ಬುಧವಾರ, ಜೂನ್ 18, 2025
HomeNationalKashi Vishwanath corridor : ಕಾಶಿ ವಿಶ್ವನಾಥನ ಸನ್ನಿಧಿಗೆ ಹೈಟೆಲ್‌ ಸ್ಪರ್ಶ : ಕಾಶಿ ವಿಶ್ವನಾಥ...

Kashi Vishwanath corridor : ಕಾಶಿ ವಿಶ್ವನಾಥನ ಸನ್ನಿಧಿಗೆ ಹೈಟೆಲ್‌ ಸ್ಪರ್ಶ : ಕಾಶಿ ವಿಶ್ವನಾಥ ಕಾರಿಡಾರ್‌ ಇಂದು ಮೋದಿ ಲೋಕಾರ್ಪಣೆ

- Advertisement -

ನವದೆಹಲಿ : ಕಾಶಿ ವಿಶ್ವನಾಥ ಕಾರಿಡಾರ್ ಪ್ರಾಜೆಕ್ಟಿನ (Kashi Vishwanath corridor) ಉದ್ಘಾಟನೆ ಇಂದು (ಡಿಸೆಂಬರ್ 13) ನೆರವೇರಲಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನೂ ( PM Narendra Modi ) ಒಳಗೊಂಡು ಇಡೀ ಬಿಜೆಪಿಯ ಪ್ರಮುಖ ಪದಾಧಿಕಾರಿಗಳು ಮತ್ತು ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳು ವಾರಣಾಸಿಗೆ ಆಗಮಿಸಲಿದ್ದಾರೆ. ಒಟ್ಟು 900 ಕೋಟಿ ವೆಚ್ಚದ, ಮೊದಲ ಹಂತದಲ್ಲಿ 399 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಾಶಿ ವಿಶ್ವನಾಥ್ ಕಾರಿಡಾರ್‌ ಪ್ರಾಜೆಕ್ಟ್‌ನ ಮೊದಲ ಹಂತದ ಕಾಮಗಾರಿಗೆ ನಾಳೇ ಉದ್ಘಾಟನಾ ಭಾಗ್ಯ ದೊರೆಯಲಿದೆ. ಕಾಶಿ ವಿಶ್ವನಾಥ ದೇವಾಲಯವನ್ನು ಗಂಗಾ ನದಿಯ ಘಾಟ್‌ಗಳಿಗೆ ಜೋಡಿಸುವ ಯೋಜನೆ ಇದಾಗಿದೆ.

PM Narendra Modi will inaugurate Kashi Vishwanath corridor phase 1 on today 1

ಉತ್ತರ ಪ್ರದೇಶ ಚುನಾವಣೆಯೂ ಹತ್ತಿರದಲ್ಲಿ ಇರುವ ಕಾರಣ ನಾಳೆ ಜರುಗಲಿರುವ ಉದ್ಘಾಟನಾ ಕಾರ್ಯಕ್ರಮಕ್ಕೆ ಇನ್ನಷ್ಟು ಬಗೆಯ ಆಯಾಮಗಳು ದೊರೆತಿವೆ. ಕಾಶಿ ಅಥವಾ ವಾರಣಾಸಿಯ ಲೋಕಸಭಾ ಸಂಸದರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಪರೀಕ್ಷೆ ಒಡ್ಡುತ್ತಿದೆ. ಜೊತೆಗೆ ಸಹಜವಾಗಿಯೇ ಹಾಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗಂತೂ ಸವಾಲನ್ನು ತಂದೊಡ್ಡಿದೆ. ಕೊವಿಡ್‌ ಸೋಂಕು ತಡೆಗಟ್ಟಲು ಉತ್ತರ ಪ್ರದೇಶ ಸರ್ಕಾರ ವಿಫಲವಾಗಿತ್ತು ಎಂಬ ಟೀಕೆಗಳು ಈಮುನ್ನ ಕೇಳಿಬಂದಿದ್ದ ಕಾರಣ ಯೋಗಿ ಆದಿತ್ಯನಾಥ್ ಸರ್ಕಾರ ಮುಜುಗರಕ್ಕೆ ಈಡಾಗಿತ್ತು.

PM Narendra Modi will inaugurate Kashi Vishwanath corridor phase 1 on today 2

ಕೊವಿಡ್ ಮತ್ತು ಇನ್ನಿತರ ರಾಜಕೀಯ ಸಮೀಕರಣಗಳು ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹಿನ್ನೆಡೆ ಉಂಟುಮಾಡಲಿವೆ ಎಂಬ ವಿಶ್ಲೇ‍ಷಣೆಗಳು ಕೇಳಿಬಂದಿದ್ದವು. ಈ ಎಲ್ಲ ಹಿನ್ನೆಲೆಯಲ್ಲಿ ಕಾಶಿ ವಿಶ್ವನಾಥ್ ಕಾರಿಡಾರ್ ಬಿಜೆಪಿಗೆ ಮರುಬಲ ತುಂಬುವ ಕೆಲಸ ಮಾಡಲಿದೆ ಎನ್ನಲಾಗಿದೆ.

PM Narendra Modi will inaugurate Kashi Vishwanath corridor phase 1 on today 4

ಅಷ್ಟೇ ಅಲ್ಲದೇ ಹಳೆಯ ಕಾಶಿಯನ್ನು ‘ಹೊಸ ಕಾಶಿ’ಯನ್ನಾಗಿ ಮಾಡುವ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ. ಕಾಮಗಾರಿ ನಡೆಸುವಾಗ ಕಾಶಿಯ ಎಷ್ಟೋ ಐತಿಹಾಸಿಕ ಮಂದಿರಗಳು, ಮನೆಗಳು, ಬೀದಿಗಳನ್ನು ನೆಲಸಮ ಮಾಡಲಾಗಿದೆ. ಈಕುರಿತು ಸ್ಥಳೀಕರಲ್ಲಿ ಆಕ್ರೋಶವಿದ್ದರೂ ಸಹ ದೊಡ್ಡ ಮಟ್ಟದಲ್ಲಿ ಹೊರಬಿದ್ದಿಲ್ಲ.

PM Narendra Modi will inaugurate Kashi Vishwanath corridor phase 1 on today 3

2019ರಲ್ಲಿ ಆರಂಭವಾದ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ. ಕಾಮಗಾರಿಗೆ ಒದಗಿಸಿರುವ ಅನುದಾನ ಒಟ್ಟು 900 ಕೋಟಿ. ಉತ್ತರ ಪ್ರದೇಶ ಚುನಾವಣೆಯ ನಿತಿ ಸಂಹಿತೆ ಆರಂಭಕ್ಕೂ ಮುನ್ನ ಮತದಾರರಲ್ಲಿ ಬಿಜೆಪಿ ಪರ ಒಲವು ಮೂಡಿಸಲು ಕಾರಿಡಾರ್ 1ರ ಉದ್ಘಾಟನೆಯನ್ನು ಬಿಜೆಪಿ ಮಾಡಹೊರಟಿದೆ ಎನ್ನಲಾಗಿದೆ. ಏಕೆಂದರೆ ವರದಿಗಳ ಪ್ರಕಾರ ಒಟ್ಟು ಕಾಮಗಾರಿ ಮುಗಿಯಲು ಇನ್ನೂ ನಾಲ್ಕು ತಿಂಗಳ ಅಗತ್ಯವಂತೂ ಇದೆ.

ಇದನ್ನೂ ಓದಿ : CDS General Bipin Rawat : ಶತ್ರುರಾಷ್ಟ್ರ ಚೀನಾದ ಬಗ್ಗೆ ಕೊನೆಯ ಬಾರಿಗೆ ಸಿಡಿಎಸ್​ ಜನರಲ್​ ಬಿಪಿನ್​ ರಾವತ್​ ಹೇಳಿದ್ದೇನು ಗೊತ್ತೇ..?

ಇದನ್ನೂ ಓದಿ : Opinion Vegetable Price : ತರಕಾರಿ ಬೆಲೆ ರೈತರಿಗೇ ಸಿಗಲಿ; ನಮ್ಮೂರಿನ ರೈತರಿಂದ ನೇರವಾಗಿ ಖರೀದಿಸುವ ಜಾಯಮಾನ ಬೆಳೆಸಿಕೊಳ್ಳೋಣ

( PM Narendra Modi will inaugurate Kashi Vishwanath corridor phase 1 on today )

RELATED ARTICLES

Most Popular