ಬುಧವಾರ, ಜೂನ್ 18, 2025
HomepoliticsJanardhan Reddy press meet: ಮಡಿಕೇರಿಯಲ್ಲಿ ರೆಡ್ಡಿ ಕುಟುಂಬಸ್ಥರಿಗೆ ಅವಮಾನ: ರೆಡ್ಡಿ ಬಿಚ್ಚಿಟ್ಟ ಸತ್ಯವೇನು ಗೊತ್ತಾ?

Janardhan Reddy press meet: ಮಡಿಕೇರಿಯಲ್ಲಿ ರೆಡ್ಡಿ ಕುಟುಂಬಸ್ಥರಿಗೆ ಅವಮಾನ: ರೆಡ್ಡಿ ಬಿಚ್ಚಿಟ್ಟ ಸತ್ಯವೇನು ಗೊತ್ತಾ?

- Advertisement -

ಬೆಂಗಳೂರು: ಬೆಂಗಳೂರು : ಹದಿಮೂರು ವರ್ಷಗಳ ಬಳಿಕ ಜನಾರ್ದನ ರೆಡ್ಡಿ ಸಕ್ರೀಯ ರಾಜಕಾರಣಕ್ಕೆ ಮರಳಿದ್ದಾರೆ. ಜೊತೆಗೆ ಬಿಜೆಪಿಗೆ ಟಾಂಗ್ ಕೊಟ್ಟು ಹೊಸ ಪಕ್ಷವನ್ನೂ ಸ್ಥಾಪಿಸಿದ್ದಾರೆ. ಈ ನಡುವಲ್ಲೇ ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಜೈಲು ಸೇರಿದ ಬಳಿಕ ತನ್ನ ಕುಟುಂಬ ಅನುಭವಿಸಿದ ನರಕ ಯಾತನೆಯನ್ನು ಜನಾರ್ದನ ರೆಡ್ಡಿ ಮಾಧ್ಯಮಗಳ ಮುಂದೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅದ್ರಲ್ಲೂ ಮಡಿಕೇರಿಯಲ್ಲಿ ತನ್ನ ಮಕ್ಕಳು, ಪತ್ನಿ ಸಾರ್ವಜನಿಕವಾಗಿ ಕಣ್ಣೀರಿಟ್ಟ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. (Janardhan Reddy press meet) ಇಂದು ಬೆಳಿಗ್ಗೆ 10.30ಕ್ಕೆ ಮಾಜಿ ಸಚಿವ, ಜನಾರ್ದನ ರೆಡ್ಡಿ ಅವರು ಬೆಂಗಳೂರಿನ ಅವರು ಬೆಂಗಳೂರಿನ ಬಸವೇಸ್ವರ ಸರ್ಕಲ್‌ ಬಳಿಯ ಪಾರಿಜಾತ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆಯಲ್ಲಿ ನಡೆಸಿ ತಾವು ಜೈಲಿಗೆ ಹೋದ ಸಂದರ್ಭದಲ್ಲಿ ತನ್ನ ಕುಟುಂಬದವರಿಗೆ ಆದ ಅವಮಾನದ ಬಗ್ಗೆ ಒಂದು ಸತ್ಯ ವಿಚಾರವನ್ನು ಸುದ್ದಿ ಮಾಧ್ಯಮದವರ ಮುಂದೆ ಬಿಚ್ಚಿಟ್ಟಿದ್ದಾರೆ.

ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಜನಾರ್ದನ್‌ ರೆಡ್ಡಿ (Janardhan Reddy press meet) ಅವರು ಜೈಲು ಪಾಲಾಗಿದ್ದರು. ಈ ಸಂದರ್ಭ ಅವರ ಕುಟುಂಬಸ್ಥರಿಗೆ ಮಡಿಕೇರಿಯ ಹೋಟೆಲ್‌ ಒಂದರಲ್ಲಿ ಆದ ಅವಮಾನವಾದ ಬಗ್ಗೆ ಮಾತನಾಡಿದ್ದು, ರೆಡ್ಡಿ ಅವರ ಒತ್ತಾಯದ ಮೆರೆಗೆ ಅವರ ಹೆಂಡತಿ, ಮಗ ಹಾಗೂ ಮಗಳು ಕೊಡಗಿಗೆ ಪ್ರವಾಸ ಹೋಗಿದ್ದರು. ಪ್ರವಾಸದ ಸಂದರ್ಭದಲ್ಲಿ ಮಡಿಕೇರಿಯ ಹೋಟೆಲ್‌ ಒಂದರಲ್ಲಿ ಬೆಳಗ್ಗಿನ ತಿಂಡಿ ಮಾಡಲು ಹೋಗಿದ್ದರು. ಹೋಟೆಲ್‌ ನಲ್ಲಿ ತಿಂಡಿ ತಿನ್ನುತ್ತಿರುವ ಸಂದರ್ಭದಲ್ಲಿ ಓರ್ವ ಹೆಣ್ಣು ಮಗಳು ಬಂದು ರೆಡ್ಡಿ ಅವರ ಮಕ್ಕಳನ್ನು ಮುದ್ದಾಡಿ ನಿಮ್ಮದು ಯಾವ ಊರು ಎಂಬುದಾಗಿ ಕೇಳುತ್ತಾರೆ. ಇದಕ್ಕೆ ಉತ್ತರವಾಗಿ ಅವರ ಮಗ ನಮ್ಮದು ಬಳ್ಳಾರಿ ಎಂದು ಹೇಳುತ್ತಾನೆ. ಇದನ್ನು ಕೇಳಿದ ಅ ಹೆಣ್ಣು ಮಗಳು “ಹೋ ನಿಮ್ಮದು ಬಳ್ಳಾರಿಯೇ. ನಿಮ್ಮ ಬಾಸ್‌ ಬಳ್ಳಾರಿಯ ಜೈಲಿನಲ್ಲಿದ್ದಾರೆ ಅಂತ ಹೇಳಿ ಜೋರಾಗಿ ನಗತೊಡಗಿದರು.

ನಂತರದಲ್ಲಿ ಪಕ್ಕದಲ್ಲಿ ಕುಳಿತಿದ್ದ ತನ್ನ ಕುಟುಂಬದವರ ಜೊತೆಗೆ ಕುಳಿತು “they are from bellary, their boss behind bars. You know Mr.great Janardhan reddy is in jail” ಎಂದು ಹೇಳಿಕೊಂಡು ಜೋರಾಗಿ ನಗುತ್ತಾರೆ. ಇದರಿಂದಾಗಿ ಜನಾರ್ದನ ರೆಡ್ಡಿ ಅವರ ಮಕ್ಕಳು ತಿನ್ನುತ್ತಿದ್ದ ತಿಂಡಿಯನ್ನು ಅಲ್ಲಿಯೇ ಬಿಟ್ಟು ಜೋರಾಗಿ ಅಳತೊಡಗಿದರು.ಜನಾರ್ದನ ರೆಡ್ಡಿ ಅವರ ಮಗಳು ಬ್ರಹ್ಮಣಿ ಗೆ ಅವರಿಗಿಂತ ಧೈರ್ಯ ಹೆಚ್ಚಂತೆ. ಅವಮಾನಿಸಿದ ಹೆಣ್ಣು ಮಗಳು ತಿಂಡಿಯನ್ನು ತಿಂದು ಕೈ ತೊಳೆಯುವ ವರೆಗೂ ತಾಳ್ಮೆಯಿಂದ ಕಾದು ಕುಳಿತು ನಂತರದಲ್ಲಿ ಎಕ್ಸ್‌ ಕ್ಯೂಸ್‌ ಮಿ ಮೇಡಮ್‌, ಒಂದು ನಿಮಿಷ ಮಾತಾಡಬೇಕು ಎಂದು ಸಮಯವನ್ನು ಕೇಳಿ ” Do yo know about Mr. janardhan reddy? do you know about my father?” ಎದು ಪ್ರಶ್ನಿಸುತ್ತಾಳೆ.

ಇದರಿಂದ ಅವಮಾನಿಸಿದ ಹೆಣ್ಣು ಮಗಳಿಗೆ ಅಘಾತವಾಗಿ ಮಕ್ಕಳನ್ನು ತಬ್ಬಿಕೊಳ್ಳಲು ಮುಂದಾಗುತ್ತಾಳಂತೆ. ಆಕೆ ತಬ್ಬಿಕೊಳ್ಳಲು ಬಂದಾಗ ” ನೀವು ಒಂದು ನಿಮಿಷ ಅಲ್ಲಿಯೇ ಇರಿ. ನನ್ನ ತಂದೆಯ ಬಗ್ಗೆ ತಿಳಿಯ ಬೇಕಾದರೆ ಬಳ್ಳಾರಿಗೆ ಬನ್ನಿ. ಬಳ್ಳಾರಿಯಲ್ಲಿ ಪ್ರತಿಯೊಂದು ಬಡವರ ಮನೆಯಲ್ಲೂ ಹೋಗಿ ಕೇಳಿ. ನನ್ನ ತಂದೆ ಬಗ್ಗೆ ಅವರು ಮಾಡಿರೋ ಒಳ್ಳೆ ಕೆಲಸಗಳ ಬಗ್ಗೆ ಪ್ರತಿಯೊಂದು ಬಡವರ ಮನೆಯಲ್ಲಿ ಕೇಳಿ. ನಂತರ ನನ್ನ ತಂದೆ ಬಗ್ಗೆ ಒಳ್ಳೆ ಮಾತಾಡಲು ಅವಕಾಶ ಸಿಕ್ಕರೆ ಮಾತಾಡಿ ಇಲ್ಲ ಅಂದರೆ ಇವತ್ತಲ್ಲ ನಾಳೆ ನನ್ನ ತಂದೆ ಜೈಲಿನಿಂದ ಹೊರಗಡೆ ಬಂದಾಗ ಇಡೀ ಜಗತ್ತಿಗೆ ನನ್ನ ತಂದೆ ಎನೇಂಬುದು ತಿಳಿಯುತ್ತದೆ. ಇಷ್ಟು ಮಾತ್ರ ನಾನು ಹೇಳಲು ಬಯಸಿದ್ದು” ಅಂತ ಹೇಳಿ ಕ‍ಣ್ಣೀರು ಸುರಿಸುತ್ತಾಳೆ.

ಇದನ್ನೂ ಓದಿ : Janardhan Reddy: ಹೊಸ ಪಕ್ಷ ಘೋಷಿಸಿದ ಜನಾರ್ದನ್‌ ರೆಡ್ಡಿ: ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷ ಘೋಷಣೆ

ಜನಾರ್ದನ ರೆಡ್ಡಿ ಅವರ ಮಗಳ ಮಾತು ಕೇಳಿ ಅವಮಾನಿಸಿದ ಹೆಣ್ಣು ಮಗಳ ಕಣ್ಣಿನಲ್ಲಿ ನೀರು ಬಂದು ಮಕ್ಕಳನ್ನು ಗಟ್ಟಿಯಾಗಿ ತಬ್ಬಿಕೊಂಡು “ನೀವು ಅವರ ಮಕ್ಕಳು ಎಂದು ನನಗೆ ತಿಳಿಯಲಿಲ್ಲ. ತಂದೆ ಅಂದರೆ ತಂದೆನೇ. ನಿಮಗೆ ನನ್ನ ಮಾತಿನಿಂದ ನೋವಾಗಿದ್ದರೆ ಕ್ಷಮಿಸಿ. ದೇವರು ನಿಮಗೆ ಒ‍ಳ್ಳೇದು ಮಾಡಲಿ” ಅಂತ ಹೇಳಿದರು. ಅಂದಿನಿಂದ ನನ್ನ ಹೆಂಡತಿ ಮಕ್ಕಳು ಮನೆಯಿಂದ ಹೊರಗಡೆ ಹೋಗಲೇ ಇಲ್ಲ ಎಂದು ತಮಗಾದ ಅವಮಾನದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಜನಾರ್ದನ ರೆಡ್ಡಿ ಅವರು ಹೇಳಿಕೊಂಡರು.

(Janardhan Reddy press meet) Former Minister, Janardhan Reddy held a press conference at 10.30 this morning, and held a press conference at Parijata’s residence near Basaveswara Circle, Bangalore and revealed a truth about the humiliation of his family when he went to jail.

RELATED ARTICLES

Most Popular