ಬುಧವಾರ, ಜೂನ್ 18, 2025
HomekarnatakaGoa election : ಗೋವಾದಲ್ಲಿ ಅಧಿಕಾರಕ್ಕೆ ಕೈ ಸರ್ಕಸ್ : ಸಹಾಯಕ್ಕೆ ಧಾವಿಸಿದ ಡಿ.ಕೆ.ಶಿವಕುಮಾರ್‌

Goa election : ಗೋವಾದಲ್ಲಿ ಅಧಿಕಾರಕ್ಕೆ ಕೈ ಸರ್ಕಸ್ : ಸಹಾಯಕ್ಕೆ ಧಾವಿಸಿದ ಡಿ.ಕೆ.ಶಿವಕುಮಾರ್‌

- Advertisement -

ಬೆಂಗಳೂರು : ಪಂಚ ರಾಜ್ಯ ಚುನಾವಣೋತ್ತರ ಸಮೀಕ್ಷೆಗಳು ದೇಶದ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಉತ್ತರ ಪ್ರದೇಶವೊಂದನ್ನು ಹೊರತುಪಡಿಸಿ ಉಳಿದೆಲ್ಲೆಡೆ ಅಧಿಕಾರ ಹಿಡಿಯುವ ಕನಸಿನಲ್ಲಿರೋ ಕಾಂಗ್ರೆಸ್ ಗೆ ಗೋವಾದಲ್ಲಿ (Goa election) ಅಧಿಕಾರ ಸಿಕ್ಕರೂ ಗದ್ದುಗೆ ಕೈತಪ್ಪೋ ಭೀತಿ ಎದುರಾಗಿದೆ. ಹೀಗಾಗಿ ಮತ್ತೆ ಕಾಂಗ್ರೆಸ್ ಹೈಕಮಾಂಡ್ ಆಪತ್ಭಾಂದವನ ಮೊರೆ ಹೋಗಿದೆ. ಹೀಗಾಗಿ ಹೈಕಮಾಂಡ್ ತುರ್ತು ಸೂಚನೆ ಮೇರೆಗೆ ಡಿ.ಕೆ.ಶಿವಕುಮಾರ್ (DK Sivakumar ) ಗೋವಾ ಕ್ಕೆ ಧಾವಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೇವಲ ಕರ್ನಾಟಕ ದಲ್ಲಿ ಮಾತ್ರವಲ್ಲ ದೇಶದಲ್ಲೇ ಕಾಂಗ್ರೆಸ್ ಪಾಲಿಗೆ ಆಪತ್ಬಾಂಧವರಂತೆ ನಿಂತಿದ್ದಾರೆ. ಈ ಹಿಂದೆ ಅಧಿಕಾರ ಕೈತಪ್ಪುವ ಭೀತಿ ಯಲ್ಲಿದ್ದ ಗುಜರಾತ್ ರಾಜ್ಯಸಭಾ ಚುನಾವಣೆ ವೇಳೆ ಡಿಕೆಶಿ ಕಲ್ಲುಬಂಡೆಯಂತೆ ನಿಂತು ಸದಸ್ಯರನ್ನು ರೆಸಾರ್ಟ್‌ನಲ್ಲಿಟ್ಟು ಕಾಂಗ್ರೆಸ್ ನ ಗೌರವ ಕಾಪಾಡಿದ್ದರು. ಇದೇ ಅನುಭವದ ಆಧಾರದ ಮೇಲೆ ಗೋವಾದಲ್ಲಿ (Goa election) ಅಧಿಕಾರ ಗಳಿಸಲು ಹಾಗೂ ಉಳಿಸಿಕೊಳ್ಳಲು ಕಾಂಗ್ರೆಸ್ ಡಿಕೆಶಿ ಮೊರೆ ಹೋಗಿದೆ. ಈಗಾಗಲೇ ನಡೆದಿದುವ ಚುನಾವಣೋತ್ತರ ಸಮೀಕ್ಷೆಗಳು ಗೋವಾದಲ್ಲಿ ಕಾಂಗ್ರೆಸ್ ಗೆ ಬಹುಮತ ನೀಡಿವೆ. ಜನ್ ಕಿ ಬಾತ್ ಸಮೀಕ್ಷೆ ಕಾಂಗ್ರೆಸ್ ಹಾಗೂ ಬಿಜೆಪಿ 17 ಸ್ಥಾನ ಗೆಲ್ಲಲಿದೆ ಎನ್ನುತ್ತಿದೆ. ಟೈಮ್ಸ್ ನೌ ಸಮೀಕ್ಷೆಯಲ್ಲಿ ಅಧಿಕಾರ ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಪಾಲು ಎನ್ನುತ್ತಿದೆ.

ಇದನ್ನೂ ಓದಿ : ಭಾರತೀಯ ಸೇನೆಯಿಂದ ಎರಡು ಬಾರಿ ತಿರಸ್ಕಾರ : ಉಕ್ರೇನ್‌ ಸೈನ್ಯ ಸೇರಿದ ತಮಿಳುನಾಡಿನ ಸಾಯಿನಿಕೇಶ್ ರವಿಚಂದ್ರನ್

ಇನ್ನು ಎಬಿಪಿ ಸಮೀಕ್ಷೆ ಬಿಜೆಪಿಗೆ 13 ರಿಂದ 17 ಸ್ಥಾನಗಳನ್ನು ನೀಡಿದ್ರೇ ಕಾಂಗ್ರೆಸ್ ಗೆ 12 ರಿಂದ 16 ವಿಧಾನಸಭಾ‌ಕ್ಷೇತ್ರ ಸಿಗಲಿದೆ ಎಂದಿದೆ. ಇನ್ನು ರಿಪಬ್ಲಿಕ್ ಹಾಗೂ ಪಿ ಮಾರ್ಕೋ ಸಮೀಕ್ಷೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಸಮಬಲ ಸಾಧಿಸಲಿದೆ ಎನ್ನಲಾಗುತ್ತಿದೆ. ಹೀಗಾಗಿ ಸದ್ಯ ಗೋವಾದಲ್ಲಿ ಅಧಿಕಾರಕ್ಕೇರಲು ಬಹುಮತ ಸಾಬೀತು ಮಾಡೋದೇ ದೊಡ್ಡ ಸವಾಲಾಗಿದೆ. 2017 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 17 ಸ್ಥಾನಗಳನ್ನು ಪಡೆದುಕೊಂಡಿತ್ತು. ಇತ್ತ ಬಿಜೆಪಿ‌ 13 ಸ್ಥಾನವನ್ನು ಗಳಿಸಿತ್ತು. ಆದರೆ ಕಾಂಗ್ರೆಸ್ ಮಿತ್ರ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಎಡವಿದ್ದರಿಂದ ಬಿಜೆಪಿ ಮಿತ್ರಪಕ್ಷಗಳ ಸಹಾಯದಿಂದ ಅಧಿಕಾರ ಸ್ಥಾಪಿಸಿತ್ತು.

ಹೀಗಾಗಿ ಈ ಹಳೆ ತಪ್ಪಿನಿಂದ ಪಾಠ ಕಲಿತಿರುವ ಕಾಂಗ್ರೆಸ್ ಈ ಭಾರಿ ಶತಾಯ ಗತಾಯ ಅಧಿಕಾರ ಗಳಿಸಿಕೊಳ್ಳಲೇಬೇಕೆಂದು ಪಣತೊಟ್ಟಿದೆ. ಹೀಗಾಗಿ ಅಧಿಕಾರ ಹಾಗೂ ಶಾಸಕರನ್ನು ಕಾಯ್ದುಕೊಳ್ಳಲು ಈಗಾಗಲೇ ಡಿಕೆಶಿಯನ್ನು (DK Sivakumar ) ಹೈಕಮಾಂಡ್ ಗೋವಾಕ್ಕೆ ಕಳುಹಿಸಿಕೊಟ್ಟಿದೆ. ಗೋವಾದಲ್ಲಿ ಮನೋಹರ್ ಪರಿಕ್ಕರ್ ನಿಧನದ ಬಳಿಕ ಬಿಜೆಪಿ ಕೊಂಚ ಚಾರ್ಮ್‌ ಕಳೆದುಕೊಂಡಿದ್ದು, ಇದರ ಲಾಭ ಪಡೆಯಲು ಕಾಂಗ್ರೆಸ್ ಪುಟಿದೆದ್ದಿದೆ. ಗೋವಾದಲ್ಲಿ ಫೆ.14 ರಂದು ಒಂದೇ ಹಂತದಲ್ಲಿ ಮತದಾನ ನಡೆದಿದ್ದು ಮಾರ್ಚ್ 10 ರಂದು ಫಲಿತಾಂಶ ಹೊರಬರಲಿದೆ. ಗೋವಾದಲ್ಲಿ ಅಧಿಕಾರ ಹಿಡಿಯಲು ಮ್ಯಾಜಿಕ್ ಸಂಖ್ಯೆ 21 ಎಂಬುದು ಇಲ್ಲಿ ಗಮನಾರ್ಹ ಸಂಗತಿ.

ಇದನ್ನೂ ಓದಿ : ಚುನಾವಣೋತ್ತರ ಸಮೀಕ್ಷೆ: ಯುಪಿಯಲ್ಲಿ ಅರಳಿದ ಕಮಲ

Goa election exit poll DK Sivakumar visit goa for congress high command direction

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular