Former minister KS Eshwarappa : ಡಿ.ಕೆ ಶಿವಕುಮಾರ್​, ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಕೆ.ಎಸ್​ ಈಶ್ವರಪ್ಪ ಗುಡುಗು

ಶಿವಮೊಗ್ಗ : Former minister KS Eshwarappa : ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್​ ಹೋರಾಟ ವಿಚಾರವಾಗಿ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ ಮಾಜಿ ಸಚಿವ ಕೆ.ಎಸ್​ ಈಶ್ವರಪ್ಪ ಕಾಂಗ್ರೆಸ್​ನವರು ತಮ್ಮ ಪಕ್ಷ ಬದುಕಿದೆ ಎಂಬುದನ್ನು ತೋರಿಸಲು ಬೇಕಾದ್ದನ್ನು ಮಾಡಲಿ. ನಾವು ವಿರೋಧ ಪಕ್ಷದಲ್ಲಿದ್ದಾಗ ಸಾಕಷ್ಟು ಕಾರ್ಯಕ್ರಮಗಳನ್ನು ಮಾಡಿದ್ದೆವು. ಆದರೆ ಇವರು ಪಾಪ ಇನ್ನೂ ಮಲಗಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಈಗಲೂ ಡಿ.ಕೆ ಶಿವಕುಮಾರ್​ ಹಾಗೂ ಸಿದ್ದರಾಮಯ್ಯ ನಾನೇ ಮುಖ್ಯಮಂತ್ರಿ ಎಂದು ಬಡಿದಾಡಿಕೊಳ್ತಿದ್ದಾರೆ. ಚಿತ್ರದುರ್ಗದ ಜಾತಿ ಸಭೆಯಲ್ಲಿಯೂ ಅವರಿಬ್ಬರೂ ಬಡಿದಾಡಿಕೊಂಡಿದ್ದಾರೆ. ಅವರ ಸ್ವಾಮಿಗಳು ಇವರಿಬ್ಬರು ಒಂದಾಗಲಿ ಅಂತಾರೆ. ಆದರೆ ನನ್ನ ಬಿಟ್ಟರೆ ಮುಖ್ಯಮಂತ್ರಿ ಆಗೋರು ಪ್ರಪಂಚದಲ್ಲಿ ಬೇರೆ ಯಾರೂ ಇಲ್ಲ ಅಂತಾರೆ. ಅಧಿಕಾರದ ಆಸೆಗೆ ಈ ದೇಶ ತುಂಡಾಗಿದೆ ಎಂದು ಗುಡುಗಿದರು.

ಸಂಪೂರ್ಣ ಹಿಂದೂಸ್ತಾನ ಒಟ್ಟಾಗಿರಲಿ ಎಂದು ಅನೇಕ ಮಹಾಪುರುಷರು ಹೋರಾಟ ಮಾಡಿದ್ದರು. ಪಾಕಿಸ್ತಾನ, ಹಿಂದೂಸ್ತಾನ ಆಗಲು ಮತ್ಯಾರೂ ಕಾರಣರಲ್ಲ. ಅಂದಿನ ಕಾಂಗ್ರೆಸ್​ನ ಕೆಲವರು ನಾಯಕರು ಮಾಡಿದ ಕುತಂತ್ರದ ಫಲವಾಗಿ ದೇಶವು ಅಂದು ಇಬ್ಭಾಗವಾಗಿದೆ. ಇದೀಗ ಇದೇ ದಿಕ್ಕಿನಲ್ಲಿ ಅಧಿಕಾರದ ಆಸೆಗೆ ಡಿ.ಕೆ ಶಿವಕುಮಾರ್​ ಹಾಗೂ ಸಿದ್ದರಾಮಯ್ಯ ಹೊರಟಿದ್ದಾರೆ ಎಂದು ಗುಡುಗಿದರು.

ಇದನ್ನು ಓದಿ : Chahal Dhanashree Relationship: ಪತ್ನಿಗೆ ಡಿವೋರ್ಸ್ ಕೊಡ್ತಾರಾ ಯುಜ್ವೇಂದ್ರ ಚಹಲ್..? “ಎಲ್ಲದಕ್ಕೂ ಇಲ್ಲೇ ಫುಲ್ ಸ್ಟಾಪ್” ಅಂದರೇಕೆ ಲೆಗ್ ಸ್ಪಿನ್ನರ್ ?

ಇದನ್ನೂ ಓದಿ : Kichcha Sudeep next movie : ಕಿಚ್ಚ ಸುದೀಪ್ ಮುಂದಿನ ಸಿನಿಮಾ ಯಾವುದು : ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ

Former minister KS Eshwarappa’s outrage against DK Sivakumar, Siddaramaiah

Comments are closed.