ಸೋಮವಾರ, ಜೂನ್ 16, 2025
HomeNationalMP bus accident: ನರ್ಮದಾ ನದಿಗೆ ಉರುಳಿದ ಬಸ್​ : 13 ಪ್ರಯಾಣಿಕರು ಸಾವು, 15 ಮಂದಿಗೆ...

MP bus accident: ನರ್ಮದಾ ನದಿಗೆ ಉರುಳಿದ ಬಸ್​ : 13 ಪ್ರಯಾಣಿಕರು ಸಾವು, 15 ಮಂದಿಗೆ ಗಾಯ

- Advertisement -

ಮಧ್ಯ ಪ್ರದೇಶ : MP bus accident: ಮಹಾರಾಷ್ಟ್ರ ರೋಡ್​ವೇಸ್​ಗೆ ಸೇರಿದ ಬಸ್​ ಮಧ್ಯ ಪ್ರದೇಶ ಖಲ್ಘಾಟ್​ ಸಂಜಯ್​ ಸೇತುವೆಯಿಂದ ನರ್ಮದಾ ನದಿಗೆ ಉರುಳಿದ ಪರಿಣಾಮ ಬಸ್​ನಲ್ಲಿದ್ದ 13 ಮಂದಿ ಪ್ರಯಾಣಿಕರು ಸಾವನ್ನಪ್ಪಿದ ದಾರುಣ ಘಟನೆ ವರದಿಯಾಗಿದೆ. ಮಧ್ಯ ಪ್ರದೇಶ ಜಿಲ್ಲೆಯ ಧಾರ್​ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದೆ. ಅಪಘಾತ ಸ್ಥಳದಲ್ಲಿ ಈವರೆಗೆ 15 ಮಂದಿ ಪ್ರಯಾಣಿಕರನ್ನು ರಕ್ಷಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.


ಖಲ್ಘಾಟ್​ ಸಂಜಯ್​ ಸೇತುವೆಯಿಂದ ಬಸ್​ ನರ್ಮದಾ ನದಿಗೆ ಉರುಳಿದ ದುರಂತದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಮಧ್ಯ ಪ್ರದೇಶ ಸಚಿವ ನರೋತ್ತಮ್​ ಮಿಶ್ರಾ ಬಸ್​ ಇಂದೋರ್​ನಿಂದ ಪುಣೆಗೆ ಸಂಚರಿಸುತ್ತಿತ್ತು. ಬಸ್​ ಸಂಜಯ್​ ಸೇತುವೆ ಬಳಿ ಸಂಚರಿಸುತ್ತಿದ್ದ ಸಂದರ್ಭದಲ್ಲಿ ನದಿಗೆ ಉರುಳಿದೆ. ಪರಿಣಾಮ 13 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ರಕ್ಷಣಾ ತಂಡವು ಕೂಡಲೇ ಕಾರ್ಯ ಪ್ರವೃತ್ತರಾಗಿದ್ದು 15 ಮಂದಿ ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಬಸ್​ನಲ್ಲಿ ಇನ್ನೂ ಎಷ್ಟು ಮಂದಿ ಇದ್ದಾರೆ ಎಂಬುದಕ್ಕೆ ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಿದೆ ಎಂದು ಹೇಳಿದರು.


ಕಳೆದ ಶುಕ್ರವಾರ ಉತ್ತರ ಪ್ರದೇಶದ ಚಿತ್ರಕೂಟ್​ ರಾಜ್​ಪುರ ಪ್ರದೇಶದಲ್ಲಿ ಖಾಸಗಿ ಬಸ್​ ಪಲ್ಟಿಯಾದ ಪರಿಣಾಮ ಓರ್ವ ಪ್ರಯಾಣಿಕ ಸಾವನ್ನಪ್ಪಿದ್ದು ಬಸ್​ನಲ್ಲಿದ್ದ 30 ಮಂದಿ ಗಾಯಗೊಂಡಿದ್ದರು.


ಕುಸೈಲಿ ಗ್ರಾಮದ ಬಳಿಯ ತಿರುವಿನಲ್ಲಿ ಬಸ್ ಪಲ್ಟಿಯಾಗಿ ಕಂದಕಕ್ಕೆ ಬಿದ್ದಿದೆ ಎಂದು ಪ್ರದೇಶದ ಸರ್ಕಲ್ ಆಫೀಸರ್ (ಸಿಒ) ಶಿವಪ್ರಕಾಶ್ ಸೋಂಕರ್ ಮಾಹಿತಿ ನೀಡಿದ್ದರು. ಖಾಸಗಿ ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ಓರ್ವ ಪ್ರಯಾಣಿಕ ಮೃತಪಟ್ಟಿದ್ದಾನೆ. ಮೂವರು ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಶಿವಪ್ರಕಾಶ್​ ಸೋಂಕರ್​ ಹೇಳಿದ್ದಾರೆ. ಈ ಮೂವತ್ತು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಇವರಲ್ಲಿ 8 ಮಂದಿ ಪ್ರಯಾಣಿಕರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಇದನ್ನು ಓದಿ : bomb threat message : ಡಿ.ಕೆ ಶಿವಕುಮಾರ್​ ಮಾಲೀಕತ್ವದ ಖಾಸಗಿ ಶಾಲೆಗೆ ಬಾಂಬ್​ ಬೆದರಿಕೆ ಸಂದೇಶ

ಇದನ್ನೂ ಓದಿ : milk products rate : ಇಂದಿನಿಂದ ನಂದಿನಿ ಮೊಸರು, ಮಜ್ಜಿಗೆ ದರ ಹೆಚ್ಚಳ : ಶೀಘ್ರದಲ್ಲೇ ಬೆಲೆ ಇಳಿಕೆಗೆ ಸಿಎಂ ಅಭಯ

MP bus accident: 13 dead, 15 rescued after Maharashtra Roadways bus falls into Narmada river in Dhar district

RELATED ARTICLES

Most Popular