ಭಾನುವಾರ, ಜೂನ್ 15, 2025
Homekarnatakasumoto case : ಕಾಂಗ್ರೆಸ್ ಪಾದಯಾತ್ರೆಗೆ‌ ಮತ್ತೊಂದು ಸಂಕಷ್ಟ: ಡಿಕೆಶಿ ವಿರುದ್ಧ ಮಕ್ಕಳ ಹಕ್ಕು ಆಯೋಗದಿಂದ‌...

sumoto case : ಕಾಂಗ್ರೆಸ್ ಪಾದಯಾತ್ರೆಗೆ‌ ಮತ್ತೊಂದು ಸಂಕಷ್ಟ: ಡಿಕೆಶಿ ವಿರುದ್ಧ ಮಕ್ಕಳ ಹಕ್ಕು ಆಯೋಗದಿಂದ‌ ಕೇಸ್

- Advertisement -

ಬೆಂಗಳೂರು : ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಕಾಂಗ್ರೆಸ್ ಪಾದಯಾತ್ರೆ ಎರಡನೇ ದಿನವನ್ನು ಯಶಸ್ವಿಯಾಗಿ‌ ಮುಗಿಸಿದೆ. ಆದರೆ ಈಗಾಗಲೇ ಕೊರೋನಾ ನಿಯಮ ಉಲ್ಲಂಘನೆ, ಕರ್ಪ್ಯೂ ಉಲ್ಲಂಘನೆ ಪ್ರಕರಣ ದಾಖಲಾಗಿರುವ ಬೆನ್ನಲ್ಲೇ, ಡಿಕೆಶಿಯವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಡಿಕೆಶಿಯವರು ಕೊರೋನಾ ಮುನ್ನೆಚ್ಚರಿಕೆ ಇಲ್ಲದೇ ಮಕ್ಕಳೊಂದಿಗೆ ಬೆರೆತ ಕಾರಣಕ್ಕೆ ರಾಷ್ಟ್ರೀಯ ಮಕ್ಕಳ ಹಕ್ಕು ಆಯೋಗ ಸುಮೋಟೋ ಕೇಸ್ (sumoto case) ದಾಖಲಿಸಿಕೊಂಡಿದ್ದು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ವರದಿ ನೀಡುವಂತೆ ನೋಟೀಸ್ ಜಾರಿ ಮಾಡಿದೆ.

ಪಾದಯಾತ್ರೆ ಎರಡನೇ ದಿನವಾದ ಸೋಮವಾರ ಡಿಕೆಶಿಯವರು ತಮ್ಮ‌ಹುಟ್ಟೂರಿನಿಂದ ಪಾದಯಾತ್ರೆ ಆರಂಭಿಸಿದ್ದರು.‌ ಈ ವೇಳೆ ದಾರಿ ‌ಮಧ್ಯೆ ವಿಶ್ವೋದಯ ಖಾಸಗಿ ಶಾಲೆಗೆ ಭೇಟಿ‌ ನೀಡಿದ್ದ ಡಿಕೆಶಿ ಮಕ್ಕಳೊಂದಿಗೆ ಸ್ವಲ್ಪ ಸಮಯ ಕಳೆದಿದ್ದರು. ಆದರೆ ಈ ವೇಳೆ ಡಿಕೆಶಿ ಶಿವಕುಮಾರ್ ಮಾಸ್ಕ್ ಧರಿಸಿರಲಿಲ್ಲ.‌ಅಷ್ಟೇ ಅಲ್ಲ ಸಾಮಾಜಿಕ ಅಂತರವನ್ನು ಕಾಪಾಡದೇ ಡಿಕೆಶಿ ಮಕ್ಕಳೊಂದಿಗೆ ಬೆರೆತು ಕಾಲ ಕಳೆದಿದ್ದರು. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಇನ್ನು ಡಿಕೆಶಿಯವರ ಪಾದಯಾತ್ರೆಯ ಮೇಲೆಯೇ ಕಣ್ಣಿಟ್ಟಿದ್ದ ಬಿಜೆಪಿ ಈ ವಿಡಿಯೋವನ್ನು ಬಳಸಿಕೊಂಡು ಖಾರವಾಗಿ ಟ್ವೀಟ್ ಮಾಡಿತ್ತು.

ಮಾನ್ಯ ಡಿಕೆಶಿಯವರೇ, ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಸಿದ್ಧರಾಮಯ್ಯನವರು ಜ್ವರದಿಂದ ಬಳಲುತ್ತಿದ್ದಾರೆ. ಸೋಂಕಿನ ಪ್ರಥಮ ಲಕ್ಷಣವಾದ ಜ್ವರ ನಿಮ್ಮನ್ನು ಬಾಧಿಸುತ್ತಿದೆ. ಹೀಗಿದ್ದರೂ ನೀವು ಇಂದು ಯಾವುದೇ ಮುಂಜಾಗ್ರತಾ ಕ್ರಮವಿಲ್ಲದೇ ಮಕ್ಕಳೊಂದಿಗೆ ಬೆರೆತಿದ್ದೀರಿ. ಇದು ಕೋವಿಡ್ ಸೋಂಕಿಗೆ ಕಾರಣವಾದರೇ ನೀವು ಹೊಣೆ ಹೊರುತ್ತಿರಾ ಎಂದು ಬಿಜೆಪಿ ಪ್ರಶ್ನಿಸಿದೆ. ಈಗ ಈ ವಿಚಾರ ಗಂಭೀರ ಸ್ವರೂಪ ಪಡೆದುಕೊಂಡಿದೆ. ಡಿಕೆಶಿಯವರು ಕೊರೋನಾ ಹಾಗೂ ಓಮೈಕ್ರಾನ್ ನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಯಾವುದೇ ಮುನ್ನೆಚ್ಚರಿಕೆ ಇಲ್ಲದೇ ಮಕ್ಕಳೊಂದಿಗೆ ಬೆರೆತಿರೋದನ್ನು ಗಮನಿಸಿದ ರಾಷ್ಟ್ರೀಯ ಮಕ್ಕಳ ಆಯೋಗ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ನೊಟೀಸ್ ಜಾರಿ ಮಾಡಿದೆ.

ಡಿಕೆಶಿಯವರ ವಿರುದ್ಧ ಸ್ವಮೋಟೋ ಪ್ರಕರಣ ದಾಖಲಿಸಿಕೊಂಡಿರುವ ರಾಷ್ಟ್ರೀಯ ಮಕ್ಕಳ ಆಯೋಗ, ಡಿಜಿಐಜಿಪಿ ಪ್ರವೀಣ್ ಸೂದ್ ಗೆ ಪತ್ರ ಬರೆದಿದ್ದು, ಈ ಪ್ರಕರಣದ ಬಗ್ಗೆ ಒಂದು ವಾರದಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿದೆ. ಇನ್ನೂ ಎರಡನೇ ದಿನದ ಪಾದಯಾತ್ರೆ ಕನಕಪುರ ತಲುಪಿದ್ದು ಎರಡನೇ ದಿನದ ಯಾತ್ರೆಯಲ್ಲೂ ಸಾವಿರಾರು ಜನರು ಭಾಗಿಯಾಗಿದ್ದಲ್ಲದೇ ಕೊರೋನಾ ನಿಯಮಗಳನ್ನು ಗಾಳಿಗೆ ತೂರಿದಂತೆ ಕುಣಿದು ಕುಪ್ಪಳಸಿ ಡ್ಯಾನ್ಸ್ ಮಾಡಿ ಎಂಜಾಯ್ ಮಾಡಿದ್ದಾರೆ.

ಇದನ್ನೂ ಓದಿ :  ರಾಜ್ಯ ಬಿಜೆಪಿಗೆ ವಲಸಿಗರೇ ಕಂಟಕ : ಸಚಿವ ಎಸ್.ಟಿ. ಸೋಮಶೇಖರ್‌ ಪುತ್ರನ ಪ್ರಕರಣದ ವರದಿ ಕೇಳಿದ ಹೈಕಮಾಂಡ್

ಇದನ್ನೂ ಓದಿ : ಕೊರೊನಾ ಸೋಂಕಿಗೊಳಗಾದ ಸಿಎಂ ಬೊಮ್ಮಾಯಿಯಿಂದ ಕೋವಿಡ್​ ಮಾರ್ಗಸೂಚಿ ಉಲ್ಲಂಘನೆ..?

( Another distress to Congress hike, Child rights commission sumoto case against DK Sivakumar )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular