ಕರ್ನಾಟಕ ವಿಧಾನಸಭೆ ಚುನಾವಣೆ 2023 : ಇಲ್ಲಿದೆ ಬಿಜೆಪಿ ಅಭ್ಯರ್ಥಿಗಳ ಅಂತಿಮ ಪಟ್ಟಿ

ನವದೆಹಲಿ : ಕರ್ನಾಟಕ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು (BJP Candidates final list) ಅಂತಿಮಗೊಳಿಸಿದ್ದು, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಹಾಲಿ ಸಚಿವ ಕೆಸಿ ನಾರಾಯಣಗೌಡ, ಶಾಸಕರಾದ ಎಂಪಿ ಕುಮಾರಸ್ವಾಮಿ, ಬಸವರಾಜ್ ದಡೇಸೂರು, ಎಸ್‌ಎ ರವೀಂದ್ರನಾಥ್, ಮಾಜಿ ಸಚಿವ ಕೆಎಸ್ ಈಶ್ವರಪ್ಪ ಸೇರಿದಂತೆ ಹಲವರಿಗೆ ಟಿಕೆಟ್ ಕೈತಪ್ಪಿದೆ.

2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಈಗಾಗಲೇ ಘೋಷಣೆ ಮಾಡಿದ್ದಾರೆ. ಹೀಗಾಗಿ ಬಿಜೆಪಿ ಅಭ್ಯರ್ಥಿಗಳ ಅಂತಿಮ ಪಟ್ಟಿ ಶಿಕಾರಿಪುರದಿಂದ ಬಿವೈ ವಿಜಯೇಂದ್ರ ಸ್ಪರ್ಧಿಸುವುದು ಖಚಿತವಾಗಿದೆ. ಕೊನೆ ಕ್ಷಣದಲ್ಲಿ ಅಚ್ಚರಿಯ ಬದಲಾವಣೆಗಳಾದರೆ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರಿಗೂ ಟಿಕೆಟ್ ಕೈ ತಪ್ಪುವ ಸಾಧ್ಯತೆಯಿದೆ.

ಇತ್ತೀಚೆಗಷ್ಟೇ ಲೋಕಾಯುಕ್ತ ದಾಳಿಗೆ ಸಿಲುಕಿ ಪಕ್ಷಕ್ಕೆ, ಸರಕಾರಕ್ಕೆ ಮುಜುಗರ ಸೃಷ್ಟಿಸಿದ್ದ ಮಾಡಾಳ್ ವಿರೂಪಾಕ್ಷಪ್ಪ ಅವರಿಗೂ ಟಿಕೆಟ್ ಕೈ ತಪ್ಪಲಿದೆ. ಬದಲಿಗೆ ಕ್ಷೇತ್ರದ ಪಕ್ಷದ ಕಾರ್ಯಕರ್ತರಿಂದ ತೀವ್ರ ವಿರೋಧ ಎದುರಿಸುತ್ತಿರುವ ಅವರ ಪುತ್ರ ಮಾಡಾಳ್ ಮಲ್ಲಿಕಾರ್ಜುನ, ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ, ಕನಕಗಿರಿಯ ಬಸವರಾಜ ದಡೇಸೂರು, ಎಸ್.ಎ.ರವೀಂದ್ರನಾಥ್ ಅವರಿಗೆ ವಯಸ್ಸಿನ ಕಾರಣಕ್ಕಾಗಿ ಬಿಜೆಪಿ ಅಭ್ಯರ್ಥಿಗಳ ಅಂತಿಮ ಪಟ್ಟಿಯಲ್ಲಿ ಟಿಕೆಟ್ ಕೈ ತಪ್ಪಲಿದೆ ಎನ್ನಲಾಗಿದೆ.

ಪಂಚಮಸಾಲಿ ಮೀಸಲಾತಿಯಿಂದ ಸಂಕಷ್ಟ ಎದುರಿಸುತ್ತಿರುವ ಶಿಗ್ಗಾಂವಿ-ಸವಣೂರು ಸೇರಿ ದಾವಣಗೆರೆ ಉತ್ತರ ಕ್ಷೇತ್ರದ ಮೇಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಣ್ಣಿಟ್ಟಿದ್ದಾರೆ. ಇಲ್ಲಿ ಲಿಂಗಾಯತರು ಬಹುಸಂಖ್ಯಾತರಾಗಿರುವ ಕಾರಣ ಸುರಕ್ಷಿತ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಆಪರೇಷನ್ ಕಮಲದಿಂದ ಬಿಜೆಪಿ ಸೇರಿದ ಬಹುತೇಕ ಎಲ್ಲರಿಗೂ ಟಿಕೆಟ್ ಖಚಿತ. ಆದರೆ, ಕಾಂಗ್ರೆಸ್ ಸೇರುವ ಶಂಕೆ ಇರುವುದರಿಂದ ಹಾಲಿ ಸಚಿವ ಕೆ.ಸಿ.ನಾರಾಯಣಗೌಡ ಅವರ ನಡೆಯನ್ನು ಆಧರಿಸಿ ಟಿಕೆಟ್ ನಿರ್ಧಾರವಾಗಲಿದೆ.

ಉಳಿದಂತೆ ಅಥಣಿಯಲ್ಲಿ ಹಾಲಿ ಶಾಸಕ ಮಹೇಶ ಕುಮಟಹಳ್ಳಿಗೆ ಟಿಕೆಟ್ ನೀಡುವಂತೆ ಮಾಜಿ ಸಚಿವ ರಮೇಶ ಜಾರಕಿಹೊಳಿ ಪಟ್ಟು ಹಿಡಿದಿದ್ದರೆ, ಅದೇ ಕ್ಷೇತ್ರದ ಮಾಜಿ ಸಚಿವ ಲಕ್ಷ್ಮಣ ಸವದಿ ಕೂಡ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಹೀಗಾಗಿ ಈ ಕ್ಷೇತ್ರದಿಂದ ಇಬ್ಬರ ಹೆಸರನ್ನು ಶಿಫಾರಸು ಮಾಡುವ ಸಾಧ್ಯತೆ ಇದೆ. ಕೆಲವು ಕ್ಷೇತ್ರಗಳನ್ನು ಬಿಟ್ಟರೆ ಬಹುತೇಕ ಹಾಲಿ ಸಚಿವರು, ಶಾಸಕರಿಗೆ ಟಿಕೆಟ್ ಖಚಿತ. ತೀವ್ರ ಪೈಪೋಟಿ ಇರುವ ಕ್ಷೇತ್ರಗಳಿಗೆ ಎರಡರಿಂದ ಮೂರು ಹೆಸರು ರವಾನೆಯಾಗುವ ಸಾಧ್ಯತೆ ಇದೆ. ವಿಶೇಷವೆಂದರೆ ಈ ಬಾರಿ ಆ ಬಣ, ಈ ಬಣ, ಸಂಘ ಪರಿವಾರದವರನ್ನು, ಟಿಕೆಟ್ ಹಂಚಿಕೆ ಹಿನ್ನೆಲೆ ಇರುವವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ.

ಈ ಪಟ್ಟಿಯನ್ನು ಈ ತಿಂಗಳ ಕೊನೆಯ ವಾರದಲ್ಲಿ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಗೆ ಶಿಫಾರಸು ಮಾಡಲಾಗುವುದು. ಸಂಸದೀಯ ಮಂಡಳಿ ಸಭೆಯಲ್ಲಿ ಚರ್ಚಿಸಿದ ಬಳಿಕ ಅಧಿಕೃತವಾಗಿ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ವಂಚಿತ: ಬಿ.ಎಸ್.ಯಡಿಯೂರಪ್ಪ, ಗೋವಿಂದ ಕಾರಜೋಳ, ಕೆ.ಎಸ್.ಈಶ್ವರಪ್ಪ, ಎಸ್.ಎ.ರವೀಂದ್ರನಾಥ್, ಜಗದೀಶ್ ಶೆಟ್ಟರ್. ಖಾತರಿಯಿಲ್ಲ: ಎಂ.ಪಿ.ಕುಮಾರಸ್ವಾಮಿ (ಮೂಡಿಗೆರೆ), ಬಸವರಾಜ ದಡೇಸೂರು (ಕನಕಗಿರಿ), ಶ್ರೀಮಂತ ಪಾಟೀಲ. ಸ್ಪರ್ಧೆ ಹೆಚ್ಚಿರುವಲ್ಲಿ ಎರಡು ಹೆಸರುಗಳನ್ನು ಶಿಫಾರಸು ಮಾಡಲಾಗಿದೆ. ಅಥಣಿ-ಮಹೇಶ ಕುಮಟಹಳ್ಳಿ, ಹುಕ್ಕೇರಿ-ರಮೇಶ ಕತ್ತಿ ಅಥವಾ ಉಮೇಶ ಕತ್ತಿ ಅವರ ಪುತ್ರ, ಬೆಳಗಾವಿ ಗ್ರಾಮಾಂತರ ಸಂಜಯ ಪಾಟೀಲ. ಸಚಿವ ನಾರಾಯಣಗೌಡ ಕಾಂಗ್ರೆಸ್ ಸೇರಿದರೆ ಟಿಕೆಟ್ ಸಿಗುವುದು ಅನುಮಾನ.

ಕರ್ನಾಟಕ ವಿಧಾನಸಭೆ ಚುನಾವಣೆ 2023 ಸಂಭಾವ್ಯ ಬಿಜೆಪಿ ಅಭ್ಯರ್ಥಿಗಳ ಅಂತಿಮ ಪಟ್ಟಿ:

1 ನಿಪ್ಪಾಣಿ – ಶಶಿಕಲಾ ಜೊಲ್ಲೆ
2 ಚಿಕ್ಕೋಡಿ ಸದಲಗಾ – ಮಹಾಂತೇಶ ಕವಟಗಿ ಮಠ
3 ಅಥಣಿ – ಮಹೇಶ ಕುಮಟಳ್ಳಿ ಅಥವಾ ಲಕ್ಮಣ ಸಾ
4 ಕಾಗವಾಡ – ಶ್ರೀಮಂತ ಪಾಟೀಲ
5 ಕುಡಚಿ – ಪಿ.ರಾಜೀವ
6 ರಾಯ ಭಾಗ – ದುರ್ಯೋಧನ ಐಹೊಳೆ
7 ಹುಕ್ಕೇರಿ – ರಮೇಶ ಕತ್ತಿ
8 ಅರಭಾವಿ – ಬಾಲಚಂದ್ರ ಜಾರಕಿಹೊಳಿ
9 ಗೋಕಾಕ – ರಮೇಶ ಜಾರಕಿಹೊಳಿ
10 ಯಮಕನಮರಡಿ –
11 ಬೆಳಗಾವಿ ಉತ್ತರ – ಅನಿಲ ಬೆನಕೆ
12 ಬೆಳಗಾವಿ ದಕ್ಷಿಣ – ಅಭಯ ಪಾಟೀಲ
13 ಬೆಳಗಾವಿ ಗ್ರಾಮಾಂತರ – ಸಂಜಯ್ ಪಾಟೀಲ್, ಅಥವಾ ರಮೇಶ್ ಜಾರಕಿಹೊಳಿ ಪಿಎ
14 ಖಾನಾಪುರ –
15 ಕಿತ್ತೂರು – ಮಹಾಂತೇಶ ದೊಡ್ಡಗೌಡರ್
16 ಬೈಲಹೊಂಗಲ – ವಿಶ್ವನಾಥ ಪಾಟೀಲ
17 ಸವದತ್ತಿ ಯಲ್ಲಮ್ಮ- ಆನಂದ ಮಾಮನಿ ಅವರ ಪತ್ನಿ
18 ರಾಮದುರ್ಗ – ಮಹದೇವಪ್ಪ ಯಾದವ್
19 ಮುಧೋಳ – ಗೋವಿಂದ ಕಾರಜೋಳ
20 ತೇರದಾಳ – ಸಿದ್ದು ಸವದಿ
21 ಜಮಖಂಡಿ – ಶ್ರೀಕಾಂತ ಕುಲಕರ್ಣಿ
22 ಬಿಳಗಿ – ಮುರುಗೇಶ್ ನಿರಾಣಿ
23 ಬಾದಾಮಿ –
24 ಬಾಗಲಕೋಟೆ – ವೀರಣ್ಣ ಚರಂತಿಮಠ
25 ಹುನಗುಂದ – ದೊಡ್ಡನಗೌಡ ಪಾಟೀಲ
26 ಮುದ್ದೇಬಿಹಾಳ – ಎಎಸ್ ಪಾಟೀಲ್ ನಡಹಳ್ಳಿ
28 ಬಸವನ ಬಾಗೇವಾಡಿ –
27 ದೇವರ ಹಿಪ್ಪರಗಿ – ಸೋಮನಗೌಡ ಬಿ. ಪಾಟೀಲ್
29 ಬಬಲೇಶ್ವರ –
30 ಬಿಜಾಪುರ ನಗರ – ಬಸನಗೌಡ ಪಾಟೀಲ್ ಯತ್ನಾಳ್
31 ನಾಗಠಾಣ –
32 ಅಂತ್ಯ –
33 ಸಿಂದಗಿ – ರಮೇಶ ಬೂಸನೂರ
34 ಅಫಜಲಪುರ – ಮಾಲೀಕಯ್ಯ ಗುತ್ತೇದಾರ್
35 ಜಾವರಗಿ – ದೊಡ್ಡಗೌಡ ಪಾಟೀಲ
36 ಸುರಪುರ – ರಾಜುಗೌಡ
37 ಶಹಪುರ್ – ಶಿರುವಾಲ್
38 ಯಾದಗಿರಿ – ವೆಂಕಟ್ ಮುದ್ನಾಳ್
39 ಗುರ್ಮಿಠಕಲ್ – ಬಾಬುರಾವ್ ಚಿಂಚನಸೂರ್
40 ಚಿತ್ತಾಪುರ –
41 ಸೇಡಂ – ರಾಜ್‌ಕುಮಾರ್ ಪಾಟೀಲ್ ತೇಲ್ಕೂರ್
42 ಚಿಂಚೋಳಿ –
43 ಕಲಬುರಗಿ ಗ್ರಾಮಾಂತರ – ಬಸವರಾಜ ಮುತ್ತಿಮೂಡ
44 ಕಲಬುರಗಿ ದಕ್ಷಿಣ – ದತ್ತಾತ್ರೇಯ ಪಾಟೀಲ್ ರಾಯವೂರು
45 ಕಲಬುರಗಿ ಉತ್ತರ –
46 ಆಳಂದ – ಸುಭಾಷ ಗುತ್ತೇದಾರ್
47 ಬಸವಕಲ್ಯಾಣ – ಶರಣು ಸಲಗರ
48 ಹುಮನಾಬಾದ್ –
49 ಬೀದರ್ ದಕ್ಷಿಣ –
50 ಬೀದರ್ – ಸೂರ್ಯಕಾಂತ ನಾಗಮಾರಪಳ್ಳಿ
51 ಭಾಲ್ಕಿ –
52 ಔರಾದ್ – ಪ್ರಭು ಚವಾಣ್
53 ರಾಯಚೂರು ಗ್ರಾಮಾಂತರ – ಶಿವರಾಜ್ ಹವಾಲ್ದಾರ್
54 ರಾಯಚೂರು – ಡಾ.ಶಿವರಾಜ್ ಪಾಟೀಲ್
55 ಮಾನ್ವಿ – ವಜ್ಜಪ್ಪ ಮನಾಳ
56 ದೇವದುರ್ಗ – ಶಿವನಗೌಡ ನಾಯಕ್
57 ಲಿಂಗಗುರು –
58 ಸಿಂಧನೂರು –
59 ಮಸ್ಕಿ – ಪ್ರತಾಪ್ ಗೌಡ ಪಾಟೀಲ್
60 ಕುಸ್ತಗಿ –
61 ಕನಕಗಿರಿ – ಬಸವರಾಜ ದಡೇಸೂರು
62 ಗಂಗಾವತಿ – ಪಾರಣ ಮುನುವಳ್ಳಿ
63 ಯಲಬುರ್ಗಾ – ಹಾಲಪ್ಪ ಬಸಪ್ಪ ಆಚಾರ್
64 ಕೊಪ್ಪಳ – ಅಂಬರೀಶ್ ಕರಡಿ/ ವಿರೂಪಾಕ್ಷಪ್ಪ
65 ಶಿರಹಟ್ಟಿ – ರಾಮಣ್ಣ ಲಮಾಣಿ
66 ಗದಗ – ಅನಿಲ ಮೆಣಸಿನಕಾಯಿ
67 ರೋಣ – ಕಳಕಪ್ಪ ಬಂಡಿ
68 ನರಗುಂದ – ಸಿಸಿ ಪಾಟೀಲ್
69 ನವಲಗುಂದ – ಶಂಕರ ಪಾಟೀಲ
70 ಕುಂದಗೋಳ – ಚಿಕ್ಕನಗೌಡರು
71 ಧಾರವಾಡ – ಅಮೃತ ದೇಸಾಯಿ
72 ಹುಬ್ಬಳ್ಳಿ ಧಾರವಾಡ ಪೂರ್ವ –
73 ಹುಬ್ಬಳ್ಳಿ ಧಾರವಾಡ ಕೇಂದ್ರ – ಜಗದೀಶ ಶೆಟ್ಟರ್
74 ಹುಬ್ಬಳ್ಳಿ ಧಾರವಾಡ ಪಶ್ಚಿಮ – ಅರವಿಂದ ಬೆಲ್ಲದ್
75 ಕಲಘಟಗಿ – ಸಿ.ಎಂ. ನಿಬ್ಬಣ್ಣವರ್
76 ಹಳಿಯಾಳ – ಸುನೀಲ್ ನಾಯ್ಕ
77 ಕಾರವಾರ – ರೂಪಾಲಿ ನಾಯ್ಕ್
78 ಕುಮಟಾ – ದಿನಕರ ಶೆಟ್ಟಿ
77 ಭಟ್ಕಳ – ಸುನಿಲ್ ಬಿ ನಾಯಕ್
80 ಶಿರಸಿ – ವಿಶ್ವೇಶ್ವರ ಹೆಗಡೆ ಕಾಗೇರಿ
81 ಯಲ್ಲಾಪುರ – ಅರಬೈಲ್ ಶಿವರಾಮ ಹೆಬ್ಬಾರ್
82 ಹಾನಗಲ್ –
83 ಶಿಗ್ಗಾಂವ್ – ಬಸವರಾಜ ಬೊಮ್ಮಾಯಿ
84 ಹಾವೇರಿ – -ನೆಹರು ಓಲೇಕಾರ
85 ಬ್ಯಾಡಗಿ – ವಿರೂಪಾಕ್ಷಪ್ಪ ಬಳ್ಳಾರಿ
86 ಹಿರೇಕೆರೂರು – ಬಿ.ಸಿ. ಪಾಟೀಲ್
87 ರಾಣೆಬೆನ್ನೂರು – ಅರುಣ್ ಕುಮಾರ್
88 ಹೂವಿನ ಹಡಗಲಿ – ಚಂದ್ರ ನಾಯ್ಕ
89 ಹಗರಿಬೊಮ್ಮನಹಳ್ಳಿ – ನೇಮಿರಾಜ್ ನಾಯಕ್/ ಲಕ್ಷ್ಮೀನಾರಾಯಣ
90 ವಿಜಯನಗರ (ಹೊಸಪೇಟೆ) – ಆನಂದ್ ಸಿಂಗ್
91 ಕಂಪ್ಲಿ – ಸುರೇಶ್ ಬಾಬು
92 ಸಿರಗುಪ್ಪ – ಸೋಮಲಿಂಗಪ್ಪ
93 ಬಳ್ಳಾರಿ – ಗ್ರಾಮಾಂತರ – ಬಿ. ಶ್ರೀರಾಮುಲು
94 ಬಳ್ಳಾರಿ ನಗರ – ಸೋಮಶೇಖರ್ ರೆಡ್ಡಿ
95 ಸಂಡೂರ್ –
96 ಕೂಡ್ಲಿ – ಎನ್.ವೈ.ಗೋಪಾಲಕೃಷ್ಣ
97 ಮೊಳಕಾಲ್ಮುರು – ತಿಪ್ಪೇಸ್ವಾಮಿ
98 ಚಳ್ಳಕೆರೆ- ಅನಿಲ್ ಕುಮಾರ್
99 ಚಿತ್ರದುರ್ಗ ನಗರ – ತಿಪ್ಪಾರೆಡ್ಡಿ/ಅನಿಶ್ ಸಿದ್ದೇಶ್ವರ್
100 ಹಿರಿಯೂರು – ಪೂರ್ಣಿಮಾ ಶ್ರೀನಿವಾಸ್
101 ಹೊಸದುರ್ಗ – ಗೂಳಿಹಟ್ಟಿ ಶೇಖರ್
102 ಹೊಳಲ್ಕೆರೆ – ಎಂ.ಚಂದ್ರಪ್ಪ
103 ಜಗಳೂರು – ಎಸ್.ವಿ. ರಾಮಚಂದ್ರ
104 ಹರ್ಪನಹಳ್ಳಿ – ಕರುಣಾಕರ ರೆಡ್ಡಿ
105 ಹರಿಹರ – ಬಿ.ಪಿ.ಹರೀಶ್
106 ದಾವಣಗೆರೆ ಉತ್ತರ – ಬಸವರಾಜ ಬೊಮ್ಮಾಯಿ
107 ದಾವಣಗೆರೆ ದಕ್ಷಿಣ – ಯಶವಂತರಾವ್ ಜಾಧವ್
108 ಮಾಯಕೊಂಡ – ಪ್ರೊ.ಲಿಂಗಣ್ಣ
109 ಚನ್ನಗಿರಿ – ಮಾಡಾಳ್ ಮಲ್ಲಿಕಾರ್ಜುನ
110 ಹೊನ್ನಾಳಿ – ರೇಣುಕಾಚಾರ್ಯ
111 ಶಿವಮೊಗ್ಗ ಗ್ರಾಮಾಂತರ – ಅಶೋಕ್ ನಾಯಕ್
112 ಭದ್ರಾವತಿ – ಕಾಂತೇಶ್/ಪವಿತ್ರಾ ರಾಮಯ್ಯ
113 ಶಿವಮೊಗ್ಗ – ಕೆ.ಎಸ್.ಈಶ್ವರಪ್ಪ
114 ತೀರ್ಥಹಳ್ಳಿ – ಆರಗ ಜ್ಞಾನೇಂದ್ರ
115 ಶಿಕಾರಿಪುರ – ವಿಜಯೇಂದ್ರ
116 ಸೊರಬ – ಕುಮಾರ್ ಬಂಗಾರಪ್ಪ
117 ಸಾಗರ – ಹರತಾಳು ಹಾಲಪ್ಪ
118 ಬೈಂದೂರು – ಬಿ.ಸುಕುಮಾರ್ ಶೆಟ್ಟಿ
119 ಕುಂದಾಪುರ – ಹಾಲಾಡಿ ಶ್ರೀನಿವಾಸ ಶೆಟ್ಟಿ, ಅನಿಲ್ ಕಾಂಚನ್
120 ಉಡುಪಿ – ರಘುಪತಿ ಭಟ್
121 ಕಾಪು – ಲಾಲಾಜಿ ಮೆಂಡನ್
122 ಕಾರ್ಕಳ – ವಿ.ಸುನಿಲ್ ಕುಮಾರ್
123 ಶೃಂಗೇರಿ – ಜೀವರಾಜ್
124 ಮೂಡಿಗೆರೆ – ಎಂ.ಪಿ. ಕುಮಾರಸ್ವಾಮಿ
125 ಚಿಕ್ಕಮಗಳೂರು – ಸಿ.ಟಿ. ರವಿ
126 ತರೀಕೆರೆ – ಡಿ.ಎಸ್.ಸುರೇಶ್
127 ಕಡೂರು – ಬೆಳ್ಳಿಪ್ರಕಾಶ್
128 ಚಿಕ್ಕನಾಯಕನಹಳ್ಳಿ – ಜೆ.ಸಿ.ಮಾಧುಸ್ವಾಮಿ
129 ತಿಪಟೂರು – ಕ್ರಿ.ಪೂ. ನಾಗೇಶ್
130 ತುರುವೇಕೆರೆ – ಎ.ಎಸ್. ಜಯರಾಮ್
131 ಕುಣಿಗಲ್ – ಮುದ್ದಹನುಮೇಗೌಡ/ ಕೃಷ್ಣಕುಮಾರ್
132 ತುಮಕೂರು – ಜ್ಯೋತಿ ಗಣೇಶ್
133 ತುಮಕೂರು ಗ್ರಾಮಾಂತರ – ಸುರೇಶ್ ಗೌಡ
134 ಕೊರಟಗೆರೆ – ಅನಿಲ್ ಕುಮಾರ್
135 ಗುಬ್ಬಿ –
136 ಸಿರಾ – ಡಾ. ರಾಜೇಶ್ ಗೌಡ
137 ಪಾವಗಡ –
138 ಮಧುಗಿರಿ –
139 ಗೌರಿಬಿದನೂರು –
140 ಬಾಗೇಪಲ್ಲಿ –
141 ಚಿಕ್ಕಬಳ್ಳಾಪುರ – ಡಾ.ಸುಧಾಕರ್
142 ಶಿಡ್ಲಘಟ್ಟ –
143 ಚಿಂತಾಮಣಿ – ಜಿ.ಕೆ. ಕೃಷ್ಣಾರೆಡ್ಡಿ
144 ಶ್ರೀನಿವಾಸಪುರ –
145 ಮುಳು ಬಾಗಿಲು –
146 ಕೆಜಿಎಫ್ – ಸಂಪಂಗಿ
147 ಬಂಗಾರಪೇಟೆ –
148 ಕೋಲಾರ – ವರ್ತೂರು ಪ್ರಕಾಶ್
149 ಮಾಲೂರು – ಮಂಜುನಾಥ್ ಗೌಡ
150 ಯಲಹಂಕ – ಎಸ್.ಆರ್. ವಿಶ್ವನಾಥ್
151 ಕೆ.ಆರ್.ಪುರಂ – -ಭೈರತಿ ಬಸವರಾಜ
152 ಬ್ಯಾಟರಾಯನಪುರ – ರವಿ/ ತಮ್ಮಾಶ್ ಗೌಡ/ಮುನೀಂದ್ರ ಕುಮಾರ್
153 ಯಶವಂತಪುರ – ಎಚ್‌ಟಿ ಸೋಮಶೇಖರ್
154 ರಾಜರಾಜೇಶ್ವರಿ ನಗರ – ಮುನಿರತ್ನ
155 ದಾಸರಹಳ್ಳಿ – ಮುನಿರಾಜು
156 ಮಹಾಲಕ್ಷ್ಮಿ ಲೇಔಟ್ – ಕೆ.ಗೋಪಾಲಯ್ಯ
157 ಮಲ್ಲೇಶ್ವರಂ – ಡಾ. ಸಿಎನ್ ಅಶ್ವಥ ನಾರಾಯಣ
158 ಹೆಬ್ಬಾಳ – ಕಟ್ಟಾಸುಬ್ರಹ್ಮಣ್ಯ ನಾಯ್ಡು
159 ಪುಲಕೇಶಿನಗರ –
160 ಸರ್ವಜ್ಞನಗರ –
161 ಸಿವಿ ರಾಮನ್ ನಗರ – ಎಸ್.ರಘು
162 ಶಿವಾಜಿನಗರ –
163 ಶಾಂತಿನಗರ –
164 ಗಾಂಧಿನಗರ – ಸಪ್ತಗಿರಿಗೌಡ/ ಕೃಷ್ಣಯ್ಯ ಶೆಟ್ಟಿ
165 ರಾಜಾಜಿನಗರ – ಸುರೇಶ್ ಕುಮಾರ್
166 ಗೋವಿಂದರಾಜನಗರ – ವಿ.ಸೋಮಣ್ಣ
167 ವಿಜಯನಗರ – ರವೀಂದ್ರ/ ಉಮೇಶ್ ಶೆಟ್ಟಿ
168 ಚಾಮರಾಜಪೇಟೆ –
169 ಚಿಕ್ಕಪೇಟೆ – ಉದಯ್ ಗರುಡಾಚಾರ್
170 ಬಸವನಗುಡಿ – ರವಿಸುಬ್ರಮಣ್ಯ
171 ಪದ್ಮನಾಭನಗರ – ಆರ್. ಅಶೋಕ್
172 BTM ಲೇಔಟ್ –
173 ಜಯನಗರ – ತೇಜಸ್ವಿನಿ ಅನಂತ್ ಕುಮಾರ್/ಸಿ.ಕೆ.ರಾಮಮೂರ್ತಿ/ ಎನ್.ಆರ್. ರಮೇಶ್
174 ಮಹದೇವಪುರ – ಅರವಿಂದ ಲಿಂಬಾವಳಿ
175 ಬೊಮ್ಮನಹಳ್ಳಿ – ಸತೀಶ್ ರೆಡ್ಡಿ
176 ಬೆಂಗಳೂರು ದಕ್ಷಿಣ – ಎಂ. ಕೃಷ್ಣಪ್ಪ
177 ಆನೇಕಲ್ – ಶಿವರಾಂ
178 ಹೊಸಕೋಟೆ – MTB ಮಗ
179 ದೇವನಹಳ್ಳಿ –
180 ದೊಡ್ಡಬಳ್ಳಾಪುರ –
181 ನೆಲಮಂಗಲ – ನಾಗರಾಜ್
182 ಮಾಗಡಿ – ಪ್ರಸನ್ನಗೌಡ
183 ರಾಮನಗರ –
184 ಕನಕಪುರ –
185 ಚನ್ನಪಟ್ಟಣ – ಯೋಗೀಶ್ವರ್
186 ಮಳವಳ್ಳಿ –
187 ಮದ್ದೂರು –
188 ಮೇಲುಕೋಟೆ –
189 ಮಂಡ್ಯ – ಸುಮಲತಾ ಅಂಬರೀಶ್
190 ಶ್ರೀರಂಗಪಟ್ಟಣ – ಸಚ್ಚಿದಾನಂದ ಮೂರ್ತಿ
191 ನಾಗಮಂಗಲ –
192 ಕೆ.ಆರ್.ಪೇಟೆ – ನಾರಾಯಣಗೌಡ
193 ಶ್ರವಣಬೆಳಗೊಳ –
194 ಅರಸೀಕೆರೆ -ಎನ್.ಆರ್.ಸಂತೋಷ್
195 ಬೇಲೂರು – ಸುರೇಶ್
196 ಹಾಸನ – ಪ್ರೀತಂ ಗೌಡ
197 ಹೊಳೆನರಸೀಪುರ –
198 ಅರಕಲಗೂಡು – ಯೋಗ ರಮೇಶ್
199 ಸಕಲೇಶಪುರ – ಜಿಮ್ ಸೋಮು
200 ಬೆಳ್ತಂಗಡಿ – ಹರೀಶ್ ಪೂಂಜ
201 ಮೂಡುಬಿದಿರೆ – ಉಮಾನಾಥ ಕೋಟ್ಯಾನ್
202 ಮಂಗಳೂರು ನಗರ ಉತ್ತರ – ಡಾ. ಭರತ್ ಶೆಟ್ಟಿ
203 ಮಂಗಳೂರು ನಗರ – ವೇದವ್ಯಾಸ್ ಕಾಮತ್
204 ಮಂಗಳೂರು –
205 ಬಂಟ್ವಾಳ – ರಾಜೇಶ್ ನಾಯಕ್
206 ಪುತ್ತೂರು – ಸಂಜೀವ ಮಠಂದೂರು
207 ಸುಳ್ಯ –ಎಸ್ ಅಂಗಾರ
208 ಮಡಿಕೇರಿ- ಅಪ್ಪಚ್ಚು ರಂಜನ್
209 ವಿರಾಜಪೇಟೆ – ಕೆ.ಜಿ.ಬೋಪಯ್ಯ
210 ಪಿರಿಯಾಪಟ್ಟಣ –
211 ಕೃಷ್ಣರಾಜನಗರ –
212 ಹುಣಸೂರು –
213 ಹೆಗ್ಗಡದೇವನಕೋಟೆ –
214 ನಂಜನಗೂಡು – ಹರ್ಷವರ್ಧನ್
215 ಚಾಮುಂಡೇಶ್ವರಿ –
216 ಕೃಷ್ಣರಾಜನಗರ – ಎಸ್‌ಎ ರಾಮದಾಸ್
217 ಚಾಮರಾಜ – ನಾಗೇಂದ್ರ
218 ನರಸಿಂಹರಾಜ –
219 ವರುಣ -ಕಾಪು ಸಿದ್ದಲಿಂಗಸ್ವಾಮಿ
220 ಟಿ. ನರಸೀಪುರ –
221 ಹನೂರು – ಪ್ರೀತಮ್ ನಾಗಪ್ಪ
222 ಕೊಳ್ಳೇಗಾಲ – ಎನ್.ಮಹೇಶ್
223 ಗುಂಡ್ಲುಪೇಟೆ – ಸಿ.ಎಸ್. ನಿರಂಜನ್ ಕುಮಾರ್
224 ಚಾಮರಾಜನಗರ – ರುದ್ರೇಶ್.

ಇದನ್ನೂ ಓದಿ : ಅಮಿತ್ ಶಾ ಅವರೊಂದಿಗೆ ಮಹಾ ವಿಮಾ ಯೋಜನೆಯ ಬಗ್ಗೆ ಪ್ರಸ್ತಾಪಿಸಲಿರುವ ಬೊಮ್ಮಾಯಿ

BJP Candidates final list : Karnataka Assembly Election 2023: Here is the final list of BJP candidates

Comments are closed.