದು ಹೊತ್ತಿನ ಉಪಹಾರ ವಿತರಿಸಲಾಗುತ್ತಿದೆ. ಇದೇ ಮಾದರಿಯಲ್ಲಿ ಉತ್ತರ ಪ್ರದೇಶದಲ್ಲೂ ಯೋಜನೆ ಜಾರಿಗೆ ಯೋಗಿ ನೇತೃತ್ವದ ಸರ್ಕಾರ ಚಿಂತನೆ ನಡೆಸಿದ್ದು ಈಗಾಗಲೇ ಆಯ್ದ ಸ್ಥಳದಲ್ಲಿ ಅಡುಗೆಮನೆ ಅಥವಾ ರಸೋಯಿ ಸ್ಥಾಪನೆಗೆ ಸಿದ್ಧತೆ ನಡೆದಿದೆ ಎನ್ನಲಾಗಿದೆ
ಉತ್ತರ ಪ್ರದೇಶದಲ್ಲಿ 2020 ರಿಂದ ಯೋಗಿ ಆದಿತ್ಯನಾಥ (yogi adityanath ), 15 ಕೋಟಿ ಫಲಾನುಭವಿಗಳಿಗೆ ಉಚಿತ ಪಡಿತರಸಾಮಾಗ್ರಿಗಳನ್ನು ವಿತರಿಸುತ್ತ ಬಂದಿದ್ದಾರೆ. 1 ಕೆಜಿ ಕಡಲೆಕಾಳು,1 ಲೀಟರ್ ಅಡುಗೆ ಎಣ್ಣೆ, 1 ಕೆಜಿ ಉಪ್ಪು ತಲಾ 5 ಕೆಜಿ ಅಕ್ಕಿ ಹಾಗೂ ಗೋಧಿ ಒಳಗೊಂಡ ಪ್ಯಾಕ್ ನ್ನು ಜನರಿಗೆ ವಿತರಿಸಲಾಗುತ್ತಿದೆ. ಅಧಿಕೃತವಾಗಿ ಉಚಿತ ಊಟ ಉಪಹಾರ ವಿತರಣೆ ಕಾರ್ಯಕ್ರಮ ಸದ್ಯದಲ್ಲೇ ಆರಂಭಗೊಳ್ಳಲಿದ್ದು, ಇದರ ಬಗ್ಗೆ ಸದ್ಯದಲ್ಲೇ ಸಿಎಂ ಯೋಗಿ ಆದಿತ್ಯನಾಥ (yogi adityanath ) ಅಧಿಕಾರಿಗಳ ಸಭೆ ನಡೆಸಿ ಘೋಷಿಸಲಿದ್ದಾರಂತೆ.
ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಬೇಯಿಸಿದ ಪೌಷ್ಠಿಕಾಂಶವುಳ್ಳ ಆಹಾರ ವಿತರಿಸುವುದು ಯೋಗಿ ಸರಕಾರದ ಉದ್ದೇಶವಾಗಿದ್ದು, ಇದಕ್ಕಾಗಿ ಸಿದ್ಧತೆ ನಡೆದಿದೆ. ಸದ್ಯದಲ್ಲೇ ಯುಪಿ ಸರಕಾರ ಈ ಯೋಜನೆ ಘೋಷಿಸಲಿದ್ದು, ಇದಕ್ಕಾಗಿ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ವೆಚ್ಚ ತಗುಲಲಿದೆ.
ಇದನ್ನೂ ಓದಿ : ಅನುಕಂಪವೇ ಸುಮಲತಾ ಗೆ ಅಸ್ತ್ರ : ಮತ್ತೆ ಟಾಕ್ ಫೈಟ್ ಗೆ ನಾಂದಿಹಾಡಿದ ನಿಖಿಲ್ ಕುಮಾರಸ್ವಾಮಿ
ಇದನ್ನೂ ಓದಿ : ನಿಯಮ ಮೀರಿ ಭೂಮಿ ಮಂಜೂರು : ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿ.ಎಸ್.ಯಡಿಯೂರಪ್ಪ
Indira Canteen is launch yogi adityanath in Uttar Pradesh