Puneeth Raj Kumar Ward : ಬಿಬಿಎಂಪಿ ವಾರ್ಡ್ ಮರುವಿಂಗಡಣೆ ಅಂತಿಮಗೊಳಿಸಿದ ಸರ್ಕಾರ: ಕಾವೇರಿ ನಗರಕ್ಕೆ ಪುನೀತ್ ಹೆಸರು

ಬೆಂಗಳೂರು : ಬಿಬಿಎಂಪಿ ಚುನಾವಣೆಗೆ ಸಿದ್ಧತೆ ನಡೆದಿರುವಾಗಲೇ, ಕೊನೆಗೂ ಬಿಬಿಎಂಪಿ ವಾರ್ಡ್ ಮರುವಿಂಗಡಣೆ ವರದಿಗೆ ಸರ್ಕಾರದ ಅಂತಿಮ ಅಂಕಿತ ಬಿದ್ದಿದ್ದು, ಬಿಬಿಎಂಪಿ ವಾರ್ಡ್ ಮರುವಿಂಗಡಣೆ ಮಾಡಿ ಸರ್ಕಾರದಿಂದ ಅಂತಿಮ ಆದೇಶ ಪ್ರಕಟಗೊಂಡಿದೆ. ಬೆಳೆಯುತ್ತಿರುವ ನಗರ ಹಾಗೂ ನಗರದ ಜನಸಂಖ್ಯೆ ಆಧರಿಸಿ ರಾಜ್ಯ ಸರ್ಕಾರ ಬಿಬಿಎಂಪಿ ವಾರ್ಡ್ ಗಳ ಸಂಖ್ಯೆಯನ್ನು 198 ರಿಂದ ಡಿ ಲಿಮಿಟೇಷನ್ ಮಾಡಿ‌ 243 ಕ್ಕೆ ಹೆಚ್ಚಿಸಿದೆ. ಈ ನಡುವಲ್ಲೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಸರ್ಕಾರ ಸ್ಪೆಶಲ್ ಗಿಫ್ಟ್ ನೀಡಿದ್ದು, ವಾರ್ಡ್ ನಂಬರ್ 55 ಕ್ಕೆ ಪುನೀತ್ ರಾಜ್ ಕುಮಾರ್ (Puneeth Raj Kumar Ward) ಹೆಸರು ಇಡಲಾಗಿದೆ. ಕಾವೇರಿ‌ನಗರ ಇನ್ನು ಪುನೀತ್ ರಾಜ್ ಕುಮಾರ್ ನಗರವಾಗಲಿದೆ.

ಈ ಬಗ್ಗೆ ಸರ್ಕಾರ ಆದೇಶಪತ್ರ ಹೊರಡಿಸಿದ್ದು, ಸರ್ಕಾರದಿಂದ ರಾಜ್ಯ ಪತ್ರ ಪ್ರಕಟಗೊಂಡಿದೆ. ಸರ್ಕಾರಕ್ಕೆ ಬಿಬಿಎಂಪಿ ವಾರ್ಡ್ ಗಳ ಸಂಖ್ಯೆಯನ್ನು ಹೆಚ್ಚಿಸಿ ಸಲ್ಲಿಸಿದ್ದ ಡಿ ಲಿಮಿಟೇಶನ್ ಅರ್ಜಿಗೆ ಸಾರ್ವಜನಿಕ ವಲಯದಿಂದ ಬಂದಿರುವ 3000 ಕ್ಕೂ ಅಧಿಕ ಆಕ್ಷೇಪಣಾ ಅರ್ಜಿ ಸಲ್ಲಿಕೆಯಾಗಿತ್ತು. ಸಾರ್ವಜನಿಕರಿಂದ ಬಂದ ಆಕ್ಷೇಪಣೆ, ಸಲಹೆ, ಸೂಚನೆಗಳನ್ನು ಅಳವಡಿಸಿ ಸಣ್ಣ ಪುಟ್ಟ ಬದಲಾವಣೆ ಮಾಡಿ ಡಿ ಲಿಮಿಟೇಷನ್ ಅಧಿಕೃತ ಪಟ್ಟಿಯನ್ನು ಸರ್ಕಾರ ಗುರುವಾರ ಪ್ರಕಟಿಸಿದೆ.

29/01/2021ರಲ್ಲಿ ಬಿಬಿಎಂಪಿ ಆಯುಕ್ತರನ್ನು ಒಳಗೊಂಡ ಡಿ ಲಿಮಿಟೇಷನ್ ಕಮಿಟಿ ರಚಿಸಿದ್ದ ಸರ್ಕಾರ, ವಾರ್ಡ್ ಗಳ ಸಂಖ್ಯೆ ಹೆಚ್ಚಿಸಲು ಪ್ಲ್ಯಾನ್ ಮಾಡಿತ್ತು. ಈ ಸಮಿತಿಯು 09/06/2022 ರಂದು ಸರ್ಕಾರಕ್ಕೆ ವಾರ್ಡ್ ಮರುವಿಂಗಡಣಾ ಪಟ್ಟಿ ಸಲ್ಲಿಕೆ ಮಾಡಿತ್ತು. ಬಳಿಕ‌ ಸಾರ್ವಜನಿಕರ ಸಲಹೆ ಸೂಚನೆ ಹಾಗೂ ಆಕ್ಷೇಪಣೆಗೆ 15 ದಿನಗಳ ಕಾಲವಕಾಶ ನೀಡಿದ್ದ ಸರ್ಕಾರಕ್ಕೆ ಮೂರು ಸಾವಿರಕ್ಕೂ ಅಧಿಕ ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದವು. ಈ ಪೈಕಿ ವಾರ್ಡ್ ಗಳ ಹೆಸರು ಬದಲಾವಣೆ ಹಾಗೂ ಪ್ರದೇಶಗಳ ಹಂಚಿಕೆಗೂ ಅಸಮಧಾನ ವ್ಯಕ್ತ ವಾಗಿತ್ತು. ಇದೀಗ ಅಂತಿಮವಾಗಿ ಬೆಂಗಳೂರು ವಾರ್ಡ್ ಗಳ ಸಂಖ್ಯೆ 243ಕ್ಕೆ ಅಧಿಕೃತವಾಗಿ ಏರಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯ ಪತ್ರದಲ್ಲಿ 2011ರ ಜನಗಣತಿ ಪ್ರಕಾರ ಡಿ ಲಿಮಿಟೇಷನ್ ಮಾಡಿರುವುದಾಗಿ ಸರ್ಕಾರ ಹೇಳಿದೆ.

ಇನ್ನೂ ಕೆಂಗೇರಿ ವಾರ್ಡ್ ಬದಲು ಕೆಂಗೇರಿ ಉಪನಗರ ವಾರ್ಡ್ ಎಂದು ಕರಡು ಪ್ರತಿಯಲ್ಲಿತ್ತು. ಕೆಂಗೇರಿ ವಾರ್ಡ್ ತೆಗೆದಿರೋದಕ್ಕೆ ಭಾರೀ ವಿರೋಧ ಕೇಳಿ ಬಂದಿತ್ತು.ಅಲ್ಲದೇ
ಸಾಕಷ್ಟು ಪ್ರತಿಭಟನೆಗಳೂ ನಡೆದಿದ್ವುಇದೀಗ ಕೆಂಗೇರಿ ಉಪನಗರ ವಾರ್ಡ್ ತೆಗೆದು ಹಳೆವಾರ್ಡ್ ಕೆಂಗೇರಿ ವಾರ್ಡ್ ಹೆಸರು ಅಂತಿಮಗೊಳಿಸಲಾಗಿದೆ. ಅಲ್ಲದೇ ಪ್ರಮುಖವಾಗಿ ಇತ್ತೀಚಿಗೆ ನಿಧನರಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಸರ್ಕಾರ ಸ್ಪೆಶಲ್ ಗಿಫ್ಟ್ ನೀಡಿದ್ದು, ವಾರ್ಡ್ ನಂಬರ್ 55 ಕ್ಕೆ ಪುನೀತ್ ರಾಜ್ ಕುಮಾರ್ ಹೆಸರು ಇಡಲಾಗಿದೆ. ಕಾವೇರಿ‌ನಗರ ಇನ್ನು ಪುನೀತ್ ರಾಜ್ ಕುಮಾರ್ ನಗರವಾಗಲಿದೆ.

ಇದನ್ನೂ ಓದಿ : ಒತ್ತಿನೆಣೆ ಕಾರು ಸುಟ್ಟ ಪ್ರಕರಣ : ಸಿನಿಮಾ ಸ್ಟೈಲ್‌ನಲ್ಲಿ ಸೂಸೈಡ್‌ ಹೈಡ್ರಾಮ, ಅಮಾಯಕನನ್ನು ಸುಟ್ಟ ಕೊಂದ ಪಾಪಿಗಳು

ಇದನ್ನೂ ಓದಿ : Good News for walkers : ಬೆಂಗಳೂರಿನ ವಾಯುವಿಹಾರಿಗಳಿಗೆ ಸಿಹಿಸುದ್ದಿ: ದಿನವೀಡಿ ಪಾರ್ಕ್ ಓಪನ್

Puneeth Raj Kumar Ward : Govt finalizes BBMP ward redistribution: Puneeth name for Cauvery city

Comments are closed.