ಸೋಮವಾರ, ಏಪ್ರಿಲ್ 28, 2025
HomeBreakingTauktae ಚಂಡ ಮಾರುತ : ರಾಜ್ಯದಲ್ಲಿ ಇನ್ನೂ ಎರಡು‌ ದಿನ ಸುರಿಯಲಿದೆ ಮಳೆ

Tauktae ಚಂಡ ಮಾರುತ : ರಾಜ್ಯದಲ್ಲಿ ಇನ್ನೂ ಎರಡು‌ ದಿನ ಸುರಿಯಲಿದೆ ಮಳೆ

- Advertisement -

ಬೆಂಗಳೂರು :  ತೌಕ್ಟೆ ಚಂಡಮಾರುತದ ಅಬ್ಬರದ ಹಿನ್ನೆಲೆಯಲ್ಲಿ ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಕಳೆದ ಎರಡು ದಿನ ಗಳಿಂದ ಮಳೆ ಸುರಿಯುತ್ತಿದೆ. ಮಳೆಯ ಅಬ್ಬರ ಇನ್ನೂ ಎರಡು ದಿನಗಳ ಕಾಲ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರಾವಳಿಯ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಮಲೆನಾಡಿನ ಶಿವಮೊಗ್ಗ, ಹಾಸನ ಹಾಗೂ ಧಾರವಾಡ, ಬೆಳಗಾವಿ, ಹಾವೇರಿ ಜಿಲ್ಲೆಗಳಲ್ಲಿ ಮೇ 18ರವರೆಗೆ ಬಿರುಸಿನ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಈ ಜಿಲ್ಲೆಗಳಲ್ಲಿ ಇನ್ನೂ ಎರಡು ದಿನಗಳ ಕಾಲ ‘ಯೆಲ್ಲೋ ಅಲರ್ಟ್‌’ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ವಿಭಾಗದ ನಿರ್ದೇಶಕ ಸಿ.ಎಸ್‌. ಪಾಟೀಲ್‌ ತಿಳಿಸಿದ್ದಾರೆ.

ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ‘ತೌಕ್ಟೆ’ ಚಂಡ ಮಾರುತದ ಪರಿಣಾಮ ಅಬ್ಬರದ ಮಳೆ ಇನ್ನೂ 2 ದಿನ ಗಳ ಕಾಲ ಮುಂದುವರಿಯ ಲಿದೆ. ತೌಕ್ಟೆ ಚಂಡ ಮಾರುತ ಪಣಜಿ ಹಾಗೂ ಗೋವಾದ ನೈಋುತ್ಯ ದಿಕ್ಕಿನಲ್ಲಿ 120 ಕಿ.ಮೀ. ವೇಗದಲ್ಲಿ ಉತ್ತರಕ್ಕೆ ಸಾಗುತ್ತಿದೆ. ಮೇ 18 ರಂದು ಗುಜರಾತಿನ ಪೋರ್‌ ಬಂದರಿಗೆ ತಲುಪಲಿದೆ. ನಂತರದಲ್ಲಿ ರಾಜ್ಯದಲ್ಲಿ ಮಳೆಯ ಪ್ರಭಾವ ಕಡಿಮೆಯಾಗಲಿದೆ. ಆದರೂ ರಾಜ್ಯ ದಲ್ಲಿ  ಮೇ 20ರ ವರೆಗೆ ಉತ್ತಮ ಮಳೆ ಸುರಿಯಲಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular