ಸೋಮವಾರ, ಏಪ್ರಿಲ್ 28, 2025
HomekarnatakaUbhav Thackeray Government : ಮಹಾಪತನದತ್ತ ಶಿವಸೇನಾ ಸರ್ಕಾರ : ಬಂಡಾಯ ಸಾರಿದ 50 ಕ್ಕೂ...

Ubhav Thackeray Government : ಮಹಾಪತನದತ್ತ ಶಿವಸೇನಾ ಸರ್ಕಾರ : ಬಂಡಾಯ ಸಾರಿದ 50 ಕ್ಕೂ ಅಧಿಕ ಶಾಸಕರು

- Advertisement -

ಮುಂಬೈ : ಮಹಾರಾಷ್ಟ್ರದಲ್ಲಿ ರಾಜಕೀಯ ಅಸ್ಥಿರತೆ ಸೃಷ್ಟಿಯಾಗಿದ್ದು, ಇಂದೇ ಉದ್ಭವ್ ಠಾಕ್ರೆ ನೇತೃತ್ವದ ಸರ್ಕಾರ ಪತನವಾಗಲಿದೆ ಎಂದು ನೀರಿಕ್ಷಿಸಲಾಗುತ್ತಿದೆ. ಸದ್ಯ ಉದ್ಭವ್ ಠಾಕ್ರೆ ಹಾಗೂ ರಾಜ್ಯಪಾಲರು ಇಬ್ಬರೂ ಕರೋನಾ ಪೀಡಿತರಾಗಿದ್ದು, ವರ್ಚುವಲ್ ಸಂಪುಟ ಸಭೆ ನಡೆಸಿ ಉದ್ಭವ್ ಠಾಕ್ರೆ ( Ubhav Thackeray Government )ರಾಜೀನಾಮೆ ಘೋಷಿಸುತ್ತಾರೆ ಮತ್ತು ಸಚಿವ ಸಂಪುಟವನ್ನು ವಿಸರ್ಜಿಸುತ್ತಾರೆ ಎಂದು ನೀರಿಕ್ಷಿಸಲಾಗುತ್ತಿದೆ.

ಈ ಮಧ್ಯೆ ಪಕ್ಷದ ಮುಖಂಡ ಸಂಜಯ್ ರಾವತ್ ಟ್ವೀಟ್ ನಲ್ಲಿ ಸರ್ಕಾರ ವಿಸರ್ಜಿಸುವ ಮುನ್ಸೂಚನೆ ನೀಡಿದ್ದು, ಮಿತ್ರಕೂಟಗಳ ಬಂಡಾಯದಿಂದ ಶಿವಸೇನೆ ಅಧಿಕಾರ ಕಳೆದು ಕೊಳ್ಳಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಮಹಾರಾಷ್ಟ್ರದ ಈ ರಾಜಕೀಯ ಬಿಕ್ಕಟ್ಟಿಗೆ ಶಿವಸೇನೆಯ ನಾಯಕ ಏಕನಾಥ್ ಶಿಂಧೆ ಕಾರಣವಾಗಿದ್ದು, ಅವರು ತಮಗೆ 46 ಶಾಸಕರ ಬೆಂಬಲ ಇರುವುದಾಗಿ ಘೋಷಿಸಿದ್ದಾರೆ. ಅಲ್ಲದೇ ಸರ್ಕಾರ ರಚಿಸುವ ವಿಶ್ವಾಸದಲ್ಲಿದ್ದಾರೆ. ಇನ್ನೊಂದೆಡೆ ಬೆಳಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಏಕನಾಥ್ ಶಿಂಧೆ, ಶಿವಸೇನಾದ 40 ಹಾಗೂ ಪಕ್ಷೇತರ 6 ಒಟ್ಟು 46 ಶಾಸಕರ ಬೆಂಬಲ ಇರುವುದಾಗಿ ಹೇಳಿಕೊಂಡಿದ್ದಾರೆ.

ಮಂಗಳವಾರ ಸರ್ಕಾರದಿಂದ ಬಂಡಾಯ ಎದ್ದಿರುವ ಶಾಸಕರ ಜೊತೆ ಸಿಎಂ ಉದ್ಧವ್ ಠಾಕ್ರೆ 10 ನಿಮಿಷಗಳ ಕಾಲ ಮಾತುಕತೆ ನಡೆಸಿ ಮನವೊಲಿಸುವ ಪ್ರಯತ್ನ ಮಾಡಿದ್ದರು. ಆದರೆ ಈ ಪ್ರಯತ್ನ ಸಫಲವಾಗಿರಲಿಲ್ಲ. ಬಳಿಕ ಶಿವಸೇನೆ ಸೇರಿದಂತೆ ಮಹಾರಾಷ್ಟ್ರದ ಬಂಡಾಯ ಶಾಸಕರು ಗುಜರಾತ್ ನ ಸೂರತ್ ನಿಂದ ಆಸ್ಸಾಂನ ಗೌಹಾಟಿಗೆ ಆಗಮಿಸಿದ್ದರು. ಹೀಗೆ ಮಹಾರಾಷ್ಟ್ರ ಸರ್ಕಾರದಿಂದ ಬಂಡಾಯ ಎದ್ದಿರೋ ಶಾಸಕರಿಗೆ ಅಸ್ಸಾಂನಲ್ಲಿ ಬಿಜೆಪಿ ನಾಯಕರಿಂದ ಸ್ವಾಗತ ಸಿಕ್ಕಿದ್ದು, ಗೌಹಾಟಿಯ ಐಷಾರಾಮಿ ಹೊಟೇಲ್ ಗಳಲ್ಲಿ 50 ಕ್ಕೂ ಹೆಚ್ಚು ಶಾಸಕರಿಗೆ ವಾಸ್ತವ್ಯ ಕಲ್ಪಿಸಲಾಗಿದೆ.

ಮಾತ್ರವಲ್ಲ ಈ ಬಂಡಾಯದ ಗುಂಪನ್ನು ಇನ್ನಷ್ಟು ಶಿವಸೇನೆಯ ಶಾಸಕರು ಸೇರಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮಹಾವಿಕಾಸ ಅಘಾಡಿ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿರೋ ಏಕನಾಥ್ ಶಿಂಧೆ ಈ ಎಲ್ಲ ರಾಜಕೀಯ ಪಲ್ಲಟಗಳಿಗೆ ಕಾರಣವಾಗಿದ್ದಲ್ಲದೇ ತಮ್ಮೊಂದಿಗೆ ಶಾಸಕರನ್ನು ಕರೆದುಕೊಂಡು ಆಸ್ಸಾಂ ನ ಗೌಹಾಟಿಯಲ್ಲಿ ಬೀಡು ಬಿಟ್ಟಿದ್ದಾರೆ ‌

ಶಿಂಧೆ ಜೊತೆ ಮಾತುಕತೆ ನಡೆಸಲು ಉದ್ಧವ್ ಠಾಕ್ರೆ ನಡೆಸಿದ್ದು ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಇದಕ್ಕೆ ಒಪ್ಪದ ಶಿಂಧೆ ಕಾಂಗ್ರೆಸ್ ಮತ್ತು ಎನ್ ಸಿ ಪಿ ಶಿವಸೇನೆ ಮೈತ್ರಿ ಕಡಿದುಕೊಂಡು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುವಂತೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗ್ತಿದೆ. ಒಟ್ಟಿನಲ್ಲಿ ಮಹಾರಾಷ್ಟ್ರ ಈಗ ಪೊಲಿಟಿಕಲ್ ಹೈಡ್ರಾಮಾಕ್ಕೆ ಕೇಂದ್ರ ಬಿಂದುವಾಗಿದೆ.

ಇದನ್ನೂ ಓದಿ : Draupadi Murmu : ರಾಷ್ಟ್ರಪತಿ ಸ್ಥಾನಕ್ಕೆ ಬುಡಕಟ್ಟು‌ಮಹಿಳೆ: ಬಿಜೆಪಿ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಆಯ್ಕೆ

ಇದನ್ನೂ ಓದಿ : Maharashtra Politics : ಮಹಾ ಸರ್ಕಾರದ ಪತನಕ್ಕೆ ಕರ್ನಾಟಕದ ಮಾಸ್ಟರ್ ಮೈಂಡ್ : ಆಫರೇಶನ್ ಕಮಲದ ಹಿಂದೆ ರಮೇಶ್‌ ಜಾರಕಿಹೊಳಿ ?

Ubhav Thackeray government in distress, 50 MLAs in Maharashtra politics rebel

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular