ಹುಬ್ಬಳ್ಳಿ: ವಿಧಾನಸಭೆ ಉಪಚುನಾವಣೆ ಹಾಗೂ ವಿಧಾನಪರಿಷತ್ ಚುನಾವಣೆಗಳ ಬಳಿಕ ಬಿಜೆಪಿ ಇದೇ ಮೊದಲ ಬಾರಿಗೆ ಕಾರ್ಯಕಾರಿಣಿ ನಡೆಸಿದ್ದು ಈ ಸಭೆಯು ಹಲವು ಆಯಾಮಗಳಿಂದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಸಭೆಯಲ್ಲಿ ಅರುಣ್ ಸಿಂಗ್ ಸಚಿವರ ಪ್ರತ್ಯೇಕ ಮಾತುಕತೆ (Arun singh warns ministers) ನಡೆಸಿದ್ದಾರೆ ಎನ್ನಲಾಗಿದೆ.
ಬಿಜೆಪಿ ಸಚಿವರ ಜೊತೆಯಲ್ಲಿ ವನ್ ಟು ವನ್ ಟಾಕ್ ನಡೆಸಿದ ಅರುಣ್ ಸಿಂಗ್ ಸಚಿವರಿಗೆ ಆ್ಯಕ್ಟಿವ್ ಆಗಿ ಕೆಲಸ ಮಾಡುವಂತೆ ಖಡಕ್ ವಾರ್ನಿಂಗ್ ನೀಡಿದ್ದಾರೆ ಎನ್ನಲಾಗಿದೆ. ಕಾರ್ಯಕರ್ತರಿಗೆ ಕೆಲಸ ಮಾಡಲು ಅವಕಾಶ ನೀಡದ ಸಚಿವರನ್ನೂ ತರಾಟೆಗೆ ತೆಗೆದುಕೊಂಡ ಅರುಣ್ ಸಿಂಗ್ ಸಂಪುಟ ಪುನರ್ ರಚನೆ ಸಂದರ್ಭದಲ್ಲಿ ಎಲ್ಲವನ್ನೂ ಪರಿಗಣಿಸಲಾಗುತ್ತದೆ ಎಂಬುದನ್ನು ಗಮನದಲ್ಲಿಡಿಡಿ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ ಎನ್ನಲಾಗಿದೆ.
ಮಂಡ್ಯ , ಮೈಸೂರು ಹಾಗೂ ಬೆಳಗಾವಿಯಲ್ಲಿ ಪಕ್ಷ ಹಿನ್ನಡೆ ಆಗಿದ್ದಕ್ಕೆ ಎಸ್.ಟಿ ಸೋಮಶೇಖರ್, ನಾರಾಯಣ ಗೌಡ, ಗೋವಿಂದ ಕಾರಜೋಳ ಬಳಿಯಲ್ಲಿ ಸ್ಪಷ್ಟನೆ ಪಡೆದರು. ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಕೊನೆಯ ದಿನ ಕಣ್ಣೀರು ಹಾಕಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅರುಣ್ ಸಿಂಗ್ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿನ ಹಿಂದೆ ಪರೋಕ್ಷವಾಗಿ ನಿಮ್ಮ ಸಹಕಾರವೇ ಇದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಸಿದ ನಾರಾಯಣ ಗೌಡ, ಇಲ್ಲ ನಾವು ಅಭ್ಯರ್ಥಿಯ ಪರವಾಗಿಯೇ ಕೆಲಸ ಮಾಡಿದ್ದೇವೆ. ಸೋಲಿಗೆ ಕಾರಣಗಳನ್ನು ವಿವರವಾಗಿ ನೀಡೋದಾಗಿ ಹೇಳಿದ್ದಾರೆ.
ಇನ್ನು ಬೆಳಗಾವಿಯಲ್ಲಿ ನನ್ನ ಸೋಲಿಗೆ ನಮ್ಮ ನಾಯಕರೇ ಕಾರಣ ಎಂದು ಜಾರಕಿಹೊಳಿ ಬ್ರದರ್ಸ್ ಬಗ್ಗೆ ಕವಟಗಿಮಠ ಬೇಸರ ಹೊರ ಹಾಕಿದರು. ಈ ಬಗ್ಗೆ ಗೋವಿಂದ ಕಾರಜೋಳ ಬಳಿಯಲ್ಲಿ ಮಾಹಿತಿ ಪಡೆದ ಅರುಣ್ ಸಿಂಗ್ ಮುಂದಿನ ದಿನಗಳಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಹೇಳಿ ಕಳುಹಿಸಿದ್ದಾರೆ.
ಇದನ್ನು ಓದಿ : Karnataka Bandh postponed : ಕರ್ನಾಟಕ ಬಂದ್ ಗೂ ವಿಘ್ನ: ಸ್ಟ್ರೈಕ್ ದಿನಾಂಕ ಬದಲಿಗೆ ಕರವೇ ಒತ್ತಾಯ
ಇದನ್ನೂ ಓದಿ : Fire to the chariot : ರಥೋತ್ಸವದ ವೇಳೆ ಅವಘಡ: ಪಟಾಕಿ ಸಿಡಿದು ರಥಕ್ಕೆ ತಗುಲಿದ ಬೆಂಕಿ
ಇದನ್ನೂ ಓದಿ : Accused arrest :ದೈವಸ್ಥಾನ ,ಮಸೀದಿಗಳಲ್ಲಿ ಕಾಂಡೋಮ್ ಎಸೆಯುತ್ತಿದ್ದವನ ಬಂಧನ..!
Arun Singh Warns Ministers