siddaramaiah birthday rally :ಬೆಣ್ಣೆ ನಗರಿಯಲ್ಲಿ ಸಿದ್ದರಾಮೋತ್ಸವಕ್ಕೆ ಕ್ಷಣಗಣನೆ : ಭಾರಿ ಸಮಾರಂಭದ ಹಿಂದೆ ನೂರೆಂಟು ರಾಜಕೀಯ ಲೆಕ್ಕಾಚಾರ
ದಾವಣಗೆರೆ : siddaramaiah birthday rally :ವಿಪಕ್ಷಗಳು ಹಾಗೂ ಸ್ವಪಕ್ಷದ ವಿರೋಧಗಳ ನಡುವೆಯವೇ ಇಂದು ದಾವಣೆಗೆರೆಯಲ್ಲಿ ಸಿದ್ದರಾಮೋತ್ಸವ ಕಾರ್ಯಕ್ರಮ ಜರಗುತ್ತಿದೆ. ಒಂದಲ್ಲ, ಎರಡಲ್ಲ ಬರೋಬ್ಬರಿ 50 ಎಕರೆ ವ್ಯಾಪ್ತಿಯಲ್ಲಿ ಈ ಸಮಾರಂಭವನ್ನು ಆಯೋಜಿಸಲಾಗಿದ್ದು 75ನೇ ವರ್ಷಕ್ಕೆ ಕಾಲಿಟ್ಟಿರುವ ಕಾಂಗ್ರೆಸ್ ಟಗರು ಜನ್ಮದಿನವನ್ನು ಇಂದು ಅದ್ಧೂರಿಯಾಗಿ ಆಚರಿಸೋಕೆ ಎಲ್ಲಾ ರೀತಿಯ ಸಿದ್ಧತೆಗಳು ನಡೆದಿವೆ.
ಈ ಪ್ಲಾನ್ ನಂದಲ್ಲ.ಇದರ ಹಿಂದೆ ಇರೋದು ಏನಿದ್ದರೂ ಬೆಂಬಲಿಗರು ಅನ್ನೋದು ಸಿದ್ದರಾಮಯ್ಯರ ಮಾತಾಗಿದೆ. ಇತ್ತ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ರಂತೂ ವ್ಯಕ್ತಿ ಪೂಜೆ ಮಾಡಬೇಡಿ ಪಕ್ಷ ಪೂಜೆ ಮಾಡಿ ಎಂದು ಪದೇ ಪದೇ ಹೇಳ್ತಿದ್ದಾರೆ. ವಿಪಕ್ಷಗಳಂತೂ ಹೋದಲ್ಲಿ ಬಂದಲ್ಲಿ ಸಿದ್ದರಾಮಯ್ಯಗೆ ಇವೆಲ್ಲ ಬೇಕಿತ್ತಾ ಎಂದು ಪ್ರಶ್ನೆ ಮಾಡ್ತಿವೆ. ಹಾಗಾದ್ರೆ ಇಷ್ಟೆಲ್ಲ ವಿರೋಧಗಳ ನಡುವೆಯೂ ಯಾಕೆ ಈ ಸಿದ್ದರಾಮೋತ್ಸವವನ್ನು ಆಚರಿಸಲಾಗ್ತಿದೆ ಎಂಬ ಪ್ರಶ್ನೆ ಎದುರಾದಾಗ ಇದಕ್ಕೆ ಸಿಗುವ ಒಂದೇ ಉತ್ತರವೆಂದರೆ ಅದು ಸಿದ್ದು ರಾಜಕೀಯ ಲಾಭ..!
ಇನ್ನು ವಿಧಾನಸಭಾ ಚುನಾವಣೆ ಎದುರಾಗೋಕೆ ಹಲವಾರು ತಿಂಗಳು ಬಾಕಿ ಇದೆ.ಅಷ್ಟರಲ್ಲಾಗಲೇ ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ನಡುವೆ ಸಿಎಂ ಅಭ್ಯರ್ಥಿ ಸ್ಥಾನಕ್ಕೆ ಭಾರೀ ಪೈಪೋಟಿ ನಡೀತಾ ಇದೆ. ಹೀಗಾಗಿ ಹೈಕಮಾಂಡ್ ಯಾರನ್ನು ಆಯ್ಕೆ ಮಾಡುತ್ತೆ ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ. ಸಿದ್ದರಾಮಯ್ಯ ಈಗಾಗಲೇ ಇದೇ ನನ್ನ ಕೊನೆಯ ಚುನಾವಣೆ ಎಂದು ಘೋಷಣೆ ಮಾಡ್ಬಿಟ್ಟಿದ್ದಾರೆ.ಹೀಗಾಗಿ ಶತಾಯ ಗತಾಯ ಮುಂದಿನ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಬಿಟ್ಟರೆ ಕೊನೆಯ ಬಾರಿ ಸಿಎಂ ಆಗೋಣ ಎಂಬ ಲೆಕ್ಕಾಚಾರ ಸಿದ್ದುರದ್ದು.
ಆದರೆ ಹೈಕಮಾಂಡ್ ತಲೆಯಲ್ಲಿ ಯಾರ ಹೆಸರಿದೆ ಅನ್ನೋದು ಇನ್ನೂ ನಿಗೂಢ. ಡಿ.ಕೆ ಶಿವಕುಮಾರ್ ಹಾಗೂ ಸಿದ್ರಾಮಯ್ಯ ಇಬ್ಬರೂ ಹೈಕಮಾಂಡ್ಗೆ ಪ್ರಿಯರಾಗಿರೋದ್ರಿಂದ ಕಾಂಗ್ರೆಸ್ ವರಿಷ್ಠರು ಯಾರ ಹೆಸರನ್ನು ಆಯ್ಕೆ ಮಾಡಿದರೂ ಆಶ್ಚರ್ಯವಿಲ್ಲ. ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮೇಕೆದಾಟು ಯೋಜನೆಯಲ್ಲಿ ಭಾರೀ ಪ್ರತಿಭಟನೆಯನ್ನು ಆಯೋಜಿಸುವ ಮೂಲಕ ಕೇವಲ ವಿಪಕ್ಷಗಳಿಗೆ ಮಾತ್ರವಲ್ಲದೇ ಹೈಕಮಾಂಡ್ ಎದುರು ತನ್ನ ಬಲ ಏನು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.
ಆದರೆ ಸಿದ್ದರಾಮಯ್ಯಗೆ ಇಂತಹ ಅವಕಾಶ ಕೂಡಿ ಬಂದಿರಲಿಲ್ಲ. ಹೀಗಾಗಿ ಸಿದ್ದರಾಮೋತ್ಸವ ಹೆಸರಿನಲ್ಲಿ ಬೃಹತ್ ಸಮಾವೇಶವನ್ನು ನಡೆಸುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರನ್ನು ಒಗ್ಗೂಡಿಸಿ ಕೇವಲ ವಿರೋಧ ಪಕ್ಷಗಳಿಗೆ ಅಷ್ಟೇ ಅಲ್ಲದೇ ತಾನು ಕೂಡ ಹೈಕಮಾಂಡ್ ಎದುರಲ್ಲಿ ಬಲಿಷ್ಠನಂತೆ ಕಾಣಬೇಕು ಎನ್ನುವುದು ಸಿದ್ದರಾಮಯ್ಯ ಲೆಕ್ಕಾಚಾರವಾಗಿದೆ.
ಧರ್ಮ ಸಂಘರ್ಷಗಳ ವಿಚಾರ ಬಂದಾಗ ಸಿದ್ದರಾಮಯ್ಯ ಈಗಾಗಲೇ ಅನೇಕ ಹಿಂದೂಗಳ ವಿರೋಧವನ್ನು ಕಟ್ಟಿಕೊಂಡಿದ್ದಾರೆ. ನಿಷ್ಠೂರವಾದಿಯಾಗಿರುವ ಕುರುಬ ಸಮುದಾಯದ ನಾಯಕ ಎಷ್ಟೇ ಬಾರಿ ಮುಸ್ಲಿಂ ಸಮುದಾಯಗಳ ಪರವಾಗಿ ನಿಂತರೂ ಸಹ ಪಿಎಫ್ಐ ಹಾಗೂ ಎಸ್ಡಿಪಿಐ ಸಮುದಾಯಗಳು ಸಿದ್ದರಾಮಯ್ಯರ ಈ ಮತವನ್ನು ಕಸಿದುಕೊಳ್ಳುವ ಎಲ್ಲಾ ಸಾಧ್ಯತೆ ಕೂಡ ಇದೆ.ಇದಕ್ಕೆ ಸಾಕ್ಷಿ ಎಂಬಂತೆ ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಮೈಸೂರು ಭಾಗದಲ್ಲಿಯೇ ಸೋಲಿನ ರುಚಿಯನ್ನು ಕಂಡಿದ್ದಾರೆ. ಹೀಗಾಗಿ ಈ ಸಂದರ್ಭದಲ್ಲಿ ಸಿದ್ದರಾಮಯ್ಯಗೆ ತನ್ನ ಶಕ್ತಿ ಏನೆಂದು ಸಾಬೀತು ಪಡಿಸುವುದು ಅತ್ಯಂತ ಅನಿವಾರ್ಯವಾಗಿರೋದ್ರಿಂದ ಈ ಮಹೋತ್ಸವ ಆಚರಿಸಲಾಗ್ತಿದೆ ಎನ್ನಲಾಗಿದೆ.
ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ವರಿಷ್ಠರು ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರೋದ್ರಿಂದ ಸಿದ್ದರಾಮಯ್ಯ ಬರ್ತಡೇ ನೆಪದಲ್ಲಿ ರಾಜಕೀಯ ಲಾಭವನ್ನು ಪಡೆಯಲು ಎಲ್ಲಾ ರೀತಿಯಲ್ಲಿ ರಣತಂತ್ರವನ್ನು ಹೂಡಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ನನ್ನ ಹೆಸರನ್ನು ಪರಿಗಣಿಸಿಬಿಟ್ಟರೆ ತನಗೆ ಕಾಂಗ್ರೆಸ್ ಗೆದ್ದ ಬಳಿಕ ಸಿಎಂ ಗದ್ದುಗೆ ಸಿಗಲಿದೆ ಎಂಬ ರೀತಿಯಲ್ಲಿ ರಾಜಕೀಯ ಪವಾಡಕ್ಕೆ ಕಾಂಗ್ರೆಸ್ ಟಗರು ಮುಂದಾಗಿರುವಂತೆ ಕಾಣ್ತಿದೆ .
ಇದನ್ನು ಓದಿ : Tirumala Tirupati Hundi Collection: ಜುಲೈ ತಿಂಗಳಲ್ಲಿ ಬರೋಬ್ಬರಿ 139.45 ಕೋಟಿ ಆದಾಯ ಗಳಿಸಿದ ತಿರುಮಲ ತಿರುಪತಿ ದೇವಸ್ಥಾನಗಳು
ಇದನ್ನೂ ಓದಿ : CM Basavaraj Bommai change : ರಾಜ್ಯದಲ್ಲಿ ಮತ್ತೆ ಬದಲಾಗ್ತಾರಾ ಸಿಎಂ ಬೊಮ್ಮಾಯಿ : ಕೇಶವಕೃಪಾ ಉಲ್ಲೇಖಿಸಿ ಭವಿಷ್ಯ ನುಡಿದ ಕಾಂಗ್ರೆಸ್
Siddaramaiah birthday rally at davanagere political beliefs
Comments are closed.