ಭಾನುವಾರ, ಏಪ್ರಿಲ್ 27, 2025
Homepoliticsಕಾರ್ಗಿಲ್ ಯುದ್ದದಿಂದ ಭಾರತೀಯ ಯೋಧರ ಶಕ್ತಿ ವಿಶ್ವಕ್ಕೆ ಪರಿಚಯ : ಪ್ರಧಾನಿ ಮೋದಿ

ಕಾರ್ಗಿಲ್ ಯುದ್ದದಿಂದ ಭಾರತೀಯ ಯೋಧರ ಶಕ್ತಿ ವಿಶ್ವಕ್ಕೆ ಪರಿಚಯ : ಪ್ರಧಾನಿ ಮೋದಿ

- Advertisement -

ನವದೆಹಲಿ : ಕಾರ್ಗಿಲ್ ಯುದ್ದದಿಂದಾಗಿ ಭಾರತೀಯ ಯೋಧರ ಶಕ್ತಿ ವಿಶ್ವಕ್ಕೆ ಪರಿಚಯವಾಗಿದೆ. ಭಾರತ ಪಾಕಿಸ್ತಾನವನ್ನು ಮಣಿಸಿದ ಐತಿಹಾಸಿಕ ದಿನಕ್ಕೆ 21 ವರ್ಷ ತುಂಬಿದೆ. ಕಾರ್ಗಿಲ್ ಹುತಾತ್ಮ ಯೋಧರಿಗೆ ನನ್ನ ಧನ್ಯವಾದಗಳು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕಾರ್ಗಿಲ್ ವಿಜಯೋತ್ಸವದ ಹಿನ್ನೆಲೆಯಲ್ಲಿ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ನರೇಂದ್ರ ಮೋದಿ ಯೋಧರ ಬಲಿದಾನವನ್ನು ಸ್ಮರಿಸಿದ್ದಾರೆ. ಇಂದು ಕಾರ್ಗಿಲ್ ವಿಜಯ ದಿವಸ. 21 ವರ್ಷಗಳ ಹಿಂದೆ ಇದೇ ದಿನ ನಾವು ಪಾಕಿಸ್ತಾನದ ವಿರುದ್ಧ ವಿಜಯ ಸಾಧಿಸಿದ್ದೇವೆ. ದೇಶದ ವಿವಿಧೆಡೆ ಹುತಾತ್ಮ ಯೋಧರಿಗೆ ನಮನ ಸಲ್ಲಿಸುತ್ತಿದ್ದಾರೆ. 21 ವರ್ಷಗಳ ಹಿಂದೆ ಈ ದಿನ ಸೈನ್ಯವರು ಕಾರ್ಗಿಲ್ ಯುದ್ಧವನ್ನು ಗೆದ್ದಿದೆ.

ಭಾರತದ ಭೂಮಿಯನ್ನು ವಶಪಡಿಸಿಕೊಳ್ಳಲು ಮತ್ತು ಅದರ ಆಂತರಿಕ ಸಂಘರ್ಷದಿಂದ ಅಲ್ಲಿನ ಜನರ ದೃಷ್ಟಿಯನ್ನು ಬೇರೆ ಕಡೆಗೆ ಸೆಳೆಯುವ ತಂತ್ರದ ಭಾಗವಾಗಿ ಪಾಕಿಸ್ತಾನ ದುಷ್ಕೃತ್ಯ ಎಸಗಿತ್ತು ಎಂದ ಅವರು, ಕಾರ್ಗಿಲ್ ವಿಜಯೋತ್ಸವದ ಹಿನ್ನೆಲೆಯಲ್ಲಿ ಯೋಧರಿಗಾಗಿ ವೆಬ್ ಸೈಟ್ ಮೂಲಕ ಗೌರವ ಸಲ್ಲಿಸಿರುವ ಪ್ರಧಾನಿ ಮೋದಿ ಅವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಮಾತುಗಳನ್ನು ಮೆಲುಕು ಹಾಕಿದ್ದಾರೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular