ಸೋಮವಾರ, ಏಪ್ರಿಲ್ 28, 2025
Homepoliticsಕೇಂದ್ರ ಸಚಿವರಿಗೆ ಬಂದೂಕು,ಗುಂಡಿನ ಸ್ವಾಗತ: ಕರೋನಾ ನಿಯಮ ಮೀರಿ ಯಾದಗಿರಿಯಲ್ಲಿ ಬಿಜೆಪಿ ದರ್ಬಾರ್!

ಕೇಂದ್ರ ಸಚಿವರಿಗೆ ಬಂದೂಕು,ಗುಂಡಿನ ಸ್ವಾಗತ: ಕರೋನಾ ನಿಯಮ ಮೀರಿ ಯಾದಗಿರಿಯಲ್ಲಿ ಬಿಜೆಪಿ ದರ್ಬಾರ್!

- Advertisement -

ಯಾದಗಿರಿ: ಕೊರೋನಾ ನಿಯಮಗಳನ್ನು ಗಾಳಿಗೆ ತೂರಿದ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಕೇಂದ್ರ ಸಚಿವರ ಸ್ವಾಗತಕ್ಕೆ ಮುಗಿಬಿದ್ದಿದ್ದಲ್ಲದೇ ಬಂದೂಕಿನಿಂದ ಗುಂಡು ಹಾರಿಸಿ ಅತಿರೇಕದ ವರ್ತನೆ ತೋರಿದ್ದಾರೆ.  

ಯಾದಗಿರಿ ಜಿಲ್ಲೆಯ ಯರಗೋಳ ಗ್ರಾಮಕ್ಕೆ ಕೇಂದ್ರ ಸಚಿವ ಭಗವಂತ ಖೂಬಾ ಆಗಮಿಸಿದ್ದರು.  ಈ ವೇಳೆ ಅವರ ಸ್ವಾಗತಕ್ಕೆ ಅಪಾರ ಪ್ರಮಾಣದ ಬಿಜೆಪಿ ಕಾರ್ಯಕರ್ತರು ಸೇರಿದ್ದರು. ಸಚಿವರ ಸ್ವಾಗತಕ್ಕೆ ನಾಡಬಂದೂಕಿನ ಜೊತೆ ಆಗಮಿಸಿದ್ದ ಕೆಲವರು ಗುಂಡು ಹಾರಿಸಿ ಸಂಭ್ರಮಿಸಿದ್ದಾರೆ.

ಸಾಮಾಜಿಕ ಅಂತರವಿಲ್ಲದೇ, ಮಾಸ್ಕ್ ಧರಿಸದೇ ಜನಜಾತ್ರೆಯೇ ನೆರೆದಿದ್ದ ಈ ಸ್ವಾಗತ ಸಭೆಯಲ್ಲಿ ಮಾಜಿ ಸಚಿವ ಬಾಬುರಾವ್ ಚಿಂಚಸನೂರು, ಶಾಸಕರಾದ ರಾಜೂಗೌಡ, ವೆಂಕಟರೆಡ್ಡಿ ಮುದ್ನಾಳ ಕೂಡ ಸ್ಥಳದಲ್ಲೇ ಇದ್ದರು ಎನ್ನಲಾಗಿದೆ.ಭಗವಂತ ಖೂಬಾಗೆ ಹೂವಿನ ಸುರಿಮಳೆ ಸುರಿಸಿ, ಬಂದೂಕಿನಿಂದ ಗುಂಡು ಹಾರಿಸಿ ಸ್ವಾಗತಿಸಿದ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಜನರ ಟೀಕೆಗೆ ಗುರಿಯಾಗಿದೆ.

RELATED ARTICLES

Most Popular